ETV Bharat / state

ವಿಚ್ಛೇದನ ಕೊಡಿಸಿ ಎಂದು ಬಂದಿದ್ದ ಜೋಡಿಗಳನ್ನು ಒಂದಾಗಿಸಿದ ನ್ಯಾಯಾಧೀಶರು

author img

By

Published : Sep 30, 2021, 7:32 PM IST

ವಿಚ್ಛೇದನ ಕೊಡಿಸಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಎರಡೂ ಜೋಡಿ ನ್ಯಾಯಾಧೀಶರ ಮಾತಿಗೆ ತಲೆಬಾಗಿ ಮತ್ತೆ ಒಂದಾಗಿ ಜೀವನ ಮಾಡಲು ಮುಂದಾಗಿದ್ದಾರೆ.

couple-reunited-who-came-for-divorce-in-shivmog
ವಿಚ್ಛೇದನ ಕೊಡಿಸಿಕೊಡಿ ಎಂದು ಬಂದಿದ್ದ ಜೋಡಿಗಳನ್ನು ಒಂದಾಗಿಸಿದ ನ್ಯಾಯಾಧೀಶರು

ಶಿವಮೊಗ್ಗ: ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ಎರಡು ಜೋಡಿಗಳನ್ನು ಹೊಸನಗರ ಕೋರ್ಟ್​ನಲ್ಲಿ ಮತ್ತೆ ಒಂದು ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರದ ಕೋರ್ಟ್​ನಲ್ಲಿ ಇಂದು ಲೋಕ ಅದಾಲತ್ ನಡೆಯಿತು. ಈ ಅದಾಲತ್​​ಗೆ ವಿಚ್ಛೇದನ ಪ್ರಕರಣಗಳು ಸಹ ಬಂದಿದ್ದವು. ಇದರಲ್ಲಿ ಹೊಸನಗರ ಪಟ್ಟಣದ ಚರ್ಚ್ ರಸ್ತೆಯ ನವೀದಾ ಎಂಬುವರು ಏಳು ವರ್ಷದ ಹಿಂದೆ ಸಿದ್ದಾಪುರದ ಇಲಿಯಾಸ್ ಎಂಬುವರ ಜೊತೆ ಮದುವೆ ಮಾಡಿಕೊಂಡಿದ್ದರು. ನಂತರ ಇಬ್ಬರು ಡೈವೋರ್ಸ್ ಬೇಕೆಂದು ಕೋರ್ಟ್​ ಮೊರೆಹೋಗಿದ್ದರು. ಇಂದು ನಡೆದ ಅದಾಲತ್​ನಲ್ಲಿ ನ್ಯಾಯಾಧೀಶರು ಮತ್ತೆ ಸಂಸಾರ ನಡೆಸಿಕೊಂಡು ಹೋಗಲು ಸಲಹೆ ನೀಡಿ ಕೋರ್ಟ್ ಹಾಲ್​​ನಲ್ಲಿಯೇ ಇಲಿಯಾಸ್ ಹಾಗೂ ನವೀದಾರವರಿಗೆ ಹಾರ ಬದಲಾಯಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಇದೇ ಅದಾಲತ್‌ನಲ್ಲಿ ರಿಪ್ಪನಪೇಟೆಯ ದಿನೇಶ್ ಹಾಗೂ ಬೆನ್ಸಿ ಎಂಬುವರು ಸಹ ಮದುವೆಯಾಗಿ ನಂತರ ಜಗಳವಾಡಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.‌ ಈ ದಂಪತಿಗೆ ಎರಡು ಮಕ್ಕಳಿದ್ದು, ಇವರಿಗೆ ನ್ಯಾಯಾಧೀಶರು ಬುದ್ದಿ ಹೇಳಿ, ವಕೀಲರ ಸಮ್ಮುಖದಲ್ಲಿ ಹಾರ ಬದಲಾಯಿಸಲು ಸೂಚನೆ ನೀಡಿ ಸುಖ ಸಂಸಾರ ನಡೆಸಲು ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಈ ವೇಳೆ ಹಿರಿಯ ನ್ಯಾಯಾಧೀಶರಾದ ಪುಷ್ಪಲತಾ, ಕೆ.ರವಿಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಮಪ್ಪ, ವಕೀಲರುಗಳಾದ ಮಹೇಶ್, ಬಿ.ಎಸ್.ವಿನಾಯಕ ಸೇರಿ ಇತರೆ ವಕೀಲರಿದ್ದರು.

ಶಿವಮೊಗ್ಗ: ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ಎರಡು ಜೋಡಿಗಳನ್ನು ಹೊಸನಗರ ಕೋರ್ಟ್​ನಲ್ಲಿ ಮತ್ತೆ ಒಂದು ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರದ ಕೋರ್ಟ್​ನಲ್ಲಿ ಇಂದು ಲೋಕ ಅದಾಲತ್ ನಡೆಯಿತು. ಈ ಅದಾಲತ್​​ಗೆ ವಿಚ್ಛೇದನ ಪ್ರಕರಣಗಳು ಸಹ ಬಂದಿದ್ದವು. ಇದರಲ್ಲಿ ಹೊಸನಗರ ಪಟ್ಟಣದ ಚರ್ಚ್ ರಸ್ತೆಯ ನವೀದಾ ಎಂಬುವರು ಏಳು ವರ್ಷದ ಹಿಂದೆ ಸಿದ್ದಾಪುರದ ಇಲಿಯಾಸ್ ಎಂಬುವರ ಜೊತೆ ಮದುವೆ ಮಾಡಿಕೊಂಡಿದ್ದರು. ನಂತರ ಇಬ್ಬರು ಡೈವೋರ್ಸ್ ಬೇಕೆಂದು ಕೋರ್ಟ್​ ಮೊರೆಹೋಗಿದ್ದರು. ಇಂದು ನಡೆದ ಅದಾಲತ್​ನಲ್ಲಿ ನ್ಯಾಯಾಧೀಶರು ಮತ್ತೆ ಸಂಸಾರ ನಡೆಸಿಕೊಂಡು ಹೋಗಲು ಸಲಹೆ ನೀಡಿ ಕೋರ್ಟ್ ಹಾಲ್​​ನಲ್ಲಿಯೇ ಇಲಿಯಾಸ್ ಹಾಗೂ ನವೀದಾರವರಿಗೆ ಹಾರ ಬದಲಾಯಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಇದೇ ಅದಾಲತ್‌ನಲ್ಲಿ ರಿಪ್ಪನಪೇಟೆಯ ದಿನೇಶ್ ಹಾಗೂ ಬೆನ್ಸಿ ಎಂಬುವರು ಸಹ ಮದುವೆಯಾಗಿ ನಂತರ ಜಗಳವಾಡಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.‌ ಈ ದಂಪತಿಗೆ ಎರಡು ಮಕ್ಕಳಿದ್ದು, ಇವರಿಗೆ ನ್ಯಾಯಾಧೀಶರು ಬುದ್ದಿ ಹೇಳಿ, ವಕೀಲರ ಸಮ್ಮುಖದಲ್ಲಿ ಹಾರ ಬದಲಾಯಿಸಲು ಸೂಚನೆ ನೀಡಿ ಸುಖ ಸಂಸಾರ ನಡೆಸಲು ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಈ ವೇಳೆ ಹಿರಿಯ ನ್ಯಾಯಾಧೀಶರಾದ ಪುಷ್ಪಲತಾ, ಕೆ.ರವಿಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಮಪ್ಪ, ವಕೀಲರುಗಳಾದ ಮಹೇಶ್, ಬಿ.ಎಸ್.ವಿನಾಯಕ ಸೇರಿ ಇತರೆ ವಕೀಲರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.