ETV Bharat / state

ಶಿವಮೊಗ್ಗ ಸಹಕಾರ ಕೇಂದ್ರದ ಬ್ಯಾಂಕ್ ನಿರ್ದೇಶಕರ ಚುನಾವಣೆ: ಮೈತ್ರಿಕೂಟ ಬೆಂಬಲಿತ ಸಿಂಡಿಕೇಟ್ ಜಯ - undefined

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ಹಾಗೂ ಅವರ ನೇತೃತ್ವದ ಸಿಂಡಿಕೇಟ್ ಟೀಂ ಜಯಗಳಿಸಿದೆ.

ಆರ್.ಎಂ.ಮಂಜುನಾಥ ಗೌಡ
author img

By

Published : May 7, 2019, 2:43 AM IST

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹಾಗೂ ಅವರ ನೇತೃತ್ವದ ಸಿಂಡಿಕೇಟ್ ತಂಡ ಜಯಭೇರಿ ಬಾರಿಸಿದೆ.

ಆರ್.ಎಂ.ಮಂಜುನಾಥ ಗೌಡ

ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಸಂಜೆ ಮತ ಎಣಿಕೆ ನಡೆದಿತ್ತು. ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಸಿಂಡಿಕೇಟ್ 6 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಸಿಂಡಿಕೇಟ್ 3 ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಯಿತು. ಇದಕ್ಕೂ ಮೊದಲು ಅವಿರೋಧವಾಗಿ ಆಯ್ಕೆಯಾದ 4 ಸ್ಥಾನಗಳು ಸೇರಿ ಮೈತ್ರಿಕೂಟದ ಸಿಂಡಿಕೇಟ್ 9 ಸ್ಥಾನಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಬೆಂಬಲಿತ ಸಿಂಡಿಕೇಟ್ 5 ಸ್ಥಾನ ಗಳಿಸಿದಂತಾಗುತ್ತದೆ. ಬ್ಯಾಂಕ್‍ನ ಅಧಿಕಾರ ಹಿಡಿಯಲು 7 ಮತಗಳು ಬೇಕಾಗಿರುವುದರಿಂದ ಮಂಜುನಾಥಗೌಡ ಅವರ ಸಿಂಡಿಕೇಟ್‍ಗೆ ಹಾದಿ ಸುಗಮವಾಗಿದೆ.

ವಿಶೇಷವೆಂದರೆ ಚುನಾವಣೆಯಲ್ಲಿ ಜಿ.ಎನ್.ಸುಧೀರ್ ಮೊದಲ ಬಾರಿಗೆ ಡಿಸಿಸಿಗೆ ಪ್ರವೇಶ ಪಡೆದರೆ, ಮಾಜಿ ನಿರ್ದೇಶಕ ಎಚ್.ಎಲ್.ಷಡಾಕ್ಷರಿ ಮರು ಪ್ರವೇಶ ಪಡೆದುಕೊಂಡಿದ್ದಾರೆ. ಇವರಿಬ್ಬರು ಸಹ ಕೇವಲ ಒಂದು ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಉಳಿದ 11 ಹಾಲಿ ನಿರ್ದೇಶಕರು ಪುನರಾಯ್ಕೆಯಾಗಿದ್ದಾರೆ. ಇತರೆ ಸಹಕಾರ ಸಂಘಗಳ ಕ್ಷೇತ್ರ ಸಾಗರ ಉಪವಿಭಾಗದಲ್ಲಿ ಒಂದು ಮತ ಮಾತ್ರ ಕುಲಗೆಟ್ಟಿದೆ. ಆರ್.ಎಂ.ಮಂಜುನಾಥಗೌಡ ಅವರು ಸತತ 9ನೇ ಬಾರಿ ಚುನಾಯಿತರಾಗಿ ದಾಖಲೆ ನಿರ್ಮಿಸಿದರೆ, ಶ್ರೀಪಾದರಾವ್ ಹೆಗಡೆ ಅವರು 6ನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಶ್ರೀಪಾದರಾವ್ ಅವರು ಇತ್ತೀಚೆಗಷ್ಟೆ ನಡೆದ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಚುನಾವಣೆಯಲ್ಲೂ ನಿರ್ದೇಶಕರಾಗಿ ಚುನಾಯಿತರಾಗಿದ್ದರು.

ಮಂಜುನಾಥಗೌಡ ಮತ್ತು ಅವರ ಸಿಂಡಿಕೇಟ್‍ನವರು ವಿಜಯ ಗಳಿಸುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ವಿಜೇತರಿಗೆ ಹೂವಿನ ಹಾರಗಳನ್ನು ಹಾಕಿ ಘೋಷಣೆಗಳನ್ನು ಮೊಳಗಿಸಿದರು.

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹಾಗೂ ಅವರ ನೇತೃತ್ವದ ಸಿಂಡಿಕೇಟ್ ತಂಡ ಜಯಭೇರಿ ಬಾರಿಸಿದೆ.

ಆರ್.ಎಂ.ಮಂಜುನಾಥ ಗೌಡ

ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಸಂಜೆ ಮತ ಎಣಿಕೆ ನಡೆದಿತ್ತು. ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಸಿಂಡಿಕೇಟ್ 6 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಸಿಂಡಿಕೇಟ್ 3 ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಯಿತು. ಇದಕ್ಕೂ ಮೊದಲು ಅವಿರೋಧವಾಗಿ ಆಯ್ಕೆಯಾದ 4 ಸ್ಥಾನಗಳು ಸೇರಿ ಮೈತ್ರಿಕೂಟದ ಸಿಂಡಿಕೇಟ್ 9 ಸ್ಥಾನಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಬೆಂಬಲಿತ ಸಿಂಡಿಕೇಟ್ 5 ಸ್ಥಾನ ಗಳಿಸಿದಂತಾಗುತ್ತದೆ. ಬ್ಯಾಂಕ್‍ನ ಅಧಿಕಾರ ಹಿಡಿಯಲು 7 ಮತಗಳು ಬೇಕಾಗಿರುವುದರಿಂದ ಮಂಜುನಾಥಗೌಡ ಅವರ ಸಿಂಡಿಕೇಟ್‍ಗೆ ಹಾದಿ ಸುಗಮವಾಗಿದೆ.

ವಿಶೇಷವೆಂದರೆ ಚುನಾವಣೆಯಲ್ಲಿ ಜಿ.ಎನ್.ಸುಧೀರ್ ಮೊದಲ ಬಾರಿಗೆ ಡಿಸಿಸಿಗೆ ಪ್ರವೇಶ ಪಡೆದರೆ, ಮಾಜಿ ನಿರ್ದೇಶಕ ಎಚ್.ಎಲ್.ಷಡಾಕ್ಷರಿ ಮರು ಪ್ರವೇಶ ಪಡೆದುಕೊಂಡಿದ್ದಾರೆ. ಇವರಿಬ್ಬರು ಸಹ ಕೇವಲ ಒಂದು ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಉಳಿದ 11 ಹಾಲಿ ನಿರ್ದೇಶಕರು ಪುನರಾಯ್ಕೆಯಾಗಿದ್ದಾರೆ. ಇತರೆ ಸಹಕಾರ ಸಂಘಗಳ ಕ್ಷೇತ್ರ ಸಾಗರ ಉಪವಿಭಾಗದಲ್ಲಿ ಒಂದು ಮತ ಮಾತ್ರ ಕುಲಗೆಟ್ಟಿದೆ. ಆರ್.ಎಂ.ಮಂಜುನಾಥಗೌಡ ಅವರು ಸತತ 9ನೇ ಬಾರಿ ಚುನಾಯಿತರಾಗಿ ದಾಖಲೆ ನಿರ್ಮಿಸಿದರೆ, ಶ್ರೀಪಾದರಾವ್ ಹೆಗಡೆ ಅವರು 6ನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಶ್ರೀಪಾದರಾವ್ ಅವರು ಇತ್ತೀಚೆಗಷ್ಟೆ ನಡೆದ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಚುನಾವಣೆಯಲ್ಲೂ ನಿರ್ದೇಶಕರಾಗಿ ಚುನಾಯಿತರಾಗಿದ್ದರು.

ಮಂಜುನಾಥಗೌಡ ಮತ್ತು ಅವರ ಸಿಂಡಿಕೇಟ್‍ನವರು ವಿಜಯ ಗಳಿಸುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ವಿಜೇತರಿಗೆ ಹೂವಿನ ಹಾರಗಳನ್ನು ಹಾಕಿ ಘೋಷಣೆಗಳನ್ನು ಮೊಳಗಿಸಿದರು.

Intro:ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರ ನೇತೃತ್ವದ ಸಿಂಡಿಕೇಟ್ ಜಯಭೇರಿ ಬಾರಿಸಿದೆ.
ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಸಂಜೆ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಸಿಂಡಿಕೇಟ್ 6 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಸಿಂಡಿಕೇಟ್ 3 ಸ್ಥಾನಗಳನ್ನು ಮಾತ್ರ ಗಳಿಸುವಲ್ಲಿ ಸಫಲವಾಯಿತು. ಇದಕ್ಕೂ ಮೊದಲು ಅವಿರೋಧ ಆಯ್ಕೆಯಾದ 4 ಸ್ಥಾನಗಳು ಸೇರಿದಲ್ಲಿ ಮೈತ್ರಿಕೂಟದ ಸಿಂಡಿಕೇಟ್ ಒಟ್ಟಾರೆ 9 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಸಿಂಡಿಕೇಟ್ 5 ಸ್ಥಾನಗಳನ್ನು ಗಳಿಸಿದಂತಾಗುತ್ತದೆ. ಬ್ಯಾಂಕ್‍ನ ಅಧಿಕಾರ ಹಿಡಿಯಲು 7 ಮತಗಳು ಬೇಕಾಗಿರುವುದರಿಂದ ಮಂಜುನಾಥಗೌಡ ಅವರ ಸಿಂಡಿಕೇಟ್‍ಗೆ ಹಾದಿ ಸುಗಮವಾಗಿದೆ.
ವಿಶೇಷವೆಂದರೆ ಚುನಾವಣೆಯಲ್ಲಿ ಜಿ.ಎನ್.ಸುಧೀರ್ ಮೊದಲ ಬಾರಿಗೆ ಡಿಸಿಸಿಗೆ ಪ್ರವೇಶ ಪಡೆದರೆ, ಮಾಜಿ ನಿರ್ದೇಶಕ ಎಚ್.ಎಲ್.ಷಡಾಕ್ಷರಿ ಮರು ಪ್ರವೇಶ ಪಡೆದುಕೊಂಡಿದ್ದಾರೆ. ಅಚ್ಚರಿ ಎಂದರೆ ಇವರಿಬ್ಬರು ಸಹ ಕೇವಲ ಒಂದು ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಉಳಿದ 11ಹಾಲಿ ನಿರ್ದೇಶಕರು ಪುನರಾಯ್ಕೆಯಾಗಿದ್ದಾರೆ. ಇತರೆ ಸಹಕಾರ ಸಂಘಗಳ ಕ್ಷೇತ್ರದ ಸಾಗರ ಉಪ ವಿಭಾಗದಲ್ಲಿ ಒಂದು ಮತ ಮಾತ್ರ ಕುಲಗೆಟ್ಟಿದೆ.
ಆರ್.ಎಂ.ಮಂಜುನಾಥಗೌಡ ಅವರು ಸತತ 9ನೇ ಬಾರಿ ಚುನಾಯಿತರಾಗಿ ದಾಖಲೆ ನಿರ್ಮಿಸಿದರೆ, ಶ್ರೀಪಾದರಾವ್ ಹೆಗಡೆ ಅವರು 6ನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಶ್ರೀಪಾದರಾವ್ ಅವರು ಇತ್ತೀಚೆಗಷ್ಟೆ ನಡೆದ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಚುನಾವಣೆಯಲ್ಲೂ ನಿರ್ದೇಶಕರಾಗಿ ಚುನಾಯಿತರಾಗಿದ್ದರು.
ಫಲಿತಾಂಶದ ಬಳಿಕ ಮಂಜುನಾಥಗೌಡ ಮತ್ತು ಅವರ ಸಿಂಡಿಕೇಟ್‍ನವರು ವಿಜಯ ಗಳಿಸುತ್ತಿದ್ದಂತೆ ಬ್ಯಾಂಕ್‍ನ ಹೊರಗೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ವಿಜೇತರಿಗೆ ಹೂವಿನ ಹಾರಗಳನ್ನು ಹಾಕಿ ಘೋಷಣೆಗಳನ್ನು ಮೊಳಗಿಸಿದರು.
ಬೈಟ್ - ಮಂಜುನಾಥ್ ಗೌಡ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರು
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.