ETV Bharat / state

ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ: ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

author img

By

Published : Nov 3, 2020, 4:26 PM IST

ಮುನಿರತ್ನನಾದರೂ ಬರಲಿ, ಖುಷ್ಬುವೇ ಬರಲಿ. ಯಾವುದೇ ತತ್ವ-ಸಿದ್ಧಾಂತವಿಲ್ಲದೆ ಬಿಜೆಪಿ ಕರೆದುಕೊಂಡಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

Former MLA Belur Gopalakrishna,
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಹಿಂದೆ ಖುಷ್ಬು ವಿರುದ್ಧ ಬಿಜೆಪಿ ರಾಜ್ಯ-ದೇಶದಾದ್ಯಂತ ಹೋರಾಟ ಮಾಡಿತ್ತು. ಈಗ ಅದೇ ಖುಷ್ಬು ಅವರನ್ನು ಮುನಿರತ್ನ ಪರ ಬಿಜೆಪಿಯವರು ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು

ಆಗ ಶೋಭಾ ಮೇಡಂ ಕೂಡ ಬಾಯಿ ಹರಿದುಕೊಂಡಿದ್ದರು. ಈಗ ಸುಮ್ಮನಾಗಿಬಿಟ್ಟಿದೆ ಆ ಯಮ್ಮ. ಉತ್ತರ ಪ್ರದೇಶದ ಹೆಣ್ಣು ಮಗಳು ಹತ್ಯೆಯಾದಾಗ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈಗ ಎಲೆಕ್ಷನ್ ಟೈಮ್​​ನಲ್ಲೂ ಎಲ್ಲಿಯೂ ಪ್ರಚಾರಕ್ಕೆ ಬಂದಿಲ್ಲ. ಯಾಕೋ ಏನೋ ಆ ವಿಷಯದ ಕುರಿತು ಯಡಿಯೂರಪ್ಪರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.

ಮಾತು ಮುಂದುವರೆಸಿದ ಅವರು, ಮುನಿರತ್ನನಾದರೂ ಬರಲಿ, ಖುಷ್ಬುವೇ ಬರಲಿ. ಯಾವುದೇ ತತ್ವ-ಸಿದ್ಧಾಂತವಿಲ್ಲದೆ ಬಿಜೆಪಿ ಕರೆದುಕೊಂಡಿದೆ. ಆರ್.ಆರ್. ನಗರ ಮತ್ತು ಶಿರಾ ಎರಡರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾನು ಕೂಡ ಆ ಎರಡೂ ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ಇದೇ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಈ ಹಿಂದೆ ಯಡಿಯೂರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಮೋದಿಯವರನ್ನು ಕರೆಸಿ, ಮುನಿರತ್ನ ಭ್ರಷ್ಟಾಚಾರಿ. ಅವರಿಗೆ ಮತ ಹಾಕಬೇಡಿ ಎಂದು ಹೇಳಿಸಿದ್ದರು. ಆದರೆ ಈಗ ಮುನಿರತ್ನ ಒಳ್ಳೆ ಮನುಷ್ಯ ಎಂದು ಸಿ.ಟಿ.ರವಿ ಹೇಳ್ತಾರೆ. ಎಲೆಕ್ಷನ್ ನಡೆಸದೇ ನಿಲ್ಲಿಸಿದ್ದು ನಾವಾ? ಬಿಜೆಪಿಯವರಾ? ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ಗೆ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಹೋದವರು ಬಿಜೆಪಿಯವರೇ. ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗ: ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಹಿಂದೆ ಖುಷ್ಬು ವಿರುದ್ಧ ಬಿಜೆಪಿ ರಾಜ್ಯ-ದೇಶದಾದ್ಯಂತ ಹೋರಾಟ ಮಾಡಿತ್ತು. ಈಗ ಅದೇ ಖುಷ್ಬು ಅವರನ್ನು ಮುನಿರತ್ನ ಪರ ಬಿಜೆಪಿಯವರು ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು

ಆಗ ಶೋಭಾ ಮೇಡಂ ಕೂಡ ಬಾಯಿ ಹರಿದುಕೊಂಡಿದ್ದರು. ಈಗ ಸುಮ್ಮನಾಗಿಬಿಟ್ಟಿದೆ ಆ ಯಮ್ಮ. ಉತ್ತರ ಪ್ರದೇಶದ ಹೆಣ್ಣು ಮಗಳು ಹತ್ಯೆಯಾದಾಗ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈಗ ಎಲೆಕ್ಷನ್ ಟೈಮ್​​ನಲ್ಲೂ ಎಲ್ಲಿಯೂ ಪ್ರಚಾರಕ್ಕೆ ಬಂದಿಲ್ಲ. ಯಾಕೋ ಏನೋ ಆ ವಿಷಯದ ಕುರಿತು ಯಡಿಯೂರಪ್ಪರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.

ಮಾತು ಮುಂದುವರೆಸಿದ ಅವರು, ಮುನಿರತ್ನನಾದರೂ ಬರಲಿ, ಖುಷ್ಬುವೇ ಬರಲಿ. ಯಾವುದೇ ತತ್ವ-ಸಿದ್ಧಾಂತವಿಲ್ಲದೆ ಬಿಜೆಪಿ ಕರೆದುಕೊಂಡಿದೆ. ಆರ್.ಆರ್. ನಗರ ಮತ್ತು ಶಿರಾ ಎರಡರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾನು ಕೂಡ ಆ ಎರಡೂ ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ಇದೇ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಈ ಹಿಂದೆ ಯಡಿಯೂರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಮೋದಿಯವರನ್ನು ಕರೆಸಿ, ಮುನಿರತ್ನ ಭ್ರಷ್ಟಾಚಾರಿ. ಅವರಿಗೆ ಮತ ಹಾಕಬೇಡಿ ಎಂದು ಹೇಳಿಸಿದ್ದರು. ಆದರೆ ಈಗ ಮುನಿರತ್ನ ಒಳ್ಳೆ ಮನುಷ್ಯ ಎಂದು ಸಿ.ಟಿ.ರವಿ ಹೇಳ್ತಾರೆ. ಎಲೆಕ್ಷನ್ ನಡೆಸದೇ ನಿಲ್ಲಿಸಿದ್ದು ನಾವಾ? ಬಿಜೆಪಿಯವರಾ? ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ಗೆ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಹೋದವರು ಬಿಜೆಪಿಯವರೇ. ಬಿಜೆಪಿಗೆ ಯಾವುದೇ ತತ್ವ-ಸಿದ್ಧಾಂತವಿಲ್ಲ ಎಂದು ವಾಗ್ದಾಳಿ ನಡೆಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.