ETV Bharat / state

ಕೊನೆಗೂ ಸುದೀಪ್​​ಗೆ ದರ್ಶನ ನೀಡಿದ ಚಾಲೆಂಜಿಂಗ್​ ಸ್ಟಾರ್.. ಈಡೇರಿತು ಅಭಿಮಾನಿಯ ಬಹುದಿನದ ಕನಸು

author img

By

Published : Jun 24, 2023, 5:38 PM IST

Updated : Jun 24, 2023, 7:11 PM IST

ತಮ್ಮ ಕಟ್ಟಾ ಅಭಿಮಾನಿ ಸುದೀಪ್​ ಅವರನ್ನು ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಭೇಟಿ ಆಗಿದ್ದಾರೆ.

Actor Darshan met his fan
ಸುದೀಪ್​​ಗೆ ದರ್ಶನ ನೀಡಿದ ಚಾಲೆಂಜಿಂಗ್​ ಸ್ಟಾರ್

ಶಿವಮೊಗ್ಗ: ಕನ್ನಡ ಚಿತ್ರರಂಗದ ಚಾಲೆಂಜಿಂಗ್​ ಸ್ಟಾರ್ ದರ್ಶನ್ ತೂಗುದೀಪ ದರ್ಶನಕ್ಕಾಗಿ ಹಗಲಿರುಳು ಪರಿತಪಿಸುತ್ತಿದ್ದ ಮಲೆನಾಡಿನ ಯುವಕ ಸುದೀಪ್ ಎಂಬುವವರಿಗೆ ನಟ ದರ್ಶನ್ ದರ್ಶನ ಭಾಗ್ಯ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ಪೇಟೆ ಬಳಿ ಮತ್ತಿಕೊಪ್ಪದ ನಿವಾಸಿ ಸುದೀಪ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಕಟ್ಟಾ ಅಭಿಮಾನಿ. ಸುದೀಪ್ ಸಣ್ಣ ವಯಸ್ಸಿನಿಂದಲೇ ದರ್ಶನ್​ ಸಿನಿಮಾಗಳನ್ನು ನೋಡಿ ಅಭಿಮಾನಿಯಾಗಿದ್ದಾರೆ. ಇವರು ಸಣ್ಣ ವಯಸ್ಸಿನಲ್ಲಿಯೇ ದರ್ಶನ್​​ ಅವರನ್ನು ನೋಡಬೇಕು ಎಂಬ ಹಂಬಲವನ್ನು ಹೊಂದಿದ್ದರು.

ತಾಯಿಯೊಂದಿಗೆ ದರ್ಶನ್ ಅಭಿಮಾನಿ ಸುದೀಪ್​
ತಾಯಿಯೊಂದಿಗೆ ದರ್ಶನ್ ಅಭಿಮಾನಿ ಸುದೀಪ್​

ತಮ್ಮ ನೆಚ್ಚಿನ ನಟನನ್ನು‌ ನೋಡಲು ಬೆಂಗಳೂರಿನ ಮನೆಗೆ ಹೋದರೂ ಸಹ ಅವರಿಗೆ ದರ್ಶನ್​​ ದರ್ಶನ ಭಾಗ್ಯ ಲಭ್ಯವಾಗಿರಲಿಲ್ಲ. ಇದರಿಂದ ಸುದೀಪ್ ಬೇಸರ ಮಾಡಿಕೊಂಡಿದ್ದರು. ಮನೆಯಲ್ಲಿ ಯಾವುದೇ ಕೆಲಸ ಮಾಡದೇ, ಒಬ್ಬಂಟಿಯಂತೆ ಕುಳಿತು‌ಕೊಳ್ಳುತ್ತಿದ್ದರು. ಸುದೀಪ್ ವರ್ತನೆ ಕಂಡು ಮನೆಯವರು ತೀವ್ರವಾಗಿ ತಲೆಕೆಡಿಸಿಕೊಂಡಿದ್ದರು. ಸುದೀಪ್​ಗೆ ದರ್ಶನ್​ ಅವರನ್ನು ಭೇಟಿ ಮಾಡಿಸಬೇಕೆಂಬ ಆಸೆಯನ್ನು ಕುಟುಂಬಸ್ಥರು ಮಾಧ್ಯಮದವರ ಮುಂದೆ ಹೊರ ಹಾಕಿದ್ದರು. ಈ ಸುದ್ದಿಯನ್ನು ನಮ್ಮ ಈಟಿವಿ‌ ಭಾರತದಲ್ಲಿಯೂ ಪ್ರಕಟಿಸಲಾಗಿತ್ತು.

ವರದಿ ಪ್ರಕಟಗೊಂಡ ಹಿನ್ನೆಲೆ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅವರು ತಮ್ಮ ನೆಚ್ಚಿನ ಅಭಿಮಾನಿ ಸುದೀಪ್ ಅವರನ್ನು ಮೈಸೂರಿಗೆ ಕರೆಸಿಕೊಂಡು ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಸುದೀಪ್ ಅವರಿಗೆ ಧೈರ್ಯ ತುಂಬಿ, ತಮ್ಮ ಕೆಲಸ ಕಾರ್ಯದಲ್ಲಿ ತೂಡಗಿಕೊಳ್ಳುವಂತೆ ಸೂಚನೆ‌ ನೀಡಿದ್ದಾರೆ. ಅಭಿಮಾನಿಯನ್ನು ಭೇಟಿ‌ ಮಾಡಿ ಕೈ ಕುಲುಕಿ, ಫೋಟೋ ಕ್ಲಿಕ್ಕಿಸಿಕೊಂಡು, ಉತ್ತಮವಾಗಿ ದುಡಿಮೆ ಮಾಡಿ ಕುಟುಂಬದವರನ್ನು ಸಾಕಿ, ಒಳ್ಳೆಯ ಜೀವನ ನಡೆಸಿ ಎಂದು ಸಲಹೆ ನೀಡಿದ್ದಾರೆ. ನನ್ನನ್ನು‌ ನೋಡಲು ಪದೇ ಪದೆ ಬೆಂಗಳೂರಿಗೆ ಬರಬಾರದು ಎಂಬ ಬುದ್ಧಿ ಮಾತನ್ನೂ ಹೇಳಿ ಕಳುಹಿಸಿದ್ದಾರೆ.

ಅಭಿಮಾನಿಯನ್ನು ಭೇಟಿಯಾದ ನಟ ದರ್ಶನ್
ಅಭಿಮಾನಿಯನ್ನು ಭೇಟಿಯಾದ ನಟ ದರ್ಶನ್

ಇದನ್ನೂ ಓದಿ: ರಶ್ಮಿಕಾ ವಿಜಯ್​ ಡೇಟಿಂಗ್​ ವದಂತಿ: ಊಹಾಪೋಹಗಳಿಗೆ ಪುಷ್ಠಿ ನೀಡಿತು ವೈರಲ್​ ವಿಡಿಯೋ!

ತಮ್ಮ ಮೆಚ್ಚಿನ ನಟನನ್ನು ಕಂಡು ಅಭಿಮಾನಿ ಸುದೀಪ್ ಅವರಿಗೆ ಬಹಳ ಸಂತೋಷ ಆಗಿದೆ. ಇಷ್ಟು ದಿನ ದರ್ಶನ್​ ಅವರನ್ನು ಭೇಟಿ ಮಾಡಬೇಕೆಂಬ ಆಸೆ ಈಡೇರಿದ ಕುರಿತು ಸುದೀಪ್​​ ಹರ್ಷ ವ್ಯಕ್ತಪಡಿಸಿದ್ದಾರೆ. ಸುದೀಪ್ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತ್ತಿಕೊಪ್ಪ ನಿವಾಸಿ ಬಡ ಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ (24).

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಅಪ್ಪಟ ಅಭಿಮಾನಿ ’ಸುದೀಪ್’​ಗೆ ಸಿಗಲಿದೆಯಾ 'ದರ್ಶನ' ಭಾಗ್ಯ!

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರಿಗೆ ಬೃಹತ್​ ಸಂಖ್ಯೆಯ ಅಭಿಮಾನಿ ಬಳಗ ಇದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಹಲವರು ಹಾತೊರೆಯುತ್ತಾರೆ. ನಟ ದರ್ಶನ್​ ಅವರನ್ನು ನೋಡುವ ಭಾಗ್ಯ ಸಿಕ್ಕರೆ ಸಾಕು ಎಂದು ಕಾದು ಕುಳಿತಿರುತ್ತಾರೆ. ಆ ಪೈಕಿ ಶಿವಮೊಗ್ಗದ ಸುದೀಪ್​ ಕೂಡ ಓರ್ವರು. ಕೊನೆಗೂ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿ, ನಟ ದರ್ಶನ್​ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ: ಕನ್ನಡ ಚಿತ್ರರಂಗದ ಚಾಲೆಂಜಿಂಗ್​ ಸ್ಟಾರ್ ದರ್ಶನ್ ತೂಗುದೀಪ ದರ್ಶನಕ್ಕಾಗಿ ಹಗಲಿರುಳು ಪರಿತಪಿಸುತ್ತಿದ್ದ ಮಲೆನಾಡಿನ ಯುವಕ ಸುದೀಪ್ ಎಂಬುವವರಿಗೆ ನಟ ದರ್ಶನ್ ದರ್ಶನ ಭಾಗ್ಯ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ಪೇಟೆ ಬಳಿ ಮತ್ತಿಕೊಪ್ಪದ ನಿವಾಸಿ ಸುದೀಪ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಕಟ್ಟಾ ಅಭಿಮಾನಿ. ಸುದೀಪ್ ಸಣ್ಣ ವಯಸ್ಸಿನಿಂದಲೇ ದರ್ಶನ್​ ಸಿನಿಮಾಗಳನ್ನು ನೋಡಿ ಅಭಿಮಾನಿಯಾಗಿದ್ದಾರೆ. ಇವರು ಸಣ್ಣ ವಯಸ್ಸಿನಲ್ಲಿಯೇ ದರ್ಶನ್​​ ಅವರನ್ನು ನೋಡಬೇಕು ಎಂಬ ಹಂಬಲವನ್ನು ಹೊಂದಿದ್ದರು.

ತಾಯಿಯೊಂದಿಗೆ ದರ್ಶನ್ ಅಭಿಮಾನಿ ಸುದೀಪ್​
ತಾಯಿಯೊಂದಿಗೆ ದರ್ಶನ್ ಅಭಿಮಾನಿ ಸುದೀಪ್​

ತಮ್ಮ ನೆಚ್ಚಿನ ನಟನನ್ನು‌ ನೋಡಲು ಬೆಂಗಳೂರಿನ ಮನೆಗೆ ಹೋದರೂ ಸಹ ಅವರಿಗೆ ದರ್ಶನ್​​ ದರ್ಶನ ಭಾಗ್ಯ ಲಭ್ಯವಾಗಿರಲಿಲ್ಲ. ಇದರಿಂದ ಸುದೀಪ್ ಬೇಸರ ಮಾಡಿಕೊಂಡಿದ್ದರು. ಮನೆಯಲ್ಲಿ ಯಾವುದೇ ಕೆಲಸ ಮಾಡದೇ, ಒಬ್ಬಂಟಿಯಂತೆ ಕುಳಿತು‌ಕೊಳ್ಳುತ್ತಿದ್ದರು. ಸುದೀಪ್ ವರ್ತನೆ ಕಂಡು ಮನೆಯವರು ತೀವ್ರವಾಗಿ ತಲೆಕೆಡಿಸಿಕೊಂಡಿದ್ದರು. ಸುದೀಪ್​ಗೆ ದರ್ಶನ್​ ಅವರನ್ನು ಭೇಟಿ ಮಾಡಿಸಬೇಕೆಂಬ ಆಸೆಯನ್ನು ಕುಟುಂಬಸ್ಥರು ಮಾಧ್ಯಮದವರ ಮುಂದೆ ಹೊರ ಹಾಕಿದ್ದರು. ಈ ಸುದ್ದಿಯನ್ನು ನಮ್ಮ ಈಟಿವಿ‌ ಭಾರತದಲ್ಲಿಯೂ ಪ್ರಕಟಿಸಲಾಗಿತ್ತು.

ವರದಿ ಪ್ರಕಟಗೊಂಡ ಹಿನ್ನೆಲೆ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅವರು ತಮ್ಮ ನೆಚ್ಚಿನ ಅಭಿಮಾನಿ ಸುದೀಪ್ ಅವರನ್ನು ಮೈಸೂರಿಗೆ ಕರೆಸಿಕೊಂಡು ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಸುದೀಪ್ ಅವರಿಗೆ ಧೈರ್ಯ ತುಂಬಿ, ತಮ್ಮ ಕೆಲಸ ಕಾರ್ಯದಲ್ಲಿ ತೂಡಗಿಕೊಳ್ಳುವಂತೆ ಸೂಚನೆ‌ ನೀಡಿದ್ದಾರೆ. ಅಭಿಮಾನಿಯನ್ನು ಭೇಟಿ‌ ಮಾಡಿ ಕೈ ಕುಲುಕಿ, ಫೋಟೋ ಕ್ಲಿಕ್ಕಿಸಿಕೊಂಡು, ಉತ್ತಮವಾಗಿ ದುಡಿಮೆ ಮಾಡಿ ಕುಟುಂಬದವರನ್ನು ಸಾಕಿ, ಒಳ್ಳೆಯ ಜೀವನ ನಡೆಸಿ ಎಂದು ಸಲಹೆ ನೀಡಿದ್ದಾರೆ. ನನ್ನನ್ನು‌ ನೋಡಲು ಪದೇ ಪದೆ ಬೆಂಗಳೂರಿಗೆ ಬರಬಾರದು ಎಂಬ ಬುದ್ಧಿ ಮಾತನ್ನೂ ಹೇಳಿ ಕಳುಹಿಸಿದ್ದಾರೆ.

ಅಭಿಮಾನಿಯನ್ನು ಭೇಟಿಯಾದ ನಟ ದರ್ಶನ್
ಅಭಿಮಾನಿಯನ್ನು ಭೇಟಿಯಾದ ನಟ ದರ್ಶನ್

ಇದನ್ನೂ ಓದಿ: ರಶ್ಮಿಕಾ ವಿಜಯ್​ ಡೇಟಿಂಗ್​ ವದಂತಿ: ಊಹಾಪೋಹಗಳಿಗೆ ಪುಷ್ಠಿ ನೀಡಿತು ವೈರಲ್​ ವಿಡಿಯೋ!

ತಮ್ಮ ಮೆಚ್ಚಿನ ನಟನನ್ನು ಕಂಡು ಅಭಿಮಾನಿ ಸುದೀಪ್ ಅವರಿಗೆ ಬಹಳ ಸಂತೋಷ ಆಗಿದೆ. ಇಷ್ಟು ದಿನ ದರ್ಶನ್​ ಅವರನ್ನು ಭೇಟಿ ಮಾಡಬೇಕೆಂಬ ಆಸೆ ಈಡೇರಿದ ಕುರಿತು ಸುದೀಪ್​​ ಹರ್ಷ ವ್ಯಕ್ತಪಡಿಸಿದ್ದಾರೆ. ಸುದೀಪ್ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತ್ತಿಕೊಪ್ಪ ನಿವಾಸಿ ಬಡ ಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ (24).

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಅಪ್ಪಟ ಅಭಿಮಾನಿ ’ಸುದೀಪ್’​ಗೆ ಸಿಗಲಿದೆಯಾ 'ದರ್ಶನ' ಭಾಗ್ಯ!

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರಿಗೆ ಬೃಹತ್​ ಸಂಖ್ಯೆಯ ಅಭಿಮಾನಿ ಬಳಗ ಇದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಹಲವರು ಹಾತೊರೆಯುತ್ತಾರೆ. ನಟ ದರ್ಶನ್​ ಅವರನ್ನು ನೋಡುವ ಭಾಗ್ಯ ಸಿಕ್ಕರೆ ಸಾಕು ಎಂದು ಕಾದು ಕುಳಿತಿರುತ್ತಾರೆ. ಆ ಪೈಕಿ ಶಿವಮೊಗ್ಗದ ಸುದೀಪ್​ ಕೂಡ ಓರ್ವರು. ಕೊನೆಗೂ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿ, ನಟ ದರ್ಶನ್​ ಮಾನವೀಯತೆ ಮೆರೆದಿದ್ದಾರೆ.

Last Updated : Jun 24, 2023, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.