ETV Bharat / state

ಮದ್ಯ ಕುಡಿಯಲು ಹಣ ನೀಡಿಲ್ಲವೆಂದು ಅಜ್ಜಿಯನ್ನೇ ಕೊಂದ ಪಾಪಿ‌ ಮೊಮ್ಮಗ

author img

By

Published : Jul 8, 2020, 1:40 PM IST

ಮದ್ಯ ವ್ಯಸನಿಯೊಬ್ಬ ತನಗೆ ಕುಡಿಯಲು ಅಜ್ಜಿ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಹಲ್ಲೆ ನಡೆಸಿ ಕೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

A drunker killed his grandmother for not giving money to drink
ಕುಡಿಯಲು ಹಣ ನೀಡಿಲ್ಲ ಅಂತ ಅಜ್ಜಿಯನ್ನೇ ಕೊಂದ ಪಾಪಿ‌ ಮೊಮ್ಮಗ

ಶಿವಮೊಗ್ಗ: ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ಮೊಮ್ಮಗನೊಬ್ಬ ಅಜ್ಜಿಯನ್ನೇ ಕುಡಗೋಲಿನಿಂದ ಹಲ್ಲೆ ನಡೆಸಿ‌ ಕೊಲೆ ಮಾಡಿರುವ ಘಟನೆ ಭದ್ರಾವತಿಯ ತಾಷ್ಕೆಂಡ ಕಾಲೋನಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಅರುಣ್ ಎಂಬಾತ ತನಗೆ ಮದ್ಯ ಸೇವನೆಗೆ ಹಣ ನೀಡುವಂತೆ ಅಜ್ಜಿ ಕಿಟ್ಟಮ್ಮನನ್ನು ಕೇಳಿದ್ದಾನೆ. ಅಜ್ಜಿ ಹಣ ಇಲ್ಲವೆಂದು ಹೇಳಿದಾಗ ಆಕೆಯೊಂದಿಗೆ ಜಗಳವಾಡಿದ್ದಾನೆ. ಆನಂತರ ಜಗಳ ತಾರಕಕ್ಕೇರಿದ್ದು, ಕೋಪದಿಂದ ಮನೆಯಲ್ಲಿದ್ದ ಕೊಡಗೋಲಿನಿಂದ ಕಿಟ್ಟಮ್ಮನ ಕುತ್ತಿಗೆ ಹಾಗೂ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಕಿಟ್ಟಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಲ್ಲೆ ತಡೆಯಲು ಬಂದವರ ಮೇಲೆಯೂ ಮೇಲೆಯೂ ಸಹ ಕುಡಗೋಲಿನಿಂದ ಹಲ್ಲೆ ನಡೆಸಿದ ಪರಿಣಾಮ ಪಾಪಮ್ಮ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅರುಣ್​ನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ, ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ಮೊಮ್ಮಗನೊಬ್ಬ ಅಜ್ಜಿಯನ್ನೇ ಕುಡಗೋಲಿನಿಂದ ಹಲ್ಲೆ ನಡೆಸಿ‌ ಕೊಲೆ ಮಾಡಿರುವ ಘಟನೆ ಭದ್ರಾವತಿಯ ತಾಷ್ಕೆಂಡ ಕಾಲೋನಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಅರುಣ್ ಎಂಬಾತ ತನಗೆ ಮದ್ಯ ಸೇವನೆಗೆ ಹಣ ನೀಡುವಂತೆ ಅಜ್ಜಿ ಕಿಟ್ಟಮ್ಮನನ್ನು ಕೇಳಿದ್ದಾನೆ. ಅಜ್ಜಿ ಹಣ ಇಲ್ಲವೆಂದು ಹೇಳಿದಾಗ ಆಕೆಯೊಂದಿಗೆ ಜಗಳವಾಡಿದ್ದಾನೆ. ಆನಂತರ ಜಗಳ ತಾರಕಕ್ಕೇರಿದ್ದು, ಕೋಪದಿಂದ ಮನೆಯಲ್ಲಿದ್ದ ಕೊಡಗೋಲಿನಿಂದ ಕಿಟ್ಟಮ್ಮನ ಕುತ್ತಿಗೆ ಹಾಗೂ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಕಿಟ್ಟಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಲ್ಲೆ ತಡೆಯಲು ಬಂದವರ ಮೇಲೆಯೂ ಮೇಲೆಯೂ ಸಹ ಕುಡಗೋಲಿನಿಂದ ಹಲ್ಲೆ ನಡೆಸಿದ ಪರಿಣಾಮ ಪಾಪಮ್ಮ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅರುಣ್​ನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ, ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.