ETV Bharat / state

ಹೊಸ ಕಾರು ಖರೀದಿಸಿ ಮನೆ ತಲುಪುವುದಕ್ಕೂ ಮುನ್ನವೇ ಮಾರ್ಗಮಧ್ಯೆ ಸುಟ್ಟು ಭಸ್ಮ - ಧಗಧಗನೆ ಹೊತ್ತಿ ಉರಿದ ಕಾರು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಇಂದೇ ಖರೀದಿ ಮಾಡಿದ್ದ ಹೊಸ ಕಾರೊಂದು ಧಗಧಗನೆ ಹೊತ್ತಿ ಉರಿಯಿತು.

A car burnt in Agumbe ghat section
ಇಂದೇ ಖರೀದಿಸಿದ ಕಾರು ಬೆಂಗಾಹುತಿ
author img

By

Published : Sep 19, 2021, 7:53 PM IST

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ನಡೆಯಿತು.

ಇಂದೇ ಖರೀದಿಸಿದ ಕಾರು ಬೆಂಗಾಹುತಿ

ಕಾರ್ಕಳದಿಂದ ಶಿವಮೊಗ್ಗದ ಕಡೆ ಹೊರಟಿದ್ದ ಟೊಯೋಟೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ಮೂವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ ಖರೀದಿಸಿದ ಕಾರು ಇದಾಗಿದ್ದು, ಮನೆ ತಲುಪುವ ಮುನ್ನವೇ ಕಣ್ಣೆದುರು ಸುಟ್ಟು ಕರಕಲಾಯಿತು.

ಈ ಘಟನೆಯಿಂದ ಆಗುಂಬೆ ಘಾಟಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಗುಂಬೆ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಕಾನೂನು ತರುತ್ತೇವೆ: ಆರ್.ಅಶೋಕ್

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ನಡೆಯಿತು.

ಇಂದೇ ಖರೀದಿಸಿದ ಕಾರು ಬೆಂಗಾಹುತಿ

ಕಾರ್ಕಳದಿಂದ ಶಿವಮೊಗ್ಗದ ಕಡೆ ಹೊರಟಿದ್ದ ಟೊಯೋಟೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ಮೂವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ ಖರೀದಿಸಿದ ಕಾರು ಇದಾಗಿದ್ದು, ಮನೆ ತಲುಪುವ ಮುನ್ನವೇ ಕಣ್ಣೆದುರು ಸುಟ್ಟು ಕರಕಲಾಯಿತು.

ಈ ಘಟನೆಯಿಂದ ಆಗುಂಬೆ ಘಾಟಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಗುಂಬೆ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಕಾನೂನು ತರುತ್ತೇವೆ: ಆರ್.ಅಶೋಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.