ರಾಮನಗರ: ಜಿಲ್ಲೆಯ ಸಾತನೂರು ಗ್ರಾಮದ ಬಾವಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಲಕ್ಷ್ಮಿ (14) ಮೃತಪಟ್ಟ ಬಾಲಕಿ. ಈಕೆ ಮಾಗಡಿ ತಾಲೂಕಿನ ಸಾತನೂರು ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸಾತನೂರು ಗ್ರಾಮದಿಂದ ಸುಮಾರು 1 ಕಿ. ಮೀ. ದೂರವಿರುವ ಕಲ್ಲಿನ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ವನ್ಯಜೀವಿಗಳ ದೇಹದ ಭಾಗಗಳ ಮಾರಾಟ ಯತ್ನ: ರಾಯಚೂರಲ್ಲಿ ನಾಲ್ವರ ಬಂಧನ