ETV Bharat / state

ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟು.. ಇರೋದು ಬಿಟ್ಟು ಬೇರೆ ಜಾತಿ ಪ್ರಮಾಣ ಪತ್ರ..

author img

By

Published : Aug 11, 2019, 1:57 PM IST

ಸರ್ಕಾರ‌ವು ತನ್ನ ಪ್ರತಿ ಯೋಜನೆಗೂ ಆಧಾರವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನ ಮಾನದಂಡವಾಗಿಸಿದೆ. ಆದರೆ, ಇದನ್ನು ಸರಿಯಾದ ರೀತಿಯಲ್ಲಿ ಅರ್ಜಿದಾರರಿಗೆ ಒದಗಿಸಬೇಕಾಗಿರುವುದು ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ. ಗಾಣಿಗ ಜಾತಿಯ ಅರ್ಜಿದಾರರಿಗೆ ಒಕ್ಕಲಿಗ ಜಾತಿ ಪ್ರಮಾಣ ನೀಡಿ ಕರ್ತವ್ಯಲೋಪಕ್ಕೆ ಗುರಿಯಾಗಿರುವ ಘಟನೆ ರಾಮನಗರ ಬಿಡದಿ ಹೋಬಳಿಯಲ್ಲಿ ನಡೆದಿದೆ.

ಅರ್ಜಿದಾರ ಮಾತನಾಡಿದ್ದಾರೆ

ರಾಮನಗರ : ಬಿಡದಿ ಹೋಬಳಿಯ ಶ್ಯಾನುಮಂಗಲ ಗ್ರಾಮದ ಗಾಣಿಗ ಜನಾಂಗದ ಸುವರ್ಣಮ್ಮ ಲೇಟ್ ಶ್ಯಾಮಸುಂದರ್ ಅವರ ಕುಟುಂಬದ ಜಾತಿಯನ್ನು ಒಕ್ಕಲಿಗ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ನೀಡಲಾಗಿದ್ದು, ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದು ಕಣ್ ತಪ್ಪಿನಿಂದ‌ ಆಗಿರುವ ಪ್ರಮಾದ ಎನ್ನುತ್ತಿದ್ದಾರೆ.

ಜಾತಿ ಪ್ರಮಾಣ ಪತ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ..

ಈ‌ ಸಂಬಂಧ‌ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಸುವರ್ಣಮ್ಮ ಹಾಗೂ ಮಗ ವೀರಭದ್ರ, ಇದು ಅಧಿಕಾರಿಗಳ‌ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸಣ್ಣ ದಾಖಲೆ‌ ನೀಡದಿದ್ದರೂ ತಿಂಗಳಾನುಗಟ್ಟಲೆ ತಿರುಗಿಸುವ ಅಧಿಕಾರಿಗಳು ಲಂಚ ನೀಡದೇ ಇದ್ದರೆ‌ ಇಂತಹ ಪ್ರಮಾದಕ್ಕಿಳಿಯುತ್ತಾರೆ. ಇದರಿಂದ ಸಾಕಷ್ಟು ಜನ‌ರು ಸಮಸ್ಯೆ ಎದುರಿಸಬೇಕಿದೆ‌ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಜಾತಿ ಪ್ರಮಾಣ ಪತ್ರ ಒಮ್ಮೆ ನೀಡಿದರೆ ಐದು ವರ್ಷ ಬದಲಾಯಿಸಲು ಸಾದ್ಯವಿಲ್ಲ. ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು. ಆದರೆ, ಅಧಿಕಾರಿಗಳ ತಪ್ಪಿಗೆ ಜನಸಾಮಾನ್ಯರು ಪರಿತಪಿಸಬೇಕಾಗಿದೆ. ಅನುದಾನ ಪಡೆಯಲು‌ ಮುಂದಾದರೆ ಸುಳ್ಳು ದಾಖಲೆ‌ ನೀಡಿರುವ ಆರೋಪ ಕೂಡ ನಮ್ಮ ಮೇಲೆಯೇ ಹಾಕುತ್ತಾರೆ. ಆದ್ದರಿಂದ ಸಂಬಂಧ ಪಟ್ಟವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ‌ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ರಾಮನಗರ : ಬಿಡದಿ ಹೋಬಳಿಯ ಶ್ಯಾನುಮಂಗಲ ಗ್ರಾಮದ ಗಾಣಿಗ ಜನಾಂಗದ ಸುವರ್ಣಮ್ಮ ಲೇಟ್ ಶ್ಯಾಮಸುಂದರ್ ಅವರ ಕುಟುಂಬದ ಜಾತಿಯನ್ನು ಒಕ್ಕಲಿಗ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ನೀಡಲಾಗಿದ್ದು, ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದು ಕಣ್ ತಪ್ಪಿನಿಂದ‌ ಆಗಿರುವ ಪ್ರಮಾದ ಎನ್ನುತ್ತಿದ್ದಾರೆ.

ಜಾತಿ ಪ್ರಮಾಣ ಪತ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ..

ಈ‌ ಸಂಬಂಧ‌ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಸುವರ್ಣಮ್ಮ ಹಾಗೂ ಮಗ ವೀರಭದ್ರ, ಇದು ಅಧಿಕಾರಿಗಳ‌ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸಣ್ಣ ದಾಖಲೆ‌ ನೀಡದಿದ್ದರೂ ತಿಂಗಳಾನುಗಟ್ಟಲೆ ತಿರುಗಿಸುವ ಅಧಿಕಾರಿಗಳು ಲಂಚ ನೀಡದೇ ಇದ್ದರೆ‌ ಇಂತಹ ಪ್ರಮಾದಕ್ಕಿಳಿಯುತ್ತಾರೆ. ಇದರಿಂದ ಸಾಕಷ್ಟು ಜನ‌ರು ಸಮಸ್ಯೆ ಎದುರಿಸಬೇಕಿದೆ‌ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಜಾತಿ ಪ್ರಮಾಣ ಪತ್ರ ಒಮ್ಮೆ ನೀಡಿದರೆ ಐದು ವರ್ಷ ಬದಲಾಯಿಸಲು ಸಾದ್ಯವಿಲ್ಲ. ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು. ಆದರೆ, ಅಧಿಕಾರಿಗಳ ತಪ್ಪಿಗೆ ಜನಸಾಮಾನ್ಯರು ಪರಿತಪಿಸಬೇಕಾಗಿದೆ. ಅನುದಾನ ಪಡೆಯಲು‌ ಮುಂದಾದರೆ ಸುಳ್ಳು ದಾಖಲೆ‌ ನೀಡಿರುವ ಆರೋಪ ಕೂಡ ನಮ್ಮ ಮೇಲೆಯೇ ಹಾಕುತ್ತಾರೆ. ಆದ್ದರಿಂದ ಸಂಬಂಧ ಪಟ್ಟವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ‌ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Intro:


Body:ರಾಮನಗರ : ಸರ್ಕಾರ‌ ಪ್ರತಿಯೊಂದು ಯೋಜನೆಗೂ ಆಧಾರವಾಗಿ ಜಾತಿ ಮತ್ತು ಆದಾಯಪ್ರಮಾಣಪತ್ರವನ್ನು ಮಾನದಂಡ ಮತ್ತು ಪ್ರಮುಖ ದಾಖಲೆಯಾಗಿ ಕೇಳುತ್ತದೆ. ಅದನ್ನ ಕೊಡುವಾಗ ಸಾಕಷ್ಟು ಮೂಲ‌ದಾಖಲೆಗಳನ್ನು ಒದಗಿಸಿಕೊಟ್ಟು ಪಡೆಯಬೇಕು ಯಾಕಂದ್ರೆ‌ ಸರ್ಕಾರದ ಯೋಜನೆಗಳಿಗೆ ಅದೆ ಮುಖ್ಯ ಆದರೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಮಾಣ ಪತ್ರದಲ್ಲಿ ಜಾತಿನೇ ಅದಲುಬದಲಾಗಿಬಿಡುತ್ತೆ ಇಂತಹ ಹತ್ತಾರು ಪ್ರಕರಣಗಳು ನಡೆದಿದ್ರೂ ದೂರುಗಳು ನೀಡಿದ್ರೂ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ .
ಇದಕ್ಕೆ ಸ್ಪಷ್ಟ‌ ನಿದರ್ಶನ ಎಂಬಂತೆ ಬಿಡದಿ ಹೋಬಳಿಯ ಶ್ಯಾನುಮಂಗಲ ಗ್ರಾಮದ ಗಾಣಿಗ ಜನಾಂಗದ ಸುವರ್ಣಮ್ಮ ಲೇಟ್ ಶ್ಯಾಮಸುಂದರ್ ಅವರ ಕುಟುಂಬದ ಜಾತಿಯನ್ನು ಒಕ್ಕಲಿಗ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ನೀಡಲಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದ ಸುವರ್ಣಮ್ಮ ಕುಟುಂಬದ ನಾಲ್ವರ‌ ಪ್ರಮಾಣಪತ್ರದಲ್ಲೂ ಒಕ್ಕಲಿಗ ಜಾತಿ ನಮೂದಾಗಿದ್ದು ಸಂಬಂದಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಕಣ್ ತಪ್ಪಿನಿಂದ‌ ಪ್ರಮಾದವಾಗಿದೆ ಎನ್ನುತ್ತಾರೆ. ಈ‌ ಸಂಬಂಧ‌ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಸುವರ್ಣಮ್ಮ ಮಗ ವೀರಭದ್ರ ಸರ್ಕಾರದ ಅಧಿಕಾರಿಗಳ‌ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಇದಾಗಿದ್ದು ಸಣ್ಣ ದಾಖಲೆ‌ ನೀಡದಿದ್ದರೂ ತಿಂಗಳಾನುಗಟ್ಟಲೆ ತಿರುಗಿಸುವ ಅಧಿಕಾರಿಗಳು ಲಂಚ ನೀಡದೇ ಇದ್ದರೆ‌ ಇಂತಹ ಪ್ರಮಾದಕ್ಕಿಳಿಯುತ್ತಾರೆ ಇದರಿಂದ ಸಾಕಷ್ಟು ಜನ‌ಸಮಸ್ಯೆ ಎದುರಿಸಬೇಕಿದೆ‌ಎಂದು ಆಕ್ರೋಶ‌ವ್ಯಕ್ತಪಡಿಸಿದ್ದಾರೆ.
ಜಾತಿ ಪ್ರಮಾಣ ಪತ್ರ ಒಮ್ಮೆ ನೀಡಿದರೆ ಐದು ವರ್ಷ ಬದಲಾಯಿಸಲು ಸಾದ್ಯವಿಲ್ಲ ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಬೇಕಾದರೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಬೇಕು ಆದರೆ ಅಧಿಕಾರಿಗಳ ತಪ್ಪಿಗೆ ಜನಸಾಮಾನ್ಯ ಪರಿತಪಿಸಬೇಕಿದೆ, ಅನುದಾನ ಪಡೆಯಲು‌ಮುಂದಾದರೆ ಸುಳ್ಳು ದಾಖಲೆ‌ನೀಡಿರುವ ಆರೋಪ ಕೂಡ ನಮ್ಮ ಮೇಲೆಯೇ ಹಾಕುತ್ತಾರೆ. ಆದ್ದರಿಂದ ಸಂಬಂಧ ಪಟ್ಟ ,ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ‌ಹಿರಿಯ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ‌‌ ಕಡತಗಳಲ್ಲಿ ಕೂಡ ಇಂತಹ‌ಲೋಪ ಎಚ್ಚಾಗಿದ್ದು ಕೂಡಲೆ ತಪ್ಪಿತಸ್ಥರನ್ನು ಅಮಾನಥು‌ಮಾಡಬೇಕು ಇಲ್ಲವಾದರೆ ಶೋಷಿತ ವರ್ಗದ ಸವಲತ್ತನ್ನು ಮತ್ಯಾರೋ ದುರ್ಬಳಕೆ‌ ಮಾಡಿಕೊಳ್ಳುತ್ತಾರೆ ಅದನ್ನು ತಪ್ಪಿಸುವ ಮೂಲಕ‌ ಸರ್ಕಾರದ ಯೋಜನೆಗಳ ಸುರ್ಬಳಕೆ ತಪ್ಪಿಸಬೇಕಿದೆ .


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.