ETV Bharat / state

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದಾದರೆ‌ ಮಾಡಿ: HDK

ಸರ್ಕಾರಕ್ಕೆ ವಿರೋಧ ಪಕ್ಷ ಉತ್ತಮ ಸಲಹೆಗಳನ್ನ ನೀಡಲಿ. ಎರಡು ಪಕ್ಷಗಳು ಉತ್ತಮ ಕೆಲಸ ಮಾಡಿದಾಗ ರಾಜ್ಯದ ಜನತೆಗೆ ಏನಾದರೂ ಉಪಯೋಗವಾಗುತ್ತದೆ ಎಂದು ರಾಮನಗರದ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

author img

By

Published : Jun 21, 2021, 5:25 PM IST

ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು
ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು

ರಾಮನಗರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದಾದರೆ‌ ಮಾಡಿ. ಮುಂದುವರೆಸೋದಾದ್ರೆ ಮುಂದುವರೆಸಿ. ಸಿಎಂ ಬದಲಾವಣೆ ಬಗ್ಗೆ ಒಂದು ಸ್ಪಷ್ಟನೆ ನೀಡಿ ಎಂದು ಬಿಜೆಪಿ ಹೈಕಮಾಂಡ್​ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು

ಚನ್ನಪಟ್ಟಣದಲ್ಲಿ ಕೊವೀಡ್ 19 ವಾಕ್ಸಿನೇಷನ್ ಸ್ಥಳ ಪರಿಶೀಲಿಸಿ ಮಾತನಾಡಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಇನ್ನೆರಡು ವರ್ಷದಲ್ಲಿ ಚುನಾವಣೆ ಬರಲಿದೆ. ರಾಜಕೀಯ ಬಿಟ್ಟು ಜನರ ಸೇವೆ ಮಾಡೋಣ ಎಂದರು.

ನಾನು ಕಾಂಗ್ರೆಸ್​, ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ. ಕೆಲವರು ಸರ್ಕಾರದ ಹಣ ಬಳಸಿಕೊಂಡು ಫುಡ್ ಕಿಟ್ ಕೊಟ್ಟಿದ್ದಾರೆ. ಸರ್ಕಾರದ ಹಣಕ್ಕೆ ಇವರ ಫೋಟೋ ಹಾಕಿಕೊಂಡಿದ್ದಾರೆ ನಿಮ್ಮ ಸಂಸದರು. ಇವರಿಗೆ ಏನ್ ಕಡಿಮೆಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್​ಗೆ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಓದಿ:ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ನಾಲ್ವರು ಯುವತಿಯರ ರಕ್ಷಣೆ, ಇಬ್ಬರು ಬಂಧನ

ರಾಮನಗರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋದಾದರೆ‌ ಮಾಡಿ. ಮುಂದುವರೆಸೋದಾದ್ರೆ ಮುಂದುವರೆಸಿ. ಸಿಎಂ ಬದಲಾವಣೆ ಬಗ್ಗೆ ಒಂದು ಸ್ಪಷ್ಟನೆ ನೀಡಿ ಎಂದು ಬಿಜೆಪಿ ಹೈಕಮಾಂಡ್​ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಿಎಂ ಬದಲಾವಣೆ ಕುರಿತು ಕುಮಾರಸ್ವಾಮಿ ಮಾತು

ಚನ್ನಪಟ್ಟಣದಲ್ಲಿ ಕೊವೀಡ್ 19 ವಾಕ್ಸಿನೇಷನ್ ಸ್ಥಳ ಪರಿಶೀಲಿಸಿ ಮಾತನಾಡಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಇನ್ನೆರಡು ವರ್ಷದಲ್ಲಿ ಚುನಾವಣೆ ಬರಲಿದೆ. ರಾಜಕೀಯ ಬಿಟ್ಟು ಜನರ ಸೇವೆ ಮಾಡೋಣ ಎಂದರು.

ನಾನು ಕಾಂಗ್ರೆಸ್​, ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ. ಕೆಲವರು ಸರ್ಕಾರದ ಹಣ ಬಳಸಿಕೊಂಡು ಫುಡ್ ಕಿಟ್ ಕೊಟ್ಟಿದ್ದಾರೆ. ಸರ್ಕಾರದ ಹಣಕ್ಕೆ ಇವರ ಫೋಟೋ ಹಾಕಿಕೊಂಡಿದ್ದಾರೆ ನಿಮ್ಮ ಸಂಸದರು. ಇವರಿಗೆ ಏನ್ ಕಡಿಮೆಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್​ಗೆ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಓದಿ:ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ನಾಲ್ವರು ಯುವತಿಯರ ರಕ್ಷಣೆ, ಇಬ್ಬರು ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.