ETV Bharat / state

ಯೋಗೇಶ್ವರ್​​ ಪುತ್ರಿಗೆ ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಟಿಕೆಟ್​​? - undefined

ಈ ಬಾರಿಯ ಬೆಂಗಳೂರು ಗ್ರಾಮಾಂತರದ ಟಿಕೆಟ್ ಯೋಗೇಶ್ವರ್​ ಮಗಳಿಗೆ ನೀಡಲು ಬಿಜೆಪಿ ತನ್ನ ಸಂಭಾವ್ಯ ಪಟ್ಟಿಯಲ್ಲಿ ಅವರ ಹೆಸರನ್ನು ಕೂಡ ಸೂಚಿಸಿದೆ ಎಂದು ಹೇಳಲಾಗ್ತಿದೆ.

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್
author img

By

Published : Mar 21, 2019, 11:08 AM IST

Updated : Mar 21, 2019, 2:06 PM IST

ರಾಮನಗರ: ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಲೇ ಒಳಗೊಳಗೆ ಬೆಂಬಲ ನೀಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯೋಗೇಶ್ವರ್ ಅಥವಾ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ ಬಿಜೆಪಿ ಸಭೆಯಲ್ಲಿ‌ ತೀರ್ಮಾನಿಸಿ ಹೈಕಮಾಂಡ್​​​ಗೆ ಪಟ್ಟಿ ಕಳುಹಿಸಲಾಗಿತ್ತು. ಆದ್ರೆ ದಿಢೀರ್ ಬೆಳವಣಿಗೆ ಎಂಬಂತೆ ನಿಶಾ ಯೋಗೇಶ್ವರ್ ಅವರ ಹೆಸರನ್ನು ಕೂಡ ಹೈಕಮಾಂಡ್​ಗೆ ಕಳಿಸಲಾಗಿದೆ. ಈಗಾಗಲೇ ಎರಡು ಬಾರಿ ಡಿಕೆ ಬ್ರದರ್ಸ್ ಮತ್ತು ಹೆಚ್​ಡಿಕೆ ಎದುರು ಮುಖಭಂಗ ಅನುಭವಿಸಿರುವ ಯೋಗೇಶ್ವರ್, ಈ ಬಾರಿ ಚುನಾವಣೆಯಲ್ಲಿ ಮೈತ್ರಿ ವಿರುದ್ಧ ಸೆಣಸಾಟ ನಡೆಸಲು ಕಷ್ಟಸಾಧ್ಯ ‌ ಎಂದರಿತು ಟೆಕೆಟ್ ಪಡೆಯಲು‌ ಹಿಂದೇಟು ಹಾಕಿದ್ದರು. ಆದರೆ ಬಿಜೆಪಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಬೇಕೆಂದು ಹಠಕ್ಕೆ ಬಿದ್ದ ಪರಿಣಾಮ, ಯೋಗೇಶ್ವರ್​ಗೆ ಹೆಗಲು ಕೊಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಹೇಳಲಾಗ್ತಿದೆ.

ಕೈ ಕೊಟ್ಟ ಗಜಕೇಸರಿ ಯೋಗ :

ಈ ನಡುವೆ ಸಿ.ಪಿ.ಯೋಗೇಶ್ವರ್ ರಾಜಕಾರಣಲ್ಲಿ ಯಶಸ್ವಿ ನಾಯಕನಾಗಿ, ಸೋಲಿಲ್ಲದ ಸರದಾರನಾಗಿ ಪಕ್ಷ, ಚಿಹ್ನೆ, ಯಾವುದನ್ನು ಲೆಕ್ಕಿಸದೇ ಗೆಲುವಿನ‌ ನಗೆ ಬೀರಿದ್ದರು. ಇದಕ್ಕೆಲ್ಲಾ ಅವರಿಗಿದ್ದ ಗಜಕೇಸರಿ ಯೋಗವೇ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಕಳೆದೆರಡು ಚುನಾವಣೆಗಳಿಂದ ಅವರ ಗಜಕೇಸರಿ ಯೋಗದ ಶಕ್ತಿ‌ ಕಡಿಮೆಯಾಗಿದೆ ಎನ್ನುವ ಮಾತುಗಳಿಂದಲೇ ಯೋಗೇಶ್ವರ್ ಚುನಾವಣೆಗೆ‌ ನಿಲ್ಲುವ ನಿಲುವು ಬದಲಿಸಿದ್ದರು. ಹಾಗಾಗಿ ತಮ್ಮ ಮಗಳಾದ ನಿಶಾ ಮುಖಾಂತರ ಮತ್ತೆ ಅಧಿಕಾರ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಅವಲೋಕಿಸಲಾಗುತ್ತಿದೆ.

ಇನ್ನು ಮದಗಜಗಳೆಂದೇ‌ ಕರೆಸಿಕೊಳ್ಳುವ ಡಿಕೆ ಬ್ರದರ್ಸ್​ ಹಾಗೂ ಹೆಚ್​ಡಿಕೆ‌ ಒಟ್ಟಾಗಿರೋದು ಯೋಗೇಶ್ವರ್​​ಗೆ ನುಂಗಲಾರದ ತುಪ್ಪವಾಗಿದೆ. ಅವರನ್ನ ಮಣಿಸುವ ಪ್ರಯತ್ನಕ್ಕೆ‌‌ ಮುಂದಾಗಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳಲೊಪ್ಪದ ಸಿಪಿವೈಗೆ ಮಗಳನ್ನ ನಿಲ್ಲಿಸಿ ಸಮಬಲದ ಪೈಪೋಟಿ ನೀಡಬಹುದೆಂಬ‌ ಸಲಹೆ ಜ್ಯೋತಿಷಿಗಳಿಂದ ಸಿಕ್ಕಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಆರಂಭವಾಗಿದೆ.

ರಾಮನಗರ: ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಲೇ ಒಳಗೊಳಗೆ ಬೆಂಬಲ ನೀಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯೋಗೇಶ್ವರ್ ಅಥವಾ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ ಬಿಜೆಪಿ ಸಭೆಯಲ್ಲಿ‌ ತೀರ್ಮಾನಿಸಿ ಹೈಕಮಾಂಡ್​​​ಗೆ ಪಟ್ಟಿ ಕಳುಹಿಸಲಾಗಿತ್ತು. ಆದ್ರೆ ದಿಢೀರ್ ಬೆಳವಣಿಗೆ ಎಂಬಂತೆ ನಿಶಾ ಯೋಗೇಶ್ವರ್ ಅವರ ಹೆಸರನ್ನು ಕೂಡ ಹೈಕಮಾಂಡ್​ಗೆ ಕಳಿಸಲಾಗಿದೆ. ಈಗಾಗಲೇ ಎರಡು ಬಾರಿ ಡಿಕೆ ಬ್ರದರ್ಸ್ ಮತ್ತು ಹೆಚ್​ಡಿಕೆ ಎದುರು ಮುಖಭಂಗ ಅನುಭವಿಸಿರುವ ಯೋಗೇಶ್ವರ್, ಈ ಬಾರಿ ಚುನಾವಣೆಯಲ್ಲಿ ಮೈತ್ರಿ ವಿರುದ್ಧ ಸೆಣಸಾಟ ನಡೆಸಲು ಕಷ್ಟಸಾಧ್ಯ ‌ ಎಂದರಿತು ಟೆಕೆಟ್ ಪಡೆಯಲು‌ ಹಿಂದೇಟು ಹಾಕಿದ್ದರು. ಆದರೆ ಬಿಜೆಪಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಬೇಕೆಂದು ಹಠಕ್ಕೆ ಬಿದ್ದ ಪರಿಣಾಮ, ಯೋಗೇಶ್ವರ್​ಗೆ ಹೆಗಲು ಕೊಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಹೇಳಲಾಗ್ತಿದೆ.

ಕೈ ಕೊಟ್ಟ ಗಜಕೇಸರಿ ಯೋಗ :

ಈ ನಡುವೆ ಸಿ.ಪಿ.ಯೋಗೇಶ್ವರ್ ರಾಜಕಾರಣಲ್ಲಿ ಯಶಸ್ವಿ ನಾಯಕನಾಗಿ, ಸೋಲಿಲ್ಲದ ಸರದಾರನಾಗಿ ಪಕ್ಷ, ಚಿಹ್ನೆ, ಯಾವುದನ್ನು ಲೆಕ್ಕಿಸದೇ ಗೆಲುವಿನ‌ ನಗೆ ಬೀರಿದ್ದರು. ಇದಕ್ಕೆಲ್ಲಾ ಅವರಿಗಿದ್ದ ಗಜಕೇಸರಿ ಯೋಗವೇ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಕಳೆದೆರಡು ಚುನಾವಣೆಗಳಿಂದ ಅವರ ಗಜಕೇಸರಿ ಯೋಗದ ಶಕ್ತಿ‌ ಕಡಿಮೆಯಾಗಿದೆ ಎನ್ನುವ ಮಾತುಗಳಿಂದಲೇ ಯೋಗೇಶ್ವರ್ ಚುನಾವಣೆಗೆ‌ ನಿಲ್ಲುವ ನಿಲುವು ಬದಲಿಸಿದ್ದರು. ಹಾಗಾಗಿ ತಮ್ಮ ಮಗಳಾದ ನಿಶಾ ಮುಖಾಂತರ ಮತ್ತೆ ಅಧಿಕಾರ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಅವಲೋಕಿಸಲಾಗುತ್ತಿದೆ.

ಇನ್ನು ಮದಗಜಗಳೆಂದೇ‌ ಕರೆಸಿಕೊಳ್ಳುವ ಡಿಕೆ ಬ್ರದರ್ಸ್​ ಹಾಗೂ ಹೆಚ್​ಡಿಕೆ‌ ಒಟ್ಟಾಗಿರೋದು ಯೋಗೇಶ್ವರ್​​ಗೆ ನುಂಗಲಾರದ ತುಪ್ಪವಾಗಿದೆ. ಅವರನ್ನ ಮಣಿಸುವ ಪ್ರಯತ್ನಕ್ಕೆ‌‌ ಮುಂದಾಗಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳಲೊಪ್ಪದ ಸಿಪಿವೈಗೆ ಮಗಳನ್ನ ನಿಲ್ಲಿಸಿ ಸಮಬಲದ ಪೈಪೋಟಿ ನೀಡಬಹುದೆಂಬ‌ ಸಲಹೆ ಜ್ಯೋತಿಷಿಗಳಿಂದ ಸಿಕ್ಕಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಆರಂಭವಾಗಿದೆ.

ರಾಮನಗರ : ಕುಟುಂಬ ರಾಜಕಾರಣ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಲೇ ಒಳಗೊಳಗೆ ಬೆಂಬಲ ನೀಡುತ್ತಿದೆ ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಪುತ್ರಿ ನಿಶಾಯೋಗೇಶ್ವರ್ ಕಣಕ್ಕಿಳಿಸಿದೆ. ಬೆಂಗಳೂರು ಗ್ರಾಮಾಂತರ ಬಿಜೆಪಿಬಾಭ್ಯರ್ಥಿಯಾಗಿ ಯೋಗೇಶ್ವರ್ ಅಥವಾ ಎಂ ರುದ್ರೇಶ್ ಅವರಿಗೆ ಟಿಕೇಟ್ ನೀಡಬೇಕೆಂದು ರಾಜ್ಯ ಬೆಜೆಪಿ ಸಭೆಯಲ್ಲಿ‌ ತೀರ್ಮಾನಿಸಿ ಹೈ ಕಮಾಂಡ್ ಗೆ ಪಟ್ಟಿ ಕಳುಹಿಸಿತ್ತಾದರೂ ದಿಡೀರ್ ಬೆಳವಣಿಗೆ ಎಂಬಂತೆ ನಿಶಾ ಯೋಗೇಶ್ವರ್ ಗೆ ಟಿಕೇಟ್ ಘೋಷಣೆಯಾಗಿದೆ. ಈಗಾಗಲೇ ಎರಡು ಬಾರಿ ಡಿಕೆ ಬ್ರದರ್ಸ್ ಮತ್ತು ಹೆಚ್ಡಿಕೆ ಎದುರು ಮುಖಭಂಗ ಅನುಭವಿಸಿರುವ ಯೋಗೇಶ್ವರ್ ಈ ಭಾರಿ ಚುನಾವಣೆಯಲ್ಲಿಯೂ ಮೈತ್ರಿ ವಿರುದ್ದ ಸೆಣೆಸಾಟ ನಡೆಸಲು‌ಕಷ್ಠಸಾಧ್ಯ ಎಂದರಿತು ಟಿಕೇಟ್ ಪಡೆಯಲು‌ ಹಿಂದೇಟು ಹಾಕಿದ್ದರು ಆದರೆ ಬಿಜೆಪಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಬೇಕೆಂದು ಹಠಕ್ಕೆ ಬಿದ್ದ ಪರಿಣಾಮ ಯೋಗೇಶ್ವರ್ ಹೆಗಲು ಕೊಡಬೇಕಾದ ಅನಿವಾರ್ಯತೆ ಬಂದಿದೆ ಎಂದೇಳಲಾಗ್ತಿದೆ. ಕೈಕೊಟ್ಟ ಗಜಕೇಶರಿ ಯೋಗ : ಈ ನಡುವೆ ಸಿಪಿ ಯೋಗೇಶ್ವರ್ ರಾಜಕಾರಣಲ್ಲಿ ಯಶಸ್ವಿ ನಾಯಕನಾಗಿ ಸೋಲಿಲ್ಲದ ಸರದಾರನಂತೆ‌ಮೆರೆದದ್ದು‌ ಹಾಗೂ ಯಾವುದೇ ಪಕ್ಷ ಚಿಹ್ನೆ ಯಾವುದೂ ಲೆಕ್ಕಕ್ಕಿಲ್ಲ ಎನ್ನುವಂತೆ ಗೆಲುವಿನ‌ ನಗೆ ಬೀರುತ್ತಿದ್ದ ಹಮ್ಮಿನಲ್ಲಿದ್ದ‌ ಯೋಗೇಶ್ವರ್ ಗಿದ್ದ ಗಜಕೇಶರಿ ಯೋಗವೇ ಕಾರಣ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಈ ಯೋಗ ಇರುತ್ತಂತೆ ಆದರೆ ಕಳೆದ ಎರಡು ಚುನಾವಣೆಗಳಿಂದಲೂ ಯೋಗದ ಶಕ್ತಿ‌ಕಡಿಮೆಯಾಗಿದೆ ಎನ್ನುವ ಮಾತುಗಳಿಂದಲೇ ಯೋಗೇಶ್ವರ್ ಚುನಾವಣೆಗೆ‌ ನಿಲ್ಲುವ ನಿಲುವು ಬದಲಾಗಿದ್ದು ಮಗಳು ನಿಶಾ ಮುಖಾಂತರ ಮತ್ತೆ ಅಧಿಕಾರ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಅವಲೋಕಿಸಲಾಗುತ್ತಿದೆ. ಇನ್ನು ಮದಗಜಗಳೆಂದೇ‌ ಕರೆಸಿಕೊಳ್ಳುವ ಡಿಕೆ ಬ್ರದರ್ಸ ಹಾಗೂ ಹೆಚ್ಡಿಕೆ‌ಒಟ್ಟಾಗಿ ರೋದು ಯೋಗೇಶ್ವರ್ ಗೆ ನುಂಗಲಾರದ ತುಪ್ಪವಾಗಿದೆ ಅವರನ್ನ ಮಣಿಸುವ ಪ್ರಯತ್ನಕ್ಕೆ‌‌ ಮುಂದಾಗಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳಲೊಪ್ಪದ ಸಿಪಿವೈ ಮಗಳನ್ನ‌ ನಿಲ್ಲಿಸಿ ಸಮಬಲದ ಪೈಪೋಟಿ ನೀಡಬಹುದೆಂಬ‌ಸಲಹೆ ಜ್ಯೋತಿಷಿಗಳಿಂದ ಸಿಕ್ಕಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಆರಂಭವಾಗಿದೆ.
Last Updated : Mar 21, 2019, 2:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.