ETV Bharat / state

ಅನರ್ಹ ಶಾಸಕರ ವಿರುದ್ಧ ತೊಡೆ ತಟ್ಟಿದ್ದ ಡಿಕೆಶಿ: ಉಪ ಚುನಾವಣೆ ರಣಾಂಗಣಕ್ಕೆ ಬರ್ತಾರಾ ಕನಕಪುರ ಬಂಡೆ? - ರಣಾಂಗಣ

15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಕಡಿಮೆ ಸಮಯ ಇರುವುದರಿಂದ ಈಗಿನಿಂದಲೇ ಎಲ್ಲ ಪಕ್ಷದವರು ತಮ್ಮ ರಾಜಕೀಯ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಒಂದೆಡೆ ಡಿಕೆಶಿ ಇಲ್ಲದೆ ಚುನಾವಣೆ ಎದುರಿಸುವುದು ಹೇಗೆ ಎಂಬ ಆತಂಕದಲ್ಲಿ ಕಾಂಗ್ರೆಸ್​ ಇದ್ದರೆ, ಡಿಕೆಶಿ ಜೈಲಿನಲ್ಲಿದ್ದಾರೆ ಎಂಬ ಖುಷಿಯಲ್ಲಿ ಬಿಜೆಪಿ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಡಿಕೆಶಿ
author img

By

Published : Sep 22, 2019, 11:53 AM IST

ರಾಮನಗರ: ಅವತ್ತು ಹೆಚ್ ​ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ‌ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಿಮಗೆಲ್ಲ ಈಗಲ್ಲ, ಮುಂದೈತೆ ಊರ ಹಬ್ಬ. ಅಖಾಡಕ್ಕೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಟುರು ಹಾಕಿದ್ದರು. ಈಗ ಉಪಚುವಾಣೆಯೇನೋ ಬಂದಿದೆ. ಆದರೆ, ಡಿಕೆಶಿ ಈಗ ತಿಹಾರ್ ಜೈಲಿನಲ್ಲಿದ್ದಾರೆ.

ಎಂಟಿಬಿ, ನಿನ್ನ- ನನ್ನ ಭೇಟಿ ರಣಾಂಗಣದಲ್ಲಿ, ನನಗೂ ನಿನಗೂ ಯುದ್ಧ ಎಂದೆಲ್ಲಾ ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಅತೃಪ್ತ ಶಾಸಕರ ವಿರುದ್ಧ ತೊಡೆ ತಟ್ಟಿ, ರಣಕಹಳೆ ಊದಿ ಚುನಾವಣೆಯ ಯುದ್ಧಕ್ಕೆ ಅಂದೇ ಆಹ್ವಾನಿಸಿದ್ದರು ಡಿಕೆಶಿ.

ಇತ್ತ ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಈ ನಡುವೆ ರಣಾಂಗಣಕ್ಕೆ ಆಹ್ವಾನ ನೀಡಿದ್ದ ಡಿಕೆಶಿ ಅಖಾಡಕ್ಕೆ ಬರುತ್ತಾರೆ ಅನ್ನೋದು ಅನುಮಾನ. ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಜಾರಿ‌ ನಿರ್ದೇಶನಾಲಯದ ಹಿಡಿತದಿಂದ‌ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ. ಅವರಿಗೆ ಸದ್ಯಕ್ಕೆ ಬೇಲ್ ಸಿಗುವ ಸಾಧ್ಯತೆ ಕೂಡ ಕಡಿಮೆ‌ ಎನ್ನಲಾಗುತ್ತಿದೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಲು ಒಟ್ಟು 15 ಮಂದಿ ಶಾಸಕರೇ ಕಾರಣರಾಗಿದ್ದರು. ಇದರಲ್ಲಿ 12 ಕಾಂಗ್ರೆಸ್, ಮೂವರು ಜೆಡಿಎಸ್ ಶಾಸಕರಿಗೆ ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದರು. ಉಪಚುನಾವಣೆ ಘೋಷಣೆಯಾಗಲಿ, ನಿಮಗೆಲ್ಲಾ ಕಾದಿದೆ ಎಂದಿದ್ದರು. ಬಳಿಕ ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಡಿಕೆಶಿ ಇಡಿ ವಶದಲ್ಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ಸಹ ಸಹೋದರ ಇಂದಲ್ಲಾ ನಾಳೆ ಹೊರಬರುತ್ತಾರೆ ಎಂದು ಅವರ ಆಗಮನಕ್ಕಾಗಿ ಎದುರು ನೋಡುತ್ತ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ನಡುವೆ ಉಪಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಒಂದೆಡೆ ಅತೃಪ್ತ ಶಾಸಕರು ಹಾಗೂ ಬಿಜೆಪಿಯವರು ಡಿ ಕೆ ಬ್ರದರ್ಸ್ ಚುನಾವಣಾ ಅಖಾಡಕ್ಕೆ ಬರುವುದೇ ಇಲ್ಲ ಎಂಬ ಖುಷಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಜಾಮಿನು ಪಡೆದು ಬೆಂಗಳೂರಿಗೆ ಬಂದರೂ, ಚುನಾವಣಾ ಅಖಾಡಲ್ಲಿ ಈ ಮೊದಲಿನಂತೆ ಓಡಾಡಲಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಚುನಾವಣೆಗೆ ಡಿಕೆಶಿ ಕೈ ಹಾಕದಿದ್ದರೆ ತಂತ್ರಗಳನ್ನು ಹೆಣೆಯುವುದಾದರೂ ಹೇಗೆ? ಎಂಬ ಚಿಂತೆಯಲ್ಲಿ ಕಾಂಗ್ರೆಸ್ ಮುಳುಗಿದೆ. ಮತ್ತೊಂದೆಡೆ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ವಿಶೇಷವಾಗಿದ್ದು, ಕಾಂಗ್ರೆಸ್​ಗೆ ಗೆ ಬಿಸಿ ತುಪ್ಪವಾದ್ರೆ ಬಿಜೆಪಿಗೆ ಮೃಷ್ಟಾನ್ನ ಎನ್ನುವಂತಾಗಿದೆ.

ರಾಮನಗರ: ಅವತ್ತು ಹೆಚ್ ​ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ‌ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಿಮಗೆಲ್ಲ ಈಗಲ್ಲ, ಮುಂದೈತೆ ಊರ ಹಬ್ಬ. ಅಖಾಡಕ್ಕೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಟುರು ಹಾಕಿದ್ದರು. ಈಗ ಉಪಚುವಾಣೆಯೇನೋ ಬಂದಿದೆ. ಆದರೆ, ಡಿಕೆಶಿ ಈಗ ತಿಹಾರ್ ಜೈಲಿನಲ್ಲಿದ್ದಾರೆ.

ಎಂಟಿಬಿ, ನಿನ್ನ- ನನ್ನ ಭೇಟಿ ರಣಾಂಗಣದಲ್ಲಿ, ನನಗೂ ನಿನಗೂ ಯುದ್ಧ ಎಂದೆಲ್ಲಾ ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಅತೃಪ್ತ ಶಾಸಕರ ವಿರುದ್ಧ ತೊಡೆ ತಟ್ಟಿ, ರಣಕಹಳೆ ಊದಿ ಚುನಾವಣೆಯ ಯುದ್ಧಕ್ಕೆ ಅಂದೇ ಆಹ್ವಾನಿಸಿದ್ದರು ಡಿಕೆಶಿ.

ಇತ್ತ ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಈ ನಡುವೆ ರಣಾಂಗಣಕ್ಕೆ ಆಹ್ವಾನ ನೀಡಿದ್ದ ಡಿಕೆಶಿ ಅಖಾಡಕ್ಕೆ ಬರುತ್ತಾರೆ ಅನ್ನೋದು ಅನುಮಾನ. ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಜಾರಿ‌ ನಿರ್ದೇಶನಾಲಯದ ಹಿಡಿತದಿಂದ‌ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ. ಅವರಿಗೆ ಸದ್ಯಕ್ಕೆ ಬೇಲ್ ಸಿಗುವ ಸಾಧ್ಯತೆ ಕೂಡ ಕಡಿಮೆ‌ ಎನ್ನಲಾಗುತ್ತಿದೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಲು ಒಟ್ಟು 15 ಮಂದಿ ಶಾಸಕರೇ ಕಾರಣರಾಗಿದ್ದರು. ಇದರಲ್ಲಿ 12 ಕಾಂಗ್ರೆಸ್, ಮೂವರು ಜೆಡಿಎಸ್ ಶಾಸಕರಿಗೆ ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದರು. ಉಪಚುನಾವಣೆ ಘೋಷಣೆಯಾಗಲಿ, ನಿಮಗೆಲ್ಲಾ ಕಾದಿದೆ ಎಂದಿದ್ದರು. ಬಳಿಕ ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಡಿಕೆಶಿ ಇಡಿ ವಶದಲ್ಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ಸಹ ಸಹೋದರ ಇಂದಲ್ಲಾ ನಾಳೆ ಹೊರಬರುತ್ತಾರೆ ಎಂದು ಅವರ ಆಗಮನಕ್ಕಾಗಿ ಎದುರು ನೋಡುತ್ತ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ನಡುವೆ ಉಪಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಒಂದೆಡೆ ಅತೃಪ್ತ ಶಾಸಕರು ಹಾಗೂ ಬಿಜೆಪಿಯವರು ಡಿ ಕೆ ಬ್ರದರ್ಸ್ ಚುನಾವಣಾ ಅಖಾಡಕ್ಕೆ ಬರುವುದೇ ಇಲ್ಲ ಎಂಬ ಖುಷಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಜಾಮಿನು ಪಡೆದು ಬೆಂಗಳೂರಿಗೆ ಬಂದರೂ, ಚುನಾವಣಾ ಅಖಾಡಲ್ಲಿ ಈ ಮೊದಲಿನಂತೆ ಓಡಾಡಲಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಚುನಾವಣೆಗೆ ಡಿಕೆಶಿ ಕೈ ಹಾಕದಿದ್ದರೆ ತಂತ್ರಗಳನ್ನು ಹೆಣೆಯುವುದಾದರೂ ಹೇಗೆ? ಎಂಬ ಚಿಂತೆಯಲ್ಲಿ ಕಾಂಗ್ರೆಸ್ ಮುಳುಗಿದೆ. ಮತ್ತೊಂದೆಡೆ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ವಿಶೇಷವಾಗಿದ್ದು, ಕಾಂಗ್ರೆಸ್​ಗೆ ಗೆ ಬಿಸಿ ತುಪ್ಪವಾದ್ರೆ ಬಿಜೆಪಿಗೆ ಮೃಷ್ಟಾನ್ನ ಎನ್ನುವಂತಾಗಿದೆ.

Intro:Body:ರಾಮನಗರ : ಅವತ್ತು ಹೆಚ್ಡಿ ಕುಮಾರಸ್ವಾಮಿ ನೇತೃತ್ದ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ‌ ಮೇಲೆ‌ ಚರ್ಚೆ ನಡೆಯುತ್ತಿತ್ತು. ಅಂದು ಅಬ್ಬರಿಸಿದ್ದ ಡಿ.ಕೆ. ಶಿವಕುಮಾರ್ ನಿಮಗೆಲ್ಲ ಈಗಲ್ಲ, ಮುಂದೈತೆ ಊರ ಹಬ್ಬ. ಅಖಾಡಕ್ಕೆ ಬನ್ನಿ ನೋಡಿಕೊಳ್ಳುತ್ತೇನೆ? ಎಂಟಿಬಿ, ನಿನ್ನ ನನ್ನ ಬೇಟಿ ರಣಾಂಗಣದಲ್ಲಿ ನನಗೂ ನಿನಗೇ ಯುದ್ದ ಎಂದೆಲ್ಲಾ ಸಮ್ಮಿಶ್ರ ಸರಕಾರ ಉರುಳಲು ಕಾರಣರಾದ ಅತೃಪ್ತ ಶಾಸಕರ ವಿರುದ್ಧ ತೊಡೆ ತಟ್ಟಿ, ರಣ ವೀಳ್ಯ‌ನೀಡಿ ಯುದ್ದಕ್ಕೆ ಆಹ್ವಾನ ನೀಡಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇದೀಗ ತಿಹಾರ್ ಜೈಲಿನಲ್ಲಿದ್ದಾರೆ.
ಇತ್ತ ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಗೊಂಡಿದೆ. ಈ ನಡುವೆ ರಣಾಂಗಣಕ್ಕೆ ಆಹ್ವಾನ ನೀಡಿದ್ದ ಡಿಕೆಶಿ ಅಖಾಡಕ್ಕೆ ಬರುತ್ತಾರೆ ಅನ್ನೋದು ಅನುಮಾನ.
ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಜಾರಿ‌ ನಿರ್ದೇಶನಾಲಯದ ಹಿಡಿತದಿಂದ‌ಇದೀಗ ತಿಹಾರ್ ಜೈಲಿನಲ್ಲಿದ್ದಾರೆ,ಅವರಿಗೆ ಸಧ್ಯಕ್ಕೆ ಬೇಲ್ ಸಿಗುವ ಸಾಧ್ಯತೆ ಕೂಡ ಕಡಿಮೆ‌ ಎನ್ನಲಾಗುತ್ತಿದೆ. ಆದರ ಬೆನ್ನಲ್ಲೆ ಉಪ‌ಚುನಾವಣೆ ಘೋಷಣೆಯಾಗಿದ್ದು ಡಿಕೆಶಿಯತ್ತ ಬಿಜೆಪಿ ಚಿತ್ತ ನೆಟ್ಟಿದೆ. ಡಿಕೆಶಿವಕುಮಾರ್ ಬಿಡುಗಡೆಯಾದರೆ ಉಪ‌ಚುನಾವಣೆಯಲ್ಲಿ ರಂಗೇರಲಿದೆ ಎನ್ನುವ ಕಾರಣಕ್ಕೇ ಏನಾದರೂ ಆಗಲಿ ಬೇಲ್ ಆಗದಿರಲಿ ಎನ್ನುವ ಸ್ಥಿತಿ ಬಿಜೆಪಿಯದ್ದು , ಮತ್ತೆ ಆತಂಕದ ಸ್ಥಿತಿ ಕಾಂಗ್ರೇಸ್ ನದ್ದು,

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಉರುಳಲು ಒಟ್ಟು 15 ಮಂದಿ ಶಾಸಕರೇ ಕಾರಣರಾಗಿದ್ದರು. ಇದರಲ್ಲಿ 12 ಕಾಂಗ್ರೆಸ್, 3 ಜೆಡಿಎಸ್ ಶಾಸಕರಿಗೆ ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದರು. ಉಪಚುನಾವಣೆ ಘೋಷಣೆಯಾಗಲಿ ನಿಮಗೆಲ್ಲಾ ಕಾದಿದೆ ಎಂದಿದ್ದರು. ಇನ್ನು ಚುನಾವಣಾ ವಿಷಯದಲ್ಲಿ ಚತುರನಾಗಿದ್ದ ಡಿಕೆಶಿ ಮಾತುಗಳಿಂದ ಅತೃಪ್ತರ ಎದೆ ಒಂದು ಕ್ಷಣ ಝಲ್ ಎಂದಿದ್ದು ಮಾತ್ರ ಸುಳ್ಳಲ್ಲ.
ಬಳಿಕ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಇಡಿ ವಶದಲ್ಲಿದ್ದಾರೆ. ಡಿ.ಕೆ.ಸುರೇಶ್ ಸಹ ಅವರಿಗಾಗಿ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ನಡುವೆಯೇ ಉಪಚುನಾವಣೆ ಘೋಷಣೆಗೊಂಡಿದೆ. ಈಗಾಗಿ ಒಂದೆಡೆ ಅತೃಪ್ತ ಶಾಸಕರು ಡಿಕೆ ಬ್ರದರ್ಸ್ ಚುನಾವಣಾ ಅಖಾಡಕ್ಕೆ ಬರುವುದೇ ಇಲ್ಲ ಎಂಬ ಖುಷಿಯಲ್ಲಿದ್ದಾರೆ.
ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಶೂಟರ್ ಜಾಮಿನು ಪಡೆದು ಬೆಂಗಳೂರಿಗೆ ಬಂದರೂ, ಚುನಾವಣಾ ಅಖಾಡಲ್ಲಿ ಈ ಮೊದಲಿನಂತೆ ಚಾರ್ಮಿನಿಂದ ಓಡಾಡಲಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಚುನಾವಣೆಗೆ ಡಿಕೆಶಿ ಕೈ ಹಾಕದಿದ್ದರೆ ತಂತ್ರಗಳನ್ನು ಏಣೆಯುದಾದರೂ ಹೇಗೆ? ಎಂಬ ಚಿಂತೆಯಲ್ಲಿ ಕಾಂಗ್ರೆಸ್ ಮುಳುಗಿದೆ. ಮತ್ತೊಂದೆಡೆ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ವಿಶೇಷವಾಗಿದ್ದು ಕಾಂಗ್ರೆಸ್ ಗೆ ಬಿಸಿ ತುಪ್ಪವಾದ್ರೆ ಬಿಜೆಪಿಗೆ ಮೃಷ್ಟಾನ್ನ ಎನ್ನುವಂತಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.