ETV Bharat / state

ಡಿಕೆಶಿ ನ್ಯಾಯಾಂಗ ಬಂಧನ ವಿಚಾರ; ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

author img

By

Published : Sep 28, 2019, 2:53 PM IST

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಇಡಿ ಅಧಿಕಾರಿಗಳು ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಾಂಗ್ರೆಸ್ ಎಂಎಲ್​ಸಿ ಸಿ.ಎಂ.ಲಿಂಗಪ್ಪ ದೂರು ಸಲ್ಲಿಸಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್

ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಇಡಿ ಅಧಿಕಾರಿಗಳು ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಾಂಗ್ರೆಸ್ ಎಂಎಲ್​ಸಿ ಸಿ.ಎಂ.ಲಿಂಗಪ್ಪ ದೂರು ಸಲ್ಲಿಸಿದ್ದಾರೆ.

ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿ.ಎಂ.ಲಿಂಗಪ್ಪ, ಡಿಕೆಶಿ ಅವರಿಗೆ ತಲೆದಿಂಬು ಕೊಟ್ಟಿಲ್ಲ. ಅವರು ವಿಚಾರಣಾಧೀನ ಕೈದಿ ಅಲ್ಲ. ಕೇವಲ ಆಪಾದಿತರು ಅಷ್ಟೇ. ಜೈಲಿನಲ್ಲಿ ಅವರಿಗೆ ಹಾಸಿಗೆಯಿಲ್ಲ, ಅವರನ್ನು ಅಧಿಕಾರಗಳು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಮಾನವ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಡಿಕೆಶಿ ಪ್ರಕರಣದ ತನಿಖಾಧಿಕಾರಿ ಮೋನಿಕಾ ಶರ್ಮಾ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿದ್ದೇನೆ. ಶಿವಕುಮಾರ್​ಗೆ ನ್ಯಾಯ ಸಿಗಬೇಕು. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದರು.

ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಇಡಿ ಅಧಿಕಾರಿಗಳು ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಾಂಗ್ರೆಸ್ ಎಂಎಲ್​ಸಿ ಸಿ.ಎಂ.ಲಿಂಗಪ್ಪ ದೂರು ಸಲ್ಲಿಸಿದ್ದಾರೆ.

ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿ.ಎಂ.ಲಿಂಗಪ್ಪ, ಡಿಕೆಶಿ ಅವರಿಗೆ ತಲೆದಿಂಬು ಕೊಟ್ಟಿಲ್ಲ. ಅವರು ವಿಚಾರಣಾಧೀನ ಕೈದಿ ಅಲ್ಲ. ಕೇವಲ ಆಪಾದಿತರು ಅಷ್ಟೇ. ಜೈಲಿನಲ್ಲಿ ಅವರಿಗೆ ಹಾಸಿಗೆಯಿಲ್ಲ, ಅವರನ್ನು ಅಧಿಕಾರಗಳು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಮಾನವ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಡಿಕೆಶಿ ಪ್ರಕರಣದ ತನಿಖಾಧಿಕಾರಿ ಮೋನಿಕಾ ಶರ್ಮಾ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿದ್ದೇನೆ. ಶಿವಕುಮಾರ್​ಗೆ ನ್ಯಾಯ ಸಿಗಬೇಕು. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದರು.

Intro:Body:ರಾಮನಗರ: ಮಾಜಿ ಸಚಿವ ಕಾಂಗ್ರೆಸ್ ಟಬಲ್ ಶೂಟರ್ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಇಡಿ ಇಲಾಖೆ ಅಧಿಕಾರಿಗಳು ಮಾನ ಹಕ್ಕು ಉಲ್ಲಂಘನೆ ಮಾಡಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಲಿಂಗಪ್ಪ ದೂರು ಸಲ್ಲಿಸಿದ್ದಾರೆ. ಈ ಸಂಭಂಧ ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿ.ಎಂ.ಲಿಂಗಪ್ಪ ಇಡಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ದೆಹಲಿಯ ತಿಹಾರ್ ಜೈಲ್ನಲ್ಲಿರುವ ಮಾಜಿ ಸಚಿವ ಡಿಕೆಶಿ ಶಿವಕುಮಾರ್ಗೆ ಇಡಿ ಅಧಿಕಾರಿಗಳು 3 ಡಿಗ್ರಿ ಗ್ರೇಡ್ ಟ್ರೀಟ್ಮೆಂಟ್ ಕೊಡಲಾಗುತ್ತಿದೆ. ವಿಚಾರಣೆ ವೇಳೆ ಡಿ.ಕೆ ಶಿವಕುಮಾರ್ ಗೆ 2 ಗಂಟೆಗಳ ಕಾಲ ಕತ್ತಲೆ ಕೋಣೆಯಲ್ಲಿ ಬಂಧಿಸಿದ್ದಾರೆ, ಕೆಲ ಅಧಿಕಾರಿಗಳು ಡಿಕೆಶಿಗೆ ಹೊಡೆದಿದ್ದಾರೆ ಎಂದು ಆರೋಪಿಸಿರುವ ಅವರು ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಡಿಕೆಶಿ ಅವರಿಗೆ ತಲೆದಿಂಬು ಕೂಡ ಕೊಟ್ಟಿಲ್ಲ. ಅವರು ವಿಚಾರಣಾಧೀನ ಖೈದಿ ಅಷ್ಟೇ, ಜೈಲಿನಲ್ಲಿ ಅವರಿಗೆ ಹಾಸಿಗೆಯಿಲ್ಲ, ಅವರನ್ನ ಬಹಳ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ನಾನು ಮಾನವ ಆಯೋಗಕ್ಕೆ ದೂರು ನೀಡಿದ್ದೇನೆ ಎಂದ್ರು. ಡಿಕೆಶಿ ಪ್ರಕರಣದ ತನಿಖಾಧಿಕಾರಿ ಮೋನಿಕಾ ಶರ್ಮಾ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿದ್ದೇನೆ ಶಿವಕುಮಾರ್ಗೆ ನ್ಯಾಯ ಸಿಗಬೇಕು. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದು ಹೇಳಿದ್ರು. ಕುಮಾರಸ್ವಾಮಿ ಅವರು ಡಿಕೆಶಿ ಬಿಡುಗಡೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಲಿಂಗಪ್ಪ ಕುಮಾರಸ್ವಾಮಿಗೆ ಧನ್ಯವಾದಗಳು, ದೇವೇಗೌಡರ ಮನೆಯವರು ಪೂಜೆ ಮಾಡುವುದರಲ್ಲಿ ಎತ್ತಿದ ಕೈ ಅಂತಾ ಪೂಜೆ ಮಾಡೆ ಅವರು ಹಾಗೂ ಅವರ ಮೊಮ್ಮಗ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಪೂಜೆ ವಿಚಾರದಲ್ಲಿ ವ್ಯಂಗ್ಯ ಮಾಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.