ETV Bharat / state

ಗುಜರಾತ್​ ಶಾಸಕರನ್ನ ಹಿಡಿದಿಟ್ಟಿದ್ದಕ್ಕೆ ಡಿಕೆಶಿ ಮೇಲೆ ಪ್ರತೀಕಾರ.. ಸಿ ಎಂ ಲಿಂಗಪ್ಪ ಕಿಡಿ..

ಗುಜರಾತ್ ಶಾಸಕರನ್ನು ರೆಸಾರ್ಟ್​​ನಲ್ಲಿಟ್ಟಾಗ ಅಮಿತ್ ಶಾ ಕರೆ ಮಾಡಿ ಶಾಸಕರನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಾಗ ಅದಕ್ಕೆ ಕಿಮ್ಮತ್ತು ನೀಡದಕ್ಕೆ ಮಾಜಿ ಸಚಿವ ಡಿ ಕೆ ಶಿವಕುಮಾರ್​ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಹೊಸ ಬಾಂಬ್​ ಸಿಡಿಸಿದ್ದಾರೆ.

author img

By

Published : Aug 31, 2019, 5:55 PM IST

bjp leaders revenge on to the former minister D.K.Shivakumar

ರಾಮನಗರ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಗುಜರಾತ್ ಶಾಸಕರನ್ನು ರೆಸಾರ್ಟ್​​ನಲ್ಲಿ ಇಟ್ಟಿದ್ದಾಗ ಅಮಿತ್ ಶಾ ಕರೆ ಮಾಡಿ ಶಾಸಕರನ್ನು ಕಳುಹಿಸಿಕೊಡುವಂತೆ ಹೇಳಿದ್ದರು. ಅಮಿತ್​ ಶಾ ಮಾತಿಗೆ ಕಿಮ್ಮತ್ತು ನೀಡದ ಕಾರಣ ಅದಕ್ಕೆ ಪ್ರತೀಕಾರವಾಗಿ ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ)ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಹೊಸ ಬಾಂಬ್​ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್​ ಶಾ ಅಂದು ಮೂವರು ಶಾಸಕರನ್ನು ಬಿಟ್ಟುಕಳುಹಿಸುವಂತೆ ಕೇಳಿದ್ದರು. ಶಾ ಬೇಡಿಕೆ ಈಡೇರಿಸದೇ ಇದ್ದದ್ದಕ್ಕೆ ರೆಸಾರ್ಟ್​ನಲ್ಲಿದ್ದಾಗಲೇ ಡಿಕೆಶಿ ಅವರ ಮೇಲೆ ದಾಳಿ ನಡೆಸಿದ್ದರು. ಇದು ಬಿಜೆಪಿಯವರ ದ್ವೇಷ ರಾಜಕಾರಣವನ್ನು ಸೂಚಿಸುತ್ತದೆ. ಡಿಕೆ‌ಶಿ ಅವರ ಸಹೋದರ, ಪತ್ನಿ ಹಾಗೂ ತಾಯಿ ಅವರಿಗೆ ಕಿರುಕುಳ ನೀಡಲಾಗಿದೆ. ಗುಜರಾತ್ ಶಾಸಕರನ್ನ ಕಾಪಾಡಿದ್ದೆ, ಅವರಿಗಿಂದು ಮುಳುವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ..

ಇಡಿ ಅಧಿಕಾರಿಗಳು ರಾತ್ರಿ ನೋಟಿಸ್ ಕೊಟ್ಟು ನಾಳೆ ಹಾಜರಾಗಲು ಹೇಳಿದ್ದಾರೆ ಅಂದರೆ, ಇದ್ಯಾವ ನ್ಯಾಯ. ಕಾಂಗ್ರೆಸ್​ನವರು ಬಿಟ್ಟು ಮತ್ಯಾರು ಅಪರಾಧ ಮಾಡಿಲ್ವಾ. ನಾವು ಇದನ್ನ ಸಹಿಸುವುದಿಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾನವೀಯತೆ ಇಲ್ಲ: ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ಲದಂತೆ ವರ್ತಿಸುತ್ತಾರೆ. ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವಿಗೆ ಐಟಿ ಮತ್ತು ಇಡಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ಡಿ ಕೆ ಶಿವಕುಮಾರ್ ಅವರಿಗೆ ಸ್ವಪಕ್ಷದಲ್ಲೇ ವಿರೋಧಿಗಳಿದ್ದಾರೆ. ಡಿಕೆಶಿ ಅವರಿಗೆ ಮೈತ್ರಿ ಸರ್ಕಾರದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನ ಮಾತನಾಡಿಸಲು ಮುಜುಗರ ಇತ್ತು. ಆದರೂ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಡಿಕೆಶಿ ನಡೆದುಕೊಂಡ್ರು ಎಂದರು.

ರಾಮನಗರ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಗುಜರಾತ್ ಶಾಸಕರನ್ನು ರೆಸಾರ್ಟ್​​ನಲ್ಲಿ ಇಟ್ಟಿದ್ದಾಗ ಅಮಿತ್ ಶಾ ಕರೆ ಮಾಡಿ ಶಾಸಕರನ್ನು ಕಳುಹಿಸಿಕೊಡುವಂತೆ ಹೇಳಿದ್ದರು. ಅಮಿತ್​ ಶಾ ಮಾತಿಗೆ ಕಿಮ್ಮತ್ತು ನೀಡದ ಕಾರಣ ಅದಕ್ಕೆ ಪ್ರತೀಕಾರವಾಗಿ ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ)ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಹೊಸ ಬಾಂಬ್​ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್​ ಶಾ ಅಂದು ಮೂವರು ಶಾಸಕರನ್ನು ಬಿಟ್ಟುಕಳುಹಿಸುವಂತೆ ಕೇಳಿದ್ದರು. ಶಾ ಬೇಡಿಕೆ ಈಡೇರಿಸದೇ ಇದ್ದದ್ದಕ್ಕೆ ರೆಸಾರ್ಟ್​ನಲ್ಲಿದ್ದಾಗಲೇ ಡಿಕೆಶಿ ಅವರ ಮೇಲೆ ದಾಳಿ ನಡೆಸಿದ್ದರು. ಇದು ಬಿಜೆಪಿಯವರ ದ್ವೇಷ ರಾಜಕಾರಣವನ್ನು ಸೂಚಿಸುತ್ತದೆ. ಡಿಕೆ‌ಶಿ ಅವರ ಸಹೋದರ, ಪತ್ನಿ ಹಾಗೂ ತಾಯಿ ಅವರಿಗೆ ಕಿರುಕುಳ ನೀಡಲಾಗಿದೆ. ಗುಜರಾತ್ ಶಾಸಕರನ್ನ ಕಾಪಾಡಿದ್ದೆ, ಅವರಿಗಿಂದು ಮುಳುವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ..

ಇಡಿ ಅಧಿಕಾರಿಗಳು ರಾತ್ರಿ ನೋಟಿಸ್ ಕೊಟ್ಟು ನಾಳೆ ಹಾಜರಾಗಲು ಹೇಳಿದ್ದಾರೆ ಅಂದರೆ, ಇದ್ಯಾವ ನ್ಯಾಯ. ಕಾಂಗ್ರೆಸ್​ನವರು ಬಿಟ್ಟು ಮತ್ಯಾರು ಅಪರಾಧ ಮಾಡಿಲ್ವಾ. ನಾವು ಇದನ್ನ ಸಹಿಸುವುದಿಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾನವೀಯತೆ ಇಲ್ಲ: ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ಲದಂತೆ ವರ್ತಿಸುತ್ತಾರೆ. ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಸಾವಿಗೆ ಐಟಿ ಮತ್ತು ಇಡಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ಡಿ ಕೆ ಶಿವಕುಮಾರ್ ಅವರಿಗೆ ಸ್ವಪಕ್ಷದಲ್ಲೇ ವಿರೋಧಿಗಳಿದ್ದಾರೆ. ಡಿಕೆಶಿ ಅವರಿಗೆ ಮೈತ್ರಿ ಸರ್ಕಾರದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನ ಮಾತನಾಡಿಸಲು ಮುಜುಗರ ಇತ್ತು. ಆದರೂ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಡಿಕೆಶಿ ನಡೆದುಕೊಂಡ್ರು ಎಂದರು.

Intro:Body:ರಾಮನಗರ : ಗುಜರಾತ್ ಶಾಸಕರು ರೆಸಾರ್ಟ್ ನಲ್ಲಿ ಇದ್ದಾಗ ಅಮಿತ್ ಷಾ ಕೋರಿಕೆ‌ಈಡೇರಿಸದೆ ಇದ್ದದ್ದಕ್ಕೆ ಈಡಿ ದಾಳಿಯಾಗಿತ್ತು
ಶಾ ಡಿ.ಕೆ‌.ಶಿವಕುಮಾರ್ ಅವರಿಗೆ ಕರೆ ಮಾಡಿ ಮೂರು ಶಾಸಕರನ್ನ ಗುಜರಾತ್ ಗೆ ಕಳುಹಿಸಿಕೊಡುವಂತೆ ಕೇಳಿದ್ರು, ಶಿವಕುಮಾರ್ ಅದಕ್ಕೆ ಒಪ್ಪಿರಲಿಲ್ಲಾ ಇದಕ್ಕೆ ಪ್ರತಿಕಾರವಾಗಿ ಗುಜರಾತ್ ಶಾಸಕರು ರೆಸಾರ್ಟ್ ನಲ್ಲಿ ಇದ್ದಾಗಲೇ ಐಟಿ ದಾಳಿ ನಡೆದಿತ್ತು ಎಂದು ಕಾಂಗ್ರೆಸ್ ಎಂ.ಎಲ್.ಸಿ ಸಿ.ಎಂ.ಲಿಂಗಪ್ಪ ಆಕ್ರೋಶ‌ ವ್ಯಕ್ತಪಡಿಸಿದರು.

ನಗರದ‌ಲ್ಲಿ ಮಾತನಾಡಿದ ಸಿಎಂ ಲಿಂಗಪ್ಪ ಬಿಜೆಪಿಯವರು ದ್ವೇಷ ರಾಜಕಾರಣ ಮಾಡುತ್ತಿದ್ದು, ಪ್ರತಿಕಾರವನ್ನ ತೀರಿಸಿಕೊಳ್ಳಲು ಮುಂದಾಗಿದೆ, ಡಿ.ಕೆ‌.ಶಿವಕುಮಾರ್ ಅವರ ಸಹೋದರ, ಪತ್ನಿ ಹಾಗೂ ತಾಯಿ ಅವರಿಗೆ ಕಿರುಕುಳ ನೀಡಲಾಗಿದೆ. ಗುಜರಾತ್ ಶಾಸಕರನ್ನ ರೆಸಾರ್ಟ್ ನಲ್ಲಿ ಕಾಪಾಡಿದ್ದೆ ಇವತ್ತು ಅವರಿಗೆ ಮುಳುವಾಗಿದೆ ಎಂದರು.
ರಾತ್ರಿ ನೋಟಿಸ್ ನೀಡಿ ನಾಳೆ ಹಾಜರಾಗಲು ಇಡಿ ಯವರು ಹೇಳಿದ್ದಾರೆ ಇದು ಯಾವ ನ್ಯಾಯಾ ಕಾಂಗ್ರೆಸ್ ನಾಯಕರು ಮಾತ್ರ ಅಪರಾಧ ಮಾಡಿದ್ದರಾ ,ಬೇರೆ ಯಾವ ಪಕ್ಷದವರು ಅಪರಾಧ ಮಾಡಿಲ್ವಾ ನಾವು ಇದನ್ನ ಸಹಿಸುವುದಿಲ್ಲ ಬಿಜೆಪಿಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾನವೀಯತೆ ಇಲ್ಲಾ
ಐಟಿ ಯವರು ಇಡಿ ಯವರು ಮನುಷ್ಯತ್ವ ಇಲ್ಲದ ಅಧಿಕಾರಿಗಳು ಮಾನವೀಯತೆ ಇಲ್ಲದಂತೆ ವರ್ತಿಸುತ್ತಾರೆ, ಕೆಫೆ ಡೇ ಮಾಲೀಕ ಸಿದ್ದಾರ್ಥ್ ಸಾವಿಗೆ ಐಟಿ ಮತ್ತು ಇಡಿ ಅಧಿಕಾರಿಗಳೇ ಕಾರಣ ಎಂದು ಅರೋಪಿಸಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಸ್ವ ಪಕ್ಷದಲ್ಲೆ ವಿರೋಧ ಇದೆ ಅವರಿಗೆ ಸಮ್ಮಿಶ್ರ ಸರಕಾರದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನ ಮಾತನಾಡಿಸಲು ಮುಜುಗರ ಇತ್ತು ಪಕ್ಷದ ಹೈಕಮಾಂಡ್ ತಿರ್ಮಾನದಂತೆ ಡಿ.ಕೆ.ಶಿ ನಡೆದುಕೊಂಡ್ರು ಅಷ್ಟೇ ಎಂದು ಡಿಕೆಶಿ ಹೆಚ್ಢಿಡಿ ಕುಟುಂಬದ ಬಾಂದವ್ಯ ಸಮರ್ಥಿಸಿಕೊಂಡರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.