ETV Bharat / state

ಮನೆ ಮನೆಯಿಂದ ದುಡ್ಡು ಸಂಗ್ರಹಿಸಿ ಜನರಿಂದಲೇ ಬೋರ್‌ವೆಲ್‌ ರಿಪೇರಿ.. ಇಲ್ಲಿ ಜನಪ್ರತಿನಿಧಿಗಳಿದ್ದರೂ ವೇಸ್ಟ್‌!

ಇದು ಸರ್ಕಾರವೇ ನಾಚಿಕೆ ಪಡುವ ಘಟನೆ. ಬೋರ್‌ವೆಲ್‌ಗಳು ಕೆಟ್ಟು ನಿಂತವೆ ಸರಿಪಡಿಸಿ ಅಂತಾ ಅಧಿಕಾರಿಗಳಿಗೆ ಗ್ರಾಮo ಜನ ಮನವಿ ಮಾಡಿ ಸಾಕಾಗಿತ್ತು. ಕೊನೆಗೆ ಊರ ಜನರೇ ತಾವೇ ಹಣ ಸೇರಿಸಿ ಮುಂದೆ ನಿಂತು ಬೋರ್‌ವೆಲ್ ರಿಪೇರಿ ಮಾಡಿಸಿಕೊಂಡಿದ್ದಾರೆ.

author img

By

Published : Apr 29, 2019, 7:18 PM IST

Updated : Apr 29, 2019, 7:23 PM IST

ನೀರಿಗಾಗಿ ಹಾಹಾಕಾರ

ರಾಯಚೂರು : ಜಿಲ್ಲೆಯಲ್ಲಿ ಬೇಸಿಗೆ ಆರಂಭ ಮುನ್ನವೇ ನೀರಿಗಾಗಿ ಹಾಹಾಕಾರ ಶುರುವಾಗಿತ್ತು, ಇದೀಗ ಮತ್ತಷ್ಟು ನೀರಿನ ಸಮಸ್ಯೆ ಜಟಿಲಗೊಂಡಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಸ್ವತಃ ಗ್ರಾಮಸ್ಥರೇ ಮನೆ ಮನೆಯಿಂದ ಹಣ ಸಂಗ್ರಹಿಸಿ ಬೋರವೆಲ್ ರಿಪೇರಿ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.‌ ನಿತ್ಯ ಕುಡಿಯುವ ನೀರಿಗಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತುಕೊಂಡು ಬೋರ್‌ವೆಲ್‌ನಿಂದ ಬರುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತ ಕುಳಿತು ನೀರು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣಗೊಂಡಿದೆ.

ಸುಮಾರು 300 ಮನೆಗಳಿರುವ 2,000ಕ್ಕೂ ಹೆಚ್ಚು ಜನಸಂಖ್ಯೆಯಿರುವ ಗ್ರಾಮದಲ್ಲಿ 2-3 ಬೋರ್​ವೆಲ್​​ ಇದ್ದು ಅವೂ ಕೂಡಾ ಈ ಹಿಂದೆ ಕೆಟ್ಟು ನಿಂತಿದ್ದವು, ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ರೆ, ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ, ಇದರಿಂದ ರೋಸಿ ಹೋದ ಜನ ತಲಾ 50 ರೂಪಾಯಿಯಂತೆ ಚಂದಾ ಸಂಗ್ರಹಿಸಿ ಬೋರ್ ವೆಲ್ ರಿಪೇರಿ ಮಾಡಿಸಿಕೊಂಡು, ತಾಸಿಗೊಮ್ಮೆ ಬರುವ ನೀರನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ನೀರಿಗಾಗಿ ಹಾಹಾಕಾರ

ಸರಕಾರ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ. ಅಧಿಕಾರಿಗಳು ಹಣವನ್ನ ಸಮರ್ಪಕವಾಗಿ ಬಳಸಿಕೊಂಡು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು. ಆದರೆ, ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಗ್ರಾಮಸ್ಥರೆ ಹಣ ಸಂಗ್ರಹ ಮಾಡಿಕೊಂಡು ಬೋರ್‌ವೆಲ್ ರಿಪೇರಿ ಮಾಡಿಸುವಂತಹ ವಾತಾವರಣ ನಿರ್ಮಾಣವಾಗಿದ್ದು ತಾಲೂಕು ಆಡಳಿತ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಂಸದರು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಮದುವೆ ಸಭೆ ಸಮಾರಂಭಗಳಿಗೆ ಟ್ಯಾಂಕರ್ ಉಪಯೋಗಿಸಿಕೊಂಡು ಹಲವು ನೀರಿನ್ನ ಪೋಲು ಮಾಡುತ್ತಾರೆ. ನಮ್ಮಗೆ ಅದರಲ್ಲಿ ಒಂದೆರೆಡು ಟ್ಯಾಂಕರ್ ಕೊಟ್ರೆ ಗ್ರಾಮದ ಸಮಸ್ಯೆ ದೂರಾಗುತ್ತೆ. ಊಟ‌ ಇಲ್ಲದೆ ಜೀವಿಸಬಹುದು, ನೀರಿಲ್ಲದೆ ಬದುಕುವುದು ಹೇಗೆ ಅನ್ನೋದು ಗ್ರಾಮಸ್ಥರ ಅಳಲು. ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಮಾಡಬೇಕು ಅಂದ್ರೇ ಅದಕ್ಕೂ ನೀರಿಲ್ಲ, ಎಂದು ಅಡುಗೆ ಮಾಡುವವರ ಮಾತು.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿಯಿದೆ. ಆದರೆ, ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

ರಾಯಚೂರು : ಜಿಲ್ಲೆಯಲ್ಲಿ ಬೇಸಿಗೆ ಆರಂಭ ಮುನ್ನವೇ ನೀರಿಗಾಗಿ ಹಾಹಾಕಾರ ಶುರುವಾಗಿತ್ತು, ಇದೀಗ ಮತ್ತಷ್ಟು ನೀರಿನ ಸಮಸ್ಯೆ ಜಟಿಲಗೊಂಡಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಸ್ವತಃ ಗ್ರಾಮಸ್ಥರೇ ಮನೆ ಮನೆಯಿಂದ ಹಣ ಸಂಗ್ರಹಿಸಿ ಬೋರವೆಲ್ ರಿಪೇರಿ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.‌ ನಿತ್ಯ ಕುಡಿಯುವ ನೀರಿಗಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತುಕೊಂಡು ಬೋರ್‌ವೆಲ್‌ನಿಂದ ಬರುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತ ಕುಳಿತು ನೀರು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣಗೊಂಡಿದೆ.

ಸುಮಾರು 300 ಮನೆಗಳಿರುವ 2,000ಕ್ಕೂ ಹೆಚ್ಚು ಜನಸಂಖ್ಯೆಯಿರುವ ಗ್ರಾಮದಲ್ಲಿ 2-3 ಬೋರ್​ವೆಲ್​​ ಇದ್ದು ಅವೂ ಕೂಡಾ ಈ ಹಿಂದೆ ಕೆಟ್ಟು ನಿಂತಿದ್ದವು, ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ರೆ, ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ, ಇದರಿಂದ ರೋಸಿ ಹೋದ ಜನ ತಲಾ 50 ರೂಪಾಯಿಯಂತೆ ಚಂದಾ ಸಂಗ್ರಹಿಸಿ ಬೋರ್ ವೆಲ್ ರಿಪೇರಿ ಮಾಡಿಸಿಕೊಂಡು, ತಾಸಿಗೊಮ್ಮೆ ಬರುವ ನೀರನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ನೀರಿಗಾಗಿ ಹಾಹಾಕಾರ

ಸರಕಾರ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ. ಅಧಿಕಾರಿಗಳು ಹಣವನ್ನ ಸಮರ್ಪಕವಾಗಿ ಬಳಸಿಕೊಂಡು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು. ಆದರೆ, ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಗ್ರಾಮಸ್ಥರೆ ಹಣ ಸಂಗ್ರಹ ಮಾಡಿಕೊಂಡು ಬೋರ್‌ವೆಲ್ ರಿಪೇರಿ ಮಾಡಿಸುವಂತಹ ವಾತಾವರಣ ನಿರ್ಮಾಣವಾಗಿದ್ದು ತಾಲೂಕು ಆಡಳಿತ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಂಸದರು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಮದುವೆ ಸಭೆ ಸಮಾರಂಭಗಳಿಗೆ ಟ್ಯಾಂಕರ್ ಉಪಯೋಗಿಸಿಕೊಂಡು ಹಲವು ನೀರಿನ್ನ ಪೋಲು ಮಾಡುತ್ತಾರೆ. ನಮ್ಮಗೆ ಅದರಲ್ಲಿ ಒಂದೆರೆಡು ಟ್ಯಾಂಕರ್ ಕೊಟ್ರೆ ಗ್ರಾಮದ ಸಮಸ್ಯೆ ದೂರಾಗುತ್ತೆ. ಊಟ‌ ಇಲ್ಲದೆ ಜೀವಿಸಬಹುದು, ನೀರಿಲ್ಲದೆ ಬದುಕುವುದು ಹೇಗೆ ಅನ್ನೋದು ಗ್ರಾಮಸ್ಥರ ಅಳಲು. ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಮಾಡಬೇಕು ಅಂದ್ರೇ ಅದಕ್ಕೂ ನೀರಿಲ್ಲ, ಎಂದು ಅಡುಗೆ ಮಾಡುವವರ ಮಾತು.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿಯಿದೆ. ಆದರೆ, ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

Intro:ಬಿಸಿಲೂರು ರಾಯಚೂರು ಜಿಲ್ಲೆಯ ಬೇಸಿಗೆ ಆರಂಭ ಮುನ್ನವೇ ನೀರಿಗಾಗಿ ಹಾಹಾಕಾರ ಶುರುವಾಗಿತ್ತು. ಇದೀಗ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಮತ್ತೊಷ್ಟು ಜಟಿಲಗೊಂಡಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನೀರಿಗಾಗಿ ಗ್ರಾಮಸ್ಥರೇ ಮನೆ ಮನೆಯಿಂದ ಹಣ ಸಂಗ್ರಹ ಮಾಡಿಕೊಂಡ ಬೋರವೆಲ್ ರಿಪೇರಿ ಮಾಡಿಕೊಂಡಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.


Body:ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.‌ನಿತ್ಯ ಕುಡಿಯುವ ನೀರಿಗಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತುಕೊಂಡು ಬೋರವೆಲ್‌ನಿಂದ ಬರುವ ನೀರಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತ ಕುಳಿತು ನೀರು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣಗೊಂಡಿದೆ.

ವೀರಾಪುರ ಗ್ರಾಮದಲ್ಲಿ ಸುಮಾರು ೯೦೦ ಮನೆಗಳಿಂದ ಆಂದಾಜು ೨೦೦೦ ಸಾವಿರಕ್ಕೂ ಅಧಿಕ ಜನಸಂಖ್ಯೆವಾದಿರುವ ಗ್ರಾಮವಾಗಿದೆ. ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಎರಡು ಮೂರು ಬೋರವೆಲ್‌ಗಳು ಗ್ರಾಮಸ್ಥರಿಗೆ ಆಧಾರ. ಈ ಬೋರವೆಲ್‌ನಲ್ಲಿ ಇಲ್ಲದ್ದಾರೆ ನಾಲ್ಕೈದು ಕಿಲೋ ಮೀಟರ್ ದೂರು ಕ್ರಮಿಸಿ ನೀರು ತೆಗೆದುಕೊಂಡು ಬರಬೇಕಾದ ಅನಿವಾರ್ಯಂತೆ ಜನರದು. ಆದ್ರೆ ಇತ್ತೀಚಿಗೆ ಗ್ರಾಮದಲ್ಲಿ ಬೋರವೆಲ್ ಕೆಟ್ಟ ನಿಂತದಾಗ ರಿಪೇರಿ ಮಾಡಿ ನೀರಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ಅಧಿಕಾರಿಗಳು ಕ್ಯಾರಿ ಅಂದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಸಿ ಹೋದ ಜನ ಗ್ರಾಮಸ್ಥರೇ ತಲಾ ಮನೆ ೫೦ ರೂಪಾಯಿ ಹಣ ಸಂಗ್ರಹ ಮಾಡಿಕೊಂಡು ಬೋರವಲ್ ರಿಪೇರಿ ಮಾಡಿಸಿಕೊಂಡು ತಾಸಿಗೆ ಒಮ್ಮೆ ಬರುವ ನೀರಿನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.


Conclusion:ಇನ್ನು ಸರಕಾರ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡಲಾಗಿದೆ. ಆದ್ರೆ ಹಣವನ್ನ ಸಮರ್ಪಕವಾಗಿ ಬಳಿಸಿಕೊಂಡು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು. ಆದ್ರೆ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿದ ಪರಿಣಾಮ ಗ್ರಾಮಸ್ಥರೇ ಹಣ ಸಂಗ್ರಹ ಮಾಡಿಕೊಂಡು ಬೋರವೆಲ್ ರಿಪೇರಿ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದ್ದು, ತಾಲೂಕು ಆಡಳಿತ ನಿರ್ಲಕ್ಷ್ಯದ ಕೈಗನ್ನಡಿಯಾಗಿದೆ.

ಇನ್ನು ಸಂಸದರು, ಶಾಸಕರು, ಚುನಾಯಿತಗೊಂಡಿರುವ ಪ್ರತಿನಿಧಿಗಳು ಮದುವೆ, ಸಭೆ ಸಮಾರಂಭಗಳಲ್ಲಿಗೆ ಟ್ಯಾಂಕರ್ ಉಪಯೋಗಿಸಿಕೊಂಡು ಹಲವು ಟ್ಯಾಂಕರ್ ನೀರಿನ್ನ ಪೋಲು ಮಾಡುತ್ತಾರೆ ನಮ್ಮಗೆ ಅದರಲ್ಲಿ ಒಂದೆರೆಡು ಟ್ಯಾಂಕರ್ ಗ್ರಾಮದ ಸಮಸ್ಯೆ ತಿರುತ್ತೆ, ಊಟ‌ ಇಲ್ಲದೆ ಜೀವಿಸಬಹುದು ನೀರಿಲ್ಲದೆ ಬದುಕುವುದು ಹೇಗೆ ಅನ್ನೋವುದು ಗ್ರಾಮಸ್ಥರ ಆಳಲು ಆಗಿದೆ.

ಇನ್ನು ಗ್ರಾಮದಲ್ಲಿನ ಸರಕಾರ ಶಾಲೆಯ ಮಕ್ಕಳಿಗೆ ಬಿಸಿಯೂಟ ನೀಡಬೇಕು. ಆದ್ರೆ ಗ್ರಾಮದಲ್ಲಿನ ನೀರಿನ ಸಮಸ್ಯೆ ಬಿಸಿಯೂಟ ತಗುಲಿ ಬಿಸಿಯೂಟಕ್ಕೆ ತೊಂದರೆಯಾಗಿದೆ ಅಂತಾರೆ ಬಿಸಿಯೂಟದ ಅಡುಗೆ ಮಾಡುವವರು.

ಒಟ್ನಿಲ್ಲಿ, ಬಿಸಿಲೂರು ರಾಯಚೂರು ಜಿಲ್ಲೆ ವೀರಪುರ ಗ್ರಾಮದ ಒಂದೆ ಗ್ರಾಮದ ಸಮಸ್ಯೆಯಿಲ್ಲ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿಯಿದೆ. ಕೂಡಲೇ ತಾಲೂಕು ಆಡಳಿತ ಎಚ್ಚೇತ್ತುಕೊಂಡು ವೀರಾಪೂರ ಗ್ರಾಮಕ್ಕೆ ನೀರಿನ ಪೂರೈಸುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನೀರಿಗಾಗಿ ಜನರು‌ ಬೀದಿಗಿಳಿದ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ.

ಬೈಟ್.೧: ಶಿವಮ್ಮ ಶರಣಬಸವ, ಗ್ರಾಮಸ್ಥೆ
ಬೈಟ್.೨: ಮೌಲಾಬಿ, ಗ್ರಾಮಸ್ಥೆ
Last Updated : Apr 29, 2019, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.