ETV Bharat / state

'ಲಾಕ್​​ಡೌನ್ ವೇಳೆ ರಾಯಚೂರಿನಲ್ಲಿ 25 ಬಾಲ್ಯ ವಿವಾಹ ಪ್ರಕರಣ ವರದಿ'

author img

By

Published : Jun 2, 2021, 2:38 PM IST

ರಾಯಚೂರು ಜಿಲ್ಲೆಯಲ್ಲಿ ಲಾಕ್​ಡೌನ್​ ಜಾರಿಯಾದ ವೇಳೆ 25 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಈ 25 ಪ್ರಕರಣಗಳಲ್ಲಿ ಮೂರು ಬಾಲ್ಯ ವಿವಾಹಗಳು ನಡೆದಿದ್ದು, ಇನ್ನುಳಿದ 22 ವಿವಾಹಗಳನ್ನು ತಡೆ ಹಿಡಿಯಲಾಗಿದೆ.

raichur
ರಾಯಚೂರು

ರಾಯಚೂರು: ಬಾಲ್ಯ ವಿವಾಹ ಪದ್ಧತಿ ನಿಷೇಧಿಸಿ, ಕಠಿಣ ಕಾನೂನು ಜಾರಿ ಮಾಡಿದ್ದರೂ ರಾಜ್ಯದಲ್ಲಿ ಬಾಲ್ಯವಿವಾಹಗಳು ನಿಂತಿಲ್ಲ. ಕೊರೊನಾ ಲಾಕ್​​​ಡೌನ್ ನಡುವೆಯೂ ರಾಯಚೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ಬಾಲ್ಯ ವಿವಾಹಗಳು ನಡೆದಿದ್ದು, ಹಲವು ವಿವಾಹಗಳನ್ನು ತಡೆಯಲಾಗಿದೆ.

ವೀರನಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಉಪನಿರ್ದೇಶಕ

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಬಾಲ್ಯ ವಿವಾಹ ತಪ್ಪು ಎನ್ನುವುದು ಪಾಲಕರಿಗೆ ತಿಳಿದಿದ್ದರೂ ಅಪ್ರಾಪ್ತೆಯರನ್ನ ಮದುವೆಯ ಸಂಕೋಲೆಗೆ ದೂಡುತ್ತಿದ್ದಾರೆ. ಕಾನೂನಿನ ಪ್ರಕಾರ ಯುವಕನಿಗೆ 21 ವರ್ಷ, ಯುವತಿ 18 ವಯೋಮಿತಿ ಹೊಂದಿರಬೇಕು. ಆದ್ರೆ 21 ವರ್ಷ ಮೇಲ್ಪಟ್ಟ ಯುವಕರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಮದುವೆ ಮಾಡುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಲಾಕ್​ಡೌನ್​ ಜಾರಿಯಾದ ವೇಳೆ 25 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಈ 25 ಪ್ರಕರಣಗಳಲ್ಲಿ ಮೂರು ಬಾಲ್ಯ ವಿವಾಹಗಳು ನಡೆದಿದ್ದು, ಇನ್ನುಳಿದ 22 ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಕಾನೂನಿಗೆ ವಿರುದ್ದವಾಗಿ ರಾಯಚೂರು ತಾಲೂಕಿನಲ್ಲಿ 2 ಹಾಗೂ ದೇವದುರ್ಗ ತಾಲೂಕಿನ 1 ಬಾಲ್ಯ ವಿವಾಹ ನಡೆದಿದೆ.

ವಿವಾಹ ಮಾಡಿದ್ದ ಪೊಷಕರ ವಿರುದ್ದ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ. ಈ ಮೂರು ಪ್ರಕರಣ ಹೊರತುಪಡಿಸಿ ಇನ್ನುಳಿದ 22 ಬಾಲ್ಯ ವಿವಾಹಗಳ ಮಾಡಲು ಸಿದ್ದತೆ ನಡೆಸಲಾಗುತ್ತಿತ್ತು. ಆದ್ರೆ ಮಕ್ಕಳ ಸಹಾಯವಾಣಿ, ಆಶಾ ಕಾರ್ಯಕರ್ತೆಯರ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯವರು ವಿವಾಹ ತಡೆಯುವ ಮೂಲಕ ಬಾಲಕಿಯರನ್ನ ಮದುವೆಯ ಸಂಕೋಲೆಯಿಂದ ತಪ್ಪಿಸುವಲ್ಲಿ ಯಶ್ವಸಿಯಾಗಿದ್ದಾರೆ.

2021-2022ನೇ ಸಾಲಿನ ಏಪ್ರಿಲ್, ಮೇ ತಿಂಗಳ ತಾಲೂಕುವಾರು ಬಾಲ್ಯವಿವಾಹಗಳ ವರದಿ

ತಾಲೂಕುಗಳು ಏಪ್ರಿಲ್ ಮೇ ಒಟ್ಟು
ರಾಯಚೂರು 4 37
ಮಾನ್ವಿ 2 46
ಸಿಂಧನೂರು 2 13
ಲಿಂಗಸೂಗೂರು 4 37
ದೇವದುರ್ಗ 1 12

ಓದಿ: Bengaluru Covid Update: ಹೊಸದಾಗಿ 4,138 ಪ್ರಕರಣ ದಾಖಲು, ಪಾಸಿಟಿವಿ ಪ್ರಮಾಣ ಇಳಿಕೆ

ರಾಯಚೂರು: ಬಾಲ್ಯ ವಿವಾಹ ಪದ್ಧತಿ ನಿಷೇಧಿಸಿ, ಕಠಿಣ ಕಾನೂನು ಜಾರಿ ಮಾಡಿದ್ದರೂ ರಾಜ್ಯದಲ್ಲಿ ಬಾಲ್ಯವಿವಾಹಗಳು ನಿಂತಿಲ್ಲ. ಕೊರೊನಾ ಲಾಕ್​​​ಡೌನ್ ನಡುವೆಯೂ ರಾಯಚೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ಬಾಲ್ಯ ವಿವಾಹಗಳು ನಡೆದಿದ್ದು, ಹಲವು ವಿವಾಹಗಳನ್ನು ತಡೆಯಲಾಗಿದೆ.

ವೀರನಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಉಪನಿರ್ದೇಶಕ

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಬಾಲ್ಯ ವಿವಾಹ ತಪ್ಪು ಎನ್ನುವುದು ಪಾಲಕರಿಗೆ ತಿಳಿದಿದ್ದರೂ ಅಪ್ರಾಪ್ತೆಯರನ್ನ ಮದುವೆಯ ಸಂಕೋಲೆಗೆ ದೂಡುತ್ತಿದ್ದಾರೆ. ಕಾನೂನಿನ ಪ್ರಕಾರ ಯುವಕನಿಗೆ 21 ವರ್ಷ, ಯುವತಿ 18 ವಯೋಮಿತಿ ಹೊಂದಿರಬೇಕು. ಆದ್ರೆ 21 ವರ್ಷ ಮೇಲ್ಪಟ್ಟ ಯುವಕರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಮದುವೆ ಮಾಡುತ್ತಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಲಾಕ್​ಡೌನ್​ ಜಾರಿಯಾದ ವೇಳೆ 25 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಈ 25 ಪ್ರಕರಣಗಳಲ್ಲಿ ಮೂರು ಬಾಲ್ಯ ವಿವಾಹಗಳು ನಡೆದಿದ್ದು, ಇನ್ನುಳಿದ 22 ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಕಾನೂನಿಗೆ ವಿರುದ್ದವಾಗಿ ರಾಯಚೂರು ತಾಲೂಕಿನಲ್ಲಿ 2 ಹಾಗೂ ದೇವದುರ್ಗ ತಾಲೂಕಿನ 1 ಬಾಲ್ಯ ವಿವಾಹ ನಡೆದಿದೆ.

ವಿವಾಹ ಮಾಡಿದ್ದ ಪೊಷಕರ ವಿರುದ್ದ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ. ಈ ಮೂರು ಪ್ರಕರಣ ಹೊರತುಪಡಿಸಿ ಇನ್ನುಳಿದ 22 ಬಾಲ್ಯ ವಿವಾಹಗಳ ಮಾಡಲು ಸಿದ್ದತೆ ನಡೆಸಲಾಗುತ್ತಿತ್ತು. ಆದ್ರೆ ಮಕ್ಕಳ ಸಹಾಯವಾಣಿ, ಆಶಾ ಕಾರ್ಯಕರ್ತೆಯರ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯವರು ವಿವಾಹ ತಡೆಯುವ ಮೂಲಕ ಬಾಲಕಿಯರನ್ನ ಮದುವೆಯ ಸಂಕೋಲೆಯಿಂದ ತಪ್ಪಿಸುವಲ್ಲಿ ಯಶ್ವಸಿಯಾಗಿದ್ದಾರೆ.

2021-2022ನೇ ಸಾಲಿನ ಏಪ್ರಿಲ್, ಮೇ ತಿಂಗಳ ತಾಲೂಕುವಾರು ಬಾಲ್ಯವಿವಾಹಗಳ ವರದಿ

ತಾಲೂಕುಗಳು ಏಪ್ರಿಲ್ ಮೇ ಒಟ್ಟು
ರಾಯಚೂರು 4 37
ಮಾನ್ವಿ 2 46
ಸಿಂಧನೂರು 2 13
ಲಿಂಗಸೂಗೂರು 4 37
ದೇವದುರ್ಗ 1 12

ಓದಿ: Bengaluru Covid Update: ಹೊಸದಾಗಿ 4,138 ಪ್ರಕರಣ ದಾಖಲು, ಪಾಸಿಟಿವಿ ಪ್ರಮಾಣ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.