ETV Bharat / state

ರಾಷ್ಟ್ರೀಯ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಯಚೂರಿನ ಧೀರೆ!

author img

By

Published : Nov 8, 2019, 12:03 AM IST

ಪ್ರಸ್ತುತ ದಿನಗಳಲ್ಲಿ ಮನೆಯಿಂದ ಹೊರಬಂದು ಕೆಲಸಕ್ಕೆ ಹೋಗಲು ಚಿಂತಿಸುವ ಮಹಿಳೆಯರ ಮಧ್ಯೆ ಇಲ್ಲೊಬ್ಬ ಯುವತಿ ದಿಟ್ಟತನದಿಂದ ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Renuka elected to the National Security Force

ರಾಯಚೂರು: ಪ್ರಸ್ತುತ ದಿನಗಳಲ್ಲಿ ಮನೆಯಿಂದ ಹೊರಬಂದು ಕೆಲಸಕ್ಕೆ ಹೋಗಲು ಚಿಂತಿಸುವ ಮಹಿಳೆಯರ ಮಧ್ಯೆ ಇಲ್ಲೊಬ್ಬ ಯುವತಿ ದಿಟ್ಟತನದಿಂದ ದೇಶಕ್ಕಾಗಿ ಸೇನೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಎಸ್‌ಎಫ್‌ ಮೂಲಕ ಸೇನೆಗೆ ಸೇರಿ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ದಳ) ಮಹಿಳಾ ಕಮಾಂಡೋ ಆಗಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಅಮರಾಪುರ ಗ್ರಾಮದ ರೇಣುಕಾ ಅವರು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.

ರೇಣುಕಾ ಅವರದು ಹೇಳಿಕೊಳ್ಳುವಂತಹ ದೊಡ್ಡ ಕುಟುಂಬವಲ್ಲ. ತಂದೆ ಒಕ್ಕಲುತನ ಹಾಗೂ ತಾಯಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬರುವ ಅಲ್ಪ ಆದಾಯದಲ್ಲೇ ರೇಣುಕಾ ಹಾಗೂ ತಂಗಿ ರಾಧಿಕಾರನ್ನು ಓದಿಸಿದ್ದಾರೆ.

ರೇಣುಕಾ ಕುಟುಂಬ

ರೇಣುಕಾ ಓದುತ್ತಿರುವಾಗಲೇ ಎನ್​​ಎಸ್​​ಎಸ್​​ ಸೇರಿದ್ದರು. 2014ರಲ್ಲಿ ಸೈನ್ಯಕ್ಕೆ ಸೇರಿದ್ದ ರೇಣುಕಾ, ದೇಶದ ನಾನಾ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸಾಮರ್ಥ್ಯ ಪ್ರದರ್ಶಿಸಿ ಎನ್‌ಎಸ್‌ಜಿಗೆ ಆಯ್ಕೆಯಾಗಿದ್ದಾರೆ. ರೇಣುಕಾ ಜೊತೆಗೆ ವಿಜಯಪುರ ಜಿಲ್ಲೆಯ ಎನ್.ಕೆ.ಸುಮಂಗಲ ಅವರೂ ಆಯ್ಕೆಯಾಗಿದ್ದಾರೆ.

ರೇಣುಕಾಗೆ ಮದುವೆ ಮಾಡಿಸಿದ ಬಳಿಕ ಸೈನ್ಯ ಸೇವೆಯಿಂದ ಹಿಂದೆ ಸರಿದಿದ್ದರು. ಪತಿ ಹಾಗೂ ಪೋಷಕರು ಪ್ರೋತ್ಸಾಹದಿಂದಾಗಿ ಸೈನ್ಯದಲ್ಲಿ ಕೆಲಸ ಮುಂದುವರೆಸಿದ್ದಾರೆ. ಪತ್ನಿಗೆ ಸಾಥ್ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ ಪತ್ನಿ ಕೆಲಸ ಮಾಡುವ ಸ್ಥಳದಲ್ಲಿದ್ದರು. ಪತಿ ಸ್ವಗ್ರಾಮಕ್ಕೆ ಆಗಮಿಸಿ ಒಕ್ಕಲುತನ ಮಾಡಿಕೊಂಡಿದ್ದಾರೆ. ರೇಣುಕಾ ಸೈನ್ಯಕ್ಕೆ ಸೇರಿದ್ದನ್ನು ಕಂಡು ಗ್ರಾಮಸ್ಥರು ಆಡಿಕೊಂಡರು. ಇದಕ್ಕೆಲ್ಲಾ ತಾಯಿ ಕಿವಿಗೊಡದೆ, ಎಚ್ಚರದಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.

ರಾಯಚೂರು: ಪ್ರಸ್ತುತ ದಿನಗಳಲ್ಲಿ ಮನೆಯಿಂದ ಹೊರಬಂದು ಕೆಲಸಕ್ಕೆ ಹೋಗಲು ಚಿಂತಿಸುವ ಮಹಿಳೆಯರ ಮಧ್ಯೆ ಇಲ್ಲೊಬ್ಬ ಯುವತಿ ದಿಟ್ಟತನದಿಂದ ದೇಶಕ್ಕಾಗಿ ಸೇನೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಎಸ್‌ಎಫ್‌ ಮೂಲಕ ಸೇನೆಗೆ ಸೇರಿ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ದಳ) ಮಹಿಳಾ ಕಮಾಂಡೋ ಆಗಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಅಮರಾಪುರ ಗ್ರಾಮದ ರೇಣುಕಾ ಅವರು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.

ರೇಣುಕಾ ಅವರದು ಹೇಳಿಕೊಳ್ಳುವಂತಹ ದೊಡ್ಡ ಕುಟುಂಬವಲ್ಲ. ತಂದೆ ಒಕ್ಕಲುತನ ಹಾಗೂ ತಾಯಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬರುವ ಅಲ್ಪ ಆದಾಯದಲ್ಲೇ ರೇಣುಕಾ ಹಾಗೂ ತಂಗಿ ರಾಧಿಕಾರನ್ನು ಓದಿಸಿದ್ದಾರೆ.

ರೇಣುಕಾ ಕುಟುಂಬ

ರೇಣುಕಾ ಓದುತ್ತಿರುವಾಗಲೇ ಎನ್​​ಎಸ್​​ಎಸ್​​ ಸೇರಿದ್ದರು. 2014ರಲ್ಲಿ ಸೈನ್ಯಕ್ಕೆ ಸೇರಿದ್ದ ರೇಣುಕಾ, ದೇಶದ ನಾನಾ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸಾಮರ್ಥ್ಯ ಪ್ರದರ್ಶಿಸಿ ಎನ್‌ಎಸ್‌ಜಿಗೆ ಆಯ್ಕೆಯಾಗಿದ್ದಾರೆ. ರೇಣುಕಾ ಜೊತೆಗೆ ವಿಜಯಪುರ ಜಿಲ್ಲೆಯ ಎನ್.ಕೆ.ಸುಮಂಗಲ ಅವರೂ ಆಯ್ಕೆಯಾಗಿದ್ದಾರೆ.

ರೇಣುಕಾಗೆ ಮದುವೆ ಮಾಡಿಸಿದ ಬಳಿಕ ಸೈನ್ಯ ಸೇವೆಯಿಂದ ಹಿಂದೆ ಸರಿದಿದ್ದರು. ಪತಿ ಹಾಗೂ ಪೋಷಕರು ಪ್ರೋತ್ಸಾಹದಿಂದಾಗಿ ಸೈನ್ಯದಲ್ಲಿ ಕೆಲಸ ಮುಂದುವರೆಸಿದ್ದಾರೆ. ಪತ್ನಿಗೆ ಸಾಥ್ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ ಪತ್ನಿ ಕೆಲಸ ಮಾಡುವ ಸ್ಥಳದಲ್ಲಿದ್ದರು. ಪತಿ ಸ್ವಗ್ರಾಮಕ್ಕೆ ಆಗಮಿಸಿ ಒಕ್ಕಲುತನ ಮಾಡಿಕೊಂಡಿದ್ದಾರೆ. ರೇಣುಕಾ ಸೈನ್ಯಕ್ಕೆ ಸೇರಿದ್ದನ್ನು ಕಂಡು ಗ್ರಾಮಸ್ಥರು ಆಡಿಕೊಂಡರು. ಇದಕ್ಕೆಲ್ಲಾ ತಾಯಿ ಕಿವಿಗೊಡದೆ, ಎಚ್ಚರದಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.

Intro:¬ಸ್ಲಗ್: ಪತಿ ಕಿಸಾನ್, ಪತ್ನಿ ಜವಾನ್
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 07-11-2019
ಸ್ಥಳ: ರಾಯಚೂರು
ಆಂಕರ್: ಅದೊಂದು ತೀರ ಬಡಕುಟುಂಬ. ಅ ಬಡಕುಟುಂಬದಲ್ಲಿ ತಂದೆ ಒಕ್ಕುಲತನ, ತಾಯಿ ಅಂಗನವಾಡಿಯಲ್ಲಿ ಕೆಲಸ ಮಾಡಿಕೊಂಡು ಬರುವ ಆದಾಯದಲ್ಲಿ ತಮ್ಮ ಇಬ್ಬರ ಹೆಣ್ಣು ಮಕ್ಕಳಿಗೆ ವಿದ್ಯಾಬ್ಯಾಸ ಮಾಡಿದ್ದಾರೆ. ಬಡತನದ ಮಧ್ಯ ಹಿರಿಯ ಮಗಳಿಗೆ ಡಿಪ್ಲೋಮಾದವರೆಗೆ ವ್ಯಾಸಂಗ ಮಾಡಿಸಿದ್ರೆ. ಮುಂದೆ ವಿದ್ಯಾಬ್ಯಾಸ ಮಾಡಿಸಲು ಸಿದ್ದವಿದ್ರೂ, ಇದರ ನಡುವೆ ಮಗಳಿಗೆ ಪೊಲೀಸ್ ಇಲಾಖೆ ಹಾಗೂ ಸೈನ್ಯದ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಆಗ ದೇಶ ಕಾಯುವ ಕೆಲಸವನ್ನ ಆಯ್ಕೆ ಮಾಡಿಕೊಂಡು, ಬೆರಳಣಿಕೆ ಜನರಿಗೆ ಸಿಗುವ ಎನ್ಎಸ್ ಜಿ(ನ್ಯಾಷನಲ್ ಸೆಕ್ಯೂರ್ಟಿ ಗಾರ್ಡ್) ಮಹಿಳೆ ಪಡೆಗೆ ಆಯ್ಕೆಯಾಗಿದ್ದಾರೆ. ಈ ಕುರಿತು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ದೇಶದಲ್ಲಿ ತೀರದ ಹಿಂದುಳಿದ ಜಿಲ್ಲೆಯೆಂದು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಗೆ ಗುರುತಿಸಿಕೊಂಡಿದೆ. ಆದ್ರೆ ಈಗ ಕಾಲ ಬದಲಾಗುತ್ತಿದ್ದು, ದೇಶದಲ್ಲಿ ಕೇವಲ ಬೆರಳೆಣಿಕೆ ಸಂಖ್ಯೆಯಲ್ಲಿ ಅವಕಾಶ ಸಿಗುವ ಎನ್ಎಸ್ ಜಿ(ಬ್ಲ್ಯಾಕ್ ಕಮಾಂಡೋ)ಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಮರಾಪುರ ಗ್ರಾಮದ ರೇಣುಕಾ ಆಯ್ಕೆಯಾಗಿದ್ದಾಳೆ. ಹೌದು, ಬಡ ಕುಟುಂಬದಲ್ಲಿ ಜನಸಿರುವ ರೇಣುಕಾ ಡಿಪ್ಲೋಮ್ ವರೆಗೆ ವಿದ್ಯಾಬ್ಯಾಸವನ್ನು ಮಾಡಿದ್ದಾಳೆ. ವಿದ್ಯಾಬ್ಯಾಸ ಸಮಸ್ಯೆದಲ್ಲಿ ಎನ್ ಎಸ್ ಎಸ್ ಸೇವೆ ಮಾಡಿದ್ದಾಳೆ. ಆಗ ಆಕೆಯ ಸ್ನೇಹಿತರು ಪೊಲೀಸ್ ಇಲಾಖೆ ಹಾಗೂ ಸೈನ್ಯದಲ್ಲಿ ಸಿರುವುದಕ್ಕೆ ಅರ್ಹತೆ ಹೊಂದದ್ದೀಯಾ ಅಂತ ಹೇಳಿದ್ರೆ. ಆಗ ಬ್ಲ್ಯಾಕ್ ಕಂಮಾಡೋ ರೇಣುಕಾಗೆ ಪೊಲೀಸ್ ಇಲಾಖೆ ಮತ್ತು ಸೈನ್ಯದಲ್ಲಿ ಸೇರುವ ಅವಕಾಶ ಬಂದಿತ್ತು. ಎರಡು ಅವಕಾಶ ಬಂದಾಗ, ಪೊಲೀಸ್ ಇಲಾಖೆಯಲ್ಲಿ ಸೇರಿಕೊಂಡು ನೆಮ್ಮದಿಯಿಂದ ಸೇವೆ ಮಾಡಿಕೊಂಡು ಜೀವನ ಸಾಗಿಸಬಹುದಿತ್ತು. ಆದ್ರೆ ದೇಶಕ್ಕೆ ಏನಾದರೂ ಕೂಡುಗೆ ನೀಡಬೇಕೆಂದು ಮನೆಯಲ್ಲಿ ಪೊಲೀಸ್ ಕೆಲಸ ಅಂತಾ ಹೇಳಿ ಸೈನ್ಯ 5 ವರ್ಷ ಬಿಎಸ್ ಎಫ್ ನಲ್ಲಿ ಕೆಲಸ ಮಾಡಿ, ಇದೀಗ ಎನ್ ಎಸ್ ಜಿ ಭದ್ರತೆ ಪಡೆಗೆ ಸೇರಿಕೊಂಡಿದ್ದಾಳೆ.
ವಾಯ್ಸ್ ಓವರ್.2: ಬ್ಲಾಕ್ಯ್ ಕಂಮಾಡೋ ರೇಣುಕಾರವರದು ಹೇಳಿಕೊಳ್ಳುವಂತಹ ದೊಡ್ಡ ಕುಟುಂಬವಲ್ಲ. ತಂದೆ ಒಕ್ಕುತನ ಹಾಗೂ ತಾಯಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಬರುವ ಆದಾಯದಿಂದ ರೇಣುಕಾ ಹಾಗೂ ಆಕೆ ತಂಗಿ ರಾಧಿಕ ಪೊಷಕರು ವಿದ್ಯಾಬ್ಯಾಸ ಮಾಡಿಸಿದ್ರೆ. ಈ ಮಧ್ಯ ರೇಣುಕಾಗಳಿಗೆ ತಮ್ಮ ಸಂಬಂಧಿಕರಲ್ಲಿ ವಿವಾಹ ಮಾಡಿಸಿದ್ದಾರೆ. ವಿವಾಹ ಮಾಡಿಕೊಂಡ ಬಳಿಕ ಸೈನ್ಯ ಸೇವೆಯಿಂದ ಹಿಂದೆ ಸರಿದೆ, ಪತಿ ಹಾಗೂ ಪೋಷಕರು ಪ್ರೋತ್ಸಾಹ ಸೈನ್ಯದಲ್ಲಿ ಕೆಲಸ ಮುಂದುವರೆಸಿದ್ದಾಳೆ. ಪತ್ನಿಗೆ ಸಾಥ್ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ ಪತ್ನಿ ಕೆಲಸ ಮಾಡುವ ಸ್ಥಳದಲ್ಲಿ ಇದ್ದಾರೆ. ಪತಿ ಸ್ವಗ್ರಾಮಕ್ಕೆ ಆಗಮಿಸಿ ಒಕ್ಕಲುತನ ಮಾಡಿಕೊಂಡಿದ್ದಾರೆ. ಆದ್ರೆ ರೇಣುಕಾ ತಾಯಿಗೆ ಗ್ರಾಮಸ್ಥರು ಮಗಳನ್ನ ದುಡ್ಡಿನ ಆಸೆಗೆ ಗಡಿಯಲ್ಲಿ ಸೈನ್ಯಕ್ಕೆ ಸೇರಿಸಿದಯಂತೆ ಅಡಿಕೊಂಡಿದ್ರೆ, ಗ್ರಾಮಸ್ಥರು ಮಾತಿಗೆ ತಾಯಿ ಕಿವಿಕೊಂಡದೆ, ಅದ್ಯಾವುದೇ ಕೆಲಸ ಮಾಡಿದ್ರು ಎಚ್ಚರದಿಂದ ಕೆಲಸ ಮಾಡುವ ಅಂತಹ ತಾಯಿ ಕಿವಿ ಮಾತು ಹೇಳಿದ್ದು, ಎನ್ ಎಸ್ ಜಿ ಪಡೆಗೆ ಆಯ್ಕೆಯಾಗಿರುವುದು ಮಗಳ ಹೆಮ್ಮ ಪಡುತ್ತಿದ್ದಾರೆ.
ವಾಯ್ಸ್ ಓವರ್.3: 2014ರಲ್ಲಿ ಸೈನ್ಯಕ್ಕೆ ಸೇರಿದ ರೇಣುಕಾ ಹಲವು ದಿನಗಳ ದೇಶದ ನಾನಾ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ದೇಶ ಕಾಯುವ ಕಾಯಕದಲ್ಲಿ ಆಕೆಯ ನಿಷ್ಠೆ ಶ್ರದ್ದೆ, ಬುದ್ದಿವಂತಿಕೆ ಕೆಲಸ ನೋಡಿದ ಸೈನ್ಯ ಹಿರಿಯ ಅಧಿಕಾರಿಗಳು ಎನ್ಎಸ್ ಜಿ ಭದ್ರತೆ ಪಡೆಗೆ ಆಯ್ಕೆ ಮಾಡಿದ್ದಾಗ. ಆಗ, ಎನ್ಎಸ್ ಜಿಗೆ ನಡುವೆ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕದ ಮೊದಲ ಬ್ಯಾಚ್ ನ ಸೈನ್ಯದ ಅಷ್ಟೊಂದು ಜನರ 21 ಮಹಿಳೆಯರಲ್ಲಿ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದು, ರಾಯಚೂರು ಜಿಲ್ಲೆಯ ಅಮರಾಪುರ ಗ್ರಾಮದ ರೇಣುಕಾ ಎನ್ಎಸ್ ಜಿ ಪಡೆ ಸ್ಥಾನ ಪಡೆದು ಇದೀಗ ಸೇವೆ ಸಲ್ಲಿಸುವ ಮೂಲಕ ರಾಜ್ಯದ ಕೀರ್ತಿ ಪತಕೆ ಹೆಚ್ಚಿಸಿದ್ದಾಳೆ. ಒಟ್ನಿಲ್ಲಿ, ದೇಶದ ತುರ್ತು ಸಂದರ್ಭದಲ್ಲಿ ಎದುರಾಗುವ ಸನ್ನಿವೇಶಗಳನ್ನು ಎದುರಿಸಲು ಸನ್ನದ್ದವಿರುವ ಬ್ಲ್ಯಾಕ್ ಕಂಮಾಡೋ ಟೀಮ್ ನಲ್ಲಿ ಮಹಿಳೆಯರು ಸಹ ಒಂದು ಹೆಜ್ಜೆ ಮುಂದಿದ್ದಾರೆ. ದೇಶದ ಭದ್ರತೆ ಪಡೆಗಳಲ್ಲಿ ರಾಜ್ಯದಿಂದ ಮೊದಲ ಬ್ಯಾಚ್ ನಲ್ಲಿ ರೇಣುಕಾ ಹಾಗೂ ವಿಜಯಪುರ ಜಿಲ್ಲೆಯ ಸುಮಂಗಲ ಎನ್.ಕೆ. ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮ ವಿಷಯವಾಗಿದ್ದು, ಇತರರಿಗೆ ಮಹಿಳೆಯರಿಗೆ ಮಾದರಿಯಾಗಿದ್ದಾಳೆ.
Conclusion:
ಬೈಟ್.1: ರೇಣುಕಾ, ಬ್ಲ್ಯಾಕ್ ಕಮಾಂಡೋ,
ಬೈಟ್.2: ನಾಗಮ್ಮ, ರೇಣುಕಾ ತಾಯಿ,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.