ETV Bharat / state

ಈಜಲು ತೆರಳಿದ ಇಂಜಿನಿಯರ್ ನಾಪತ್ತೆ... ಯೂನಿಫಾರ್ಮ್​ ಪತ್ತೆ - ರಾಯಚೂರು ನಾರಾಯಣಪುರ ಬಲದಂಡೆ ಇಂಜಿನಿಯರ್ ನಾಪತ್ತೆ ಸುದ್ದಿ

ಜಿಲ್ಲೆಯ ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಸಮೀಪದ ನಾರಾಯಣಪುರ ಬಲದಂಡೆಯಲ್ಲಿ ಈಜಲು ತೆರಳಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮ ನಿವಾಸಿ ದಯಾನಂದ (22) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

raichuru-narayanapur-right-bank-engineer-lost
ಈಜಲು ತೆರಳಿದ ಇಂಜಿನಿಯರ್ ನಿಗೂಢವಾಗಿ ನಾಪತ್ತೆ
author img

By

Published : Dec 17, 2019, 4:07 PM IST

ರಾಯಚೂರು: ಈಜಲು ಕಾಲುವೆಗೆ ತೆರಳಿದ್ದ ಇಂಜಿನಿಯರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಸಮೀಪದ ನಾರಾಯಣಪುರ ಬಲದಂಡೆಯಲ್ಲಿ ಈಜಲು ತೆರಳಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮ ನಿವಾಸಿ ದಯಾನಂದ (22) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಈಜಲು ತೆರಳಿದ ಇಂಜಿನಿಯರ್ ನಿಗೂಢವಾಗಿ ನಾಪತ್ತೆ

ಅಗ್ನಿಶಾಮಕ ದಳದ, ಪೊಲೀಸರು ಹಾಗೂ ಮೀನುಗಾರರು ಶೋಧ ಕಾರ್ಯ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ಎಸ್.ಆರ್. ಸಂಪರ್ಕ ರಸ್ತೆ ಸರ್ವೆ ಕಾರ್ಯದಲ್ಲಿ ತೊಡಗಿದ್ದ ದಯಾನಂದ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳದಲ್ಲಿ ಇಂಜಿನಿಯರ್ ಸಮವಸ್ತ್ರಗಳು ದೊರತಿದ್ದು. ಕಳೆದ ಎರಡು ಮೂರು ದಿನಗಳ ಹಿಂದೆಯೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಈಜಲು ಕಾಲುವೆಗೆ ತೆರಳಿದ್ದ ಇಂಜಿನಿಯರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಸಮೀಪದ ನಾರಾಯಣಪುರ ಬಲದಂಡೆಯಲ್ಲಿ ಈಜಲು ತೆರಳಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮ ನಿವಾಸಿ ದಯಾನಂದ (22) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಈಜಲು ತೆರಳಿದ ಇಂಜಿನಿಯರ್ ನಿಗೂಢವಾಗಿ ನಾಪತ್ತೆ

ಅಗ್ನಿಶಾಮಕ ದಳದ, ಪೊಲೀಸರು ಹಾಗೂ ಮೀನುಗಾರರು ಶೋಧ ಕಾರ್ಯ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ಎಸ್.ಆರ್. ಸಂಪರ್ಕ ರಸ್ತೆ ಸರ್ವೆ ಕಾರ್ಯದಲ್ಲಿ ತೊಡಗಿದ್ದ ದಯಾನಂದ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳದಲ್ಲಿ ಇಂಜಿನಿಯರ್ ಸಮವಸ್ತ್ರಗಳು ದೊರತಿದ್ದು. ಕಳೆದ ಎರಡು ಮೂರು ದಿನಗಳ ಹಿಂದೆಯೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸ್ಲಗ್: ಈಜಲು ತೆರಳಿದ ಇಂಜಿನಿಯರ್ ನಾಪತ್ತೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೮-೧೨-೨೦೧೯
ಸ್ಥಳ: ರಾಯಚೂರು

ಆಂಕರ್: ಕಾಲುವೆಯಲ್ಲಿ ಈಜು ತೆರಳಿದ್ದ ಇಂಜಿನಿಯರ್ ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ತಡವಾಗಿ ಬೆಳಕಿಗೆ ಬಂದಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಹತ್ತಿರುವ ಬರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ೨೨ ವರ್ಷ ದಯನಂದ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಇಂಜಿನಿಯರ್ ನ್ನ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶಂಕರಪುರ ಗ್ರಾಮ ನಿವಾಸಿ ಎಂದು ಗುರುತಿಸಲಾಗಿದೆ. ಇಂಜಿನಿಯರ್ ಪತ್ತೆ ಮಾಡಲು ಅಗ್ನಿಶಾಮಕ ದಳದ, ಪೊಲೀಸರು ಹಾಗೂ ಮೀನುಗಾರರು ಶೋಧ ಕಾರ್ಯ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ಎಸ್.ಆರ್. ಸಂಪರ್ಕ ರಸ್ತೆ ಸರ್ವೆ ಕಾರ್ಯದಲ್ಲಿ ತೊಡಗಿದ್ರು. ಆಗ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ‌. ಘಟನಾ ಸ್ಥಳದಲ್ಲಿ ಇಂಜಿನಿಯರ್ ಸನವಸ್ತ್ರಗಳು ಇವೆ. ಕಳೆದ ಎರಡ್ಮೂರು ದಿನಗಳಿಂದ ಘಟನೆ ನಡೆದಿದ್ದು ಇಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. Conclusion:ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.