ETV Bharat / state

ರಾಯಚೂರು ವಾಹನ ಪಲ್ಟಿ ಪ್ರಕರಣ: ಸೂಕ್ತ ಚಿಕತ್ಸೆ ಸಿಗದೆ ಗಾಯಾಳು ವಿದ್ಯಾರ್ಥಿಗಳ ಪರದಾಟ

author img

By

Published : Dec 25, 2019, 11:42 AM IST

ರಾಯಚೂರಿನಲ್ಲಿ ಆಗಸ್ಟ್​ 26ರಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮರಳುವಾಗ ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

Raichuru Accident Students Struggling for treatment
ಸೂಕ್ತ ಚಿಕತ್ಸೆ ಸಿಗದೆ ಪರದಾಡುತ್ತಿರುವ ಗಾಯಾಳು ವಿದ್ಯಾರ್ಥಿಗಳು

ರಾಯಚೂರು: ಆಗಸ್ಟ್​ 26ರಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮರಳುವಾಗ ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಸಿರವಾರ ತಾಲೂಕಿನ ಕುರಕುಂದಾದಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಲುವಾಗಿ ಸಿರವಾರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಚಾರ್ಯ ಹೇಮಣ್ಣ ಹಾಗೂ ದೈಹಿಕ ಶಿಕ್ಷಕ ಸಂತೋಷ್​ ಎಂಬವರ ಜೊತೆ ತೆರಳಿದ್ದರು. ಕ್ರೀಡಾಕೂಟ ಮುಗಿಸಿ ಮರಳುವಾಗ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಟಂಟಂ ವಾಹನ ಪಲ್ಟಿಯಾಗಿತ್ತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರಲ್ಲಿ ಮಾಚನೂರಿನ ದೀಪಾ, ಲಿಂಗಸುಗೂರು ಅಡವಿ ಅಮರೇಶ್ವರದ ಚಾಮುಂಡಿ ಹಾಗೂ ಗುಡದಿನ್ನಿಯ ಸುನೀತಾ ಎಂಬ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿತ್ತು.

ಘಟನೆಯ ಬಳಿಕ ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿದ್ದ ಪ್ರಾಚಾರ್ಯ ಹೇಮಣ್ಣ ಹಾಗು ದೈಹಿಕ ಶಿಕ್ಷಕ ಸಂತೋಷ್ ಎಂಬವರನ್ನು ಅಮಾನತು ಮಾ ಡಲಾಗಿತ್ತಾದರೂ, ಕೆಲ ದಿನಗಳ ನಂತರ ಹೇಮಣ್ಣ ಅವರನ್ನು ಸಿರವಾರದ ಇಂದಿರಾಗಾಂಧಿ ಶಾಲೆಗೆ ಹಾಗೂ ಸಂತೋಷ್​ ಅವರನ್ನು ಜೇವರ್ಗಿ ತಾಲೂಕಿಗೆ ವರ್ಗಾಯಿಸಲಾಗಿದೆ. ಆದರೆ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮಾತ್ರ ಇನ್ನೂ ಚೇತರಿಸಿಕೊಳ್ಳದೆ, ಇತ್ತ ಸೂಕ್ತ ಚಿಕಿತ್ಸೆಯೂ ಸಿಗದೆ ಪರದಾಡುತ್ತಿದ್ದಾರೆ.

ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಗಾಯಾಳು ವಿದ್ಯಾರ್ಥಿಗಳು

ಘಟನೆಯಲ್ಲಿ ಕೈ ಕಳೆದುಕೊಂಡ ವಿದ್ಯಾರ್ಥಿನಿ ದೀಪಾ ಪ್ರತಿಕ್ರಿಯಿಸಿದ್ದು, ಅಪಘಾತ ನಡೆದ ನಂತರ ರಾಯಚೂರಿನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನಿಸಲಾಗಿತ್ತು. ಅಲ್ಲಿ ಕೈಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿತ್ತು. ಆದ್ರೆ ಆ ಸಮಯದಲ್ಲಿ ರಕ್ತ ಕಡಿಮೆಯಿರುವ ಕಾರಣ ತಕ್ಷಣವೇ ರಕ್ತ ಬೇಕೆಂದು ವೈದ್ಯರು ಹೇಳಿದ್ದರು. ಆದ್ದರಿಂದ ನಮ್ಮ ತಂದೆ ಶಾಲೆಯ ಪ್ರಾಚಾರ್ಯರಿಗೆ ಫೋನ್ ಮಾಡಿದರೆ ಸ್ಪಂದಿಸಲಿಲ್ಲ. ಇದರಿಂದ ತ್ವರಿತ ಚಿಕಿತ್ಸೆ ದೊರೆಯದೆ ಕೈಯಲ್ಲಿ ಕೀವು ತೊಂಬಿಕೊಂಡು ಆಪರೇಶನ್ ಸಾಧ್ಯವಾಗದೆ ರಾಡ್ ಹಾಕಿದ್ದಾರೆ. ನಮ್ಮದಲ್ಲದ ತಪ್ಪಿಗೆ ನಮಗೆ ಈ ಶಿಕ್ಷೆಯಾಗಿದೆ. ಚಿಕಿತ್ಸೆಗೆ ಅಗತ್ಯ ನೆರವು ಸಿಕ್ಕಿಲ್ಲ, ಸಚಿವರು ನೆರವು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾಳೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಮಕ್ಕಳ ಚಿಕಿತ್ಸೆಗೆ ಚಿಕಿತ್ಸಾ ವೆಚ್ಚ ಹಾಗೂ ಅಗತ್ಯ ಪರಿಹಾರ ನೀಡಲು ಡಿಸಿ, ಜಿ.ಪಂ‌. ಸಿಇಓಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ರಾಯಚೂರು: ಆಗಸ್ಟ್​ 26ರಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮರಳುವಾಗ ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಸಿರವಾರ ತಾಲೂಕಿನ ಕುರಕುಂದಾದಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಲುವಾಗಿ ಸಿರವಾರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಚಾರ್ಯ ಹೇಮಣ್ಣ ಹಾಗೂ ದೈಹಿಕ ಶಿಕ್ಷಕ ಸಂತೋಷ್​ ಎಂಬವರ ಜೊತೆ ತೆರಳಿದ್ದರು. ಕ್ರೀಡಾಕೂಟ ಮುಗಿಸಿ ಮರಳುವಾಗ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಟಂಟಂ ವಾಹನ ಪಲ್ಟಿಯಾಗಿತ್ತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರಲ್ಲಿ ಮಾಚನೂರಿನ ದೀಪಾ, ಲಿಂಗಸುಗೂರು ಅಡವಿ ಅಮರೇಶ್ವರದ ಚಾಮುಂಡಿ ಹಾಗೂ ಗುಡದಿನ್ನಿಯ ಸುನೀತಾ ಎಂಬ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿತ್ತು.

ಘಟನೆಯ ಬಳಿಕ ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿದ್ದ ಪ್ರಾಚಾರ್ಯ ಹೇಮಣ್ಣ ಹಾಗು ದೈಹಿಕ ಶಿಕ್ಷಕ ಸಂತೋಷ್ ಎಂಬವರನ್ನು ಅಮಾನತು ಮಾ ಡಲಾಗಿತ್ತಾದರೂ, ಕೆಲ ದಿನಗಳ ನಂತರ ಹೇಮಣ್ಣ ಅವರನ್ನು ಸಿರವಾರದ ಇಂದಿರಾಗಾಂಧಿ ಶಾಲೆಗೆ ಹಾಗೂ ಸಂತೋಷ್​ ಅವರನ್ನು ಜೇವರ್ಗಿ ತಾಲೂಕಿಗೆ ವರ್ಗಾಯಿಸಲಾಗಿದೆ. ಆದರೆ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮಾತ್ರ ಇನ್ನೂ ಚೇತರಿಸಿಕೊಳ್ಳದೆ, ಇತ್ತ ಸೂಕ್ತ ಚಿಕಿತ್ಸೆಯೂ ಸಿಗದೆ ಪರದಾಡುತ್ತಿದ್ದಾರೆ.

ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಗಾಯಾಳು ವಿದ್ಯಾರ್ಥಿಗಳು

ಘಟನೆಯಲ್ಲಿ ಕೈ ಕಳೆದುಕೊಂಡ ವಿದ್ಯಾರ್ಥಿನಿ ದೀಪಾ ಪ್ರತಿಕ್ರಿಯಿಸಿದ್ದು, ಅಪಘಾತ ನಡೆದ ನಂತರ ರಾಯಚೂರಿನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನಿಸಲಾಗಿತ್ತು. ಅಲ್ಲಿ ಕೈಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿತ್ತು. ಆದ್ರೆ ಆ ಸಮಯದಲ್ಲಿ ರಕ್ತ ಕಡಿಮೆಯಿರುವ ಕಾರಣ ತಕ್ಷಣವೇ ರಕ್ತ ಬೇಕೆಂದು ವೈದ್ಯರು ಹೇಳಿದ್ದರು. ಆದ್ದರಿಂದ ನಮ್ಮ ತಂದೆ ಶಾಲೆಯ ಪ್ರಾಚಾರ್ಯರಿಗೆ ಫೋನ್ ಮಾಡಿದರೆ ಸ್ಪಂದಿಸಲಿಲ್ಲ. ಇದರಿಂದ ತ್ವರಿತ ಚಿಕಿತ್ಸೆ ದೊರೆಯದೆ ಕೈಯಲ್ಲಿ ಕೀವು ತೊಂಬಿಕೊಂಡು ಆಪರೇಶನ್ ಸಾಧ್ಯವಾಗದೆ ರಾಡ್ ಹಾಕಿದ್ದಾರೆ. ನಮ್ಮದಲ್ಲದ ತಪ್ಪಿಗೆ ನಮಗೆ ಈ ಶಿಕ್ಷೆಯಾಗಿದೆ. ಚಿಕಿತ್ಸೆಗೆ ಅಗತ್ಯ ನೆರವು ಸಿಕ್ಕಿಲ್ಲ, ಸಚಿವರು ನೆರವು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾಳೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಮಕ್ಕಳ ಚಿಕಿತ್ಸೆಗೆ ಚಿಕಿತ್ಸಾ ವೆಚ್ಚ ಹಾಗೂ ಅಗತ್ಯ ಪರಿಹಾರ ನೀಡಲು ಡಿಸಿ, ಜಿ.ಪಂ‌. ಸಿಇಓಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

Intro:

ತನ್ನದಲ್ಲದ ತಪ್ಪಿಗೆ ಕೈ ಕಳೆದುಕೊಂಡ ಬಾಲಕಿ, ಬಾಳಿ‌ ಬೆಳಗಬೇಕಾದ ಜೀವ ಸಹಾಯಕ್ಕಾಗಿ ಪರತಪಿಸ್ತಿದೆ.

ರಾಯಚೂರು ಡಿ.24.
ಅವಳು ಆಡಿ ಬೆಳೆದು ಕುಟುಂಬಕ್ಕೆ ಹಾಗೂ ಶಾಲೆಯ ಕೀರ್ತಿ ಪತಾಕೆ ಹಾರಿಸುವ ಕನಸು ಕಂಡಿದ್ದಳು ಆದ್ರೆ
ಯಾರು ಮಾಡಿದ ತಪ್ಪಿಗೆ ಕೈ ಕಳೆದುಕೊಂಡು ಈಗ ಪರಿತಪಿಸುತ್ತಿದ್ದಾಳೆ.
ಹೌದು,ಹೀಗೆ ಕೈಗೆ ಬ್ಯಾಂಡೆಜ್ ಕಟ್ಟಿಕೊಂಡು ಕೂತಿರುವ ಈಕೆಯ ಹೆಸರು ದೀಪಾ ಊರು ಮಾಚನೂರು ಈಕೆ ಸಿರವಾರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ.
ಶಾಲಾ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಬೆಳಗಬಹುದಾಗಿದ್ದ ಈ ಬಾಲಕಿ ಇದೀಗ ತನ್ನದಲ್ಲದ ತಪ್ಪಿನಿಂದಾಗಿ ತನ್ನದೇ ಭವಿಷ್ಯವನ್ನು ದೊಡ್ಡ ಕ್ರೀಡಾಪಟುವಾಗಬೆಕು ಎಂಬ ಕನಸನ್ನು ಕಳೆದುಕೊಳ್ಳಬೇಕಾಗಿರುವುದು ದುರಂತ.
Body:ಕಳೆದ ಆ.26 ರಂದು ಸಿರವಾರ ತಾಲೂಕಿನ ಕುರಕುಂದಾದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಲುವಾಗಿ ಪ್ರಾಚಾರ್ಯ ಹೇಮಣ್ಣ ಹಾಗೂ ದೈಹಿಕ ಶಿಕ್ಷಕ ಸಂತೋಷ್​ ಎಂಬುವವರು ಶಾಲೆಯ ಎಲ್ಲಾ ವಿದ್ಯಾರ್ಥಿನಿಯರನ್ನು ಟಾಂ ಟಾಂ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಈಕೆಯೂ ಜತೆಗೆ ತೆರಳಿದ್ದಳು.

ಆದರೆ, ಕ್ರೀಡಾಕೂಟದಲ್ಲಿ ಜಯಸಿದ ಖುಷಿಯಲ್ಲಿ ಊರಿಗೆ ಮರಳುವಾಗ ಟಾಂಟಾಂ ಪಲ್ಟಿಯಾಗಿದೆ. ಪರಿಣಾಮ ಅಪಘಾತದಲ್ಲಿ ಗಾಯಗೊಂಡು ಕೈ ಕಳೆದುಕೊಂಡಿದ್ದಾಳೆ.
ಈ ಅಪಘಾತದಲ್ಲಿ 35ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ. ಅದರಲ್ಲಿ 3 ಮಕ್ಕಳ ಸ್ಥಿತಿಯಂತೂ ಚಿಂತಾಜನಕವಾಗಿತ್ತು.
ದೀಪಾ ಮಾತ್ರವಲ್ಲದೆ ಲಿಂಗಸುಗೂರಿನ ಅಡವಿ ಅಮರೇಶ್ವರ ದ ಚಾಮುಂಡಿ ಎಂಬ ಬಾಲಕಿ ರಾಜ್ಯಮಟ್ಟದ ವಾಲಿಬಾಲ್ ಪಟುವಾಗಿದ್ದಳು. ಆದರೆ, ಅಪಘಾತದಲ್ಲಿ ಅವಳು ತನ್ನ ಕೈಯನ್ನೇ ಕಳೆದುಕೊಳ್ಳುವಂತಾಗಿದೆ.
ಮಾಚನೂರಿನ ದೀಪಾ ಎಂಬ ಬಾಲಕಿಗೂ ತೀವ್ರ ಗಾಯಗಳಾ ಗಿದ್ದು ಆಕೆ ಎದ್ದು ನಡೆಯಲೂ ಆಗದಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಇರುವಂತಾಗಿದೆ. ಇನ್ನೊಬ್ಬ ಬಾಲಕಿ ಗುಡದಿನ್ನಿಯ ಸುನೀತಾ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ.
ಅಪಘಾತದ ನಂತರ ಈ ಮೂರೂ ವಿದ್ಯಾರ್ಥಿಗಳ ಶಾಲೆ, ಕ್ರೀಡೆಯ ಕನಸು ನುಚ್ಚುನೂರಾಗಿದೆ. ಇವರನ್ನು ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿದ್ದ ಪ್ರಾಚಾರ್ಯ ಹೇಮಣ್ಣ ಹಾಗು ದೈಹಿಕ ಶಿಕ್ಷಕ ಸಂತೋಷ್ ಅವರನ್ನು ಆ ಸಂದರ್ಭದಲ್ಲಿ ಅಮಾನತ್ತು ಮಾಡಲಾಗಿತ್ತಾದರೂ, ಕೆಲವು ದಿನಗಳ ನಂತರ ಹೇಮಣ್ಣ ಅವರನ್ನು ಸಿರವಾರ ಸಿರವಾರದ ಇಂದಿರಾಗಾಂಧಿ ಶಾಲೆಗೆ ಹಾಗೂ ಸಂತೋಷ್ ಅವರನ್ನು ಜೇವರ್ಗಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.

ಆದರೆ ಅಪಘಾತದಲ್ಲಿ  ಗಾಯಗೊಂಡು ಮನೆಯಲ್ಲಿರುವ ಬಾಲಕಿಯರು ಮಾತ್ರ ತಮ್ಮ ಭವಿಷ್ಯವನ್ನು ಕಳೆದುಕೊಂಡು ಪರದಾಡುವಂತಹ ಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಈ ಕುರಿತು ಗಮನವಹಿಸಬೇಕಿದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಸೂಕ್ತ ಪರಿಹಾರ ಮತ್ತು ಮರಳಿ ಶಾಲೆಗೆ ಹೋಗಲು ಸಹಕಾರ ನೀಡಬೇಕಿದೆ. ಈ ಮೂಲಕ ಕಳೆದುಹೋದ ಅವರ ಭವಿಷ್ಯವನ್ನು ಮತ್ತೆ ಕಟ್ಟಿಕೊಡಬೇಕಿದೆ.

ದೀಪಾ ಹೇಳುವ ಪ್ರಕಾರ ಅಪಘಾತ ನಡೆದ ನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ರವಾನಿಸಲಾಗಿತ್ತು,ಅಲ್ಲಿ ಕೈಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿತ್ತು ಆದ್ರೆ ಆ ಸಮಯದಲ್ಲಿ ರಕ್ತ ಕಡಿಮೆ ಯಿರುವ ಕಾರಣ ತಕ್ಷಣವೇ ರಕ್ತ ಬೇಕೆಂದು ವೈದ್ಯರು ಹೇಳಿದಾಗ ನಮ್ಮ ತಂದೆ ಶಾಲೆಯ ಪ್ರಾಚಾರ್ಯರಿಗೆ ಪೋನ್ ಮಾಡಿದರೆ ಸ್ಪಂದಿಸಲಿಲ್ಲ ನಂತರ ಇದ್ರಿಂದ ತ್ವರಿತ ಚಿಕಿತ್ಸೆ ದೊರೆಯದೆ ಕೈಯಲ್ಲಿ ಕಿವು ತೊಂಬಿಕೊಂಡು ಆಪರೇಶನ್ ಸಾಧ್ಯವಾಗದೇ ರಾಡ್ ಹಾಕಿದ್ದಾರೆ ನಮ್ಮದಲ್ಲದ ತಪ್ಪಿಗೆ ನಮಗೆ ಈ ಶಿಕ್ಷೆಯಾಗಿದ್ದಲ್ಲದೇ ಚಿಕಿತ್ಸೆಗೆ ಅಗತ್ಯ ನೆರವು ಸಿಕ್ಕಿಲ್ಲ ಇದ್ರಿಂದ ಸಚಿವರು ನೆರವು ನೀಡಬಹುದು ಎಂಬ ನಿಟ್ಟಿನಲ್ಲಿ ಬಂದಿದ್ದೇವೆ ಎಂದಳು.
ಇನ್ನು ಈ ಕುರಿತು ಜಿಲ್ಲಾ ಪಂಚಾಯತ ಗೆ ಬಂದ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಮಾಧ್ಯಮಗಳೊಂದಿಗೆ ಮಾತನಾಡಿ, ಮಕ್ಕಳ ಚಿಕಿತ್ಸೆಗೆ ಚಿಕಿತ್ಸಾ ವೆಚ್ಚ ಹಾಗೂ ಅಗತ್ಯ ಪರಿಹಾರ ನೀಡಲು ಡಿಸಿ,ಜಿ.ಪಂ‌ಸಿಇಓ ಅವರಿಗೆ ಸೂಚನೆ ನೀಡಿದ್ದೆನೆ ಎಂದು ಪ್ರತಿಕ್ರಿಯಿಸಿದರು.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.