ETV Bharat / state

ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಉ್ರಕೇನ್​​​​ನಿಂದ ಮರಳಿದ ವಿದ್ಯಾರ್ಥಿಯಿಂದ ಗುಣಗಾನ

author img

By

Published : Mar 8, 2022, 11:01 AM IST

ಪ್ರಧಾನಿ ನರೇಂದ್ರ ಮೋದಿ ಸಮಯೋಚಿತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಸಲಹೆ, ಸೂಚನೆ ನೀಡದಿದ್ದರೆ ತಾಯ್ನಾಡಿಗೆ ಬರುವ ಕನಸು ಕೈಗೂಡುತ್ತಿರಲಿಲ್ಲ. ಶೈಕ್ಷಣಿಕ ಭವಿಷ್ಯದ ಚಿಂತನೆಗೆ ಸರ್ಕಾರವೇ ದಾರಿ ತೋರಿಸಬೇಕು ಎಂದು ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್​​ ಕುಮಾರ್​​ ಹೂಗಾರ ಮನವಿ ಮಾಡಿದ್ದಾರೆ.

raichur Student Returned from Ukraine
ತಾಯ್ನಾಡಿಗೆ ಮರಳಿದ ಲಿಂಗಸುಗೂರು ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್​​ ಕುಮಾರ್​​

ಲಿಂಗಸುಗೂರು(ರಾಯಚೂರು): ತಾಯ್ನಾಡಿಗೆ ಕರೆ ತರುವಲ್ಲಿ ಭಾರತ ಸರ್ಕಾರದ ನಡೆ, ರಾಷ್ಟ್ರ ಧ್ವಜದ ಬಳಕೆಯ ಸಮಯ ಪ್ರಜ್ಞೆ ಸುರಕ್ಷತೆಗೆ ಸಾಕ್ಷಿಯಾದವು ಎಂದು ಖಾರ್ಕಿವ್ ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್​​ ಕುಮಾರ್​​ ಹೂಗಾರ ಹೇಳಿದರು.

ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್​​ ಕುಮಾರ್​​ ಹೂಗಾರ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್​ಗೆ ಸೇರ್ಪಡೆ ಆಗಿದ್ದೆ. ರಷ್ಯಾ ಉಕ್ರೇನ್ ಯುದ್ಧ ಸಂಭವ ಕುರಿತು ವಿದೇಶಾಂಗ ಇಲಾಖೆ ಮಾಹಿತಿ ನೀಡಿತ್ತು. ಆದರೆ 3ನೇ ವರ್ಷದ ಎಲಿಜಿಬಿಲಿಟಿ ಪರೀಕ್ಷೆ ಹಾಗೂ ವಿವಿ ತರಗತಿ ನಡೆಸುತ್ತೇವೆ ಎಂಬ ಗೊಂದಲ ಯುದ್ಧದಲ್ಲಿ ಸಿಲಕುವಂತೆ ಮಾಡಿತು.

ವಿವಿಯಲ್ಲಿ ನೈಜೇರಿಯಾ, ಅರಬ್, ಮಂಗೋಲಿಯಾ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿ ಸಮೂಹ ಇತ್ತು. ಏಕಾಏಕಿ ಯುದ್ಧ ಆರಂಭಗೊಂಡು ಭಯಭೀತರನ್ನಾಗಿಸಿತ್ತು. ಒಂದು ವಾರ ಬಂಕರ್​​ನಲ್ಲಿಯೇ ಸಮಸ್ಯೆಗಳ ಮಧ್ಯೆ ಬದುಕಿದೆವು. ಬಳಿಕ ವಿದೇಶಾಂಗ ಇಲಾಖೆ ಸೂಚನೆ ಮೇರೆಗೆ ತ್ರಿವರ್ಣ ಧ್ವಜ ಹಿಡಿದು ಖಾರ್ಕಿವ್ ರೈಲ್ವೆ ನಿಲ್ದಾಣ ತಲುಪಿ, ಅಲ್ಲಿಂದ ಹರಸಾಹಸ ಪಟ್ಟು ಲಿವಿವ್ ತಲುಪಿದೆವು.

ಅಲ್ಲಿಂದ ಪೋಲ್ಯಾಂಡ್ ಬಾರ್ಡರ್​​ ತಲಪುವ ಸಂದರ್ಭದಲ್ಲಿ ಪರಸ್ಪರ ಗುಂಡಿನ ಚಕಮಕಿ ಮಧ್ಯೆ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹೆಜ್ಜೆಗೂ ಜೀವದ ಹಂಗು ತೊರೆದು ಪ್ರಯಾಣಿಸಿದ ಕ್ಷಣ ಭಯಾನಕವಾಗಿತ್ತು ಎಂದು ವಿವರಿಸಿದ್ದಾರೆ.

ಪೋಲ್ಯಾಂಡ್​​ ತಲಪುತ್ತಿದ್ದಂತೆ ವಿದೇಶಾಂಗ ಇಲಾಖೆ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಸರ್ಕಾರದ ಖರ್ಚಿನಲ್ಲಿಯೇ ನಮ್ಮನ್ನು ಸ್ವಗ್ರಾಮಕ್ಕೆ ತಲುಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಮಯೋಚಿತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಸಲಹೆ, ಸೂಚನೆ ನೀಡದಿದ್ದರೆ ತಾಯ್ನಾಡಿಗೆ ಬರುವ ಕನಸು ಕೈಗೂಡುತ್ತಿರಲಿಲ್ಲ. ಶೈಕ್ಷಣಿಕ ಭವಿಷ್ಯದ ಚಿಂತನೆಗೆ ಸರ್ಕಾರವೇ ದಾರಿ ತೋರುಸಬೇಕು ಎಂದು ಪ್ರಜ್ವಲ್​​ ಕುಮಾರ್​​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ

ಲಿಂಗಸುಗೂರು(ರಾಯಚೂರು): ತಾಯ್ನಾಡಿಗೆ ಕರೆ ತರುವಲ್ಲಿ ಭಾರತ ಸರ್ಕಾರದ ನಡೆ, ರಾಷ್ಟ್ರ ಧ್ವಜದ ಬಳಕೆಯ ಸಮಯ ಪ್ರಜ್ಞೆ ಸುರಕ್ಷತೆಗೆ ಸಾಕ್ಷಿಯಾದವು ಎಂದು ಖಾರ್ಕಿವ್ ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್​​ ಕುಮಾರ್​​ ಹೂಗಾರ ಹೇಳಿದರು.

ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್​​ ಕುಮಾರ್​​ ಹೂಗಾರ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್​ಗೆ ಸೇರ್ಪಡೆ ಆಗಿದ್ದೆ. ರಷ್ಯಾ ಉಕ್ರೇನ್ ಯುದ್ಧ ಸಂಭವ ಕುರಿತು ವಿದೇಶಾಂಗ ಇಲಾಖೆ ಮಾಹಿತಿ ನೀಡಿತ್ತು. ಆದರೆ 3ನೇ ವರ್ಷದ ಎಲಿಜಿಬಿಲಿಟಿ ಪರೀಕ್ಷೆ ಹಾಗೂ ವಿವಿ ತರಗತಿ ನಡೆಸುತ್ತೇವೆ ಎಂಬ ಗೊಂದಲ ಯುದ್ಧದಲ್ಲಿ ಸಿಲಕುವಂತೆ ಮಾಡಿತು.

ವಿವಿಯಲ್ಲಿ ನೈಜೇರಿಯಾ, ಅರಬ್, ಮಂಗೋಲಿಯಾ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿ ಸಮೂಹ ಇತ್ತು. ಏಕಾಏಕಿ ಯುದ್ಧ ಆರಂಭಗೊಂಡು ಭಯಭೀತರನ್ನಾಗಿಸಿತ್ತು. ಒಂದು ವಾರ ಬಂಕರ್​​ನಲ್ಲಿಯೇ ಸಮಸ್ಯೆಗಳ ಮಧ್ಯೆ ಬದುಕಿದೆವು. ಬಳಿಕ ವಿದೇಶಾಂಗ ಇಲಾಖೆ ಸೂಚನೆ ಮೇರೆಗೆ ತ್ರಿವರ್ಣ ಧ್ವಜ ಹಿಡಿದು ಖಾರ್ಕಿವ್ ರೈಲ್ವೆ ನಿಲ್ದಾಣ ತಲುಪಿ, ಅಲ್ಲಿಂದ ಹರಸಾಹಸ ಪಟ್ಟು ಲಿವಿವ್ ತಲುಪಿದೆವು.

ಅಲ್ಲಿಂದ ಪೋಲ್ಯಾಂಡ್ ಬಾರ್ಡರ್​​ ತಲಪುವ ಸಂದರ್ಭದಲ್ಲಿ ಪರಸ್ಪರ ಗುಂಡಿನ ಚಕಮಕಿ ಮಧ್ಯೆ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹೆಜ್ಜೆಗೂ ಜೀವದ ಹಂಗು ತೊರೆದು ಪ್ರಯಾಣಿಸಿದ ಕ್ಷಣ ಭಯಾನಕವಾಗಿತ್ತು ಎಂದು ವಿವರಿಸಿದ್ದಾರೆ.

ಪೋಲ್ಯಾಂಡ್​​ ತಲಪುತ್ತಿದ್ದಂತೆ ವಿದೇಶಾಂಗ ಇಲಾಖೆ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಸರ್ಕಾರದ ಖರ್ಚಿನಲ್ಲಿಯೇ ನಮ್ಮನ್ನು ಸ್ವಗ್ರಾಮಕ್ಕೆ ತಲುಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಮಯೋಚಿತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಸಲಹೆ, ಸೂಚನೆ ನೀಡದಿದ್ದರೆ ತಾಯ್ನಾಡಿಗೆ ಬರುವ ಕನಸು ಕೈಗೂಡುತ್ತಿರಲಿಲ್ಲ. ಶೈಕ್ಷಣಿಕ ಭವಿಷ್ಯದ ಚಿಂತನೆಗೆ ಸರ್ಕಾರವೇ ದಾರಿ ತೋರುಸಬೇಕು ಎಂದು ಪ್ರಜ್ವಲ್​​ ಕುಮಾರ್​​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.