ETV Bharat / state

ವಿಚಿತ್ರ ಕಾಯಿಲೆ; ಜಾನುವಾರುಗಳ ಮಾರಣಹೋಮ - undefined

ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿ ವಿಚಿತ್ರ ಖಾಯಿಲೆಯಿಂದಾಗಿ ಜಾನುವಾರುಗಳು ಸಾವನಪ್ಪುತ್ತಿದ್ದು, ಖಾಯಿಲೆಗೆ ನಿಖರವಾದ ಕಾರಣ ತಿಳಿಯದೇ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ವಿಚಿತ್ರ ಕಾಯಿಲೆಯಿಂದಾಗಿ ಜಾನುವಾರುಗಳ ಮಾರಣಹೋಮ
author img

By

Published : Jun 7, 2019, 7:36 PM IST

Updated : Jun 7, 2019, 8:40 PM IST

ರಾಯಚೂರು: ಕಳೆದೊಂದು ವಾರದಿಂದ ಕಾಣಿಸಿಕೊಂಡಿರುವ ವಿಚಿತ್ರ ಕಾಯಿಲೆಗೆ ಜಾನುವಾರುಗಳು ಮೃತಪಟ್ಟಿರುವ ಘಟನೆ ರಾಯಚೂರಿನ ತುಂಗಭದ್ರಾ ಗ್ರಾಮದಲ್ಲಿ ನಡೆದಿದೆ.

ಎತ್ತು ಮತ್ತು ಎಮ್ಮೆಗಳು ವಿಲವಿಲನೆ ಒದ್ದಾಡಿಕೊಂಡು ಮೂಕವೇದನೆಯಿಂದ ನರಳಿ ಸಾವನ್ನಪ್ಪುತ್ತಿವೆ. ಒಂದು ವಾರದಿಂದ ಈಚೆಗೆ ಹೇಮರೆಡ್ಡಿ, ಲಕ್ಷ್ಮಪ್ಪ ಎಂಬುವರಿಗೆ ಸೇರಿದ ತಲಾ 2 ಜಾನುವಾರುಗಳು, ಗುಂಡಪ್ಪ, ನಾರಾಯಣ, ಹನುಮಂತಪ್ಪ ಎಂಬುವವರ ತಲಾ 1 ಜಾನುವಾರು ಮೃತಪಟ್ಟಿದ್ದು, ಒಟ್ಟು 7 ಎಮ್ಮೆ, 2 ಆಕಳು ಸೇರಿದಂತೆ 9 ಜಾನುವಾರುಗಳು ಈಗಾಗಲೇ ಅಸುನೀಗಿವೆ.

ವಿಚಿತ್ರ ಕಾಯಿಲೆಯಿಂದಾಗಿ ಜಾನುವಾರುಗಳ ಮಾರಣಹೋಮ

ಜಾನುವಾರುಗಳು ಸಾವನ್ನಪ್ಪುತ್ತಿರುವ ಸುದ್ದಿ ತಿಳಿದು ಗ್ರಾಮಕ್ಕೆ ಪಶು ವೈದ್ಯರು ಭೇಟಿ ನೀಡಿ, ಇತರೆ ಪಶುಗಳಿಗೆ ಚಿಕಿತ್ಸೆ ನೀಡಿ ಲಸಿಕೆ ಹಾಕಿದ್ಲಾದಾರೆ. ಯಾವ ಕಾಯಿಲೆಯಿಂದ ಬಳಲುತ್ತಿವೆ ಎನ್ನುವ ಕುರಿತು ಮಾಹಿತಿ ಕೇಳಲು ಗ್ರಾಮಸ್ಥರು ಇಲಾಖೆ ಕಚೇರಿಗೆ ತೆರಳಿದಾಗ ಜಿಲ್ಲಾ ಉಪನಿರ್ದೇಶಕರು, ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿದ್ದು, ಸಂಜೆ ವೇಳೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡು ಜನರಿಗೆ ತಿಳಿಸುತ್ತೇವೆ ಎಂದಿದ್ದಾರೆ.

ಸದ್ಯ ಈ ಘಟನೆ ತುಂಗಭದ್ರಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಇತರೆ ಪಶುಗಳಿಗೆ ಈ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಯಚೂರು: ಕಳೆದೊಂದು ವಾರದಿಂದ ಕಾಣಿಸಿಕೊಂಡಿರುವ ವಿಚಿತ್ರ ಕಾಯಿಲೆಗೆ ಜಾನುವಾರುಗಳು ಮೃತಪಟ್ಟಿರುವ ಘಟನೆ ರಾಯಚೂರಿನ ತುಂಗಭದ್ರಾ ಗ್ರಾಮದಲ್ಲಿ ನಡೆದಿದೆ.

ಎತ್ತು ಮತ್ತು ಎಮ್ಮೆಗಳು ವಿಲವಿಲನೆ ಒದ್ದಾಡಿಕೊಂಡು ಮೂಕವೇದನೆಯಿಂದ ನರಳಿ ಸಾವನ್ನಪ್ಪುತ್ತಿವೆ. ಒಂದು ವಾರದಿಂದ ಈಚೆಗೆ ಹೇಮರೆಡ್ಡಿ, ಲಕ್ಷ್ಮಪ್ಪ ಎಂಬುವರಿಗೆ ಸೇರಿದ ತಲಾ 2 ಜಾನುವಾರುಗಳು, ಗುಂಡಪ್ಪ, ನಾರಾಯಣ, ಹನುಮಂತಪ್ಪ ಎಂಬುವವರ ತಲಾ 1 ಜಾನುವಾರು ಮೃತಪಟ್ಟಿದ್ದು, ಒಟ್ಟು 7 ಎಮ್ಮೆ, 2 ಆಕಳು ಸೇರಿದಂತೆ 9 ಜಾನುವಾರುಗಳು ಈಗಾಗಲೇ ಅಸುನೀಗಿವೆ.

ವಿಚಿತ್ರ ಕಾಯಿಲೆಯಿಂದಾಗಿ ಜಾನುವಾರುಗಳ ಮಾರಣಹೋಮ

ಜಾನುವಾರುಗಳು ಸಾವನ್ನಪ್ಪುತ್ತಿರುವ ಸುದ್ದಿ ತಿಳಿದು ಗ್ರಾಮಕ್ಕೆ ಪಶು ವೈದ್ಯರು ಭೇಟಿ ನೀಡಿ, ಇತರೆ ಪಶುಗಳಿಗೆ ಚಿಕಿತ್ಸೆ ನೀಡಿ ಲಸಿಕೆ ಹಾಕಿದ್ಲಾದಾರೆ. ಯಾವ ಕಾಯಿಲೆಯಿಂದ ಬಳಲುತ್ತಿವೆ ಎನ್ನುವ ಕುರಿತು ಮಾಹಿತಿ ಕೇಳಲು ಗ್ರಾಮಸ್ಥರು ಇಲಾಖೆ ಕಚೇರಿಗೆ ತೆರಳಿದಾಗ ಜಿಲ್ಲಾ ಉಪನಿರ್ದೇಶಕರು, ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್​ನಲ್ಲಿದ್ದು, ಸಂಜೆ ವೇಳೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡು ಜನರಿಗೆ ತಿಳಿಸುತ್ತೇವೆ ಎಂದಿದ್ದಾರೆ.

ಸದ್ಯ ಈ ಘಟನೆ ತುಂಗಭದ್ರಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಇತರೆ ಪಶುಗಳಿಗೆ ಈ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Intro:ಸ್ಲಗ್: ವಿಚಿತ್ರ ಕಾಯಿಲೆ ಜಾನುವಾರು ಸಾವು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 07-೦6-2019
ಸ್ಥಳ: ರಾಯಚೂರು
ಆಂಕರ್: ಕಳೆದ ವಾರದಿಂದ ವಿಚಿತ್ರ ಕಾಯಿಲೆಯಿಂದ ಜಾನುವಾರುಗಳು ಮೃತಪಟ್ಟುತ್ತಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ತಾಲೂಕಿನ ತುಂಗಭದ್ರಾ ಗ್ರಾಮದಲ್ಲಿ ಜರುಗಿದೆ.Body:ಎತ್ತು ಮತ್ತು ಎಮ್ಮೆಗಳು ವಿಲವಿಲನೆ ಹೊದ್ದಡಿಕೊಂಡು ಮೂಕವೇದನೆಯಿಂದ ನರಳಿ ಸ್ವಾನ್ನಪ್ಪುತ್ತಿವೆ. ಕಳೆದ ವಾರದಿಂದ ಹೇಮರೆಡ್ಡಿ 2, ಗುಂಡಪ್ಪ-1, ನಾರಾಯಣ-1, ಲಕ್ಷ್ಮಪ್ಪ-2, ಹನುಮಂತಪ್ಪ ಎನ್ನುವ ಸೇರಿದ 1 ಜಾನುವಾರುಗಳು ಮೃತಪಟ್ಟಿದ್ದು, 7 ಎಮ್ಮೆ, 2 ಆಕಳು ಸೇರಿದಂತೆ 9 ಜಾನುವಾರುಗಳು ಹಸು ನೀಗಿವೆ. ಗ್ರಾಮದಲ್ಲಿ ಕಳೆದ ವಾರದಿಂದ ಜಾನುವಾರುಗಳು ಆರಂಭದಲ್ಲಿ ವಿಲವಿಲನೆ ಹೊದ್ದಡಿಕೊಂಡ ಸ್ವಾನ್ನಪಿತ್ತುವೆ. ಘಟನಾ ಸುದ್ದಿ ತಿಳಿದು ಗ್ರಾಮಕ್ಕೆ ಪಶು ಇಲಾಖೆ ವೈದ್ಯರು ಭೇಟಿ ನೀಡಿ, ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಲಸಿಕೆ ಹಾಕಲಾಗಿದೆ. ಜಾನುವಾರುಗಳು ಯಾವ ಕಾಯಿಲೆಯಿಂದ ಬಳಲುತ್ತಿವೆ ಎನ್ನುವ ಕುರಿತಾಗಿ ವಿವರ ಮಾಹಿತಿ ಕೇಳು ಇಲಾಖೆ ಕಚೇರಿಗೆ ತೆರಳಿದಾಗ ಜಿಲ್ಲಾ ಉಪನಿರ್ದೇಶಕರು, ಸದ್ಯ ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಸ್ಫೆರ್ನಸ್ ಇದ್ದು, ಸಂಜೆ ವೇಳೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾಹಿತಿ ಒದಗಿಸುವುದಾಗಿ ಹೇಳಿದ್ದಾರೆ ಜಿಲ್ಲಾ ಪಶು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. Conclusion: ಸದ್ಯ ಈ ಘಟನೆ ಜಾನುವಾರುಗಳಿಗೆ ಆತಂಕ ಮೂಡಿಸಿದ್ದು, ಮುಂದೆ ಯಾವುದೇ ಜಾನುವಾರುಗಳಿಗೆ ತಗಲುದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Last Updated : Jun 7, 2019, 8:40 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.