ETV Bharat / state

ತೀವ್ರಗೊಂಡ ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ: ಪರಿಸ್ಥಿತಿ ನಿಭಾಯಿಸಲು ಲಘು ಲಾಠಿ ಪ್ರಹಾರ

ಎಂಜಿನಿಯರಿಂಗ್​ ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ತೀವ್ರಗೊಂಡಿದೆ. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

author img

By

Published : Apr 25, 2019, 7:50 PM IST

Updated : Apr 25, 2019, 11:03 PM IST

ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪರಿಸ್ಥಿತಿ ನಿಭಾಹಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು

ರಾಯಚೂರು: ದೇಶವನ್ನೇ ತಲ್ಲಣಗೊಳಿಸಿದ ರಾಯಚೂರು ಎಂಜಿಯರಿಂಗ್​ ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಚಪ್ಪಲಿ, ನೀರಿನ ಬಾಟಲಿ​, ಪ್ಯಾಕೆಟ್​, ಕಲ್ಲು ತೂರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪರಿಸ್ಥಿತಿಯನ್ನ ನಿಭಾಹಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

lathi charge on fighter in raichur
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಯಾಂಡಲ್​ವುಡ್​ ನಟ-ನಟಿಯರು

ವಿಶ್ವಕರ್ಮ ಸಮಾಜ, ಪ್ರಗತಿಪರ ಸಂಘಟನೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸ್ಯಾಂಡಲ್​ವುಡ್​ ನಟ-ನಟಿಯರು ಜಸ್ಟಿಸ್​ ಫಾರ್​ ಎಂಜಿಯರಿಂಗ್ ಸ್ಟುಡೆಂಟ್​ ಎಂಬ ಅಭಿಯಾನ ಆರಂಭಿಸಿದ್ದು ಇಂದು ನಗರದ ಮಾಣಿಕ್ಯ ಪ್ರಭು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಗೆ ಮಾರ್ಗ ಮಧ್ಯ ಮಾರುತಿ ಬಡಿಗೇರ್ ಎಂಬಾತ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಸ್ವಸ್ಥಗೊಂಡನು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡರು. ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳುತ್ತಿದ್ದಾಗ ಇವರನ್ನು ತಡದ ಪೊಲೀಸರ ಕ್ರಮ ಖಂಡಿಸಿ ನೀರು ಮತ್ತು ಬಾಟೇಲ್​​ಗಳು, ಚಪ್ಪಲಿ ತೂರಾಟ ನಡೆಸಿದರು. ಇನ್ನು ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಸಹ ನಡೆಸಿದರು. ಈ ವೇಳೆ ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

lathi charge on fighter in raichur
ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಆಗಮಿಸಿದ ವೇಳೆ ಸಹ ಚಪ್ಪಲಿ​ ಮತ್ತು ನೀರಿನ ಬಾಟಲ್ ಎಸೆದರು. ಈ ವೇಳೆ ಚಪ್ಪಲಿ ಎಸೆದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದರು. ಪರಿಸ್ಥಿತಿ ಮನಗೊಂಡ ಜಿಲ್ಲಾಧಿಕಾರಿ ಶರತ್ ಬಿ. ಘಟನೆಯನ್ನ ಜಿಲ್ಲಾಡಳಿತ ಸಹ ತೀವ್ರವಾಗಿ ಖಂಡಿಸುತ್ತಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ವಿದ್ಯಾರ್ಥಿಗಳ ಮನವಿ ಸ್ವೀಕರಿಸುತ್ತಾ ಹೋರಾಟ ತೀವ್ರತೆಯನ್ನು ಸ್ವಲ್ಪ ಶಮನಗೊಳಿಸಲು ಪ್ರಯತ್ನಪಟ್ಟರು.

lathi charge on fighter in raichur
ಲಘು ಲಾಠಿ ಪ್ರಹಾರದಲ್ಲಿ ಗಾಯಗೊಂಡ ವಿದ್ಯಾರ್ಥಿ

ಇದೇ ವೇಳೆ ಮಾತನಾಡಿದ ಮೃತ ವಿದ್ಯಾರ್ಥಿನಿಯ ಪೊಷಕರು, ನಮ್ಮ ಮಗಳಿಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಅವಳ ಸಾವಿಗೆ ಕಾರಣವಾದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡುವ ಮೂಲಕ ಹೋರಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು.

ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪರಿಸ್ಥಿತಿ ನಿಭಾಹಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು

ರಾಯಚೂರು: ದೇಶವನ್ನೇ ತಲ್ಲಣಗೊಳಿಸಿದ ರಾಯಚೂರು ಎಂಜಿಯರಿಂಗ್​ ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಚಪ್ಪಲಿ, ನೀರಿನ ಬಾಟಲಿ​, ಪ್ಯಾಕೆಟ್​, ಕಲ್ಲು ತೂರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪರಿಸ್ಥಿತಿಯನ್ನ ನಿಭಾಹಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

lathi charge on fighter in raichur
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಯಾಂಡಲ್​ವುಡ್​ ನಟ-ನಟಿಯರು

ವಿಶ್ವಕರ್ಮ ಸಮಾಜ, ಪ್ರಗತಿಪರ ಸಂಘಟನೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸ್ಯಾಂಡಲ್​ವುಡ್​ ನಟ-ನಟಿಯರು ಜಸ್ಟಿಸ್​ ಫಾರ್​ ಎಂಜಿಯರಿಂಗ್ ಸ್ಟುಡೆಂಟ್​ ಎಂಬ ಅಭಿಯಾನ ಆರಂಭಿಸಿದ್ದು ಇಂದು ನಗರದ ಮಾಣಿಕ್ಯ ಪ್ರಭು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಗೆ ಮಾರ್ಗ ಮಧ್ಯ ಮಾರುತಿ ಬಡಿಗೇರ್ ಎಂಬಾತ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಸ್ವಸ್ಥಗೊಂಡನು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡರು. ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳುತ್ತಿದ್ದಾಗ ಇವರನ್ನು ತಡದ ಪೊಲೀಸರ ಕ್ರಮ ಖಂಡಿಸಿ ನೀರು ಮತ್ತು ಬಾಟೇಲ್​​ಗಳು, ಚಪ್ಪಲಿ ತೂರಾಟ ನಡೆಸಿದರು. ಇನ್ನು ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಸಹ ನಡೆಸಿದರು. ಈ ವೇಳೆ ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

lathi charge on fighter in raichur
ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಆಗಮಿಸಿದ ವೇಳೆ ಸಹ ಚಪ್ಪಲಿ​ ಮತ್ತು ನೀರಿನ ಬಾಟಲ್ ಎಸೆದರು. ಈ ವೇಳೆ ಚಪ್ಪಲಿ ಎಸೆದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದರು. ಪರಿಸ್ಥಿತಿ ಮನಗೊಂಡ ಜಿಲ್ಲಾಧಿಕಾರಿ ಶರತ್ ಬಿ. ಘಟನೆಯನ್ನ ಜಿಲ್ಲಾಡಳಿತ ಸಹ ತೀವ್ರವಾಗಿ ಖಂಡಿಸುತ್ತಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ವಿದ್ಯಾರ್ಥಿಗಳ ಮನವಿ ಸ್ವೀಕರಿಸುತ್ತಾ ಹೋರಾಟ ತೀವ್ರತೆಯನ್ನು ಸ್ವಲ್ಪ ಶಮನಗೊಳಿಸಲು ಪ್ರಯತ್ನಪಟ್ಟರು.

lathi charge on fighter in raichur
ಲಘು ಲಾಠಿ ಪ್ರಹಾರದಲ್ಲಿ ಗಾಯಗೊಂಡ ವಿದ್ಯಾರ್ಥಿ

ಇದೇ ವೇಳೆ ಮಾತನಾಡಿದ ಮೃತ ವಿದ್ಯಾರ್ಥಿನಿಯ ಪೊಷಕರು, ನಮ್ಮ ಮಗಳಿಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಅವಳ ಸಾವಿಗೆ ಕಾರಣವಾದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡುವ ಮೂಲಕ ಹೋರಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು.

ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪರಿಸ್ಥಿತಿ ನಿಭಾಹಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು
Intro:ದೇಶವನ್ನ ತಲ್ಲಣಗೊಳಿಸಿ ರಾಯಚೂರು ಎಂಜಿಯರಿಂಗ್ ನಿಗೂಡ ಸಾವಿನ ಪ್ರಕರಣ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಚಪ್ಪಲಿ, ನೀರಿನ ಬಾಟೇಲ್ ಮತ್ತು ಪ್ಯಾಕೇಟ್, ಕಲ್ಲು ತೂರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪರಿಸ್ಥಿತಿಯನ್ನ ನಿಭಾಹಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ಈ ಕುರಿತು ಡಿಟೇಲ್ ಸ್ಟೋರಿ ಇಲ್ಲಿದೆ.Body:ವಾಯ್ಸ್ ಓವರ್.1: ಹೀಗೆ ಒಂದು ಕಡೆ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು, ಮತ್ತೊಂದು ಆರೋಪಿಗಳಿಗೆ ತಕ್ಷಣ ಬಂಧಿಸಿ ಶಿಕ್ಷೆ ವಿಧಿಸುವಂತೆ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಚೇರಿಯ ಗೇಟ್ ನುಗ್ಗುತ್ತಿರುವ ಹೋರಾಟಗಾರರು ಮತ್ತೊಂದು ಕಡೆ ಪರಿಸ್ಥಿತಿಯನ್ನ ನಿಭಾಯಿಸಲು ಲಘಲಾಠಿ ಪ್ರಹಾರ ನಡೆಸುತ್ತಿರುವ ಪೊಲೀಸ್ ರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದು. ರಾಯಚೂರಿನಲ್ಲಿ. ಹೌದು, ನಗರದ ಮಾಣಿಕ್ಯ ಪ್ರಭು ದೇವಾಲಯದಿಂದ ವಿಶ್ವಕರ್ಮ ಸಮಾಜ, ಪ್ರಗತಿಪರ ಸಂಘಟನೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಟ ಭುವನ್, ನಟಿ ಹರ್ಷಿಕಾ ಪೂಣಚ್ಚ ಜಸ್ಟಿಸ್ ಫಾರ್ ಮಧು ಎಂದು ನಿಕ್ಷಪಾತ ತನಿಖೆ ನಡೆಸಿ ಆರೋಪಿಗಳಿ ಕಠಿಣ ಶಿಕ್ಷೆ ವಿಧಿಸಿದೆ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ್ರು.
ವಾಯ್ಸ್ ಓವರ್.2: ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮಾರ್ಗ ಮಧ್ಯ ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ್ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಸ್ವಸ್ಥಗೊಂಡರು. ಬಳಿಕ ಸಾವಿರಾರು ಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡರು. ಆಗ ಜಿಲ್ಲಾಧಿಕಾರಿ ತೆರಳು ಮುಂದಾಗ ತಡ ಪೊಲೀಸ್ ನೀರು ಮತ್ತು ಬಾಟೇಲ್ ಗಳು, ಚಪ್ಪಲಿ ತೂರಾಟ ನಡೆಸಿದ್ರೆ, ಕೆಲ ಕೀಡಿಗೇರಿಗಳು ಕಲ್ಲು ತೂರಾಟ ನಡೆಸಿದ್ರು. ಇದರಿಂದ ವಾತಾವರಣ ಉದ್ವೀಗ್ನಗೊಂಡು ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸ್ ರು ಲಘುಲಾಠಿ ಪ್ರಹಾರ ನಡೆಸಿದ್ರು.
ವಾಯ್ಸ್ ಓವರ್.3: ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಆಗಮಿಸಿದ ವೇಳೆ ಸಹ ಚಪ್ಪಲಿ, ನೀರಿನ ಪಾಕೇಟ್ ಮತ್ತು ನೀರಿನ ಬಾಟಲ್ ಎಸೆದ್ರು. ಈ ವೇಳೆ ಚಪ್ಪಲಿ ಎಸೆದ ಓರ್ವನ್ನ ಪೊಲೀಸ್ ರು ವಶಕ್ಕೆ ಪಡೆದ್ರು. ಆಗ ಪರಿಸ್ಥಿತಿಗೊಂಡು, ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಘಟನೆಯನ್ನ ಜಿಲ್ಲಾಡಳಿತ ಸಹ ತೀವ್ರವಾಗಿ ಖಂಡಿಸುತ್ತಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ರು. ಬಳಿಕ ವಿದ್ಯಾರ್ಥಿನಿ ಪೊಷಕರು, ವಿಶ್ವಕರ್ಮ ಸಮಾಜದ ಮುಖಂಡರು, ಮತ್ತು ಪ್ರಗತಿಪರ ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಮನವಿ ಸಲ್ಲಿಸಿ ನಿಕ್ಷಪಾತವಾಗಿ ತನಿಖೆ ನಡೆಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ರು.
Conclusion:ವಾಯ್ಸ್ ಓವರ್.4: ಇದೇ ವೇಳೆ ಮಾತನಾಡಿದ ವಿದ್ಯಾರ್ಥಿನಿ ಪೊಷಕರು ನಮ್ಮ ಮಗಳಿಗೆ ಆದ ಅನ್ಯಾಯ ಬೇರೆ ಯಾರಿಗೆ ಆಗಬಾರದು, ನಮ್ಮ ಮಗಳಿಗೆ ಸಾವಿಗೆ ಕಾರಣವಾದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡುವ ಮೂಲಕ ಹೋರಾಟದಲ್ಲಿ ಭಾಗಿವಹಿಸಲು ಜಮಾವಣೆಗೊಂಡ ಸಾವಿರಾರು ಸಂಖ್ಯೆ ಜನರಿಗೆ ಧನ್ಯವಾದಗಳು ಹೇಳಿದ್ರು. ಇನ್ನು ಬೃಹತ್ ಮೆರವಣಿಗೆ ಹಿನ್ನಲೆಯಲ್ಲಿ ನಗರದಲ್ಲಿ ಕೆಲ ಗಂಟೆಗಳ ಸಂಚಾರದಲ್ಲಿ ಅಸ್ತವ್ಯಸ್ಥಗೊಂಡು, ವಾಹನ ಸವಾರರು ಪಡೆದಿದ್ರು. ಒಟ್ನಿಲ್ಲಿ, ಬಿಸಿಲೂರಿನ ವಿದ್ಯಾರ್ಥಿನಿ ನಿಗೂಢ ಸಾವಿನ ಒಡಲು ಕಿಚ್ಚು ಹೊಡೆದು ಹೋರಾಟ ತೀವ್ರಗೊಂಡಿದ್ದು, ಅದಷ್ಟು ಬೇಗನೆ ಪ್ರಕರಣವನ್ನ ತನಿಖೆ ನಡೆಸಿ, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮೃತ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕೆ ಎನ್ನುವುದು ಎಲ್ಲಾರ ಒತ್ತಾಯಸೆಯಾಗಿದೆ.
ಬೈಟ್.1: ಶರತ್ ಬಿ. ಜಿಲ್ಲಾಧಿಕಾರಿ
ಬೈಟ್.2: ರೇಣುಕಾ ದೇವಿ, ಮೃತ ವಿದ್ಯಾರ್ಥಿನಿ ತಾಯಿ
ಬೈಟ್.3: ನಾಗರಾಜ ಪತ್ತಾರ್, ವಿದ್ಯಾರ್ಥಿನಿ ತಂದೆ
ಬೈಟ್.4: ಮಾರುತಿ ಬಡಿಗೇರ್, ವಿಶ್ವಕರ್ಮ ಸಮಾಜದ ಮುಖಂಡ

Last Updated : Apr 25, 2019, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.