ETV Bharat / state

ರಾಯರ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ... ಚಿನ್ನದ ರಥದ ಹರಕೆ ತೀರಿಸಿದ ಮಾಜಿ ಸಚಿವ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಮಠಕ್ಕೆ ಚಿನ್ನದ ರಥ ನೀಡಿ ಹರಕೆ ತೀರಿಸಿದರು.

author img

By

Published : May 27, 2019, 9:00 PM IST

ಜನಾರ್ದನ ರೆಡ್ಡಿ

ರಾಯಚೂರು: ಇಂದು ಸಂಜೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಟುಂಬಸ್ಥರು ರಾಯರ ಸನ್ನಿಧಿಗೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು.

ಜನಾರ್ದನ ರೆಡ್ಡಿ, ಪತ್ನಿ, ಮಗಳು ಹಾಗೂ ಅಳಿಯ ಮಂತ್ರಾಲಯಕ್ಕೆ ಬಂದಿದ್ದು, ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದು, ಬಳಿಕ ರಾಯರ ಸನ್ನಿಧಿಗೆ ಭೇಟಿ ನೀಡಿ ಮಠಕ್ಕೆ ಚಿನ್ನದ ರಥ ಸಮರ್ಪಿಸಿದರು.

ಕುಟುಂಬ ಸಮೇತರಾಗಿ ರಾಯರ ಸನ್ನಿಧಿಗೆ ಗಾಲಿ ಜನಾರ್ದನ ರೆಡ್ಡಿ ಭೇಟಿ

ರಾಯರ ಸನ್ನಿಧಿಗೆ ಚಿನ್ನದ ರಥೋತ್ಸವ ಮಾಡಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಇಂದು ಚಿನ್ನದ ರಥೋತ್ಸವ ನೇರವೇರಿಸುವ ಮೂಲಕ ರೆಡ್ಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.

ಭಾನುವಾರ ಗಾಣಗಾಪುರಕ್ಕೆ ತೆರಳಿದ್ದ ಗಾಲಿ ಜನಾರ್ದನ ರೆಡ್ಡಿ ಇಂದು ಕುಟುಂಬದ ಸದಸ್ಯರೊಡನೆ ಮಂತ್ರಾಲಯಕ್ಕೆ ಆಗಮಿಸಿ ಗುರುರಾಯರ ದರ್ಶನ ಪಡೆದರು.

ರಾಯಚೂರು: ಇಂದು ಸಂಜೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಟುಂಬಸ್ಥರು ರಾಯರ ಸನ್ನಿಧಿಗೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು.

ಜನಾರ್ದನ ರೆಡ್ಡಿ, ಪತ್ನಿ, ಮಗಳು ಹಾಗೂ ಅಳಿಯ ಮಂತ್ರಾಲಯಕ್ಕೆ ಬಂದಿದ್ದು, ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದು, ಬಳಿಕ ರಾಯರ ಸನ್ನಿಧಿಗೆ ಭೇಟಿ ನೀಡಿ ಮಠಕ್ಕೆ ಚಿನ್ನದ ರಥ ಸಮರ್ಪಿಸಿದರು.

ಕುಟುಂಬ ಸಮೇತರಾಗಿ ರಾಯರ ಸನ್ನಿಧಿಗೆ ಗಾಲಿ ಜನಾರ್ದನ ರೆಡ್ಡಿ ಭೇಟಿ

ರಾಯರ ಸನ್ನಿಧಿಗೆ ಚಿನ್ನದ ರಥೋತ್ಸವ ಮಾಡಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಇಂದು ಚಿನ್ನದ ರಥೋತ್ಸವ ನೇರವೇರಿಸುವ ಮೂಲಕ ರೆಡ್ಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.

ಭಾನುವಾರ ಗಾಣಗಾಪುರಕ್ಕೆ ತೆರಳಿದ್ದ ಗಾಲಿ ಜನಾರ್ದನ ರೆಡ್ಡಿ ಇಂದು ಕುಟುಂಬದ ಸದಸ್ಯರೊಡನೆ ಮಂತ್ರಾಲಯಕ್ಕೆ ಆಗಮಿಸಿ ಗುರುರಾಯರ ದರ್ಶನ ಪಡೆದರು.

Intro:ಸ್ಲಗ್: ಗಾಲಿ ಜನಾರ್ದನ ರೆಡ್ಡಿ ಭೇಟಿ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 27-೦5-2019
ಸ್ಥಳ: ರಾಯಚೂರು
ಆಂಕರ್: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. Body:ಇಂದು ಸಂಜೆ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಜನಾರ್ದನ ರೆಡ್ಡಿ ಪತ್ನಿ, ಮಗಳು ಮತ್ತು ಅಳಿಯ ಸೇರಿದಂತೆ ಕುಟುಂಬ ಸದಸ್ಯರೊಡನೆ ರಾಯರ ಸನ್ನಿದಿ ತೆರಳಿ, ಆರಂಭದಲ್ಲಿ ಮಂಚಾಲಮ್ಮ ದೇವಿ ದರ್ಶನ ಪಡೆದು ಬಳಿಕ ಶ್ರೀರಾಘವೇಂದ್ರ ಸ್ವಾಮಿಯ ದರ್ಶನ ಪಡೆದುಕೊಂಡು ವಿಶೇಷ ಪೂಜೆ ನೇರವೇರಿಸಿ, ಚಿನ್ನದ ರಥೋತ್ಸವ ಸೇವೆ ಸಲ್ಲಿಸಿದ್ರು. ರಾಯರಿಗೆ ಚಿನ್ನದ ರಥೋತ್ಸವ ಮಾಡಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಈ ಹಿನ್ನಲೆಯಿಂದಾಗಿ ಇಂದು ರಾಯರ ಸನ್ನಿದಿಗೆ ಭೇಟಿ ನೀಡಿ ಚಿನ್ನದ ರಥೋತ್ಸವ ನೇರವೇರಿಸುವ ಮೂಲಕ ಹರಕೆ ತಿರಿಸಿದ್ದಾರೆ. Conclusion:ನಿನ್ನೆ ಗಾಣಗಾಪುರಕ್ಕೆ ತೆರಳಿದ ಗಾಲಿ ಜನಾರ್ದನ ರೆಡ್ಡಿ ಇಂದು ಕುಟುಂಬದ ಸದಸ್ಯರೊಡನೆ ಆಗಮಿಸಿ ಗುರುರಾಯರ ದರ್ಶನ ಪಡೆದುಕೊಂಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.