ETV Bharat / state

ಲಾಕ್​ಡೌನ್​ ನಡುವೆಯೂ ಇಂದಿರಾ ಕ್ಯಾಂಟೀನ್​ ಓಪನ್, ಜನ ಬಾರದೇ ಆಹಾರ ವೇಸ್ಟ್​​

author img

By

Published : Mar 28, 2020, 12:59 PM IST

ಕೊರೊನಾ ಭೀತಿಯಿಂದಾಗಿ ರಾಜ್ಯಾದ್ಯಂತ ಲಾಕ್​ಡೌನ್​ ಹೇರಲಾಗಿದೆ. ಈ ನಡುವೆ ರಾಯಚೂರಿನಲ್ಲಿ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್​ ತೆರೆದಿದ್ದು, ಜನರು ಮಾತ್ರ ಕ್ಯಾಂಟೀನ್​ಗೆ ಬರುತ್ತಿಲ್ಲ.

Indira canteen
ಇಂದಿರಾ ಕ್ಯಾಂಟೀನ್​

ರಾಯಚೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಆಗಿರುವ ರಾಯಚೂರಿನಲ್ಲಿ ನಿನ್ನೆ ಸಂಜೆಯಿಂದ ಇಂದಿರಾ ಕ್ಯಾಂಟೀನ್​ ಆರಂಭವಾಗಿದೆ.

ನಗರದ ಕೇಂದ್ರೀಯ ಬಸ್ ನಿಲ್ದಾಣ, ಗಂಜ್‌ ಆವರಣ, ಸ್ಟೇಷನ್ ರಸ್ತೆಯ ಬಳಿಯ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಂದು ಬೆಳಗಿನ ಉಪಹಾರವಾಗಿ ಚಿತ್ರಾನ್ನ ಹಾಗೂ ಚಟ್ನಿ ನೀಡಲಾಗುತ್ತಿದೆ. ಆದ್ರೆ ಕ್ಯಾಂಟೀನ್​ ಜನರಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂದಿದ್ದು, ಬೆರಳೆಣಿಕೆಯಷ್ಟು ಜನ ಮಾತ್ರ ಬೆಳಗ್ಗೆ ಬಂದಿದ್ದಾರೆ.

ಇನ್ನು ಕ್ಯಾಂಟೀನ್​ನಲ್ಲಿ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಸಹ ನೀಡಲಾಗುತ್ತದೆ. ಆದ್ರೆ ಲಾಕ್ ಡೌನ್​ನಿಂದಾಗಿ ಮನೆಯಿಂದ ಜನರು ಹೊರಗಡೆ ಬಾರದಂತೆ ಸೂಚನೆ ನೀಡಿದ್ದು, ಓಡಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಹೀಗಾಗಿ ಮರು ಆರಂಭವಾಗಿರುವ ಇಂದಿರಾ ಕ್ಯಾಂಟೀನ್​ಗೆ ಯಾರೂ ಬರುತ್ತಿಲ್ಲ.

ರಾಯಚೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ಆಗಿರುವ ರಾಯಚೂರಿನಲ್ಲಿ ನಿನ್ನೆ ಸಂಜೆಯಿಂದ ಇಂದಿರಾ ಕ್ಯಾಂಟೀನ್​ ಆರಂಭವಾಗಿದೆ.

ನಗರದ ಕೇಂದ್ರೀಯ ಬಸ್ ನಿಲ್ದಾಣ, ಗಂಜ್‌ ಆವರಣ, ಸ್ಟೇಷನ್ ರಸ್ತೆಯ ಬಳಿಯ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಂದು ಬೆಳಗಿನ ಉಪಹಾರವಾಗಿ ಚಿತ್ರಾನ್ನ ಹಾಗೂ ಚಟ್ನಿ ನೀಡಲಾಗುತ್ತಿದೆ. ಆದ್ರೆ ಕ್ಯಾಂಟೀನ್​ ಜನರಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂದಿದ್ದು, ಬೆರಳೆಣಿಕೆಯಷ್ಟು ಜನ ಮಾತ್ರ ಬೆಳಗ್ಗೆ ಬಂದಿದ್ದಾರೆ.

ಇನ್ನು ಕ್ಯಾಂಟೀನ್​ನಲ್ಲಿ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಸಹ ನೀಡಲಾಗುತ್ತದೆ. ಆದ್ರೆ ಲಾಕ್ ಡೌನ್​ನಿಂದಾಗಿ ಮನೆಯಿಂದ ಜನರು ಹೊರಗಡೆ ಬಾರದಂತೆ ಸೂಚನೆ ನೀಡಿದ್ದು, ಓಡಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಹೀಗಾಗಿ ಮರು ಆರಂಭವಾಗಿರುವ ಇಂದಿರಾ ಕ್ಯಾಂಟೀನ್​ಗೆ ಯಾರೂ ಬರುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.