ETV Bharat / state

ದೊಡ್ಡಗೌಡರ ಪುತ್ಥಳಿ ನಿರ್ಮಾಣ... ನಿತ್ಯ ಪೂಜೆ ಮಾಡುವ ಬಿಸಿಲನಾಡಿನ ಅಭಿಮಾನಿ - ರಾಯಚೂರು ಗಾಣಧಾಳ ದೇವೇಗೌಡ ವಿಗ್ರಹ ನಿರ್ಮಾಣ ಸುದ್ದಿ

ರಾಯಚೂರಿನ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಎಂಬುವವರು ತಮ್ಮ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್​. ಡಿ. ದೇವೆಗೌಡರ ಮೂರ್ತಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾನೆ. ಅಲ್ಲದೆ ಪುತ್ಥಳಿ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಎಂದು ಬಿರುದುಗಳನ್ನು ಬರೆಸಿದ್ದಾನೆ.

hd-devegowda-statue-in-raichuru-ganadhala
ದೇವೇಗೌಡ ವಿಗ್ರಹ ನಿರ್ಮಾಣ
author img

By

Published : Jan 11, 2020, 10:00 PM IST

ರಾಯಚೂರು : ಚಲನಚಿತ್ರ ನಟರ, ರಾಜಕೀಯ ನಾಯಕರ ಮೇಲಿನ ಅಭಿಮಾನಕ್ಕೆ ಸಂಘ ರಚನೆ, ಸಾಮಾಜಿಕ ಕಾರ್ಯ, ಆದರ್ಶ ಪಾಲನೆ ಮಾಡುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಪುತ್ಥಳಿ ಸ್ಥಾಪಿಸಿ ನೆಚ್ಚಿನ ನಾಯಕನಿಗೆ ಭಾರತ ರತ್ನ ಬಿರುದನ್ನು ನೀಡಿದ್ದಾನೆ.

ದೇವೇಗೌಡರ ವಿಗ್ರಹ ನಿರ್ಮಿಸಿ ನಿತ್ಯ ಪೂಜೆ ಮಾಡುವ ರಾಯಚೂರಿನ ಅಭಿಮಾನಿ

ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಎಂಬುವರು ತಮ್ಮ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೆಗೌಡರ ಮೂರ್ತಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾನೆ. ಅಲ್ಲದೆ ಪುತ್ಥಳಿ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಎಂದು ಬಿರುದುಗಳನ್ನು ಬರೆಸಿದ್ದಾನೆ.

ಕೃಷ್ಣ ನದಿ ನೀರನ್ನು ನಾರಾಯಣಪುರ ಬಲದಂಡೆ ನಾಲೆ (ಎನ್ ಆರ್ ಬಿಸಿ) ಯೋಜನೆಯ ಮೂಲಕ ತಾಲೂಕಿಗೆ ನೀಡಿದ್ದಕ್ಕಾಗಿ ಹಾಗೂ ಅವರ ಮೇಲಿನ ಅಭಿಮಾನದಿಂದ ಈ ಪುತ್ಥಳಿಯನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದೇನೆ. 2017ರಲ್ಲಿ ಮೂರ್ತಿ ಸ್ಥಾಪನೆ ಆರಂಭಿಸಲಾಗಿತ್ತು. ಆದರೆ ಕೆಲ ಅಡತಡೆಗಳಿಂದ ಆಗಿರಲಿಲ್ಲ, ಸದ್ಯ ನಿರ್ಮಾಣ ಮಾಡಿದ್ದೇನೆ. ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸಿ ಮೂರ್ತಿಯನ್ನು ಪೂಜಿಸುವುದಾಗಿ ಪ್ರಭುರೆಡ್ಡಿ ತಿಳಿಸಿದ್ದಾರೆ.

ರಾಯಚೂರು : ಚಲನಚಿತ್ರ ನಟರ, ರಾಜಕೀಯ ನಾಯಕರ ಮೇಲಿನ ಅಭಿಮಾನಕ್ಕೆ ಸಂಘ ರಚನೆ, ಸಾಮಾಜಿಕ ಕಾರ್ಯ, ಆದರ್ಶ ಪಾಲನೆ ಮಾಡುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಪುತ್ಥಳಿ ಸ್ಥಾಪಿಸಿ ನೆಚ್ಚಿನ ನಾಯಕನಿಗೆ ಭಾರತ ರತ್ನ ಬಿರುದನ್ನು ನೀಡಿದ್ದಾನೆ.

ದೇವೇಗೌಡರ ವಿಗ್ರಹ ನಿರ್ಮಿಸಿ ನಿತ್ಯ ಪೂಜೆ ಮಾಡುವ ರಾಯಚೂರಿನ ಅಭಿಮಾನಿ

ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಎಂಬುವರು ತಮ್ಮ ಜಮೀನಿನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೆಗೌಡರ ಮೂರ್ತಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾನೆ. ಅಲ್ಲದೆ ಪುತ್ಥಳಿ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಎಂದು ಬಿರುದುಗಳನ್ನು ಬರೆಸಿದ್ದಾನೆ.

ಕೃಷ್ಣ ನದಿ ನೀರನ್ನು ನಾರಾಯಣಪುರ ಬಲದಂಡೆ ನಾಲೆ (ಎನ್ ಆರ್ ಬಿಸಿ) ಯೋಜನೆಯ ಮೂಲಕ ತಾಲೂಕಿಗೆ ನೀಡಿದ್ದಕ್ಕಾಗಿ ಹಾಗೂ ಅವರ ಮೇಲಿನ ಅಭಿಮಾನದಿಂದ ಈ ಪುತ್ಥಳಿಯನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದೇನೆ. 2017ರಲ್ಲಿ ಮೂರ್ತಿ ಸ್ಥಾಪನೆ ಆರಂಭಿಸಲಾಗಿತ್ತು. ಆದರೆ ಕೆಲ ಅಡತಡೆಗಳಿಂದ ಆಗಿರಲಿಲ್ಲ, ಸದ್ಯ ನಿರ್ಮಾಣ ಮಾಡಿದ್ದೇನೆ. ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸಿ ಮೂರ್ತಿಯನ್ನು ಪೂಜಿಸುವುದಾಗಿ ಪ್ರಭುರೆಡ್ಡಿ ತಿಳಿಸಿದ್ದಾರೆ.

Intro:ಸ್ಲಗ್: ಭಾರತ ರತ್ನ ಹೆಚ್.ಡಿ. ದೇವಗೌಡ! (ಎಕ್ಸ್ ಕ್ಲೂಜಿವ್)
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 11-01-2020
ಸ್ಥಳ: ರಾಯಚೂರು
ಆಂಕರ್: ರಾಜಕೀಯ ಗಣ್ಯರ ಮೇಲಿನ ಅಭಿಮಾನಕ್ಕೆ, ಅಭಿಮಾನಿಗಳು ಅವರ ಜನ್ಮದಿನ ಆಚರಣೆ ಮಾಡುವುದು, ಅವರ ಹೆಸರಿನಲ್ಲಿ ಸಂಘ ರಚನೆ ಸಾಮಾಜಿಕ ಕಾರ್ಯಗಳು ಮಾಡುವುದು ಅವರ ಆದರ್ಶಗಳನ್ನ ಪಾಲನೆ ಮಾಡುವವರು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಇಲ್ಲಿಯೊಬ್ಬ ರಾಜಕೀಯ ಗಣ್ಯರ ಅಭಿಮಾನಿ ಅವರ ಬದುಕಿರುವಾಗಲೇ ಪುತ್ಥಳಿ ಸ್ಥಾಪಿಸಿ ಭಾರತ ರತ್ನ ಬಿರುದನ್ನ ಸ್ವಯಂ ಆಗಿ ನೀಡಿದ್ದಾನೆ.Body:
ಹೌದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದಲ್ಲಿ ರೈತ ಪ್ರಭುರೆಡ್ಡಿ ಕೊಳ್ಳುರು ಎನ್ನುವ ರೈತ ಹೆಚ್.ಡಿ.ದೇವಗೌಡರ ಮೂರ್ತಿಯನ್ನ ಸ್ಥಾಪಿಸಿದ್ದಾನೆ. ಗಾಣಧಾಳ-ಸೋಮನಮರಡಿ ಗ್ರಾಮದ ರಸ್ತೆಯಲ್ಲಿ ಬರುವ ಪ್ರಭುರೆಡ್ಡಿ ಜಮೀನಲ್ಲಿ ಹೆಚ್.ಡಿ.ದೇವಗೌಡರ ಮೂರ್ತಿಯನ್ನ ಸ್ಥಾಪಿಸಿ ಬಳಿಕ ಅದಕ್ಕೆ “ಭಾರತ ರತ್ನ”, “ಕನ್ನಡದ ಕಣ್ಮಣಿ”, “ದೇವದುರ್ಗ ತಾಲೂಕಿನ ದೊರೆ” ಮಾಜಿ ಪ್ರಧಾನಿಮಂತ್ರಿ ಹೆಚ್.ಡಿ.ದೇವಗೌಡರು ಎಂದು ಹೆಸರನ್ನ ಬರೆಸಿದ್ದಾನೆ.
ಇನ್ನೂ ಕೃಷ್ಣ ನದಿಯ ನೀರಿನನ್ನು ನಾರಾಯಣಪುರ ಬಲದಂಡೆ ನಾಲೆ(ಎನ್ ಆರ್ ಬಿಸಿ) ಯೋಜನೆಯ ಮೂಲಕ ದೇವದುರ್ಗಕ್ಕೆ ತಾಲೂಕಿನ ಜಮೀನುಗಳನ್ನ ನೀರಾವರಿಗೊಳಿಸುವುದಕ್ಕಾಗಿ ಹಾಗೂ ಅವರ ಮೇಲಿನ ಅಭಿಮಾನದಿಂದ ಈ ಪುತ್ಥಳಿಯನ್ನ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಖರ್ಚು ಮಾಡಿರುವುದಾಗಿ ಹೇಳುತ್ತಿದ್ದಾನೆ. 2017ರಲ್ಲಿ ಈ ಮೂರ್ತಿಯನ್ನ ಸ್ಥಾಪಿಸಲು ಆರಂಭಿಸಲಾಗಿತ್ತು. ಆಗಾ ಹಲವಾರು ಅಡೆತಡೆಗಳು ಎದರಾದವು. ಇದರ ಮಧ್ಯ 2020 ಜ.1ರಂದು ಮೂರ್ತಿಯನ್ನ ತನ್ನ ಜಮೀನಲ್ಲಿ ಆನಾವರಣಗೊಳಿಸುವ ಮೂಲಕ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ನೀರಿನ ಸ್ವಚ್ಚಗೊಳಿಸುವ ಮೂಲಕ ದೇವಗೌಡರ ಮೂರ್ತಿಯನ್ನ ಪೂಜಿಸುವ ಗೌವರವಿಸುವುದಾಗಿ ಹೇಳುತ್ತಿದ್ದಾನೆ. ದೇವಗೌಡರಿಗೆ ಭಾರತ ರತ್ನ ನೀಡಿಲ್ಲ, ಎನ್ನುವ ಪ್ರಶ್ನೆಗೆ ನಾನು ಅವರ ಅಭಿಮಾನಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ, ನನ್ನ ಅಭಿಮಾನದಿಂದ ಮೂರ್ತಿಯನ್ನ ಸ್ಥಾಪಿಸಿರುವುದಾಗಿ ಹೇಳುತ್ತಿದ್ದಾನೆ.
Conclusion:ಅಲ್ಲದೇ ದೇವಗೌಡರ ಮೂರ್ತಿ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.