ರಾಯಚೂರು: ಜಿಲ್ಲೆಯಲ್ಲಿ ಪುನಃ ಪ್ರವಾಹ ಎದುರಾಗುವ ಭೀತಿ ಎದುರಾಗಿದೆ. ಆದರೆ, ಅದನ್ನು ಸಮರ್ಥವಾಗಿ ನಿಭಾಯಿಸಲು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೇ ಇಲ್ಲ. ರಾಯಚೂರು ಡಿಸಿ ಹುದ್ದೆ ಖಾಲಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಹೆಚ್ಚುವರಿ ಹೊಣೆಗಾರಿಕೆ ನೀಡಿ, ಸರಕಾರ ರಾಯಚೂರು ಜಿಲ್ಲಾಧಿಕಾರಿ ನೇಮಕ ಮಾಡುವುದಕ್ಕೆ ನಿರ್ಲಕ್ಷ್ಯವಹಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆ ಮೂರು ತಾಲೂಕುಗಳಿಗೆ ಕೋಟ್ಯಂತರ ಹಾನಿ ಸಂಭವಿಸಿತ್ತು. ಪ್ರವಾಹ ಅಪ್ಪಳಿಸಿದಾಗ ಕೇಂದ್ರ ಸೇನೆ ಪಡೆ ಹಾಗೂ ಎನ್ಡಿಆರ್ಎಫ್ ತಂಡ ಸಹಕಾರದೊಂದಿಗೆ ಹಿಂದಿನ ಜಿಲ್ಲಾಧಿಕಾರಿ, ಇರುವ ಸಂಪನ್ಮೂಲದೊಂದಿಗೆ ಪ್ರವಾಹ ನಿಭಾಯಿಸಿದ್ರು. ಇದೀಗ ಮತ್ತೆ ಕೃಷ್ಣಾ ನದಿಯಿಂದ ಪ್ರವಾಹ ಶುರುವಾಗಿದ್ದು, ಸರಕಾರ ಜಿಲ್ಲೆಗೆ ಜಿಲ್ಲಾ ದಂಡಾಧಿಕಾರಿಗಳನ್ನ ನಿಯೋಜನೆ ಮಾಡದೇ ಜಿಲ್ಲೆಯನ್ನ ಕಡೆಗಣಿಸಿದೆ ಅನ್ನೋ ಮಾತು ಕೇಳಿ ಬರ್ತಿದೆ.
ಇನ್ನೂ ರಾಜ್ಯ ಸರಕಾರ ಕಳೆದ ಆ.29ರಂದು ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ಬಿ. ಅವರನ್ನ ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಅದಾದ ಬಳಿಕ ಜಿಲ್ಲಾಧಿಕಾರಿ ಹೊಣೆಗಾರಿಕೆಯನ್ನ ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಕಾಂತ್ ರೆಡ್ಡಿಯವರಿಗೆ ವಹಿಸಲಾಗಿದೆ. ಜಿ.ಪಂ. ಸಿಇಒ ಎರಡೂ ಅಧಿಕಾರವನ್ನ ನಿಭಾಯಿಸುತ್ತಿದ್ದಾರೆ. ಆದ್ರೆ ಕೃಷ್ಣ ನದಿಗೆ ನೆರೆಗೆ ತತ್ತರಿಸಿದವರು ಚೇತರಿಸಿಕೊಳ್ಳವಾಗಲೇ ಮತ್ತೊಮ್ಮೆ ನೆರೆ ಭೀತಿ ಎದುರಾಗಿದೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ತತಕ್ಷಣ ಜಿಲ್ಲಾಧಿಕಾರಿಯನ್ನ ನಿಯೋಜಿಸಿದೇ ಸರಕಾರ ನಿರ್ಲಕ್ಷ್ಯವಹಿಸಿರುವುದು ಖಂಡನೀಯ ಎಂದಿದ್ದಾರೆ.