ETV Bharat / state

ರಾಯಚೂರಿನಲ್ಲಿ ಹಬ್ಬದ ದಿನವೂ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು,ಸಿಬ್ಬಂದಿ..

author img

By

Published : Oct 27, 2019, 6:18 PM IST

Updated : Oct 28, 2019, 5:24 AM IST

ಇಡೀ ದೇಶ ಇಂದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Festival days also working

ರಾಯಚೂರು: ಇಡೀ ದೇಶ ಇಂದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಆದರೆ, ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಎಲ್ಲರಂತೆ ಕುಟುಂಬ ಸಸದಸ್ಯರೊಂದಿಗೆ ಹಬ್ಬದ ಸಂಭ್ರಮ ಆಚರಿಸಬಹುದಿತ್ತು. ಆದರೆ, ಪ್ರವಾಹ ಉಂಟಾಗಿ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಜನರ ಬದುಕು ಕತ್ತಲಲ್ಲಿ ಮರೆಯಾಗಿದೆ. ಆ ಸಂತ್ರಸ್ತರಿಗಾಗಿ ಸಿಬ್ಬಂದಿ ವರ್ಗ ರಜೆಯಲ್ಲೂ ಹಾಜರಾಗಿ ಕರ್ತವ್ಯ ಮೆರೆದಿದ್ದಾರೆ.

ಸಂತ್ರಸ್ತರ ನೆರವಿಗೆ ಬರುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪೀಡಿತ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೀಪಾವಳಿ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಯೂ ರಜೆ ಹಾಕಬಾರದು. ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದ್ದರು.

ದೀಪಾವಳಿ ದಿನವೂ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರ್‌..

ಮುಖ್ಯಮಂತ್ರಿ ಆದೇಶದ ಪ್ರಕಾರ ಜಿಲ್ಲಾಧಿಕಾರಿ, ಉಪ ವಿಭಾಗ ವ್ಯಾಪ್ತಿಯ ರಾಯಚೂರು, ಮಾನ್ವಿ, ದೇವದುರ್ಗ ತಾಲೂಕಿನ ಅಧಿಕಾರಿಗಳಿಗೆ ರಜೆ ರದ್ದುಪಡಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಪರಿಣಾಮ ನಾಲ್ಕನೇ ಶನಿವಾರವೂ‌ ಕಾರ್ಯ ನಿರ್ವಹಿಸಿದ್ದರು.

ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಈ ಪ್ರವಾಹಕ್ಕೆ ಸಾವಿರಾರು ಜನ ಬೀದಿಗೆ ಬಂದರು. ಅಲ್ಲದೆ, ಈ ನೆರೆ ಹಬ್ಬದ ಸಂಭ್ರಮವನ್ನೂ ಕಸಿದುಕೊಂಡಿದೆ.

ರಾಯಚೂರು: ಇಡೀ ದೇಶ ಇಂದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಆದರೆ, ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಎಲ್ಲರಂತೆ ಕುಟುಂಬ ಸಸದಸ್ಯರೊಂದಿಗೆ ಹಬ್ಬದ ಸಂಭ್ರಮ ಆಚರಿಸಬಹುದಿತ್ತು. ಆದರೆ, ಪ್ರವಾಹ ಉಂಟಾಗಿ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಜನರ ಬದುಕು ಕತ್ತಲಲ್ಲಿ ಮರೆಯಾಗಿದೆ. ಆ ಸಂತ್ರಸ್ತರಿಗಾಗಿ ಸಿಬ್ಬಂದಿ ವರ್ಗ ರಜೆಯಲ್ಲೂ ಹಾಜರಾಗಿ ಕರ್ತವ್ಯ ಮೆರೆದಿದ್ದಾರೆ.

ಸಂತ್ರಸ್ತರ ನೆರವಿಗೆ ಬರುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪೀಡಿತ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೀಪಾವಳಿ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಯೂ ರಜೆ ಹಾಕಬಾರದು. ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದ್ದರು.

ದೀಪಾವಳಿ ದಿನವೂ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರ್‌..

ಮುಖ್ಯಮಂತ್ರಿ ಆದೇಶದ ಪ್ರಕಾರ ಜಿಲ್ಲಾಧಿಕಾರಿ, ಉಪ ವಿಭಾಗ ವ್ಯಾಪ್ತಿಯ ರಾಯಚೂರು, ಮಾನ್ವಿ, ದೇವದುರ್ಗ ತಾಲೂಕಿನ ಅಧಿಕಾರಿಗಳಿಗೆ ರಜೆ ರದ್ದುಪಡಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಪರಿಣಾಮ ನಾಲ್ಕನೇ ಶನಿವಾರವೂ‌ ಕಾರ್ಯ ನಿರ್ವಹಿಸಿದ್ದರು.

ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಈ ಪ್ರವಾಹಕ್ಕೆ ಸಾವಿರಾರು ಜನ ಬೀದಿಗೆ ಬಂದರು. ಅಲ್ಲದೆ, ಈ ನೆರೆ ಹಬ್ಬದ ಸಂಭ್ರಮವನ್ನೂ ಕಸಿದುಕೊಂಡಿದೆ.

Intro:ಇವ್ರೆಲ್ಲಾ ಇಂದು ಮನೆಯಲ್ಲಿ ಟಿವಿ ನೋಡುತ್ತಾ‌ ಅರಾಮಾಗಿ ಇರಬಹುದಿತ್ತು,ಇಲ್ಲಂದ್ರೆ ಕುಟುಂಬ ಸದಸ್ಯರ ಜೊತೆಯೋ ಮಾರುಕಟ್ಟೆಯಲ್ಲಿ ಶಾಪಿಂಗ್ ಅಂತ ತಿರುಗಾಡಬೇಕಿತ್ತು ಆದ್ರೆ ಕಚೇರಿಯಲ್ಲಿ ಕೆಲಸ ಮಾಡುತಿದ್ದಾರೆ.
ಅರೆ ಇಂದು ಭಾನುವಾರ ಯಾಕೆ ಇವರು ಕೆಲಸ ಮಾಡ್ತಿದಾರೆ ಅಂತ ಶಾಕ್ ಆಗಬೇಡಿ.ಜಿಲ್ಲೆಯಲ್ಲಿ ನೆರೆಹಾವಳಿಯಿಂದ ತತ್ತರಿಸುತ್ತಿರುವ ಜನರಿಗಾಗಿ ಇವರು ರಜೆ ದಿನದಲ್ಲಿಯೂ ಕೆಲಸ ಮಾಡಬೇಕಿದೆ.


Body:ಹೌದು,ರಾಜ್ಯಾದ್ಯಾಂತ ವರುಣದ ಅರ್ಭಟ ಇತ್ತೀಚಿಗೆ ಜೋರಾಗಿಯೇ ಇತ್ತು ಇದ್ರಿಂದ ಹಲವೆಡೆ ಪ್ರವಾಹವೂ ಉಂಟಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದೇ ರೀತಿ ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣ ನದಿಗಳಿಗೆ ಲಕ್ಷಾಂತರ ಕ್ಯುಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ.
ಕಳೆದ 2 ವಾರಗಳಿಂದ ಎರಡು ನದಿಗಳು ಉಕ್ಕಿ‌ಹರಿಯುತಿದ್ದ ಪರಿಣಾಮ ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾಗಿ ಹಲವರು ಸಂಕಷ್ಟ ಎದುರಿಸಿದ್ದಾರೆ.
ಸಂತ್ರಸ್ಥರ ನೆರವಿಗೆ ಬರುವ ಉದ್ದೇಶದಿಂದ ಇತ್ತೀಚಿಗೆ ಸಿ.ಎಂ.ಯಡಿಯೂರಪ್ಪ ನವರು ನೆರೆ ಪೀಡಿತ ಜಿಲ್ಲಾಧಿಕಾರಿಗಳೋಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ‌ ದೀಪಾವಳಿ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಗಳು ರಜೆ ಹಾಕಬಾರದು ಹಾಗೂ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ನೀಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.
ಸಿ.ಎಂ‌.ಆದೇಶ ದ ಪ್ರಕಾರ ಜಿಲ್ಲಾಧಿಕಾರಿಗಳು ರಾಯಚೂರು ಉಪ ವಿಭಾಗ ವ್ಯಾಪ್ತಿಯ ರಾಯಚೂರು,ಮಾನ್ವಿ,ದೇವದುರ್ಗ ತಾಲೂಕಿನ ಅಧಿಕಾರಿಗಳಿಗೆ ರಜೆ ರದ್ದುಪಡಿಸಲಾಗಿದೆ.ಮಾತ್ರವಲ್ಲದೇ ಆದೇಶ ವನ್ನು ಉಲ್ಲಂಘಿಸಿ ರಜೆ ಹಾಕಿದರೆ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತೆ ಎಂದು ಎಚ್ಚರಿಸಿದ ಪರಿಣಾಮ ನಿನ್ನೆ ನಾಲ್ಕನೇ ಶನಿವಾರವೂ‌ಕೆಲಸ ಮಾಡಿದಲ್ಲದೇ ಇಂದು ಭಾನುವಾರವಿದ್ದರೂ ಸಿಬ್ಬಂದಿಗಳು ಕೆಲಸ ಮಾಡಬೇಕಾಯಿತು.
ಒಂದೆಡೆ ದೀಪಾವಳಿ ಹಬ್ಬ ಮತ್ತೊಂದೆಡೆ ಭಾನುವಾರ ಇವೆರಡರ ಮಧ್ಯೆ ಇಂದು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿ ತಮ್ಮ ಕರ್ತವ್ಯ ಮೆರೆದರು.



Conclusion:
Last Updated : Oct 28, 2019, 5:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.