ETV Bharat / state

ರಾಯಚೂರಿನಲ್ಲಿ ಒಂದೆಡೆ ಪ್ರವಾಹ ಭೀತಿ ಇನ್ನೊಂದೆಡೆ ನೀರಿಗಾಗಿ ಪಜೀತಿ - ನೀರಿಗಾಗಿ ಪಜೀತಿ

ರಾಯಚೂರು ಜಿಲ್ಲೆಯ ಬಲಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹದ ಭೀತಿ ಉಂಟಾಗಿದೆ. ಆದರೆ ಎಡಭಾಗದಲ್ಲಿ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ.

ರಾಯಚೂರಿನ ದುಸ್ಥಿತಿ
author img

By

Published : Aug 3, 2019, 11:19 PM IST

ರಾಯಚೂರು: ಜಿಲ್ಲೆಯ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಆಟ ಸಾಕಾಗಿದೆ. ಒಂದು ಕಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ನಡುವೆ ರೈತ ಹೈರಾಣಾಗಿದ್ದಾನೆ.

ರಾಯಚೂರಿನ ದುಸ್ಥಿತಿ

ಜಿಲ್ಲೆಯ ಎಡಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಕಲ್ಲು, ಬಂಡೆಗಳ ಮಧ್ಯೆ ಅಲ್ಲಲ್ಲಿ ನೀರು ನಿಂತಿರುವುದು ಹೊರತು ಪಡಿಸಿದ್ರೆ, ನೀರೆ ಇಲ್ಲದಂತಾಗಿದೆ. ತುಂಗಭದ್ರಾ ನದಿಯ ನೀರಿನಿಂದ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ರಾಯಚೂರು ಜಿಲ್ಲೆಯ ರೈತರು ಭತ್ತ ಬೆಳೆಯುತ್ತಾರೆ. ಆದರೆ ಇದೀಗ ತುಂಗಭದ್ರಾ ಜಲಾಶಯಕ್ಕೆ ಮಳೆಯ ಕೊರತೆಯಿಂದ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ಜಲಾಶಯದ ಎಡದಂಡೆ ಕಾಲುವೆಗಳಿಗೆ ನೀರು ಹರಿದು ಬಂದಿಲ್ಲ. ಇದರಿಂದಾಗಿ ಹಚ್ಚ ಹಸಿರಿನಿಂದ ಕಂಗೊಳಿಸಬೇಕಾದ ಹೊಲ ಗದ್ದೆಗಳು ಭಣಗುಡುತ್ತಿವೆ. ಕೆಲ ರೈತರು ನೀರು ಬಿಡಬಹುದೆಂಬ ನಿರೀಕ್ಷೆಯಲ್ಲಿ ಗದ್ದೆಗಳಲ್ಲಿ ಭತ್ತದ ಸಸಿಯನ್ನಿಟ್ಟು ನೀರಿಗಾಗಿ ಕಾದು ಕುಳಿತಿದ್ದಾರೆ.

ತುಂಗಭದ್ರಾ ಜಲಾಶಯದಿಂದ ಸದ್ಯ ಕಾಲುವೆ ಮುಖೇನ ಕುಡಿಯುವ ನೀರಿನ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಬೇಸಿಗೆ ಬೆಳೆಗಾದರೂ ನೀರು ಬಿಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಯಚೂರು: ಜಿಲ್ಲೆಯ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಆಟ ಸಾಕಾಗಿದೆ. ಒಂದು ಕಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ನಡುವೆ ರೈತ ಹೈರಾಣಾಗಿದ್ದಾನೆ.

ರಾಯಚೂರಿನ ದುಸ್ಥಿತಿ

ಜಿಲ್ಲೆಯ ಎಡಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಕಲ್ಲು, ಬಂಡೆಗಳ ಮಧ್ಯೆ ಅಲ್ಲಲ್ಲಿ ನೀರು ನಿಂತಿರುವುದು ಹೊರತು ಪಡಿಸಿದ್ರೆ, ನೀರೆ ಇಲ್ಲದಂತಾಗಿದೆ. ತುಂಗಭದ್ರಾ ನದಿಯ ನೀರಿನಿಂದ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ರಾಯಚೂರು ಜಿಲ್ಲೆಯ ರೈತರು ಭತ್ತ ಬೆಳೆಯುತ್ತಾರೆ. ಆದರೆ ಇದೀಗ ತುಂಗಭದ್ರಾ ಜಲಾಶಯಕ್ಕೆ ಮಳೆಯ ಕೊರತೆಯಿಂದ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ಜಲಾಶಯದ ಎಡದಂಡೆ ಕಾಲುವೆಗಳಿಗೆ ನೀರು ಹರಿದು ಬಂದಿಲ್ಲ. ಇದರಿಂದಾಗಿ ಹಚ್ಚ ಹಸಿರಿನಿಂದ ಕಂಗೊಳಿಸಬೇಕಾದ ಹೊಲ ಗದ್ದೆಗಳು ಭಣಗುಡುತ್ತಿವೆ. ಕೆಲ ರೈತರು ನೀರು ಬಿಡಬಹುದೆಂಬ ನಿರೀಕ್ಷೆಯಲ್ಲಿ ಗದ್ದೆಗಳಲ್ಲಿ ಭತ್ತದ ಸಸಿಯನ್ನಿಟ್ಟು ನೀರಿಗಾಗಿ ಕಾದು ಕುಳಿತಿದ್ದಾರೆ.

ತುಂಗಭದ್ರಾ ಜಲಾಶಯದಿಂದ ಸದ್ಯ ಕಾಲುವೆ ಮುಖೇನ ಕುಡಿಯುವ ನೀರಿನ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಬೇಸಿಗೆ ಬೆಳೆಗಾದರೂ ನೀರು ಬಿಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Intro:ಸ್ಲಗ್: ರಾಯಚೂರು ಜಿಲ್ಲೆಯ ರೈತರಿಗೆ ಒಂದು ಕಡೆ ಮತ್ತೊಂದು ಬರ
ಫಾರ್ಮೇಟ್: ವಾಕ್ ಥ್ರೂ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 03-೦8-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮು ಒಂದು ಕಡೆ ನೆರೆ ಮತ್ತೊಂದು ಕಡೆ ಬರ ಅನುಭವಿಸುವಂತೆ ಮಾಡಿದೆ. ಜಿಲ್ಲೆಯ ಭಾಗದಲ್ಲಿ ಕೃಷ್ಣ ನದಿ ಉಕ್ಕಿ ಹರಿಯುವ ಜಿಲ್ಲೆಯ ಪ್ರವಾಹ ಹಾಗೂ ಆ ಭಾಗದ ರೈತರಿಗೆ ಸಂತಸವನ್ನ ತರಿಸಿದೆ. Body:ಆದ್ರೆ ಎಡಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಕಲ್ಲು, ಬಂಡೆಗಳು ಕಾಣುವ ಮೂಲಕ ನದಿ ಮಳೆಯಿಂದ ಅಲಲ್ಲ ನೀರು ನಿಂತುರುವುದು ಹೊರತು ಪಡಿಸಿದ್ರೆ ಬಣ, ಬಣವಾಗಿ ಕಂಡು ಬರುತ್ತಿದೆ. ಅಷ್ಟೆ ಅಲ್ಲದೇ ತುಂಗಭದ್ರಾ ನದಿಯ ನೀರಿನಿಂದ ಸಿಂಧನೂರು, ಮಸ್ಕಿ, ಮಾನವಿ ಹಾಗೂ ರಾಯಚೂರು ಜಿಲ್ಲೆಯ ರೈತರು ಭತ್ತದ ನಾಟಿಯನ್ನ ಮಾಡಿ, ಭತ್ತವನ್ನ ಬೆಳೆಯುತ್ತಿದ್ದಾರೆ. ಆದ್ರೆ ತುಂಗಭದ್ರಾ ಜಲಾಶಯಕ್ಕೆ ಮಳೆಯ ಕೊರತೆಯಿಂದ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ಜಲಾಶಯದ ಎಡದಂಡೆ ಕಾಲುವೆಗಳಿಗೆ ನೀರು ಹರಿದು ಬಿಟ್ಟಿಲ್ಲ. ಇದರಿಂದ ನದಿಯ ನೀರಿನ ಭತ್ತ ನಾಟಿ ಹಚ್ಚ ಹಸಿರಿನಿಂದ ಕಂಗೋಳಿಸಬೇಕಾದ ಹೊಲಗದ್ದೆಗಳು ಖಾಲಿಯಾಗಿ ಕಂಡು ಬರುತ್ತದೆ. ಕೆಲ ರೈತರು ನೀರು ಬಿಡಬಹುದೆಂದ ಗದ್ದೆಗಳಲ್ಲಿ ಭತ್ತದ ಸಸಿ ಮಡಿ ಮಾಡಿಕೊಂಡು ನೀರಿಗಾಗಿ ಕಾದು ಕುಳಿತ್ತಿದ್ದಾರೆ. ಆದ್ರೆ ತುಂಗಭದ್ರಾ ಜಲಾಶಯದಿಂದ ಸದ್ಯ ಕಾಲುವೆ ಮುಖಾಂತರ ಕುಡಿಯುವ ನೀರಿನ ಪೂರೈಕೆ ಬಳಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಕಾಲುವೆಗಳಿಗೆ ನೀರು ಬಿಟ್ಟಾರೆ ಪ್ರಯೋಜನವಿಲ್ಲ. ಇದಕ್ಕಾಗಿ ಸರಕಾರ ನೀರು ಬಿಡುವುದ್ರೆ, ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ನೀರು ಹರಿದು ಬಿಡಬೇಕು. ಇಲ್ಲದಿದ್ದರೆ ಬೇಸಿಗೆ ಬೆಳೆಗಾದರೂ ನೀರು ಬಿಡುವಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಮಳೆಯ ಸುರಿತ್ತಿದೆ ಎಂದು ನದಿಗೆ ನೀರು ಬಿಡಬಹುದೆಂದ ಗೋಳೆ ಹೋದವರು ವಾಪಾಸ್ ಗ್ರಾಮಗಳಿಗೆ ಬಂದಿದ್ದರೆ, ತುಂಗಭದ್ರಾ ಜಲಾಶಯದಿಂದ ನೀರು ಹರಿದು ಬಿಡದೆ ಇರುವುದು ಮತ್ತೊಷ್ಟು ತೊಂದರೆ ಉಂಟು ಮಾಡಿದೆ. ಈ ಎಲ್ಲಾ ವಿಚಾರ ಕುರಿತು ನಮ್ಮ ರಾಯಚೂರು ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ ನೋಡಿ.
Conclusion:ಫ್ಲೋ..ವಾಕ್ ಥ್ರೂ
ಬೈಟ್.1: ಟಿ.ಎಸ್.ಶಂಕರರೆಡ್ಡಿ, ಭತ್ತದ ಬೆಳೆಗಾರ, ತುಂಗಭದ್ರಾ ಗ್ರಾಮ.(ತಲೆಯಲ್ಲಿ ಬಿಳಿ ಕೂದಲು ಇರುವ ವ್ಯಕ್ತಿ)
ಬೈಟ್.2: ತಿಕ್ಕಣ್ಣ, ರೈತ, ತುಂಗಭದ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.