ETV Bharat / state

ಹತ್ತಿಗೆ ತಾಮ್ರ ರೋಗ: 15 ಎಕರೆಯಲ್ಲಿನ ಬೆಳೆ ನಾಶಕ್ಕೆ ಮುಂತಾದ ರೈತ - ಹತ್ತಿ ಬೆಳೆಗೆ ರೋಗ ಸುದ್ದಿ

ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಮಳೆ ಹೆಚ್ಚಾದ ಕಾರಣ ತೇವಾಂಶ ಹೆಚ್ಚಾಗಿ ಸುಮಾರು 15 ಎಕರೆ ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿದೆ. ಬೆಳೆಗೆ ಒಂದು ಸಲ ಈ ರೋಗ ಬಂದರೆ ಕೊನೆಯವರೆಗೂ ಔಷಧ ಸಿಂಪಡಣೆ ಮಾಡಬೇಕು, ಅಧಿಕ ವೆಚ್ಚವಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ಮಾಡಿದ ಖರ್ಚು ಬರುವುದು ಅನುಮಾನದ ಹಿನ್ನೆಲೆ ಹತ್ತಿ ಬೆಳೆಯನ್ನು ನಾಶಮಾಡಿ, ಹಿಂಗಾರು ಬೆಳೆಗಳನ್ನು ಬಿತ್ತಿಕೊಳ್ಳಲು ರೈತ ತಮ್ಮ ಹೊಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

farmer demolishes 15 acres cotton in raichur
ಹತ್ತಿಗೆ ತಾಮ್ರ ರೋಗ
author img

By

Published : Nov 3, 2020, 1:20 PM IST

ರಾಯಚೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿದೆ.

ಹತ್ತಿಗೆ ತಾಮ್ರ ರೋಗ

ಹತ್ತಿ ಕಾಯಿಗಳು ಗಿಡದಲ್ಲೇ ಬಾಡುತ್ತಿರುವ ಹಿನ್ನೆಲೆ ಹಾಕಿದ ಬಂಡವಾಳ ಕೂಡ ಬರುವುದಿಲ್ಲ ಎಂಬುದನ್ನು ಅರಿತ ಬೆಳೆಗಾರ ಹತ್ತಿ ಬೆಳೆ ನಾಶಕ್ಕೆ ಮುಂದಾಗಿದ್ದಾನೆ. ರಾಯಚೂರು ತಾಲೂಕಿನ ಮಸ್ಸಲಾಪೂರ ಗ್ರಾಮದ ರೈತ ತನ್ನ15 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ರು. ಬೆಳೆ ಕೂಡ ಸಮೃದ್ಧವಾಗಿ ಬೆಳೆದಿದ್ದು, ಗಿಡದಲ್ಲಿ ಹೆಚ್ಚು ಕಾಯಿ ಕಟ್ಟಿದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸುಮಾರು 10 ಲಕ್ಷ ಲಾಭ ನಿರೀಕ್ಷೆಯಲ್ಲಿದ್ದ ರೈತನಿಗೆ ಅತಿವೃಷ್ಟಿಯಿಂದಾಗಿ ಹಾಕಿದ ಬಂಡವಾಳವು ಬರುವುದು ಅನುಮಾನವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹತ್ತಿ ಬೆಳೆಗಾರ, ಹದಿನೈದು ಎಕರೆಯಲ್ಲಿ ಹತ್ತಿ ಬೆಳೆಯಲು ಈಗಾಗಲೇ 2 ಲಕ್ಷ ರೂ ವೆಚ್ಚ ಮಾಡಲಾಗಿದೆ. ಸಂಪೂರ್ಣ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿರುವುದರಿಂದ ಮುಂದಿನ ನಿರ್ವಹಣೆ ಆರ್ಥಿಕ ನಮಗೆ ಹೊರೆಯಾಗಲಿದೆ. ಬೆಳೆ ಹಾಳಾಗಿರುವ ಕಾರಣ ಇನ್ನೂ ಇದರಿಂದ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ, ಹೀಗಾಗಿ ಹಿಂಗಾರು ಬೆಳೆ ಬೆಳೆಯಲು ಹತ್ತಿ ಬೆಳೆ ನಾಶ ಮಾಡಲಾಗುತ್ತಿದೆ ಎಂದು ತಿಳಿಸಿದ್ರು.

ರಾಯಚೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿದೆ.

ಹತ್ತಿಗೆ ತಾಮ್ರ ರೋಗ

ಹತ್ತಿ ಕಾಯಿಗಳು ಗಿಡದಲ್ಲೇ ಬಾಡುತ್ತಿರುವ ಹಿನ್ನೆಲೆ ಹಾಕಿದ ಬಂಡವಾಳ ಕೂಡ ಬರುವುದಿಲ್ಲ ಎಂಬುದನ್ನು ಅರಿತ ಬೆಳೆಗಾರ ಹತ್ತಿ ಬೆಳೆ ನಾಶಕ್ಕೆ ಮುಂದಾಗಿದ್ದಾನೆ. ರಾಯಚೂರು ತಾಲೂಕಿನ ಮಸ್ಸಲಾಪೂರ ಗ್ರಾಮದ ರೈತ ತನ್ನ15 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ರು. ಬೆಳೆ ಕೂಡ ಸಮೃದ್ಧವಾಗಿ ಬೆಳೆದಿದ್ದು, ಗಿಡದಲ್ಲಿ ಹೆಚ್ಚು ಕಾಯಿ ಕಟ್ಟಿದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸುಮಾರು 10 ಲಕ್ಷ ಲಾಭ ನಿರೀಕ್ಷೆಯಲ್ಲಿದ್ದ ರೈತನಿಗೆ ಅತಿವೃಷ್ಟಿಯಿಂದಾಗಿ ಹಾಕಿದ ಬಂಡವಾಳವು ಬರುವುದು ಅನುಮಾನವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹತ್ತಿ ಬೆಳೆಗಾರ, ಹದಿನೈದು ಎಕರೆಯಲ್ಲಿ ಹತ್ತಿ ಬೆಳೆಯಲು ಈಗಾಗಲೇ 2 ಲಕ್ಷ ರೂ ವೆಚ್ಚ ಮಾಡಲಾಗಿದೆ. ಸಂಪೂರ್ಣ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿರುವುದರಿಂದ ಮುಂದಿನ ನಿರ್ವಹಣೆ ಆರ್ಥಿಕ ನಮಗೆ ಹೊರೆಯಾಗಲಿದೆ. ಬೆಳೆ ಹಾಳಾಗಿರುವ ಕಾರಣ ಇನ್ನೂ ಇದರಿಂದ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ, ಹೀಗಾಗಿ ಹಿಂಗಾರು ಬೆಳೆ ಬೆಳೆಯಲು ಹತ್ತಿ ಬೆಳೆ ನಾಶ ಮಾಡಲಾಗುತ್ತಿದೆ ಎಂದು ತಿಳಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.