ETV Bharat / state

ಭಾರತ್​ ಜೋಡೋ ಯಾತ್ರೆಯಲ್ಲಿ ಡ್ರಮ್​ ಬಾರಿಸಿ ಗಮನ ಸೆಳೆದ ಡಿಕೆಶಿ.. - ಈಟಿವಿ ಭಾರತ ಕನ್ನಡ

ಇಂದು ಯರಗೇರಾ ಗ್ರಾಮದಿಂದ ಭಾರತ್​ ಜೋಡೋ ಯಾತ್ರೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್​ ಬ್ಯಾಂಡ್​ ಬಾರಿಸುವ ಮೂಲಕ ಗಮನ ಸೆಳೆದರು.

kn_rcr_0
ಜೋಡೋ ಯಾತ್ರೆಯಲ್ಲಿ ಡ್ರಮ್​ ಬಾರಿಸಿದ ಡಿಕೆಶಿ
author img

By

Published : Oct 22, 2022, 1:27 PM IST

Updated : Oct 22, 2022, 3:01 PM IST

ರಾಯಚೂರು: ರಾಯಚೂರು ಪ್ರವೇಶಿಸಿರುವ ಭಾರತ್​ ಜೋಡೋ ಯಾತ್ರೆ ಇಂದು ಯರಗೇರಾ ಗ್ರಾಮದಿಂದ ಆರಂಭಗೊಂಡಿದ್ದು, ಯಾತ್ರೆ ವೇಳೆ ಡಿಕೆಶಿ ಬ್ಯಾಂಡ್​​ ಬಾರಿಸುವ ಮೂಲಕ ಗಮನ ಸೆಳೆದರು.

ರಾಹುಲ್​ ಗಾಂಧಿ ನೇತೃತ್ವದ ​ಜೋಡೋ ಯಾತ್ರೆ ಇಂದು ಯರಗೇರಾ ಗ್ರಾಮದಿಂದ ಬೆಳಗ್ಗೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ ಹಲವಾರು ಜನ ಭಾಗಿಯಾಗಿದ್ದಾರೆ. ಇನ್ನೂ ಯಾತ್ರೆ ವೇಳೆ ಮೇಳಾ ತಾಳಗಳೊಂದಿಗೆ ಜನರು ರಾಗಾರೊಂದಿಗೆ ನೃತ್ಯ ಮಾಡುತ್ತ ಹೆಜ್ಜೆ ಹಾಕುತ್ತಿದ್ದು, ಈ ವೇಳೆ ಡಿಕೆಶಿ ಡ್ರಮ್​ ಬ್ಯಾಂಡ್​ನ್ನು ಕೊರಳಲ್ಲಿ ಧರಿಸಿ ತಾವೇ ಬ್ಯಾಂಡ್​ ಬಾರಿಸುವ ಮೂಲಕ ಯಾತ್ರೆಯಲ್ಲಿ ಗಮನ ಸೆಳೆದರು.

ಇನ್ನೂ ನಿನ್ನೆ ಜಿಲ್ಲೆಗೆ ಪ್ರವೇಶವಾಗಿರುವ ಭಾರತ್​ ಜೋಡೋ ಯಾತ್ರೆ ಸಂಜೆ ವೇಳೆಗೆ ಯರಗೇರಾ ಗ್ರಾಮಕ್ಕೆ ತಲುಪಿದ್ದು, ಬಳಿಕ ಅಲ್ಲಿನ ಮುಖಂಡರೊಂದಿಗೆ ರಾಗಾ ಸಭೆ ನಡೆಸಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಈಗಾಗಲೇ ರಾಯಚೂರು ನಗರ ಸಮೀಪಸುತ್ತಿದ್ದು, ಕೆಲ ಹೊತ್ತಿನಲ್ಲಿ ನಗರದ ಹೊರವಲಯದ ಬೃಂದಾವನ ಹೋಟೆಲ್​ಗೆ ತಲುಪಲಿದೆ. ಕೆಲ ಕಾಲ ಅಲ್ಲಿಯೇ ರಾಹುಲ್​ ಗಾಂಧಿ ವಿಶ್ರಾಂತಿ ಪಡೆದ ನಂತರ ನಗರಕ್ಕೆ ಪ್ರವೇಶ ಮಾಡಲಿದ್ದಾರೆ. ಇನ್ನು ಇಂದು ಸಂಜೆ ವಾಲ್ಕಟ್ ಮೈದಾನದಲ್ಲಿ ರಾಗಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಸಾರ್ವಜನಿಕರನ್ನು ಉದ್ದೇಶಿ ರಾಗಾ ಮಾತನಾಡಲಿದ್ದಾರೆ.

ಜೋಡೋ ಯಾತ್ರೆಯಲ್ಲಿ ಡ್ರಮ್​ ಬಾರಿಸಿದ ಡಿಕೆಶಿ

ಸಭೆಯ ಬಳಿಕ ಯಾತ್ರೆ ನಗರದ ಹೊರವಲಯದ ಆನಂದ ಹೈಸ್ಕೂಲ್ ಹತ್ತಿರ ತಲುಪಲಿದ್ದು ಕೈ ನಾಯಕರು ಇಂದು ಅಲ್ಲೇ ವಾಸ್ತವ್ಯ ಮಾಡಲಿದ್ದಾರೆ. ರಾಹುಲ್‌ಗಾಂಧಿ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಮುಖಂಡರಾದ ಕೆ.ಸಿ.ವೇಣುಗೋಪಾಲ್​, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ಎನ್.ಎಸ್.ಬೋಸರಾಜ್, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಸೇರಿದಂತೆ ಅನೇಕ ಮುಂಖಡರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ರಾಹುಲ್​ಗೆ ಹೊಸ ಇಮೇಜ್ ನೀಡಿದ ಪಾದಯಾತ್ರೆ: ಸಿದ್ದರಾಮಯ್ಯ - ಡಿಕೆಶಿ ಬಾಂಧವ್ಯಕ್ಕೂ ಮುನ್ನುಡಿ

ರಾಯಚೂರು: ರಾಯಚೂರು ಪ್ರವೇಶಿಸಿರುವ ಭಾರತ್​ ಜೋಡೋ ಯಾತ್ರೆ ಇಂದು ಯರಗೇರಾ ಗ್ರಾಮದಿಂದ ಆರಂಭಗೊಂಡಿದ್ದು, ಯಾತ್ರೆ ವೇಳೆ ಡಿಕೆಶಿ ಬ್ಯಾಂಡ್​​ ಬಾರಿಸುವ ಮೂಲಕ ಗಮನ ಸೆಳೆದರು.

ರಾಹುಲ್​ ಗಾಂಧಿ ನೇತೃತ್ವದ ​ಜೋಡೋ ಯಾತ್ರೆ ಇಂದು ಯರಗೇರಾ ಗ್ರಾಮದಿಂದ ಬೆಳಗ್ಗೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ ಹಲವಾರು ಜನ ಭಾಗಿಯಾಗಿದ್ದಾರೆ. ಇನ್ನೂ ಯಾತ್ರೆ ವೇಳೆ ಮೇಳಾ ತಾಳಗಳೊಂದಿಗೆ ಜನರು ರಾಗಾರೊಂದಿಗೆ ನೃತ್ಯ ಮಾಡುತ್ತ ಹೆಜ್ಜೆ ಹಾಕುತ್ತಿದ್ದು, ಈ ವೇಳೆ ಡಿಕೆಶಿ ಡ್ರಮ್​ ಬ್ಯಾಂಡ್​ನ್ನು ಕೊರಳಲ್ಲಿ ಧರಿಸಿ ತಾವೇ ಬ್ಯಾಂಡ್​ ಬಾರಿಸುವ ಮೂಲಕ ಯಾತ್ರೆಯಲ್ಲಿ ಗಮನ ಸೆಳೆದರು.

ಇನ್ನೂ ನಿನ್ನೆ ಜಿಲ್ಲೆಗೆ ಪ್ರವೇಶವಾಗಿರುವ ಭಾರತ್​ ಜೋಡೋ ಯಾತ್ರೆ ಸಂಜೆ ವೇಳೆಗೆ ಯರಗೇರಾ ಗ್ರಾಮಕ್ಕೆ ತಲುಪಿದ್ದು, ಬಳಿಕ ಅಲ್ಲಿನ ಮುಖಂಡರೊಂದಿಗೆ ರಾಗಾ ಸಭೆ ನಡೆಸಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಈಗಾಗಲೇ ರಾಯಚೂರು ನಗರ ಸಮೀಪಸುತ್ತಿದ್ದು, ಕೆಲ ಹೊತ್ತಿನಲ್ಲಿ ನಗರದ ಹೊರವಲಯದ ಬೃಂದಾವನ ಹೋಟೆಲ್​ಗೆ ತಲುಪಲಿದೆ. ಕೆಲ ಕಾಲ ಅಲ್ಲಿಯೇ ರಾಹುಲ್​ ಗಾಂಧಿ ವಿಶ್ರಾಂತಿ ಪಡೆದ ನಂತರ ನಗರಕ್ಕೆ ಪ್ರವೇಶ ಮಾಡಲಿದ್ದಾರೆ. ಇನ್ನು ಇಂದು ಸಂಜೆ ವಾಲ್ಕಟ್ ಮೈದಾನದಲ್ಲಿ ರಾಗಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಸಾರ್ವಜನಿಕರನ್ನು ಉದ್ದೇಶಿ ರಾಗಾ ಮಾತನಾಡಲಿದ್ದಾರೆ.

ಜೋಡೋ ಯಾತ್ರೆಯಲ್ಲಿ ಡ್ರಮ್​ ಬಾರಿಸಿದ ಡಿಕೆಶಿ

ಸಭೆಯ ಬಳಿಕ ಯಾತ್ರೆ ನಗರದ ಹೊರವಲಯದ ಆನಂದ ಹೈಸ್ಕೂಲ್ ಹತ್ತಿರ ತಲುಪಲಿದ್ದು ಕೈ ನಾಯಕರು ಇಂದು ಅಲ್ಲೇ ವಾಸ್ತವ್ಯ ಮಾಡಲಿದ್ದಾರೆ. ರಾಹುಲ್‌ಗಾಂಧಿ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಮುಖಂಡರಾದ ಕೆ.ಸಿ.ವೇಣುಗೋಪಾಲ್​, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ಎನ್.ಎಸ್.ಬೋಸರಾಜ್, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಸೇರಿದಂತೆ ಅನೇಕ ಮುಂಖಡರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ರಾಹುಲ್​ಗೆ ಹೊಸ ಇಮೇಜ್ ನೀಡಿದ ಪಾದಯಾತ್ರೆ: ಸಿದ್ದರಾಮಯ್ಯ - ಡಿಕೆಶಿ ಬಾಂಧವ್ಯಕ್ಕೂ ಮುನ್ನುಡಿ

Last Updated : Oct 22, 2022, 3:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.