ETV Bharat / state

ಸಂವಿಧಾನ ಒಂದೇ ಬಾವುಟಕ್ಕೆ ಅವಕಾಶ ಕಲ್ಪಿಸಿದೆ: ಸಚಿವ ಸಿ.ಟಿ. ರವಿ - ಕನ್ನಡದ ಬಗ್ಗೆ ಸಚಿವರ ಮಾತು

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಕನ್ನಡಾಭಿಮಾನ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ವಿರೋಧ ಪಕ್ಷ ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದರು.

CT Ravi
author img

By

Published : Nov 6, 2019, 8:21 PM IST

ರಾಯಚೂರು: ನನ್ನ ಕನ್ನಡಾಭಿಮಾನದ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸುವುದು ಬೇಡ. ಕನ್ನಡಿಗನಾಗಿ ನಾನು ನನ್ನ ಕೆಲಸ ಮಾಡಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ರು.

ನ್ಯಾಯಾಲಯದ ತೀರ್ಪಿನಲ್ಲಿ ರಾಷ್ಟ್ರ ಧ್ವಜವನ್ನೇ ಬಳಸಿಕೊಳ್ಳಬೇಕು ಎಂದು ಹೇಳಿದ್ದೆ. ಸಿದ್ದರಾಮಯ್ಯನವರು ಸುಮಾರು 40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ಪ್ರೇಮ ಇರಲಿಲ್ವೇ? ಆಗ ಏಕೆ ಈ ವಿಷಯದ ಕುರಿತು ಪ್ರಸ್ತಾಪ ಮಾಡಲಿಲ್ಲ. ಮತಗಳ ಕ್ರೋಡೀಕರಣ ಮಾಡಿಕೊಳ್ಳುವ ಉದ್ದೇಶದಿಂದ ಅವರು ಹಲವು ನಾಟಕಗಳನ್ನಾಡಿದರು. ಅದರಲ್ಲಿ ಒಂದು ಕನ್ನಡದ ನಾಟಕವು, ಇನ್ನೊಂದು ವೀರಶೈವ ಲಿಂಗಾಯತ ವಿಭಜನೆಯ ನಾಟಕ ಎಂದು ಲೇವಡಿ ಮಾಡಿದ್ರು.

ನಾನೊಬ್ಬ ಕನ್ನಡಿಗ, ನಾನು ನಾಡಿನ ಸಾಂಸ್ಕೃತಿಕ ಧ್ವಜವನ್ನು ಹಿಡಿದುಕೊಂಡು ಕುಣಿದಿದ್ದೇನೆ. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸಚಿವನಾಗಿ ಸಂವಿಧಾನದಡಿ ಕಾರ್ಯ ನಿರ್ವಹಿಸುವಾಗ ಕನ್ನಡ ರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಿದ್ದೇನೆ. ನನ್ನ ಹಿಂದಿನವರೂ ರಾಷ್ಟಧ್ವಜ ಹಾರಿಸಿದ್ದರು. ನಾನು ಅದನ್ನೇ ಮಾಡಿದ್ದೇನೆ. ಸಂವಿಧಾನ ಒಂದೇ ಬಾವುಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡಿದ್ದಾನೆ ಎಂದು ಸ್ಪಷ್ಟನೆ ಕೊಟ್ಟರು.

ರಾಯಚೂರು: ನನ್ನ ಕನ್ನಡಾಭಿಮಾನದ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸುವುದು ಬೇಡ. ಕನ್ನಡಿಗನಾಗಿ ನಾನು ನನ್ನ ಕೆಲಸ ಮಾಡಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ರು.

ನ್ಯಾಯಾಲಯದ ತೀರ್ಪಿನಲ್ಲಿ ರಾಷ್ಟ್ರ ಧ್ವಜವನ್ನೇ ಬಳಸಿಕೊಳ್ಳಬೇಕು ಎಂದು ಹೇಳಿದ್ದೆ. ಸಿದ್ದರಾಮಯ್ಯನವರು ಸುಮಾರು 40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ಪ್ರೇಮ ಇರಲಿಲ್ವೇ? ಆಗ ಏಕೆ ಈ ವಿಷಯದ ಕುರಿತು ಪ್ರಸ್ತಾಪ ಮಾಡಲಿಲ್ಲ. ಮತಗಳ ಕ್ರೋಡೀಕರಣ ಮಾಡಿಕೊಳ್ಳುವ ಉದ್ದೇಶದಿಂದ ಅವರು ಹಲವು ನಾಟಕಗಳನ್ನಾಡಿದರು. ಅದರಲ್ಲಿ ಒಂದು ಕನ್ನಡದ ನಾಟಕವು, ಇನ್ನೊಂದು ವೀರಶೈವ ಲಿಂಗಾಯತ ವಿಭಜನೆಯ ನಾಟಕ ಎಂದು ಲೇವಡಿ ಮಾಡಿದ್ರು.

ನಾನೊಬ್ಬ ಕನ್ನಡಿಗ, ನಾನು ನಾಡಿನ ಸಾಂಸ್ಕೃತಿಕ ಧ್ವಜವನ್ನು ಹಿಡಿದುಕೊಂಡು ಕುಣಿದಿದ್ದೇನೆ. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸಚಿವನಾಗಿ ಸಂವಿಧಾನದಡಿ ಕಾರ್ಯ ನಿರ್ವಹಿಸುವಾಗ ಕನ್ನಡ ರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಿದ್ದೇನೆ. ನನ್ನ ಹಿಂದಿನವರೂ ರಾಷ್ಟಧ್ವಜ ಹಾರಿಸಿದ್ದರು. ನಾನು ಅದನ್ನೇ ಮಾಡಿದ್ದೇನೆ. ಸಂವಿಧಾನ ಒಂದೇ ಬಾವುಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡಿದ್ದಾನೆ ಎಂದು ಸ್ಪಷ್ಟನೆ ಕೊಟ್ಟರು.

Intro:¬ಸ್ಲಗ್: ಸಿ.ಟಿ.ರವಿ ಸುದ್ದಿಗೋಷ್ಠಿ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 06-11-2019
ಸ್ಥಳ: ರಾಯಚೂರು
ಆಂಕರ್: ನನ್ನ ಕನ್ನಡ ಅಭಿಮಾನದ ಬಗ್ಗೆ ಯಾರಿಗೂ ಸಂಶಯ ವ್ಯಕ್ತಪಡಿಸುವುದು ಬೇಡವೆಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. Body:ರಾಯಚೂರಿ ಜಿಲ್ಲಾಧಿಕಾರಿ ಸಭಾಂಗಣದಲ್ಲ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು. ನಾನೊಬ್ಬ ಕನ್ನಡಿಗ, ನಾನು ಸಾಂಸ್ಕೃತಿಕ ಧ್ವಜವನ್ನ ಹಿಡಿದುಕೊಂಡು ಕುಣಿದಿದ್ದಾನೆ. ರಾಜ್ಯದಲ್ಲಿ ಸರಕಾರ ಜವಾಬ್ದಾರಿಯುತ ಸಚಿವನಾಗಿ ಸಂವಿಧಾನ ಅಡಿಯಲ್ಲಿ ಕಾರ್ಯ ನಿರ್ವಹಿಬೇಕಾಗದ್ದಾಗ ಕನ್ನಡ ರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಿದ್ದೇನೆ. ನನ್ನ ಹಿಂದಿನವರು ರಾಷ್ಟಧ್ವಜ ಹಾರಿಸಿದ್ದರು ನಾನು ಅದನ್ನೇ ಮಾಡಿದ್ದೇನೆ. ಸಂವಿಧಾನದಲ್ಲಿ ಒಂದೇ ಭಾವುಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡಿದ್ದಾನೆ. ಚಿಕ್ಕಮಂಗಳೂರಿನಲ್ಲಿ ಪರಮೇಶ್ವರ, ರೋಷನ್ ಬೇಗ ರಾಷ್ಟ್ರ ಧ್ವಜ ಹಾರಿಸಿದಾಗ ಬಾರದ ವಿವಾದ ಈಗ ಬಂದಿದೆ. ಇದರ ಹಿಂದೆ ರಾಜಕೀಯ ಪಿತೂರಿಯಿದೆ. ನನ್ನಂತವನು ಮೇಲೆ ರಾಜಕೀಯವಾಗಿ ಬೆಳಯಬಾರದು ಎನ್ನುವ ಕುತಂತ್ರ ರಾಜಕೀಯ ಒಳಸಂಚು ಮಾಡುತ್ತಿದ್ದಾರೆ. ಅದನ್ನು ಯಾರು ಮಾಡುತ್ತಿದ್ದಾರೆ ಎನ್ನುವುದು ಹೇಳಿದ್ದಾಗ, ಸ್ವಪಕ್ಷದವರ ನಡೆಸಿದ್ದರೆ ಎನ್ನುವ ಸುದ್ದಿಗಾರರ ಪ್ರಶ್ನಿಸಿದಾಗ ಸ್ವ ಪಕ್ಷದವರ ಮೇಲೆ ನಾನು ಆರೋಪ ಮಾಡಲ್ಲ ಎಂದರು. ಇನ್ನು ಕನ್ನಡವನ್ನ ಈಗ ಮತಗಳನ್ನ ಕ್ರೋಡಿಕರಣ ಮಾಡಬೇಕು ಎನ್ನುವ ಉದ್ದೇಶದಿಂದ ಈಗ ರಾಜಕೀಯವಾಗಿ ಕನ್ನಡದ ನಾಟಕವನ್ನು ಮಾಡುತ್ತಿದ್ದಾರೆ ಕಾಂಗ್ರೆಸ್ ವಿರುದ್ದ ಕಾಳೆದರು. ಈ ಹಿಂದೆ ವೀರಶೈವ ಲಿಂಗಾಯತ ನಾಟಕ ಮಾಡಿದ್ದರು. ಸಿದ್ದರಾಮಯ್ಯನವರನ್ನ ನಾನು ಟಾರ್ಗೆಟ್ ಮಾಡಲ್ಲ ಅವರ ಪಕ್ಷಕ್ಕೆ ಕೇಳುತ್ತೇನೆ. ಈ ಹಿಂದೆ ನೀವು ಯಾಕೆ ಕನ್ನಡ ಭಾವುಟದ ಬಗ್ಗೆ ಕಾಳಜಿ ವಹಿಸಲಿಲ್ಲ. ಇದನ್ನ ಮೀರಿ ಕನ್ನಡವನ್ನ ಉಳಿಸಿಕೊಳ್ಳುವ ಸವಾಲು ನಮ್ಮ ಎದುರಿಗಿದೆ. ಕನ್ನಡ ಶಾಲೆಗಳನ್ನ ಉಳಿಸುವ ಕೆಲಸ ಮಾಡಬೇಕಿದೆ. ಬಿನ್ ಲಾಡೆನ್ ನನ್ನ ಆಚರಿಸುವ ಜನ ಕೂಡ ಇದ್ದಾರೆ ಎಂದರು. ಇನ್ನೂ ಬಿ.ಎಸ್.ಯಡಿಯೂರಪ್ಪ ಸರಕಾರ ಇದ್ದಾಗ ಟಿಪ್ಪು ನ ಜಯಂತಿ ಬರಲಿಲ್ಲ. ಟಿಪ್ಪು ಅತ್ಯಂತ ಕ್ರೂರಿಯಾಗಿ ವರ್ತನೆ ಮಾಡಿ ನಂತರ ಸಾಧುವಾಗ್ತಾನೆ. ಟಿಪ್ಪು ಕನ್ನಡ ಬದಲಿಗೆ ಪಾರ್ಸಿ ಭಾಷೆ ಹೇರಿದ್ದು ಐತಿಹಾಸಿಕ ಸತ್ಯ. ಒಳ್ಳೆಯ ಕೆಲಸಗಳ ಜತೆಗೆ ಕೆಟ್ಟ ಕೆಲಸಗಳನ್ನ ಮಾಡಿದ್ದಾರೆ. ಒಳ್ಳೆಯತನಕ್ಕೆ ಕಲಾಂ, ಶಿಶುನಾಳ ಶರೀಫ್ ರನ್ನ ಸ್ಮರಿಸಬಹುದು. ಆದ್ರೆ ಟಿಪ್ಪುವನ್ನ ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಟಿಪ್ಪು ಜಯಂತಿ ರದ್ದತಿಗೆ ಸಮರ್ಥಿಸಿಕೊಂಡರು. Conclusion:
ಬೈಟ್.1: ಸಿ.ಟಿ.ರವಿ, ಸಚಿವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.