ರಾಯಚೂರು: ಕರ್ತವ್ಯ ಲೋಪವೆಸಗಿದ ಆರೋಪದಡಿ ಯರಗೇರಾ ಸಿಪಿಐ ಅಂಬೆರಾಯ ಎಂ.ಕಮಾನಮನಿಯನ್ನು ಅಮಾನತುಗೊಳಿಸಿ ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.
ರಾಯಚೂರು ತಾಲೂಕಿನ ಯರಗೇರಾ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬೆರಾಯ, ಶಕ್ತಿನಗರದ ದರೋಡೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ:ಕಂತೆ-ಕಂತೆ ನೋಟು, ಅಪಾರ ಚಿನ್ನಾಭರಣ ಪತ್ತೆ
ಈ ಹಿಂದೆ ಅಂಬೆರಾಯ ರಾಯಚೂರು ಗ್ರಾಮೀಣ ಠಾಣೆಯ ಸಿಪಿಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.