ETV Bharat / state

ನಿಯಮದ ಪ್ರಕಾರ ಕಾಂಗ್ರೆಸ್​​​ ಶಾಸಕರು ರಾಜೀನಾಮೆ ಕೊಟ್ಟಿಲ್ಲ: ಶರವಣ - ಹೆಚ್.ವಿಶ್ವನಾಥ್, ಆನಂದ್​ಸಿಂಗ್, ರಮೇಶ್ ಜಾರಕಿಹೊಳಿ, ಕರ್ನಾಟಕ, ರಾಯಚೂರು, ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​, ಮೈತ್ರಿ ಸರ್ಕಾರ, ಶರವಣ, ಈಟೀವ್ ಭಾರತ್

ಹೆಚ್​.ಡಿ.ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲು ಸರ್ಕಾರ ಬಿಳುತ್ತೆ ಅಂತಾ ಹೇಳುತ್ತಿದ್ದಾರೆ. ಜನಕ್ಕೂ ಕೂಡ ಬಿಜೆಪಿಯವರ ಮೇಲೆ ಬೇಸರವಾಗಿದೆ. ಜನಪರ ಕಾರ್ಯಕ್ರಮಗಳ ಮೂಲಕ  ಕುಮಾರಸ್ವಾಮಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಇದನ್ನು ಜನರು ಕೂಡ ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು ಚುನಾವಣೆಗೋಷ್ಕರ ಪಕ್ಷ ಸಂಘಟನೆ ಮಾಡುತ್ತಿಲ್ಲ ಎಂದು ಶರವಣ ಹೇಳಿದರು.

ಶರವಣ
author img

By

Published : Jul 4, 2019, 10:08 PM IST

ರಾಯಚೂರು: ಕಾಂಗ್ರೆಸ್​ ಶಾಸಕರಾದ ಆನಂದ್ ​ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ನೀಡಿರುವ ರಾಜೀನಾಮೆ ನಿಯಮ ಪ್ರಕಾರ ನೀಡಿಲ್ಲ. ಈ ಕುರಿತು ಈಗಾಗಲೇ ಸ್ಪೀಕರ್​ ರಮೇಶ್​ಕುಮಾರ್​ ಸ್ಪಷ್ಟಪಡಿಸಿದ್ದಾರೆ. ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರು ಅಮೆರಿಕದಿಂದ ಬಂದ ಬಳಿಕ ಆನಂದ್​ ಸಿಂಗ್ ಜೊತೆ ಮಾತನಾಡಲಿದ್ದಾರೆ ಎಂದು ವಿಧಾನ ಪರಿಷತ್​ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಹೇಳಿದರು.

ಇಂದು ಮಂತ್ರಾಲಯಕ್ಕೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಬರುತ್ತಿರುತ್ತವೆ. ಅವುಗಳನ್ನು ನಾವು ಎದುರಿಸಲಿದ್ದೇವೆ. ಆದರೆ, ಅಧಿಕಾರಿಕ್ಕಾಗಿ ಬಿಜೆಪಿ ತಿರುಕನ ಕನಸು ಕಾಣುತ್ತಿದೆ ಎಂದು ಲೇವಡಿ ಮಾಡಿದರು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಬೀಳುತ್ತೆ ಅಂತ ಬಿಜೆಪಿ ಹೇಳುತ್ತಿದೆ. ಅದಕ್ಕೆ ಮಹತ್ವ ನೀಡುವ ಬದಲಿಗೆ ವಿರೋಧ ಪಕ್ಷದಲ್ಲಿ ಕುಳಿತು ಸಲಹೆ ನೀಡಲಿ. ಹೆಚ್.ವಿಶ್ವನಾಥ್ ರಾಜೀನಾಮೆ ದೀಢಿರ್ ಬೆಳವಣಿಗೆಯಲ್ಲ. ವಿಶ್ವನಾಥ್ ಅವರು ಆರು ತಿಂಗಳಿಂದ ರಾಜೀನಾಮೆ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ರಾಜೀನಾಮೆ ಬೇಡ ಎಂದು ಹೆಚ್​.ಡಿ.ಕುಮಾರಸ್ವಾಮಿ ಮತ್ತು ಹೆಚ್​.ಡಿ.ದೇವೆಗೌಡರು ಹೇಳಿದ್ದರು. ರಾಜೀನಾಮೆ ನೀಡದಂತೆ ಮನವೊಲಿಸಲು ಕೂಡ ಪ್ರಯತ್ನಿಸಿದ್ದರು. ಆದ್ರೆ ಅದು ಯಶಸ್ವಿ ಆಗಿಲ್ಲ. ಹೆಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್​​ ಸದಸ್ಯ ಟಿ.ಎ.ಶರವಣ

ಜೆಡಿಎಸ್ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ವೈ.ಎಸ್.ವಿ.ದತ್ತಾ ಅವರು ಪಾದಯಾತ್ರೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಚುನಾವಣೆಯ ನಂತರ ರಾಜಕೀಯ ಅನುಭವ ಸಿಕ್ಕಿದೆ. ಹೀಗಾಗಿ ಅವರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಯಚೂರು: ಕಾಂಗ್ರೆಸ್​ ಶಾಸಕರಾದ ಆನಂದ್ ​ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ನೀಡಿರುವ ರಾಜೀನಾಮೆ ನಿಯಮ ಪ್ರಕಾರ ನೀಡಿಲ್ಲ. ಈ ಕುರಿತು ಈಗಾಗಲೇ ಸ್ಪೀಕರ್​ ರಮೇಶ್​ಕುಮಾರ್​ ಸ್ಪಷ್ಟಪಡಿಸಿದ್ದಾರೆ. ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರು ಅಮೆರಿಕದಿಂದ ಬಂದ ಬಳಿಕ ಆನಂದ್​ ಸಿಂಗ್ ಜೊತೆ ಮಾತನಾಡಲಿದ್ದಾರೆ ಎಂದು ವಿಧಾನ ಪರಿಷತ್​ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಹೇಳಿದರು.

ಇಂದು ಮಂತ್ರಾಲಯಕ್ಕೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಬರುತ್ತಿರುತ್ತವೆ. ಅವುಗಳನ್ನು ನಾವು ಎದುರಿಸಲಿದ್ದೇವೆ. ಆದರೆ, ಅಧಿಕಾರಿಕ್ಕಾಗಿ ಬಿಜೆಪಿ ತಿರುಕನ ಕನಸು ಕಾಣುತ್ತಿದೆ ಎಂದು ಲೇವಡಿ ಮಾಡಿದರು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಬೀಳುತ್ತೆ ಅಂತ ಬಿಜೆಪಿ ಹೇಳುತ್ತಿದೆ. ಅದಕ್ಕೆ ಮಹತ್ವ ನೀಡುವ ಬದಲಿಗೆ ವಿರೋಧ ಪಕ್ಷದಲ್ಲಿ ಕುಳಿತು ಸಲಹೆ ನೀಡಲಿ. ಹೆಚ್.ವಿಶ್ವನಾಥ್ ರಾಜೀನಾಮೆ ದೀಢಿರ್ ಬೆಳವಣಿಗೆಯಲ್ಲ. ವಿಶ್ವನಾಥ್ ಅವರು ಆರು ತಿಂಗಳಿಂದ ರಾಜೀನಾಮೆ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ರಾಜೀನಾಮೆ ಬೇಡ ಎಂದು ಹೆಚ್​.ಡಿ.ಕುಮಾರಸ್ವಾಮಿ ಮತ್ತು ಹೆಚ್​.ಡಿ.ದೇವೆಗೌಡರು ಹೇಳಿದ್ದರು. ರಾಜೀನಾಮೆ ನೀಡದಂತೆ ಮನವೊಲಿಸಲು ಕೂಡ ಪ್ರಯತ್ನಿಸಿದ್ದರು. ಆದ್ರೆ ಅದು ಯಶಸ್ವಿ ಆಗಿಲ್ಲ. ಹೆಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್​​ ಸದಸ್ಯ ಟಿ.ಎ.ಶರವಣ

ಜೆಡಿಎಸ್ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ವೈ.ಎಸ್.ವಿ.ದತ್ತಾ ಅವರು ಪಾದಯಾತ್ರೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಚುನಾವಣೆಯ ನಂತರ ರಾಜಕೀಯ ಅನುಭವ ಸಿಕ್ಕಿದೆ. ಹೀಗಾಗಿ ಅವರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಯಚೂರು ಜೂ.4
ಶಾಸಕ ಆನಂದ ಸಿಂಗ್ ರಾಜೀನಾಮೆ ವಿಚಾರ
ಕಾಂಗ್ರೆಸ್ ಶಾಸಕರ ರಾಜೀನಾಮೆ ನಿಯಮ ಪ್ರಕಾರ ನೀಡಿಲ್ಲಈ ಕುರಿತು ಈಗಾಗಲೇ ಸಭಾಪತಿಗಳು ಸ್ಪಷ್ಟಪಡಿಸಿದ್ದಾರೆ ಸಿಎಂ ಅವರು ಅಮೆರಿಕದಿಂದ ಬಂದ ಮೇಲೆ ಆನಂದ ಸಿಂಗ್ ಜೊತೆ ಸಿಎಂ ಮಾತುಕತೆ ನಡೆಸುತ್ತಾರೆ
ಎಂದು ರಾಯಚೂರಿನಲ್ಲಿ  ವಿಧಾನ ಪರಿಷತ್ಜೆ ಸದಸ್ಯ‌ ಶರವಣ ಹೇಳಿದರು.
ಅವರಿಂದು ಮಂತ್ರಾಲಯಕ್ಕೆ ಹೋಗುವ ಮುನ್ನ  ತಮ್ಮ ಸಮಾಜದ ಮುಖಂಡ ಲಕ್ಷ್ಮಿಪತಿ ಅವರ ನಿವಾಸದಲ್ಲಿ ಮಾದ್ಯಮಗಾರರೊಂದಿಗೆ ಮಾತನಾಡಿ, ರಾಜುನಾಮೆ ಬಗ್ಗೆ ಶಾಸಕ ಆನಂದ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ
ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ
ಸಂಮಿಶ್ರ ಸರ್ಕಾರದಲ್ಲಿ ಇಂತಹ ಸಣ್ಣ ಸಣ್ಣ ಸಮಸ್ಯೆ ಗಳು ಬರುತ್ತಿರುತ್ತವೆ ನಾವು ಎದುರಿಸಲಿದ್ದೆವೆ ಇದನ್ನು ಬಿಜೆಪಿ ಅವರು ಅಧಿಕಾರಕ್ಕಾಗಿ ತಿರುಕನ ಕನಸು ಕಾಣ್ತಿದಾರೆ ಎಂದು ಲೇವಡಿ ಮಾಡಿದರು.
ಸರಕಾರ ಬೀಳುತ್ವುತೆ ಎಂದು ಸಮ್ಮಿಶ್ರ ಸರಕಾರ ಬಂದಾಗಿನಿಂದ ಹೇಳಲಾಗ್ತಿದೆ ಅದಕ್ಕೆ  ಗೆ ಮಹತ್ವ ನೀಡುವುದು ಬೇಡ
ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತು ನಮಗೆ ಸಲಹೆ ನೀಡಲಿ
ಬಿಜೆಪಿ ಏನೋ ಏನೋ ಹೇಳುತ್ತಾ ತಿರುಕನ ಕನಸು ಕಾಣುವುದು ಬೇಡ ಎಂದರು.
ರಾಜ್ಯದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ವಿಶ್ವನಾಥ್ ಅವರು ಬಹಳ ಅನುಭವ ಬಹಳ ಅಲೋಚನೆ ಹೊಂದಿದ್ದ ಹಿರಿಯ ರಾಜಕಾರಣಿ...

ಎಚ್ ವಿಶ್ವನಾಥ್ ರಾಜೀನಾಮೆ ದೀಢಿರ್ ಬೆಳವಣಿಗೆಯಲ್ಲವಿಶ್ವನಾಥ್ ಅವರು ಸತತ ಕಳೆದ ೬ ತಿಂಗಳಿನಿಂದ ರಾಜೀನಾಮೆ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದರು ರಂದರು.

ನನಗೆ ರಾಜ್ಯಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಿ ನನಗೆ ಅವಕಾಶ ಮಾಡಿಕೊಡಿ ಅಂತಾ ವರಿಷ್ಠರಲ್ಲಿ ಬಹು ದಿನಗಳಿಂದ ಒತ್ತಾಯ ಮಾಡಿದ್ದರು...

ಲೋಕಸಭೆ ಚುನಾವಣೆ ಹಿನ್ನೆಲೆ ರಾಜೀನಾಮೆ  ಬೇಡಾ ಅಂತಾ ಕುಮಾರಸ್ವಾಮಿ ಮತ್ತು ದೇವೆಗೌಡರು ಹೇಳಿದ್ದರು...

ರಾಜೀನಾಮೆ ನೀಡದಂತೆ ಮನವೊಲಿಸಲು ಕೂಡ ಪ್ರಯತ್ನಿಸಿದ್ದರು ಆದ್ರೆ ಅದು ಯಶಸ್ವಿ ಆಗಿಲ್ಲ...

ನನಗೆ ರಾಜ್ಯಧ್ಯಕ್ಷನಾಗಿ ಕೆಲಸ ಮಾಡೊಕೆ ಆಗೋದಿಲ್ಲ ಆಗೋದಿಲ್ಲ ಅಂತಾ ರಾಜಿನಾಮೆ ಮಾಡಿದ್ದಾರೆ...


ನೂತನವಾಗಿ ಎಚ್ ಕೆ ಕುಮಾರಸ್ವಾಮಿಗೆ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಅದನ್ನು ಸ್ವಾಗತಿಸುತ್ತೇವೆ...
ಜೆಡಿಎಸ್ ಪಕ್ಷಕ್ಕೆ ಹೊಸ ಸ್ವರೂಪವನ್ನಾ ಹೊಸ ಕಾಯಕಲ್ಪವನ್ನು ನೀಡುವ ದೃಷ್ಟಿಯಲ್ಲಿ  ಪಕ್ಷ ಸಂಘಟನೆ ಮಾಡಲಾಗುತ್ತಿದೆ...

ಚುನಾವಣೆಯಲ್ಲಿ ಸೋತ ನಂತರ ಕುಮಾರಸ್ವಾಮಿಯವರು ಮನೆಯಲಿ ಮಲಗಿಲ್ಲ...

ವಿಭಿನ್ನ ಕಾರ್ಯಕ್ರಮ ಮೂಲಕ ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟುತ್ತಿದ್ದಾರೆ...
ಜೆಡಿಎಸ್ ಪಾದಯಾತ್ರೆ ಬಗ್ಗೆ ಮಾರನಾಡಿದ ಅವರು,ವೈ ಎಸ್ ವಿ ದತ್ತಾ ಅವರು ಪಾದಯಾತ್ರೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ...ಈ ರಾಜ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಲು ಈ ಪಾದಯಾತ್ರೆ...

ನಿಖಿಲ್ ಕುಮಾರಸ್ವಾಮಿ ಅವರಿಗೆ  ಚುನಾವಣೆಯ ನಂತರ ರಾಜಕೀಯ ಅನುಭವ ಸಿಕ್ಕಿದೆ ಹೀಗಾಗಿ ಅವರು ಕೂಡ ಪಾದಯಾತ್ರೆಯ ನೇತೃತ್ವ ವಹಿಸಿಕೊಳ್ಳುತ್ತಾರೆ.ಜೆಡಿಎಸ್ ಪಕ್ಷದ  ಸಂಘಟನೆಯನ್ನು ಹೆಚ್ಚು ಮಾಡಿ ಶಕ್ತಿ ತುಂಬುವ ಕೆಲಸ ಆಗಲಿದೆ...

ಮೈತ್ರಿ ಸರ್ಕಾರಭದ್ರ:ಕುಮಾರಸ್ವಾಮಿಯವರು  ಅಧಿಕಾರ ವಹಿಸಿಕೊಂಡಾಗಿನಿಂದಲು ಸರ್ಕಾರ ಬಿಳುತ್ತೆ ಅಂತಾ ಹೇಳುತ್ತಿದ್ದಾರೆ...

ಜನಕ್ಕೂ ಕೂಡ ಬಿಜೆಪಿಯವರ ಮೇಲೆ  ಬೇಜಾರಾಗಿದೆ....

ಜನಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆಯನ್ನು ಕುಮಾರಸ್ವಾಮಿಯವರು ಗಳಿಸಿಕೊಂಡಿದ್ದಾರೆ ಇದನ್ನು ಜನರು ಕೂಡ ಹೇಳುತ್ತಿದ್ದಾರೆ.ಜೆಡಿಎಸ್ ಪಕ್ಷವನ್ನು ಚುನಾವಣೆಗೋಷ್ಕರ ಪಕ್ಷ ಸಂಘಟನೆ ಮಾಡುತ್ತಿಲ್ಲ ಎಂದರು.

visuals live u app

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.