ETV Bharat / state

ಎಸ್​ಬಿಐ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನ: ಓರ್ವನ ಬಂಧನ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಎಸ್‌ಬಿಐ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನಿಸಿದ ಮೂವರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Nov 5, 2020, 10:27 AM IST

as
ರಾಯಚೂರಿನ ಎಸ್​ಬಿಐ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನ:

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಎಸ್‌ಬಿಐ ಬ್ಯಾಂಕ್ ಬೀಗ ಮುರಿದು ದರೋಡೆಗೆ ಯತ್ನಿಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ಎಸ್​ಬಿಐ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನ: ಓರ್ವನ ಬಂಧನ

ನಿನ್ನೆ ತಡರಾತ್ರಿ ಬ್ಯಾಂಕ್​ ಹೊರಗಡೆಯ ಸಿಸಿ ಕ್ಯಾಮರಾ ಜಖಂಗೊಳಿಸಿ ಮುಖ್ಯ ಬಾಗಿಲು ಒಡೆದು ಬ್ಯಾಂಕ್ ಒಳಗೆ ಪ್ರವೇಶಿಸಿ ಕಳ್ಳರು ಹಣ ದೋಚುತ್ತಿದ್ದರು. ಅದೇ ಸಮಯಕ್ಕೆ ರಾತ್ರಿ ಗಸ್ತು ಬಂದ ಪೊಲೀಸರು ಬ್ಯಾಂಕ್ ಬಾಗಿಲು ತೆರೆದಿದ್ದನ್ನು ಗಮನಿಸಿ ಬ್ಯಾಂಕ್​ ಒಳಗೆ ಹೋಗಿದ್ದಾರೆ.

ಪೊಲೀಸರು ಬಂದಿದ್ದನ್ನು ಕಂಡ 3 ಜನ ದರೋಡೆಕೋರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಒಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ಈ ಸಂಬಂಧ ಮಾನ್ವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಎಸ್‌ಬಿಐ ಬ್ಯಾಂಕ್ ಬೀಗ ಮುರಿದು ದರೋಡೆಗೆ ಯತ್ನಿಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ಎಸ್​ಬಿಐ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನ: ಓರ್ವನ ಬಂಧನ

ನಿನ್ನೆ ತಡರಾತ್ರಿ ಬ್ಯಾಂಕ್​ ಹೊರಗಡೆಯ ಸಿಸಿ ಕ್ಯಾಮರಾ ಜಖಂಗೊಳಿಸಿ ಮುಖ್ಯ ಬಾಗಿಲು ಒಡೆದು ಬ್ಯಾಂಕ್ ಒಳಗೆ ಪ್ರವೇಶಿಸಿ ಕಳ್ಳರು ಹಣ ದೋಚುತ್ತಿದ್ದರು. ಅದೇ ಸಮಯಕ್ಕೆ ರಾತ್ರಿ ಗಸ್ತು ಬಂದ ಪೊಲೀಸರು ಬ್ಯಾಂಕ್ ಬಾಗಿಲು ತೆರೆದಿದ್ದನ್ನು ಗಮನಿಸಿ ಬ್ಯಾಂಕ್​ ಒಳಗೆ ಹೋಗಿದ್ದಾರೆ.

ಪೊಲೀಸರು ಬಂದಿದ್ದನ್ನು ಕಂಡ 3 ಜನ ದರೋಡೆಕೋರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಒಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ಈ ಸಂಬಂಧ ಮಾನ್ವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.