ETV Bharat / state

ಬಾಡೂಟದ ಬಳಿಕ ಬರ್ಬರ ಹತ್ಯೆ : ಜೋಡಿ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದ ಮೈಸೂರು!

author img

By

Published : Feb 8, 2021, 7:45 AM IST

Updated : Feb 8, 2021, 11:46 AM IST

ಮೈಸೂರಲ್ಲಿ ಜೋಡಿ ಕೊಲೆ
Two person murder by unknown persons in Mysore

10:02 February 08

ಭೀಕರ ಹತ್ಯೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದೇನು

murder persons
ಕೊಲೆಯಾದ ವ್ಯಕ್ತಿಗಳು ಹಾಗೂ ಗಾಯಗೊಂಡಿರುವ ವ್ಯಕ್ತಿ

ಮೈಸೂರು: ನಿವೇಶನ ಹಾಗೂ ಹಳೇ ದ್ವೇಷದ ಹಿನ್ನೆಲೆ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಎಲೆ ತೋಟದ ಬಳಿ ತಡರಾತ್ರಿ ನಡೆದಿದೆ.

ಗೌರಿಶಂಕರ್ ನಗರ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಬರ್ಬರವಾಗಿ ಕೊಲೆಯಾದವರು. ಈ ಘಟನೆಯಲ್ಲಿ ಮಧು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ಎಸಿಪಿ ಪೂರ್ಣಚಂದ್ರ ಕೆ.ಆರ್. ಪೊಲೀಸ್ ಠಾಣೆ ಇನ್​​ಸ್ಪೆಕ್ಟರ್, ಶ್ವಾನದಳ, ಬೆರಳಚ್ಚು ತಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

07:37 February 08

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನೆತ್ತರು ಹರಿದಿದೆ. ತಡರಾತ್ರಿ ಮಾರಕಾಸ್ತ್ರಗಳಿಂದ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ.

ಘಟನೆ ಸಂಬಂಧ ಮಾಹಿತಿ ನೀಡಿದ ಗಾಯಗೊಂಡ ಮಧು

ಘಟನೆ ಬಗ್ಗೆ ಮಾಹಿತಿ ನೀಡಿದ ಮಧು:

ಘಟನೆ ಸಂಬಂಧ ಗಾಯಗೊಂಡಿರುವ ಮಧು ಮಾಹಿತಿ ನೀಡಿದ್ದು, ಚಿಕನ್​ ಮಾಡಿಕೊಂಡು ಎಲೆ ತೋಟದ ಬಳಿ ಮೂವರು ಸೇರಿಕೊಂಡು ಎಣ್ಣೆ ಪಾರ್ಸ್​ಲ್​ ತೆಗೆದುಕೊಂಡು ಹೋಗಿ ಕುಡಿಯುತ್ತಿದ್ದೆವು. ಆಗ ಮೀಸೆ ಸ್ವಾಮಿ ಎಂಬಾತನ ಮೈದುನ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಜಾಗದ ವಿಚಾರವಾಗಿ ಕಿರಣ್​ ಹಾಗೂ ಸ್ವಾಮಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿಸಿದ್ದಾನೆ.

10:02 February 08

ಭೀಕರ ಹತ್ಯೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿದ್ದೇನು

murder persons
ಕೊಲೆಯಾದ ವ್ಯಕ್ತಿಗಳು ಹಾಗೂ ಗಾಯಗೊಂಡಿರುವ ವ್ಯಕ್ತಿ

ಮೈಸೂರು: ನಿವೇಶನ ಹಾಗೂ ಹಳೇ ದ್ವೇಷದ ಹಿನ್ನೆಲೆ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಎಲೆ ತೋಟದ ಬಳಿ ತಡರಾತ್ರಿ ನಡೆದಿದೆ.

ಗೌರಿಶಂಕರ್ ನಗರ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಬರ್ಬರವಾಗಿ ಕೊಲೆಯಾದವರು. ಈ ಘಟನೆಯಲ್ಲಿ ಮಧು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ಎಸಿಪಿ ಪೂರ್ಣಚಂದ್ರ ಕೆ.ಆರ್. ಪೊಲೀಸ್ ಠಾಣೆ ಇನ್​​ಸ್ಪೆಕ್ಟರ್, ಶ್ವಾನದಳ, ಬೆರಳಚ್ಚು ತಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

07:37 February 08

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನೆತ್ತರು ಹರಿದಿದೆ. ತಡರಾತ್ರಿ ಮಾರಕಾಸ್ತ್ರಗಳಿಂದ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ.

ಘಟನೆ ಸಂಬಂಧ ಮಾಹಿತಿ ನೀಡಿದ ಗಾಯಗೊಂಡ ಮಧು

ಘಟನೆ ಬಗ್ಗೆ ಮಾಹಿತಿ ನೀಡಿದ ಮಧು:

ಘಟನೆ ಸಂಬಂಧ ಗಾಯಗೊಂಡಿರುವ ಮಧು ಮಾಹಿತಿ ನೀಡಿದ್ದು, ಚಿಕನ್​ ಮಾಡಿಕೊಂಡು ಎಲೆ ತೋಟದ ಬಳಿ ಮೂವರು ಸೇರಿಕೊಂಡು ಎಣ್ಣೆ ಪಾರ್ಸ್​ಲ್​ ತೆಗೆದುಕೊಂಡು ಹೋಗಿ ಕುಡಿಯುತ್ತಿದ್ದೆವು. ಆಗ ಮೀಸೆ ಸ್ವಾಮಿ ಎಂಬಾತನ ಮೈದುನ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಜಾಗದ ವಿಚಾರವಾಗಿ ಕಿರಣ್​ ಹಾಗೂ ಸ್ವಾಮಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿಸಿದ್ದಾನೆ.

Last Updated : Feb 8, 2021, 11:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.