ETV Bharat / state

ಹುಣಸೂರಲ್ಲಿ ಸಾರಿಗೆ ನೌಕರರ ಆಕ್ರೋಶಕ್ಕೆ ಐದು ಬಸ್​​ಗಳ ಗಾಜು ಪುಡಿ ಪುಡಿ: ಪ್ರಯಾಣಿಕರಿಗೆ ಗಾಯ - ಹುಣಸೂರಿನಲ್ಲಿ ಬಸ್​ಗೆ ಕಲ್ಲು ತೂರಿದ ನೌಕರರು

ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ತಟ್ಟೆ, ಲೋಟ ಬಡಿದು ಪ್ರತಿಭನಟೆ ನಡೆಸಲು ಸಿದ್ಧರಾಗಿದ್ದಾರೆ. ಈ ನಡುವೆ ಹುಣಸೂರಿನಿಂದ ಮೈಸೂರಿನ ಕಡೆಗೆ ಹೋಗುತ್ತಿದ್ದ ಬಸ್​ಗೆ ನೌಕರರೇ ಕಲ್ಲು ತೂರಿ ಜಖಂಗೊಳಿಸಿದ್ದಾರೆ.

ಬಸ್​ಗಳ ಮೇಲೆ ಕಲ್ಲು ತೂರಿದ ಸಾರಿಗೆ ನೌಕರರು
Transport employees destroyed 5 buses in Mysore
author img

By

Published : Apr 12, 2021, 11:21 AM IST

ಮೈಸೂರು: ಹುಣಸೂರಿನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್​​​ಗೆ ರಂಗಯ್ಯನಕೊಪ್ಪಲು ಗೇಟ್ ಬಳಿ ಸಾರಿಗೆ ನೌಕರರೇ ಕಲ್ಲು ತೂರಿ ಪ್ರಯಾಣಿಕರನ್ನು ಗಾಯಗೊಳಿಸಿದ ಘಟನೆ ನಡೆದಿದೆ.

ಸಂತೋಷ್ ಭಜಂತ್ರಿ ಹಾಗೂ ಕೃಷ್ಣ ಮೂರ್ತಿ ಕೃತ್ಯ ವೆಸಗಿದ ಸಾರಿಗೆ ನೌಕರರು ಎಂದು ತಿಳಿದುಬಂದಿದ್ದು, ಅವರು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬೆನ್ನಟ್ಟಿ ಆರೋಪಿಗಳನ್ನು ಅರಬ್ಬಿತಿಟ್ಟು ಅರಣ್ಯ ಪ್ರದೇಶದ ರಸ್ತೆಯಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Transport workers theow the stones on buses
ಬಸ್​ಗೆ ಕಲ್ಲು ತೂರಿದ ಸಾರಿಗೆ ನೌಕರರು

ಘಟನೆಯಲ್ಲಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಗೋಪಾಲಸ್ವಾಮಿ ಎಂಬುವವರ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಲ್ಲದೆ ಈ ಸಾರಿಗೆ ನೌಕರರು ಗಾವಡಗೆರೆ, ಯಶೋಧರಪುರ ಹಾಗೂ ಬೋಳನಹಳ್ಳಿ ಬಳಿ ತಲಾ ಒಂದು ಬಸ್​​​ಗೆ ಕಲ್ಲು ತೂರಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಬಿಳಿಕೆರೆ ಹಾಗೂ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ನೀಡಿದ ಭರವಸೆ ಈಡೇರಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಾರಿಗೆ ನೌಕರರು

ಪ್ರತಿಭಟಿಸಿದ ಮಹಿಳೆಯರು:

Transport employees destroyed 5 buses in Mysore
ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ಕುಟುಂಬ

ಹುಣಸೂರು ಸಾರಿಗೆ ಸಂಸ್ಥೆ ನೌಕರರ ಧರಣಿಯನ್ನು ಬೆಂಬಲಿಸಿ ಕುಟುಂಬದ ಮಂದಿ ಮಕ್ಕಳ ಸಮೇತ ಹುಣಸೂರು ಬಸ್ ಡಿಪೋ ಪ್ರತಿಭಟನೆ ನಡೆಸಿದರು. ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಡಿಪೋದಿಂದ ಹೊರ ಬರುತ್ತಿದ್ದ ಬಸ್ಸನ್ನು ಮಹಿಳೆಯರು ತಡೆಗಟ್ಟಲು ಮುಂದಾದ ವೇಳೆ ಇನ್​​ಸ್ಪೆಕ್ಟರ್ ರವಿ ಹಾಗೂ ಪೊಲೀಸರು ಅವರನ್ನು ನಿಯಂತ್ರಿಸಿ ಬಸ್​ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮೈಸೂರು: ಹುಣಸೂರಿನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್​​​ಗೆ ರಂಗಯ್ಯನಕೊಪ್ಪಲು ಗೇಟ್ ಬಳಿ ಸಾರಿಗೆ ನೌಕರರೇ ಕಲ್ಲು ತೂರಿ ಪ್ರಯಾಣಿಕರನ್ನು ಗಾಯಗೊಳಿಸಿದ ಘಟನೆ ನಡೆದಿದೆ.

ಸಂತೋಷ್ ಭಜಂತ್ರಿ ಹಾಗೂ ಕೃಷ್ಣ ಮೂರ್ತಿ ಕೃತ್ಯ ವೆಸಗಿದ ಸಾರಿಗೆ ನೌಕರರು ಎಂದು ತಿಳಿದುಬಂದಿದ್ದು, ಅವರು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬೆನ್ನಟ್ಟಿ ಆರೋಪಿಗಳನ್ನು ಅರಬ್ಬಿತಿಟ್ಟು ಅರಣ್ಯ ಪ್ರದೇಶದ ರಸ್ತೆಯಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Transport workers theow the stones on buses
ಬಸ್​ಗೆ ಕಲ್ಲು ತೂರಿದ ಸಾರಿಗೆ ನೌಕರರು

ಘಟನೆಯಲ್ಲಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಗೋಪಾಲಸ್ವಾಮಿ ಎಂಬುವವರ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಲ್ಲದೆ ಈ ಸಾರಿಗೆ ನೌಕರರು ಗಾವಡಗೆರೆ, ಯಶೋಧರಪುರ ಹಾಗೂ ಬೋಳನಹಳ್ಳಿ ಬಳಿ ತಲಾ ಒಂದು ಬಸ್​​​ಗೆ ಕಲ್ಲು ತೂರಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಬಿಳಿಕೆರೆ ಹಾಗೂ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ನೀಡಿದ ಭರವಸೆ ಈಡೇರಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಾರಿಗೆ ನೌಕರರು

ಪ್ರತಿಭಟಿಸಿದ ಮಹಿಳೆಯರು:

Transport employees destroyed 5 buses in Mysore
ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ಕುಟುಂಬ

ಹುಣಸೂರು ಸಾರಿಗೆ ಸಂಸ್ಥೆ ನೌಕರರ ಧರಣಿಯನ್ನು ಬೆಂಬಲಿಸಿ ಕುಟುಂಬದ ಮಂದಿ ಮಕ್ಕಳ ಸಮೇತ ಹುಣಸೂರು ಬಸ್ ಡಿಪೋ ಪ್ರತಿಭಟನೆ ನಡೆಸಿದರು. ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಡಿಪೋದಿಂದ ಹೊರ ಬರುತ್ತಿದ್ದ ಬಸ್ಸನ್ನು ಮಹಿಳೆಯರು ತಡೆಗಟ್ಟಲು ಮುಂದಾದ ವೇಳೆ ಇನ್​​ಸ್ಪೆಕ್ಟರ್ ರವಿ ಹಾಗೂ ಪೊಲೀಸರು ಅವರನ್ನು ನಿಯಂತ್ರಿಸಿ ಬಸ್​ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.