ETV Bharat / state

ಇದು ಹಾಫ್ ಲಾಕ್​ಡೌನ್: ಸರ್ಕಾರದ ನಡೆಗೆ ಹೆಚ್. ವಿಶ್ವನಾಥ್ ವ್ಯಂಗ್ಯ - ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್

ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಟ್ಟು ಸಂಪೂರ್ಣವಾಗಿ 15 ದಿನ ಲಾಕ್​ಡೌನ್ ಮಾಡಿ. ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

h vishwanath
ಹೆಚ್.ವಿಶ್ವನಾಥ್
author img

By

Published : May 8, 2021, 1:04 PM IST

ಮೈಸೂರು: ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಸಂಪೂರ್ಣ ಲಾಕ್​ಡೌನ್ ಅಲ್ಲ, ಹಾಫ್ ಲಾಕ್​ಡೌನ್​. ಕೂಡಲೇ ಸರ್ಕಾರ ಸಂಪೂರ್ಣ ಲಾಕ್​​ಡೌನ್ ಮಾಡಲು ಮರು ವಿಮರ್ಶೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸರ್ಕಾರಕ್ಕೆ ಹೆಚ್.ವಿಶ್ವನಾಥ್ ಸಲಹೆ

ಮೇ 10 ರಿಂದ 15 ದಿನಗಳ ಕಾಲ ಮುಖ್ಯಮಂತ್ರಿ ಘೋಷಣೆ ಮಾಡಿರುವ ಲಾಕ್​ಡೌನ್​ ಸರಿಯಿಲ್ಲ.‌ ಇದೊಂದು ಕರ್ಫ್ಯೂ ತರ. ಅಂದರೆ ಹಾಫ್ ಲಾಕ್‌ಡೌನ್. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಲಿಕ್ಕರ್ ಶಾಪ್, ಹೋಟೆಲ್, ಮಾರುಕಟ್ಟೆ ತೆರೆದಿರುತ್ತವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯವರು ತರಕಾರಿ ವ್ಯಾಪಾರ ಮಾಡಬಹುದು. ಈ ರೀತಿ ಎಲ್ಲವನ್ನು ಅರ್ಧ ಅರ್ಧ ಲಾಕ್​ಡೌನ್ ಮಾಡಿದರೆ ಏನು ಪ್ರಯೋಜನವಿಲ್ಲ. ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಟ್ಟು ಸಂಪೂರ್ಣವಾಗಿ 15 ದಿನ ಲಾಕ್​ಡೌನ್ ಮಾಡಿ. ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್. ನಗರದ ಶಾಸಕ ಸಾ ರಾ ಮಹೇಶ್ ತನ್ನ ಸ್ವಂತ ಖರ್ಚಿನಲ್ಲಿ 200 ಬೆಡ್​​ಗಳನ್ನು ನಿರ್ಮಾಣ ಮಾಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಮೊದಲ ಬಾರಿಗೆ ಸಾ ರಾ ಮಹೇಶ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಕೋವಿಡ್‌ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಹತ್ತು ಸಲಹೆ ನೀಡಿದ್ರು ಹೆಚ್​ಡಿಕೆ

ಮೈಸೂರು: ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಸಂಪೂರ್ಣ ಲಾಕ್​ಡೌನ್ ಅಲ್ಲ, ಹಾಫ್ ಲಾಕ್​ಡೌನ್​. ಕೂಡಲೇ ಸರ್ಕಾರ ಸಂಪೂರ್ಣ ಲಾಕ್​​ಡೌನ್ ಮಾಡಲು ಮರು ವಿಮರ್ಶೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸರ್ಕಾರಕ್ಕೆ ಹೆಚ್.ವಿಶ್ವನಾಥ್ ಸಲಹೆ

ಮೇ 10 ರಿಂದ 15 ದಿನಗಳ ಕಾಲ ಮುಖ್ಯಮಂತ್ರಿ ಘೋಷಣೆ ಮಾಡಿರುವ ಲಾಕ್​ಡೌನ್​ ಸರಿಯಿಲ್ಲ.‌ ಇದೊಂದು ಕರ್ಫ್ಯೂ ತರ. ಅಂದರೆ ಹಾಫ್ ಲಾಕ್‌ಡೌನ್. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಲಿಕ್ಕರ್ ಶಾಪ್, ಹೋಟೆಲ್, ಮಾರುಕಟ್ಟೆ ತೆರೆದಿರುತ್ತವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯವರು ತರಕಾರಿ ವ್ಯಾಪಾರ ಮಾಡಬಹುದು. ಈ ರೀತಿ ಎಲ್ಲವನ್ನು ಅರ್ಧ ಅರ್ಧ ಲಾಕ್​ಡೌನ್ ಮಾಡಿದರೆ ಏನು ಪ್ರಯೋಜನವಿಲ್ಲ. ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಟ್ಟು ಸಂಪೂರ್ಣವಾಗಿ 15 ದಿನ ಲಾಕ್​ಡೌನ್ ಮಾಡಿ. ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್. ನಗರದ ಶಾಸಕ ಸಾ ರಾ ಮಹೇಶ್ ತನ್ನ ಸ್ವಂತ ಖರ್ಚಿನಲ್ಲಿ 200 ಬೆಡ್​​ಗಳನ್ನು ನಿರ್ಮಾಣ ಮಾಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಮೊದಲ ಬಾರಿಗೆ ಸಾ ರಾ ಮಹೇಶ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಕೋವಿಡ್‌ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಹತ್ತು ಸಲಹೆ ನೀಡಿದ್ರು ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.