ETV Bharat / state

ಈಡೇರಿತು ದಾದಾ ಅಭಿಮಾನಿಗಳ ಬಹುವರ್ಷಗಳ ಬೇಡಿಕೆ: ವಿಷ್ಣು ಸ್ಮಾರಕಕ್ಕೆ ಸಿದ್ಧವಾಗ್ತಿದೆ ನಿವೇಶನ

ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಹುಟ್ಟೂರಿನಲ್ಲಿ ನಿರ್ಮಿಸಲು ಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದೆ. ಸ್ಮಾರಕ ನಿರ್ಮಾಣಕ್ಕಾಗಿ ನಿವೇಶನವನ್ನು ಸ್ವಚ್ಛಗೊಳಿಸಲಾಗುತ್ತಿದೆ.

author img

By

Published : Jul 1, 2019, 2:00 PM IST

ವಿಷ್ಣು ಸ್ಮಾರಕಕ್ಕೆ ಸಿದ್ಧವಾಯ್ತು ನಿವೇಶನ

ಮೈಸೂರು: ಸಾಹಸಸಿಂಹ, ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಹುಟ್ಟೂರಿನಲ್ಲಿ ನಿರ್ಮಿಸಬೇಕೆಂಬ ಅಭಿಮಾನಿಗಳ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಮೂಲಕ ಭಾರತಿ ವಿಷ್ಣುವರ್ಧನ್ ಹೋರಾಟ ಕೈಗೂಡಿದೆ.

ವಿಷ್ಣು ಸ್ಮಾರಕಕ್ಕೆ ಸಿದ್ಧವಾಯ್ತು ನಿವೇಶನ

ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ 10 ವರ್ಷಗಳ ಹಿಂದೆ ಭಾರತಿ ವಿಷ್ಣುವರ್ಧನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರವು 5 ಎಕರೆ ಪ್ರದೇಶವನ್ನು ಸ್ಮಾರಕ ನಿರ್ಮಾಣಕ್ಕೆ ನೀಡಿತ್ತು. ಜಮೀನಿನಲ್ಲಿ ಹಲವು ವರ್ಷಗಳ ಕಾಲ ಉಳುಮೆ ಮಾಡುತ್ತಿದ್ದ ಕೃಷಿಕರು ಜಮೀನು ಬಿಡಲು ಸಾಧ್ಯವಿಲ್ಲವೆಂದು ಕೋಟ್೯ ಮೆಟ್ಟಿಲೇರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಭಾರತಿ ಅವರ ಪರವಾಗಿ ತೀರ್ಪು ನೀಡಿರುವುದರಿಂದ ವಿಷ್ಣುವರ್ಧನ್ ಸ್ಮಾರಕಕ್ಕೆ ಅಡತಡೆಗಳು ನಿವಾರಣೆಯಾಗಿವೆ. ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿಗಾಗಿ ನಿವೇಶನವನ್ನು ಸಸ್ವಚ್ಛಗೊಳಿಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ತಹಶಿಲ್ದಾರ್​ ಅವರು ಕೋರ್ಟ್​ ಆದೇಶದಂತೆ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಪೊಲೀಸ್​ ಭದ್ರತೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮೈಸೂರು: ಸಾಹಸಸಿಂಹ, ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಹುಟ್ಟೂರಿನಲ್ಲಿ ನಿರ್ಮಿಸಬೇಕೆಂಬ ಅಭಿಮಾನಿಗಳ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಮೂಲಕ ಭಾರತಿ ವಿಷ್ಣುವರ್ಧನ್ ಹೋರಾಟ ಕೈಗೂಡಿದೆ.

ವಿಷ್ಣು ಸ್ಮಾರಕಕ್ಕೆ ಸಿದ್ಧವಾಯ್ತು ನಿವೇಶನ

ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ 10 ವರ್ಷಗಳ ಹಿಂದೆ ಭಾರತಿ ವಿಷ್ಣುವರ್ಧನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರವು 5 ಎಕರೆ ಪ್ರದೇಶವನ್ನು ಸ್ಮಾರಕ ನಿರ್ಮಾಣಕ್ಕೆ ನೀಡಿತ್ತು. ಜಮೀನಿನಲ್ಲಿ ಹಲವು ವರ್ಷಗಳ ಕಾಲ ಉಳುಮೆ ಮಾಡುತ್ತಿದ್ದ ಕೃಷಿಕರು ಜಮೀನು ಬಿಡಲು ಸಾಧ್ಯವಿಲ್ಲವೆಂದು ಕೋಟ್೯ ಮೆಟ್ಟಿಲೇರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಭಾರತಿ ಅವರ ಪರವಾಗಿ ತೀರ್ಪು ನೀಡಿರುವುದರಿಂದ ವಿಷ್ಣುವರ್ಧನ್ ಸ್ಮಾರಕಕ್ಕೆ ಅಡತಡೆಗಳು ನಿವಾರಣೆಯಾಗಿವೆ. ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿಗಾಗಿ ನಿವೇಶನವನ್ನು ಸಸ್ವಚ್ಛಗೊಳಿಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ತಹಶಿಲ್ದಾರ್​ ಅವರು ಕೋರ್ಟ್​ ಆದೇಶದಂತೆ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಪೊಲೀಸ್​ ಭದ್ರತೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Intro:ವಿಷ್ಣು ಸ್ಮಾರಕ


Body:ವಿಷ್ಣು ಸ್ಮಾರಕ


Conclusion:ಭಾರತೀ ಅವರ ಬಹುವರ್ಷಗಳ ಹೋರಾಟ ಈಡೇರಿಕೆ ವಿಷ್ಣು ಸ್ಮಾರಕಕ್ಕೆ ನಿವೇಶನ ಕ್ಲಿನ್ ಕ್ಲಿನ್
ಮೈಸೂರು: ಸಾಹಸಸಿಂಹ ನಟ ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಹುಟ್ಟೂರಿನಲ್ಲಿ ನಿರ್ಮಾಣ ಮಾಡಬೇಕು ಎಂದು ಹಲವು ಹರ್ಷಗಳ ಪತ್ನಿ ಭಾರತಿ ವಿಷ್ಣುವರ್ಧನ್ ಹೋರಾಟ ಕೊನೆಗೂ ಕೈಗೂಡಿದೆ.
ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ 10 ವರ್ಷಗಳ ಹಿಂದೆ ಭಾರತೀ ವಿಷ್ಣುವರ್ಧನ್ ಅವರ ಸರ್ಕಾರಕ್ಕೆ ಮನವಿ ಮಾಡಿದರು.ಸರ್ಕಾರವು 5ಎಕರೆ ಪ್ರದೇಶವನ್ನು ಸ್ಥಳ ನೀಡಿತು.ಜಮೀನನಲ್ಲಿ ಹಲವು ವರ್ಷಗಳ ಕಾಲ ಉಳುವೆ ಮಾಡುತ್ತಿದ್ದ ಕೃಷಿಕರು ಜಮೀನು ಬಿಡಲು ಸಾಧ್ಯವಿಲ್ಲವೆಂದು ಕೋಟ್೯ಗೆ ಹೋಗಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಭಾರತೀ ಅವರ ಪರವಾಗಿ ತೀರ್ಪು ನೀಡಿರುವುದರಿಂದ ವಿಷ್ಣುವರ್ಧನ್ ಸ್ಮಾರಕಕ್ಕೆ ಅಡತಡೆಗಳು ನಿವಾರಣೆಯಾಗದೆ.
ಈ‌ ಸಂಬಂಧ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ತಹಸೀಲ್ದಾರ್ ರಮೇಶ್ ಬಾಬು ಅವರು ವಿವರಣೆ ನೀಡಿದರು.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.