ETV Bharat / state

'ನಿಮ್ಮ ಮನೆ ಬಾಗಿಲಿಗೇ ವೈದ್ಯರು' : ಮೊಬೈಲ್ ಕ್ಲಿನಿಕ್​ಗೆ ಚಾಲನೆ ನೀಡಿದ ಸಚಿವರು - mobile clinic ltest news

'ನಿಮ್ಮ ಮನೆ ಬಾಗಿಲಿಗೆ ವೈದ್ಯರು' ಎಂಬ ಉದ್ದೇಶದಿಂದ ನಗರ ಪಾಲಿಕೆ ಮೊಬೈಲ್ ಕ್ಲಿನಿಕ್ ಆರಂಭಿಸಿದೆ. ನಗರಪಾಲಿಕೆಯ ಮಂಡಕಳ್ಳಿ, ರಮಾಬಾಯಿನಗರ, ಗುಂಡೂರಾವ್‌ ನಗರ, ಗೋಕುಲ್ 2ನೇ ಹಂತ, ಪೌರಕಾರ್ಮಿಕರ ಕಾಲೋನಿ, ಗಿರಿಯ ಭೋವಿಪಾಳ್ಯ, ಬಸವನಗುಡಿ, ಹೆಬ್ಬಾಳ, ಮಂಚೇಗೌಡನ ಕೊಪ್ಪಲು ,ಕೈಲಸಪುರಂ, ಕುರಿಮಂಡಿ, ಹೈವೇ ಸರ್ಕಲ್ ಈ 10 ಸ್ಥಳಗಳಲ್ಲಿ ಈ ಮೊಬೈಲ್​ ಕ್ಲಿನಿಕ್​ ಕಾರ್ಯಾಚರಣೆ ಮಾಡಲಿವೆ. ಈ ಕಾರ್ಯಕ್ಕೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ ನೀಡಿದರು.

st-somashekar
ಎಸ್.ಟಿ. ಸೋಮಶೇಖರ್
author img

By

Published : Apr 29, 2020, 4:11 PM IST

ಮೈಸೂರು : ಹಾಟ್​ಸ್ಪಾಟ್ ಸ್ಥಳಗಳಲ್ಲಿ ನಿತ್ಯ ವೈದ್ಯಕೀಯ ತಪಾಸಣೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಲು ಮೈಸೂರು ಮಹಾನಗರ ಪಾಲಿಕೆ ಮೊಬೈಲ್ ಕ್ಲಿನಿಕ್ ಆರಂಭಿಸಿದೆ‌.

'ನಿಮ್ಮ ಮನೆ ಬಾಗಿಲಿಗೆ ವೈದ್ಯರು' ಎಂಬ ಉದ್ದೇಶದಿಂದ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ನಗರಪಾಲಿಕೆಯ ಮಂಡಕಳ್ಳಿ, ರಮಾಬಾಯಿನಗರ, ಗುಂಡೂರಾವ್‌ ನಗರ, ಗೋಕುಲ್ 2ನೇ ಹಂತ, ಪೌರಕಾರ್ಮಿಕರ ಕಾಲೋನಿ, ಗಿರಿಯ ಭೋವಿಪಾಳ್ಯ, ಬಸವನಗುಡಿ, ಹೆಬ್ಬಾಳ, ಮಂಚೇಗೌಡನ ಕೊಪ್ಪಲು ,ಕೈಲಸಪುರಂ, ಕುರಿಮಂಡಿ, ಹೈವೇ ಸರ್ಕಲ್ ಈ 10 ಸ್ಥಳಗಳಲ್ಲಿ ತಪಾಸಣೆ ಮಾಡಲಾಗುವುದು, ಜೊತೆಗೆ ಹಾಟ್​ಸ್ಪಾಟ್​ನಿಂದ ಸೀಲ್​ಡೌನ್ ಆಗಿರುವ ಪ್ರದೇಶಗಳಿಗೆ ತೆರಳಿ ಇತರ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು.

ಮೊಬೈಲ್ ಕ್ಲಿನಿಕ್ ಗೆ ಸಚಿವ ಎಸ್. ಟಿ. ಸೋಮಶೇಖರ್ ಅವರು ಇಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಂಜನಗೂಡು ಬಿಟ್ಟು ಉಳಿದ ತಾಲೂಕುಗಳಿಗೆ ಸಡಿಲಿಕೆ ನೀಡಬೇಕು ಅಥವಾ ಬೇಡವೇ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು‌.

ಎಸ್.ಟಿ. ಸೋಮಶೇಖರ್

ಜಿಲ್ಲೆಯಲ್ಲಿ ಕೊರೊನ ಮುಕ್ತ ಆಗುವವರೆಗೂ ಮೈಸೂರು ಸಡಲಿಕೆ ನೀಡುವುದು ಬೇಡವೆಂದು ಹಲವು ಸಂಸ್ಥೆಗಳು ಪರ-ವಿರೋಧ ಮಾಹಿತಿ ನೀಡಿವೆ. ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೈಸೂರು : ಹಾಟ್​ಸ್ಪಾಟ್ ಸ್ಥಳಗಳಲ್ಲಿ ನಿತ್ಯ ವೈದ್ಯಕೀಯ ತಪಾಸಣೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಲು ಮೈಸೂರು ಮಹಾನಗರ ಪಾಲಿಕೆ ಮೊಬೈಲ್ ಕ್ಲಿನಿಕ್ ಆರಂಭಿಸಿದೆ‌.

'ನಿಮ್ಮ ಮನೆ ಬಾಗಿಲಿಗೆ ವೈದ್ಯರು' ಎಂಬ ಉದ್ದೇಶದಿಂದ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ನಗರಪಾಲಿಕೆಯ ಮಂಡಕಳ್ಳಿ, ರಮಾಬಾಯಿನಗರ, ಗುಂಡೂರಾವ್‌ ನಗರ, ಗೋಕುಲ್ 2ನೇ ಹಂತ, ಪೌರಕಾರ್ಮಿಕರ ಕಾಲೋನಿ, ಗಿರಿಯ ಭೋವಿಪಾಳ್ಯ, ಬಸವನಗುಡಿ, ಹೆಬ್ಬಾಳ, ಮಂಚೇಗೌಡನ ಕೊಪ್ಪಲು ,ಕೈಲಸಪುರಂ, ಕುರಿಮಂಡಿ, ಹೈವೇ ಸರ್ಕಲ್ ಈ 10 ಸ್ಥಳಗಳಲ್ಲಿ ತಪಾಸಣೆ ಮಾಡಲಾಗುವುದು, ಜೊತೆಗೆ ಹಾಟ್​ಸ್ಪಾಟ್​ನಿಂದ ಸೀಲ್​ಡೌನ್ ಆಗಿರುವ ಪ್ರದೇಶಗಳಿಗೆ ತೆರಳಿ ಇತರ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು.

ಮೊಬೈಲ್ ಕ್ಲಿನಿಕ್ ಗೆ ಸಚಿವ ಎಸ್. ಟಿ. ಸೋಮಶೇಖರ್ ಅವರು ಇಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಂಜನಗೂಡು ಬಿಟ್ಟು ಉಳಿದ ತಾಲೂಕುಗಳಿಗೆ ಸಡಿಲಿಕೆ ನೀಡಬೇಕು ಅಥವಾ ಬೇಡವೇ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು‌.

ಎಸ್.ಟಿ. ಸೋಮಶೇಖರ್

ಜಿಲ್ಲೆಯಲ್ಲಿ ಕೊರೊನ ಮುಕ್ತ ಆಗುವವರೆಗೂ ಮೈಸೂರು ಸಡಲಿಕೆ ನೀಡುವುದು ಬೇಡವೆಂದು ಹಲವು ಸಂಸ್ಥೆಗಳು ಪರ-ವಿರೋಧ ಮಾಹಿತಿ ನೀಡಿವೆ. ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.