ನಂಜನಗೂಡು: ನಗರಸಭೆ ಅಧ್ಯಕ್ಷ ನಿಂದಿಸಿ, ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ವಿಕಲಚೇತನನೋರ್ವ ಏಕಾಂಗಿಯಾಗಿ ನಗರಸಭೆ ಕಚೇರಿ ಮುಂಭಾಗ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಅವರು ತಿಂಗಳ ಹಿಂದೆ ನಗರಸಭೆ ಕಚೇರಿಯ ಒಳಗೆ ನಿಂದಿಸಿದ್ದಾರೆ. ಈ ವಿಚಾರವಾಗಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ನಗರಸಭೆ ಅಧ್ಯಕ್ಷ ಹಾಗೂ ಪ್ರಭಾವಿ ರಾಜಕಾರಣಿಯಾಗಿರುವ ಕಾರಣ ಪೊಲೀಸರು ಕ್ರಮ ಕೈಗೊಂಡಿಲ್ಲ. ವಿಕಲಚೇತನನಾದ ನನಗೆ ಅನ್ಯಾಯವಾಗಿದೆ ಎಂದು ರವಿ ಆರೋಪಿಸಿದ್ದಾನೆ.
ನಗರಸಭಾಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳುವ ತನಕ ಈ ಕಚೇರಿಯ ಮುಂಭಾಗದಲ್ಲೇ ಉಪವಾಸ ಮಾಡಿ ಪ್ರತಿಭಟನೆ ನಡೆಸುತ್ತೇನೆ ಎಂದು ಪಟ್ಟುಹಿಡಿದು ಕುಳಿತಿದ್ದಾನೆ.