ಮೈಸೂರು: ದಾಯಾದಿಗಳ ದ್ವೇಷಕ್ಕೆ ಕಬ್ಬನ್ನು ಕುಡುಗೋಲಿನಿಂದ ಕೊಚ್ಚಿ ಹಾಕಿರುವ ಘಟನೆ ತಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ನರಸೀಪುರ ತಾಲ್ಲೂಕಿನ ಕೆಂಪೇಗೌಡನಕೊಪ್ಪಲು ಗ್ರಾಮದ ಸಿದ್ದಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ. ಸಿದ್ದಯ್ಯ ಅವರ ದಾಯಾದಿ ಹೊಂಬೇಗೌಡ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕಬ್ಬನ್ನು ನಾವೇ ಕತ್ತರಿಸುತ್ತೇವೆ ಎಂದು ತಿಳಿಸಿ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ. 14 ಗುಂಟೆ ಕಬ್ಬಿನ ಬೆಳೆಯನ್ನು ಹೊಂಬೆಗೌಡ ಮತ್ತು ಸಹಚರರು ನಾಶ ಮಾಡಿದ್ದಾರೆ. ಇದರಿಂದ ರೈತ ಸಿದ್ದಯ್ಯ ಹಾಗೂ ಕುಟುಂಬಸ್ಥರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.