ETV Bharat / state

ದಸರಾ ಬಳಿಕ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ, ವಿಸರ್ಜನೆ - ಮೈಸೂರು ಅರಮನೆ ರತ್ನ ಖಚಿತ ಸಿಂಹಾಸನ ವಿಸರ್ಜನೆ

ರಾಜಪರಂಪರೆಯಂತೆ ಶರನ್ನವರಾತ್ರಿ ಆಚರಣೆಗೆ ಅಕ್ಟೋಬರ್ 1ರಂದು ಸಂಪ್ರದಾಯದಂತೆ ಜೋಡಣೆ ಮಾಡಲಾಗಿದ್ದ ರತ್ನ ಖಚಿತ ಸಿಂಹಾಸನಕ್ಕೆ ಇಂದು ಪೂಜೆ ಸಲ್ಲಿಸಿದ ಬಳಿಕ ಮೈಸೂರು ಅರಮನೆಯಿಂದ ವಿಸರ್ಜನೆ ಮಾಡಲಾಗಿದೆ.

palace-golden-throne-dismantled-shifted-to-strong-room
ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರತ್ನ ಖಚಿತ ಸಿಂಹಾಸನ ವಿಸರ್ಜನೆ
author img

By

Published : Oct 31, 2021, 12:49 PM IST

ಮೈಸೂರು: ಅರಮನೆ ದರ್ಬಾರ್ ಹಾಲ್​ನಲ್ಲಿ ಶರನ್ನವರಾತ್ರಿಗೆ ಪೂಜೆ ಸಲ್ಲಿಸಲು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಇಂದು ವಿಸರ್ಜನೆ ಮಾಡಲಾಯಿತು.

ರಾಜಪರಂಪರೆಯಂತೆ ಶರನ್ನವರಾತ್ರಿ ಆಚರಣೆಗೆ ಅಕ್ಟೋಬರ್ 1ರಂದು ಸಂಪ್ರದಾಯದಂತೆ ಜೋಡಣೆ ಮಾಡಲಾಗಿದ್ದ ಸಿಂಹಾಸನವನ್ನು ಇಂದು ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆ ಮಾಡಲಾಗಿದೆ.

palace-golden-throne-dismantled-shifted-to-strong-room
ಸಿಂಹಾಸನ ವಿಸರ್ಜನೆ

ಅಕ್ಟೋಬರ್ 1ರಂದು ಶುಕ್ರವಾರ ಭಾದ್ರಪದ ಮಾಸದ ಶುಕ್ಲಪಕ್ಷ ದಶಮಿಯ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 9.15ರಿಂದ 9.30ರವರೆಗೆ ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನವನ್ನು ಜೋಡಿಸಲಾಗಿತ್ತು. ನಂತರ ಅಕ್ಟೋಬರ್ 7ರಿಂದ ಶರನ್ನವರಾತ್ರಿ ಆರಂಭವಾಗಿದ್ದು, ಅಂದು ಯದು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ಪೂಜೆ ಸಲ್ಲಿಸಿ ರಾಜಪರಂಪರೆಯಂತೆ ವಿಜಯದಶಮಿಯವರೆಗೆ ಖಾಸಗಿ ದರ್ಬಾರ್ ನಡೆಸಿದ್ದರು.

ಸ್ಟ್ರಾಂಗ್ ರೂಮ್​ನಲ್ಲಿ ಸಿಂಹಾಸನ ಭದ್ರ:

ಅರಮನೆಯ ನೆಲಮಾಳಿಗೆಯ ಕೊಠಡಿಯಲ್ಲಿ ರತ್ನಖಚಿತ ಸಿಂಹಾಸನ ಬಿಡಿಬಿಡಿಯಾಗಿ ಇರುತ್ತದೆ. ಬಿಡಿಬಿಡಿಯಾದ ಸಿಂಹಾಸನಕ್ಕೆ ವಿಶೇಷ ಪೂಜೆ, ಹೋಮ ಹವನ ನಡೆಸಿ, ದರ್ಬಾರ್ ಹಾಲ್​ನಲ್ಲಿ ಜೋಡಿಸಲಾಗುತ್ತದೆ. ಅಂದಿನಿಂದ ಪ್ರತಿದಿನ ಸಿಂಹಾಸನಕ್ಕೆ ರಾಜವಂಶಸ್ಥರು ಪೂಜೆ ಸಲ್ಲಿಸುತ್ತಾರೆ.

palace-golden-throne-dismantled-shifted-to-strong-room
ಸಿಂಹಾಸನ ವಿಸರ್ಜನೆ

ಇಂದು ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಬಳಿಕ ವಿಂಗಡಿಸಲಾಗಿದೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಸಿಂಹಾಸನವನ್ನು ಬಿಡಿ ಬಿಡಿ ಭಾಗಗಳಾಗಿ ವಿಂಗಡಿಸಿ, ಅರಮನೆ ಕೆಳಗಿನ ಸ್ಟ್ರಾಂಗ್ ರೂಮ್​ಗೆ ತಂದು ಇಡಲಾಗಿದೆ. ಅಲ್ಲಿಯೂ ಸಹ ಪೂಜೆ ಸಲ್ಲಿಸಿ, ರೂಮ್ ಬೀಗ ಹಾಕಿ ಸೀಲ್ ಮಾಡಲಾಗಿದೆ. ಮುಂದಿನ ವರ್ಷ ನವರಾತ್ರಿ ವೇಳೆ ಸೀಲ್ ಆದ ಕೊಠಡಿ ಬೀಗ ತೆಗೆದು ಮತ್ತೆ ಸಿಂಹಾಸನವನ್ನು ಶರನ್ನವರಾತ್ರಿ ಆಚರಣೆಗೆ ಸಿಂಹಾಸನ ಕೊಂಡೊಯ್ಯಲಾಗುವುದು.

palace-golden-throne-dismantled-shifted-to-strong-room
ಸ್ಟ್ರಾಂಗ್ ರೂಮ್

ಸಿಂಹಾಸನ ವಿಸರ್ಜನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅರಮನೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ: ನನ್ನ ಮಗುವನ್ನ ಕಳೆದುಕೊಂಡಿದ್ದೀನಿ.. ಅಂತ್ಯಕ್ರಿಯೆ ಬಳಿಕ ಶಿವಣ್ಣನ ಭಾವುಕ ನುಡಿ

ಮೈಸೂರು: ಅರಮನೆ ದರ್ಬಾರ್ ಹಾಲ್​ನಲ್ಲಿ ಶರನ್ನವರಾತ್ರಿಗೆ ಪೂಜೆ ಸಲ್ಲಿಸಲು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಇಂದು ವಿಸರ್ಜನೆ ಮಾಡಲಾಯಿತು.

ರಾಜಪರಂಪರೆಯಂತೆ ಶರನ್ನವರಾತ್ರಿ ಆಚರಣೆಗೆ ಅಕ್ಟೋಬರ್ 1ರಂದು ಸಂಪ್ರದಾಯದಂತೆ ಜೋಡಣೆ ಮಾಡಲಾಗಿದ್ದ ಸಿಂಹಾಸನವನ್ನು ಇಂದು ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆ ಮಾಡಲಾಗಿದೆ.

palace-golden-throne-dismantled-shifted-to-strong-room
ಸಿಂಹಾಸನ ವಿಸರ್ಜನೆ

ಅಕ್ಟೋಬರ್ 1ರಂದು ಶುಕ್ರವಾರ ಭಾದ್ರಪದ ಮಾಸದ ಶುಕ್ಲಪಕ್ಷ ದಶಮಿಯ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 9.15ರಿಂದ 9.30ರವರೆಗೆ ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನವನ್ನು ಜೋಡಿಸಲಾಗಿತ್ತು. ನಂತರ ಅಕ್ಟೋಬರ್ 7ರಿಂದ ಶರನ್ನವರಾತ್ರಿ ಆರಂಭವಾಗಿದ್ದು, ಅಂದು ಯದು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ಪೂಜೆ ಸಲ್ಲಿಸಿ ರಾಜಪರಂಪರೆಯಂತೆ ವಿಜಯದಶಮಿಯವರೆಗೆ ಖಾಸಗಿ ದರ್ಬಾರ್ ನಡೆಸಿದ್ದರು.

ಸ್ಟ್ರಾಂಗ್ ರೂಮ್​ನಲ್ಲಿ ಸಿಂಹಾಸನ ಭದ್ರ:

ಅರಮನೆಯ ನೆಲಮಾಳಿಗೆಯ ಕೊಠಡಿಯಲ್ಲಿ ರತ್ನಖಚಿತ ಸಿಂಹಾಸನ ಬಿಡಿಬಿಡಿಯಾಗಿ ಇರುತ್ತದೆ. ಬಿಡಿಬಿಡಿಯಾದ ಸಿಂಹಾಸನಕ್ಕೆ ವಿಶೇಷ ಪೂಜೆ, ಹೋಮ ಹವನ ನಡೆಸಿ, ದರ್ಬಾರ್ ಹಾಲ್​ನಲ್ಲಿ ಜೋಡಿಸಲಾಗುತ್ತದೆ. ಅಂದಿನಿಂದ ಪ್ರತಿದಿನ ಸಿಂಹಾಸನಕ್ಕೆ ರಾಜವಂಶಸ್ಥರು ಪೂಜೆ ಸಲ್ಲಿಸುತ್ತಾರೆ.

palace-golden-throne-dismantled-shifted-to-strong-room
ಸಿಂಹಾಸನ ವಿಸರ್ಜನೆ

ಇಂದು ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಬಳಿಕ ವಿಂಗಡಿಸಲಾಗಿದೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಸಿಂಹಾಸನವನ್ನು ಬಿಡಿ ಬಿಡಿ ಭಾಗಗಳಾಗಿ ವಿಂಗಡಿಸಿ, ಅರಮನೆ ಕೆಳಗಿನ ಸ್ಟ್ರಾಂಗ್ ರೂಮ್​ಗೆ ತಂದು ಇಡಲಾಗಿದೆ. ಅಲ್ಲಿಯೂ ಸಹ ಪೂಜೆ ಸಲ್ಲಿಸಿ, ರೂಮ್ ಬೀಗ ಹಾಕಿ ಸೀಲ್ ಮಾಡಲಾಗಿದೆ. ಮುಂದಿನ ವರ್ಷ ನವರಾತ್ರಿ ವೇಳೆ ಸೀಲ್ ಆದ ಕೊಠಡಿ ಬೀಗ ತೆಗೆದು ಮತ್ತೆ ಸಿಂಹಾಸನವನ್ನು ಶರನ್ನವರಾತ್ರಿ ಆಚರಣೆಗೆ ಸಿಂಹಾಸನ ಕೊಂಡೊಯ್ಯಲಾಗುವುದು.

palace-golden-throne-dismantled-shifted-to-strong-room
ಸ್ಟ್ರಾಂಗ್ ರೂಮ್

ಸಿಂಹಾಸನ ವಿಸರ್ಜನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅರಮನೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ: ನನ್ನ ಮಗುವನ್ನ ಕಳೆದುಕೊಂಡಿದ್ದೀನಿ.. ಅಂತ್ಯಕ್ರಿಯೆ ಬಳಿಕ ಶಿವಣ್ಣನ ಭಾವುಕ ನುಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.