ETV Bharat / state

ನಕಲಿ ದಾಖಲೆ ಸೃಷ್ಟಿಸಿ 1 ಕೋಟಿಗೂ ಹೆಚ್ಚು ಸಾಲ ಪಡೆದು ಪಂಗನಾಮ: 15 ಮಂದಿ ಅರೆಸ್ಟ್​

author img

By

Published : Jul 3, 2021, 6:41 PM IST

ಮೈಸೂರಲ್ಲಿರುವ ಚೋಳಮಂಡಲಂ ಎಂಬ ಫೈನಾನ್ಸ್‌ ಕಂಪನಿಯಿಂದ ಒಂದು ಕೋಟಿಗೂ ಅಧಿಕ ಸಾಲ ಪಡೆದು ವಂಚನೆ ಮಾಡಿದ್ದ 15 ಮಂದಿ ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

police arrested accused
ಖದೀಮರ ಬಂಧನ

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆದು ಚೋಳಮಂಡಲಂ ಫೈನಾನ್ಸ್‌ ಕಂಪನಿಗೆ ಒಂದು ಕೋಟಿಗೂ ಅಧಿಕ ಹಣ ಸಾಲ ಪಡೆದು ವಂಚಿಸಿದ್ದ 15 ಮಂದಿ ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಚೋಳಮಂಡಲಂ ಫೈನಾನ್ಸ್​​ನಲ್ಲಿ 10 ಲಾರಿಗಳ ಮೇಲೆ ಒಟ್ಟು 1 ಕೋಟಿ 35 ಲಕ್ಷ 53 ಸಾವಿರ ರೂ. ವಾಹನ ಸಾಲ ಪಡೆದಿದ್ದರು. ಕೆಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ಬಳಿಕ ಸಾಲದ ಮಾಸಿಕ ಕಂತು ನಿಲ್ಲಿಸಿದ್ದರು. ಈ ವೇಳೆ ಲಾರಿ ವಶಕ್ಕೆ ಪಡೆಯಲು ಹೋದ ಫೈನಾನ್ಸ್ ಕಂಪನಿಯ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೇ ಲಾರಿಗಳ ಇಂಜಿನ್, ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್​ ವಿಜಯ್ ಎಂಬುವವರು ದೇವರಾಜ ಪೊಲೀಸ್​​​ ಠಾಣೆಯಲ್ಲಿ ದೂರು ನೀಡಿದ್ದರು.

ದೂರುದಾಖಲಿಸಿಕೊಂಡಿದ್ದ ದೇವರಾಜ ಠಾಣೆ ಪೊಲೀಸರು, ಪಕ್ರರಣ ಸಂಬಂಧ ಸುಮಾರು 15 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಖದೀಮರು ಲಾರಿ ಇಲ್ಲದೆಯೇ ಆಂಧ್ರಪ್ರದೇಶದ ವಿವಿಧ RTO ಕಚೇರಿಯಲ್ಲಿ ಆರ್​​​ಸಿ ಮಾಡಿಸಿ ನಂತರ ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೋಂದಣಿಗೆ ಸ್ಥಳೀಯ ನಕಲಿ ವಿಳಾಸದ ದಾಖಲೆ ಸಲ್ಲಿಸುತ್ತಿದ್ದರು. ಪರಿಶೀಲನೆಗೆ ಲಾರಿ ಹಾಜರುಪಡಿಸದೆ ಆರ್​​ಸಿ ಕಾರ್ಡ್ ಅನ್ನು ಖದೀಮರು ಪಡೆಯುತ್ತಿದ್ದು, ಬರೋಬ್ಬರಿ 200 ಆರ್​​ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ.

ಬಂಧಿತರಿಂದ ಸುಮಾರು 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್‌ಟಾಪ್ ಸೇರಿ ಅನೇಕ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

police statement
ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆ

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆದು ಚೋಳಮಂಡಲಂ ಫೈನಾನ್ಸ್‌ ಕಂಪನಿಗೆ ಒಂದು ಕೋಟಿಗೂ ಅಧಿಕ ಹಣ ಸಾಲ ಪಡೆದು ವಂಚಿಸಿದ್ದ 15 ಮಂದಿ ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಚೋಳಮಂಡಲಂ ಫೈನಾನ್ಸ್​​ನಲ್ಲಿ 10 ಲಾರಿಗಳ ಮೇಲೆ ಒಟ್ಟು 1 ಕೋಟಿ 35 ಲಕ್ಷ 53 ಸಾವಿರ ರೂ. ವಾಹನ ಸಾಲ ಪಡೆದಿದ್ದರು. ಕೆಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ಬಳಿಕ ಸಾಲದ ಮಾಸಿಕ ಕಂತು ನಿಲ್ಲಿಸಿದ್ದರು. ಈ ವೇಳೆ ಲಾರಿ ವಶಕ್ಕೆ ಪಡೆಯಲು ಹೋದ ಫೈನಾನ್ಸ್ ಕಂಪನಿಯ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೇ ಲಾರಿಗಳ ಇಂಜಿನ್, ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್​ ವಿಜಯ್ ಎಂಬುವವರು ದೇವರಾಜ ಪೊಲೀಸ್​​​ ಠಾಣೆಯಲ್ಲಿ ದೂರು ನೀಡಿದ್ದರು.

ದೂರುದಾಖಲಿಸಿಕೊಂಡಿದ್ದ ದೇವರಾಜ ಠಾಣೆ ಪೊಲೀಸರು, ಪಕ್ರರಣ ಸಂಬಂಧ ಸುಮಾರು 15 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಖದೀಮರು ಲಾರಿ ಇಲ್ಲದೆಯೇ ಆಂಧ್ರಪ್ರದೇಶದ ವಿವಿಧ RTO ಕಚೇರಿಯಲ್ಲಿ ಆರ್​​​ಸಿ ಮಾಡಿಸಿ ನಂತರ ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೋಂದಣಿಗೆ ಸ್ಥಳೀಯ ನಕಲಿ ವಿಳಾಸದ ದಾಖಲೆ ಸಲ್ಲಿಸುತ್ತಿದ್ದರು. ಪರಿಶೀಲನೆಗೆ ಲಾರಿ ಹಾಜರುಪಡಿಸದೆ ಆರ್​​ಸಿ ಕಾರ್ಡ್ ಅನ್ನು ಖದೀಮರು ಪಡೆಯುತ್ತಿದ್ದು, ಬರೋಬ್ಬರಿ 200 ಆರ್​​ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ.

ಬಂಧಿತರಿಂದ ಸುಮಾರು 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್‌ಟಾಪ್ ಸೇರಿ ಅನೇಕ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

police statement
ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.