ETV Bharat / state

ಮೈಸೂರು: ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ - ಮೈಸೂರಿನಲ್ಲಿ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ

ಅಂತ್ಯಕ್ರಿಯೆ ನಡೆಸಲು ಶಕ್ತವಲ್ಲದ ಕುಟುಂಬಸ್ಥರು ದಾರಿ ಕಾಣದಂತಾಗಿದ್ದರು. ಪರಿಚಿತರೊಬ್ಬರು ಮುಸ್ಲಿಂ ಸಂಘಟನೆಯ ಸಹಕಾರ ಕೇಳಿದ್ದಾರೆ. ಮೊದಲಿಗೆ ಹಣ ನೀಡಿದ ಮುಸ್ಲಿಂ ಸಂಘಟನೆಯವರು, ಕುಟುಂಬದ ಸ್ಥಿತಿಯನ್ನು ಕಂಡು ತಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಗಣೇಶ ನಗರದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಜೊತೆಗೆ ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ.

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ
ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ
author img

By

Published : Jan 10, 2022, 3:31 PM IST

Updated : Jan 10, 2022, 3:52 PM IST

ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಸಾಮಾಜಿಕ ಸಂಘಟನೆಯ ಸ್ನೇಹಿತರ ಗುಂಪು ನೆರವೇರಿಸಿ, ಮಾನವ ಧರ್ಮದ ಸಂದೇಶವನ್ನು ಸಾರಿದ್ದಾರೆ.

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ

ನಗರದ ಕೆಸರೆಯ ನಿವಾಸಿಯಾದ ಲಿಂಗಣ್ಣ (65) ಇವರು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ‌. ಆದರೆ ಅವರ ಅಂತ್ಯಕ್ರಿಯೆ ನಡೆಸಲು ಶಕ್ತವಲ್ಲದ ಕುಟುಂಬಸ್ಥರು ದಾರಿ ಕಾಣದಂತಾಗಿದ್ದರು. ಪರಿಚಿತರೊಬ್ಬರು ಮುಸ್ಲಿಂ ಸಂಘಟನೆಯ ಸಹಕಾರ ಕೇಳಿದ್ದಾರೆ. ಮೊದಲಿಗೆ ಹಣ ನೀಡಿದ ಸಂಘಟನೆಯವರು, ಕುಟುಂಬದ ಸ್ಥಿತಿಯನ್ನು ಕಂಡು ತಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಗಣೇಶ ನಗರದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಮೃತಪಟ್ಟ ಲಿಂಗಣ್ಣ ಅವರಿಗೆ ಪತ್ನಿ, ಮಗಳು ಹಾಗೂ ಒಬ್ಬ ಮಗನಿದ್ದು, ಈ ಕುಟುಂಬವನ್ನ ಲಿಂಗಣ್ಣನವರೇ ಸಲಹುತ್ತಿದ್ದರು. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಕ್ಕೆ ಈಗ ದಾರಿ‌ ಕಾಣದಂತಾಗಿದೆ. ಇವರ ಮಗ 8 ನೇ ತರಗತಿಯಲ್ಲಿ ಓದುತ್ತಿದ್ದು, ಅವನ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ತಾವೇ ಭರಿಸುತ್ತೇವೆ ಎಂದು ಸಂಘಟನೆಯವರು ಕುಟುಂಬಕ್ಕೆ ಅಭಯ ನೀಡಿದ್ದಾರೆ.

ಕೇರ್ ಸೋಷಿಯಲ್ ಫೌಂಡೇಶನ್ ಸಂಘಟನೆಯ ಸದಸ್ಯರು ಹಾಗೂ ಅನಾಥ ಶವಗಳಿಗೆ ಮುಕ್ತಿ‌ ನೀಡುವ ಐಯೂಬ್ ಅಹಮ್ಮದ್ ಖಾನ್ ಸೇರಿದಂತೆ ಇತರ ಸದಸ್ಯರು ಈ ಮಾನವೀಯ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆಯೇ ಮುಸ್ಲಿಂ ಸಾಮಾಜಿಕ ಸಂಘಟನೆಯ ಸ್ನೇಹಿತರ ಗುಂಪು ನೆರವೇರಿಸಿ, ಮಾನವ ಧರ್ಮದ ಸಂದೇಶವನ್ನು ಸಾರಿದ್ದಾರೆ.

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಸಂಘಟನೆ

ನಗರದ ಕೆಸರೆಯ ನಿವಾಸಿಯಾದ ಲಿಂಗಣ್ಣ (65) ಇವರು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ‌. ಆದರೆ ಅವರ ಅಂತ್ಯಕ್ರಿಯೆ ನಡೆಸಲು ಶಕ್ತವಲ್ಲದ ಕುಟುಂಬಸ್ಥರು ದಾರಿ ಕಾಣದಂತಾಗಿದ್ದರು. ಪರಿಚಿತರೊಬ್ಬರು ಮುಸ್ಲಿಂ ಸಂಘಟನೆಯ ಸಹಕಾರ ಕೇಳಿದ್ದಾರೆ. ಮೊದಲಿಗೆ ಹಣ ನೀಡಿದ ಸಂಘಟನೆಯವರು, ಕುಟುಂಬದ ಸ್ಥಿತಿಯನ್ನು ಕಂಡು ತಾವೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಗಣೇಶ ನಗರದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಮೃತಪಟ್ಟ ಲಿಂಗಣ್ಣ ಅವರಿಗೆ ಪತ್ನಿ, ಮಗಳು ಹಾಗೂ ಒಬ್ಬ ಮಗನಿದ್ದು, ಈ ಕುಟುಂಬವನ್ನ ಲಿಂಗಣ್ಣನವರೇ ಸಲಹುತ್ತಿದ್ದರು. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಕ್ಕೆ ಈಗ ದಾರಿ‌ ಕಾಣದಂತಾಗಿದೆ. ಇವರ ಮಗ 8 ನೇ ತರಗತಿಯಲ್ಲಿ ಓದುತ್ತಿದ್ದು, ಅವನ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ತಾವೇ ಭರಿಸುತ್ತೇವೆ ಎಂದು ಸಂಘಟನೆಯವರು ಕುಟುಂಬಕ್ಕೆ ಅಭಯ ನೀಡಿದ್ದಾರೆ.

ಕೇರ್ ಸೋಷಿಯಲ್ ಫೌಂಡೇಶನ್ ಸಂಘಟನೆಯ ಸದಸ್ಯರು ಹಾಗೂ ಅನಾಥ ಶವಗಳಿಗೆ ಮುಕ್ತಿ‌ ನೀಡುವ ಐಯೂಬ್ ಅಹಮ್ಮದ್ ಖಾನ್ ಸೇರಿದಂತೆ ಇತರ ಸದಸ್ಯರು ಈ ಮಾನವೀಯ ಕಾರ್ಯದಲ್ಲಿ ಭಾಗಿಯಾಗಿದ್ದರು.

Last Updated : Jan 10, 2022, 3:52 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.