ETV Bharat / state

ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಇದೆ‌ : ಪ್ರತಾಪಸಿಂಹ

ಕಾಂಗ್ರೆಸ್​ನವರು ತಮ್ಮ ಹಿಂದೂ ವಿರೋಧಿ ಧೋರಣೆಯನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಸತೀಶ್ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​​ ಅವರ ರಕ್ತದಲ್ಲಿಯೇ ಹಿಂದೂ ವಿರೋಧಿ ಧೋರಣೆ ಇದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

author img

By

Published : Nov 10, 2022, 4:03 PM IST

mp-prathapa-simha-slams-sathish-jarkiholi
ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಇದೆ‌ : ಪ್ರತಾಪಸಿಂಹ

ಮೈಸೂರು: ಕಾಂಗ್ರೆಸ್​​ನವರ ರಕ್ತದಲ್ಲಿಯೇ ಹಿಂದೂ ವಿರೋಧಿ ಧೋರಣೆ ಇದೆ‌ ಎಂದು ಸಂಸದ ಪ್ರತಾಪಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್​ನವರು ತಮ್ಮ ಹಿಂದೂ ವಿರೋಧಿ ಧೋರಣೆಯನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಧೋರಣೆ ಅನುಸರಿಸಿದ್ದರು. ಅಲ್ಲದೆ ಸೋನಿಯಾ ಗಾಂಧಿ ಮತ್ತು ಮನಮೋಹನ್​ ಸಿಂಗ್​ ಅವರು ಹಿಂದೂ ವಿರೋಧಿ ಧೋರಣೆ ಹೊಂದಿದ್ದರು ಎಂದು ಆರೋಪಿಸಿದರು.

ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ರೀತಿಯ ಹಿಂದೂ ಪದ ಪರ್ಷಿಯನ್​ ಭಾಷೆಯಿಂದ ಬಂದಿದ್ದು, ಅದು ಅಶ್ಲೀಲ ಎಂದು ಹೇಳಿದ್ದರು. ಹೀಗೆ ಕಾಂಗ್ರೆಸ್​ ನಾಯಕರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಕರ್ನಾಟಕದ ಜನತೆ ಮತ್ತೆ ಕಾಂಗ್ರೆಸ್​​ಗೆ ಅಧಿಕಾರ ಕೊಟ್ಟರೆ ತಾಲಿಬಾನಿ ಸರ್ಕಾರ ಬರುತ್ತದೆಯೋ ಹೊರತು ಜಾತ್ಯಾತೀತ ಸರ್ಕಾರ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಇದೆ‌ : ಪ್ರತಾಪಸಿಂಹ

ಹಿಂದೂಗಳ ಭಾವನೆಗೆ ಬೆಲೆ ಕೊಟ್ಟವರಲ್ಲ : ಕಾಂಗ್ರೆಸ್​ ಹಿಂದಿನಿಂದಲೂ ಹಿಂದೂಗಳ ಭಾವನೆಗೆ ಬೆಲೆ ಕೊಟ್ಟವರಲ್ಲ. ನೆಹರು ಕಾಲದಿಂದಲೂ ಅವರು ಹಿಂದೂ ವಿರೋಧಿ ಮಾಡಿಕೊಂಡೇ ಬಂದರು. ಅದನ್ನೇ ಇವರು ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಎಂದು ಹರಿಹಾಯ್ದರು.

ಇದನ್ನೂ ಓದಿ : ಕಾಂಗ್ರೆಸ್​ ಪಕ್ಷಕ್ಕೆ ಹಾನಿ ತಡೆಯಲು ನನ್ನ ಹೇಳಿಕೆ ವಾಪಸ್ ಪಡೆದಿದ್ದೇನೆ‌: ಸತೀಶ್ ಜಾರಕಿಹೊಳಿ

ಮೈಸೂರು: ಕಾಂಗ್ರೆಸ್​​ನವರ ರಕ್ತದಲ್ಲಿಯೇ ಹಿಂದೂ ವಿರೋಧಿ ಧೋರಣೆ ಇದೆ‌ ಎಂದು ಸಂಸದ ಪ್ರತಾಪಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್​ನವರು ತಮ್ಮ ಹಿಂದೂ ವಿರೋಧಿ ಧೋರಣೆಯನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಧೋರಣೆ ಅನುಸರಿಸಿದ್ದರು. ಅಲ್ಲದೆ ಸೋನಿಯಾ ಗಾಂಧಿ ಮತ್ತು ಮನಮೋಹನ್​ ಸಿಂಗ್​ ಅವರು ಹಿಂದೂ ವಿರೋಧಿ ಧೋರಣೆ ಹೊಂದಿದ್ದರು ಎಂದು ಆರೋಪಿಸಿದರು.

ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ರೀತಿಯ ಹಿಂದೂ ಪದ ಪರ್ಷಿಯನ್​ ಭಾಷೆಯಿಂದ ಬಂದಿದ್ದು, ಅದು ಅಶ್ಲೀಲ ಎಂದು ಹೇಳಿದ್ದರು. ಹೀಗೆ ಕಾಂಗ್ರೆಸ್​ ನಾಯಕರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಕರ್ನಾಟಕದ ಜನತೆ ಮತ್ತೆ ಕಾಂಗ್ರೆಸ್​​ಗೆ ಅಧಿಕಾರ ಕೊಟ್ಟರೆ ತಾಲಿಬಾನಿ ಸರ್ಕಾರ ಬರುತ್ತದೆಯೋ ಹೊರತು ಜಾತ್ಯಾತೀತ ಸರ್ಕಾರ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಇದೆ‌ : ಪ್ರತಾಪಸಿಂಹ

ಹಿಂದೂಗಳ ಭಾವನೆಗೆ ಬೆಲೆ ಕೊಟ್ಟವರಲ್ಲ : ಕಾಂಗ್ರೆಸ್​ ಹಿಂದಿನಿಂದಲೂ ಹಿಂದೂಗಳ ಭಾವನೆಗೆ ಬೆಲೆ ಕೊಟ್ಟವರಲ್ಲ. ನೆಹರು ಕಾಲದಿಂದಲೂ ಅವರು ಹಿಂದೂ ವಿರೋಧಿ ಮಾಡಿಕೊಂಡೇ ಬಂದರು. ಅದನ್ನೇ ಇವರು ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಎಂದು ಹರಿಹಾಯ್ದರು.

ಇದನ್ನೂ ಓದಿ : ಕಾಂಗ್ರೆಸ್​ ಪಕ್ಷಕ್ಕೆ ಹಾನಿ ತಡೆಯಲು ನನ್ನ ಹೇಳಿಕೆ ವಾಪಸ್ ಪಡೆದಿದ್ದೇನೆ‌: ಸತೀಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.