ETV Bharat / state

ಚಿನ್ನದ ಸರ ವಾಪಸ್ ನೀಡಿ ಮಾನವೀಯತೆ ಮೆರೆದ ಐರನ್ ಅಂಗಡಿ ವ್ಯಕ್ತಿ..!

author img

By

Published : Jan 12, 2021, 12:11 PM IST

ಮೈಸೂರು: ಬಟ್ಟೆ ಇಸ್ತ್ರಿ ಮಾಡುವಾಗ ಪ್ಯಾಂಟ್ ಜೇಬಿನಲ್ಲಿ ಸಿಕ್ಕ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಗ್ರಾಹಕರಿಗೆ ವಾಪಸ್ ನೀಡಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಗ್ರಾಮದ ಸೋಮಣ್ಣ, ಹ್ಯಾಂಡ್ ಪೋಸ್ಟ್​​ನಲ್ಲಿ ಐರನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮಲಾರ ಕಾಲೊನಿ ನಿವಾಸಿ ಮಹೇಶ್ ತಮ್ಮ ಪ್ಯಾಂಟ್ ಅನ್ನು ಐರನ್ ಮಾಡಿಸಲು ಸೋಮಣ್ಣನಿಗೆ ಕೊಟ್ಟು ಹೋಗಿದ್ದರು. ಈ ಸಂದರ್ಭದಲ್ಲಿ ಐರನ್ ಮಾಡುವಾಗ ಪ್ಯಾಂಟ್ ಜೇಬಿನಲ್ಲಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಸಿಕ್ಕಿದೆ. ಕೂಡಲೇ ಈತ ಮಹೇಶ್​​ಗೆ ಕಾಲ್ ಮಾಡಿ ಮಾಂಗಲ್ಯ ಸರವನ್ನು ವಾಪಸ್ ನೀಡಿದ್ದಾರೆ. ಸೋಮಣ್ಣರ ಪ್ರಾಮಾಣಿಕತೆಗೆ ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.

ಮೈಸೂರು: ಬಟ್ಟೆ ಇಸ್ತ್ರಿ ಮಾಡುವಾಗ ಪ್ಯಾಂಟ್ ಜೇಬಿನಲ್ಲಿ ಸಿಕ್ಕ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಗ್ರಾಹಕರಿಗೆ ವಾಪಸ್ ನೀಡಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಗ್ರಾಮದ ಸೋಮಣ್ಣ, ಹ್ಯಾಂಡ್ ಪೋಸ್ಟ್​​ನಲ್ಲಿ ಐರನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಮಲಾರ ಕಾಲೊನಿ ನಿವಾಸಿ ಮಹೇಶ್ ತಮ್ಮ ಪ್ಯಾಂಟ್ ಅನ್ನು ಐರನ್ ಮಾಡಿಸಲು ಸೋಮಣ್ಣನಿಗೆ ಕೊಟ್ಟು ಹೋಗಿದ್ದರು. ಈ ಸಂದರ್ಭದಲ್ಲಿ ಐರನ್ ಮಾಡುವಾಗ ಪ್ಯಾಂಟ್ ಜೇಬಿನಲ್ಲಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಸಿಕ್ಕಿದೆ. ಕೂಡಲೇ ಈತ ಮಹೇಶ್​​ಗೆ ಕಾಲ್ ಮಾಡಿ ಮಾಂಗಲ್ಯ ಸರವನ್ನು ವಾಪಸ್ ನೀಡಿದ್ದಾರೆ. ಸೋಮಣ್ಣರ ಪ್ರಾಮಾಣಿಕತೆಗೆ ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.