ETV Bharat / state

ಮಹಾ ಮೈತ್ರಿ ಸರ್ಕಾರ ಯಶಸ್ವಿಯಾದರೆ ದೇಶದ ರಾಜಕೀಯ ಚಿತ್ರಣ ಬದಲಾಗಲಿದೆ: ಹೆಚ್​​ಡಿಡಿ

author img

By

Published : Nov 27, 2019, 1:43 PM IST

ಮಹಾರಾಷ್ಟ್ರದಲ್ಲಿ ನೂತನವಾದ ಸಮ್ಮಿಶ್ರ ಸರ್ಕಾರ, 5 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ ಆಡಳಿತ ನೀಡಿದರೆ, ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್​​.ಡಿ.ದೇವೆಗೌಡ ಹೇಳಿದ್ದಾರೆ.

HDD
ಮೈಸೂರಿನಲ್ಲಿ ಮಾತನಾಡಿದ ಹೆಚ್​​.ಡಿ.ದೇವೇಗೌಡ

ಮೈಸೂರು: ಮಹಾರಾಷ್ಟ್ರದ ಹೊಸ ಮೈತ್ರಿ ಸರ್ಕಾರ 5 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ಭವಿಷ್ಯದಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.

ಇಂದು ಮೈಸೂರು ಜಿಲ್ಲೆಯ ಹುಣಸೂರು ಉಪ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವನಾಥ್ ನಿರಂಕುಶ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಇವೆಲ್ಲಾ ಚುನಾವಣೆಗೆ ಮಾಡುತ್ತಿರುವ ತ್ರಂತ್ರಗಾರಿಕೆ. ಈ ರೀತಿ ತಂತ್ರಗಾರಿಕೆಯನ್ನು ಜನರು ಅರ್ಥ ಮಾಡಿಕೊಳ್ಳದೆ ಇರುವಷ್ಟು ದಡ್ಡರಲ್ಲ ಎಂದು ಹೇಳಿ, ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಬೇಕೆಂಬುದೇ ನಮ್ಮಿಬ್ಬರ ಗುರಿಯಾಗಿದೆ ಎಂದರು.

ಮೈಸೂರಿನಲ್ಲಿ ಮಾತನಾಡಿದ ಹೆಚ್​​.ಡಿ.ದೇವೇಗೌಡ

ಬಿಜೆಪಿ ಅವರ ಹತ್ತಿರ ಆರ್ಥಿಕ ಸಂಪನ್ಮೂಲಗಳಿವೆ. ಅವರು ದುಡ್ಡನ್ನು ಎಲ್ಲಿಗೆ ಸಾಗಿಸಿದರೂ ಕೇಳುವವರಿಲ್ಲ. ಅವರು ಬರಿ ಫೋನ್ ಕಾಲ್ ನಲ್ಲಿಯೇ ದುಡ್ಡನ್ನು ತರಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ. ಆದ್ದರಿಂದಲೇ 15 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಮೈಸೂರು: ಮಹಾರಾಷ್ಟ್ರದ ಹೊಸ ಮೈತ್ರಿ ಸರ್ಕಾರ 5 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ಭವಿಷ್ಯದಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.

ಇಂದು ಮೈಸೂರು ಜಿಲ್ಲೆಯ ಹುಣಸೂರು ಉಪ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವನಾಥ್ ನಿರಂಕುಶ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಇವೆಲ್ಲಾ ಚುನಾವಣೆಗೆ ಮಾಡುತ್ತಿರುವ ತ್ರಂತ್ರಗಾರಿಕೆ. ಈ ರೀತಿ ತಂತ್ರಗಾರಿಕೆಯನ್ನು ಜನರು ಅರ್ಥ ಮಾಡಿಕೊಳ್ಳದೆ ಇರುವಷ್ಟು ದಡ್ಡರಲ್ಲ ಎಂದು ಹೇಳಿ, ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಬೇಕೆಂಬುದೇ ನಮ್ಮಿಬ್ಬರ ಗುರಿಯಾಗಿದೆ ಎಂದರು.

ಮೈಸೂರಿನಲ್ಲಿ ಮಾತನಾಡಿದ ಹೆಚ್​​.ಡಿ.ದೇವೇಗೌಡ

ಬಿಜೆಪಿ ಅವರ ಹತ್ತಿರ ಆರ್ಥಿಕ ಸಂಪನ್ಮೂಲಗಳಿವೆ. ಅವರು ದುಡ್ಡನ್ನು ಎಲ್ಲಿಗೆ ಸಾಗಿಸಿದರೂ ಕೇಳುವವರಿಲ್ಲ. ಅವರು ಬರಿ ಫೋನ್ ಕಾಲ್ ನಲ್ಲಿಯೇ ದುಡ್ಡನ್ನು ತರಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ. ಆದ್ದರಿಂದಲೇ 15 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

Intro:ಮೈಸೂರು: ಮಹಾರಾಷ್ಟ್ರದ ಹೊಸ ಮೈತ್ರಿ ಸರ್ಕಾರ ೫ ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ ಭವಿಷ್ಯದಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೈಸೂರಿನಲ್ಲಿ ಹೇಳಿಕೆ ನೀಡಿದರು.


Body:ಇಂದು ಮೈಸೂರು ಜಿಲ್ಲೆಯ ಹುಣಸೂರು ಉಪ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್. ಡಿ. ದೇವೇಗೌಡರು ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯ ದಕ್ಷ, ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹಾಗೂ ಹೆಚ್.ಡಿ. ದೇವೇಗೌಡರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕೆಂದು ಹೇಳಿದ್ದಾರೆ.‌ ವಿಶ್ವನಾಥ್ ಬಹಳ ಸೀಜರ್ಡ್ ಪೊಲಿಟಿಷಿಯನ್ ತರ ಮಾತನಾಡುತ್ತಿದ್ದಾರೆ ಇವೆಲ್ಲಾ, ಚುನಾವಣೆಗೆ ಮಾಡುತ್ತಿರುವ ತ್ರಂತ್ರಗಾರಿಕೆ ಈ ರೀತಿ ತಂತ್ರಗಾರಿಕೆಯನ್ನು ಜನರು ಅರ್ಥ ಮಾಡಿಕೊಳ್ಳದೆ ಇರುವಷ್ಟು ದಡ್ಡರಲ್ಲ ಎಂದು ಹೇಳಿದ ಹೆಚ್.ಡಿ.ದೇವೇಗೌಡರು,
ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಬೇಕೆಂಬುದೆ ನಮ್ಮಿಬ್ಬರು ಗುರಿಯಾಗಿದೆ ಬಿಜೆಪಿ ಅವರ ಹತ್ತಿರ ಆರ್ಥಿಕ ಸಂಪನ್ಮೂಲಗಳಿವೆ ಅವರು ದುಡ್ಡನ್ನು ಎಲ್ಲಿಗಾದರು ಸಾಗಿಸಿದರು ಕೇಳುವವರಿಲ್ಲ. ಅವರು ಬರಿ ಫೋನ್ ಕಾಲ್ ನಲ್ಲೇ ದುಡ್ಡನ್ನು ತೀರಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ. ಆದ್ದರಿಂದ ೧೫ ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ ಎಂದು ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ಹೇಳಿದರು.
ಇನ್ನೂ ಚುನಾವಣೆ ಮುಗಿದ ನಂತರ ಮೈತ್ರಿ ಬಗ್ಗೆ ಮಾತಾನಾಡೋಣ ಈಗ ಬೇಡ ಎಂದ ಅವರು,
ಮಹಾರಾಷ್ಟ್ರದಲ್ಲಿ ಹೊಸ ಮೈತ್ರಿ ಸರ್ಕಾರ ೫ ವರ್ಷ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೆ ಭವಿಷ್ಯದಲ್ಲಿ ದೇಶದ ರಾಜಕೀಯದ ಚಿತ್ರಣ ಬದಲಾಗಲಿದೆ ಎಂದು ದೇವೇಗೌಡರು ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.



Conclusion:

For All Latest Updates

TAGGED:

By election
ETV Bharat Logo

Copyright © 2024 Ushodaya Enterprises Pvt. Ltd., All Rights Reserved.