ETV Bharat / state

ರಾಜಕೀಯ ಚಕ್ರವನ್ನು ಹೇಗೆ ತಿರುಗಿಸಬೇಕೆಂದು ನನಗೂ ಗೊತ್ತಿದೆ: ಡಿ.ಕೆ.ಶಿವಕುಮಾರ್ - I know how to turn the wheel said D.K Shivkumar at Mysuru

ಕೆಲವರು ನಾನು ಕ್ಷೇತ್ರಕ್ಕೆ  ಏನೂ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತುಕೊಂಡರು. ರಾಜಕೀಯ ಗಾಡಿಯ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ನನಗೂ ಗೊತ್ತಿದೆ. ಸಮಯ ಬಂದಾಗ ಹೇಗೆ ಬೇಕೋ ಹಾಗೆ ತಿರುಗಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್​
author img

By

Published : Nov 7, 2019, 8:05 PM IST

ಮೈಸೂರು: ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತು ಬಿಸಾಕಿದರು.‌ ನನಗೂ ರಾಜಕೀಯ ಚಕ್ರವನ್ನು ಹೇಗೆ ತಿರುಗಿಸಬೇಕು ಅನ್ನೋದು ಗೊತ್ತಿದೆ. ಸಮಯ ಬಂದಾಗ ಹೇಗೆ ಬೇಕೋ ಹಾಗೆ ತಿರುಗಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಸಿಎಂ ವಿರುದ್ಧ ಗುಡುಗಿದ್ರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್​

ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವರು ನಾನು ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತುಕೊಂಡರು. ರಾಜಕೀಯ ಗಾಡಿಯ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ನನಗೂ ಗೊತ್ತಿದೆ. ನಾನು ಮೈಸೂರಿನ ಅಳಿಯ, ನನ್ನ ಕುಟುಂಬ ಇಲ್ಲಿನ ನಂಜನಗೂಡು ಹಾಗೂ ಚಾಮುಂಡಿ ಬೆಟ್ಟಕ್ಕೆ ಕಟ್ಟಿಕೊಂಡ ಹರಕೆ ತೀರಿಸಲು ಬಂದಿದ್ದೇನೆ. ಆದರೆ ಇಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ, ನಿಮ್ಮ ಅಭಿಮಾನಕ್ಕೆ ಚಿರಋಣಿ ಎಂದರು.

ನಾನು ಜೈಲಿನಲ್ಲಿದ್ದಾಗ ಡಿಕೆಶಿ ರಾಜಕೀಯ ಜೀವನ ಮುಗಿಯಿತು ಎಂದು ಮಾಧ್ಯಮದವರು ಇಡೀ ರಾಜ್ಯಕ್ಕೆ ತೋರಿಸಿದರು. ಇದರ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಅದು ಅವರ ವ್ಯವಹಾರ. ಬೆಳಕು ಹೋದ ಮೇಲೆ ನೆರಳು ನಮ್ಮಿಂದ ಕಾಣೆಯಾಗುತ್ತದೆ.‌ ಇದನ್ನು ಬಿಜೆಪಿ ಸ್ನೇಹಿತರು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ರು.

ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ನಾನು ಮಾಡಿದ ವ್ಯವಹಾರ ಕಾನೂನು ಪ್ರಕಾರವೇ ಇದೆ. ಜಾತಿ, ಧರ್ಮದ ಬಗ್ಗೆ ನಂಬಿಕೆ ಇಲ್ಲ, ಜನರು ಕಷ್ಟದ ಸಮಯದಲ್ಲಿ ತೋರಿದ ಪ್ರೀತಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ಹೇಳಿದರು.

ಮೈಸೂರು: ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತು ಬಿಸಾಕಿದರು.‌ ನನಗೂ ರಾಜಕೀಯ ಚಕ್ರವನ್ನು ಹೇಗೆ ತಿರುಗಿಸಬೇಕು ಅನ್ನೋದು ಗೊತ್ತಿದೆ. ಸಮಯ ಬಂದಾಗ ಹೇಗೆ ಬೇಕೋ ಹಾಗೆ ತಿರುಗಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಸಿಎಂ ವಿರುದ್ಧ ಗುಡುಗಿದ್ರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್​

ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವರು ನಾನು ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತುಕೊಂಡರು. ರಾಜಕೀಯ ಗಾಡಿಯ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ನನಗೂ ಗೊತ್ತಿದೆ. ನಾನು ಮೈಸೂರಿನ ಅಳಿಯ, ನನ್ನ ಕುಟುಂಬ ಇಲ್ಲಿನ ನಂಜನಗೂಡು ಹಾಗೂ ಚಾಮುಂಡಿ ಬೆಟ್ಟಕ್ಕೆ ಕಟ್ಟಿಕೊಂಡ ಹರಕೆ ತೀರಿಸಲು ಬಂದಿದ್ದೇನೆ. ಆದರೆ ಇಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ, ನಿಮ್ಮ ಅಭಿಮಾನಕ್ಕೆ ಚಿರಋಣಿ ಎಂದರು.

ನಾನು ಜೈಲಿನಲ್ಲಿದ್ದಾಗ ಡಿಕೆಶಿ ರಾಜಕೀಯ ಜೀವನ ಮುಗಿಯಿತು ಎಂದು ಮಾಧ್ಯಮದವರು ಇಡೀ ರಾಜ್ಯಕ್ಕೆ ತೋರಿಸಿದರು. ಇದರ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಅದು ಅವರ ವ್ಯವಹಾರ. ಬೆಳಕು ಹೋದ ಮೇಲೆ ನೆರಳು ನಮ್ಮಿಂದ ಕಾಣೆಯಾಗುತ್ತದೆ.‌ ಇದನ್ನು ಬಿಜೆಪಿ ಸ್ನೇಹಿತರು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ರು.

ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ನಾನು ಮಾಡಿದ ವ್ಯವಹಾರ ಕಾನೂನು ಪ್ರಕಾರವೇ ಇದೆ. ಜಾತಿ, ಧರ್ಮದ ಬಗ್ಗೆ ನಂಬಿಕೆ ಇಲ್ಲ, ಜನರು ಕಷ್ಟದ ಸಮಯದಲ್ಲಿ ತೋರಿದ ಪ್ರೀತಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ಹೇಳಿದರು.

Intro:ಮೈಸೂರು: ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಕಿತ್ತು ಬಿಸಾಕಿದರು.‌ ನನಗೂ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ಗೊತ್ತಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.


Body:ಇಂದು ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಿಕೆಶಿ ಗೆ ಕಾಂಗ್ರೆಸ್ ಅದ್ದೂರಿ ಸ್ವಾಗತ ನೀಡಿದರು. ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಿಕೆಶಿ ನಾನು ಮೈಸೂರಿನ ಅಳಿಯನಾಗಿದ್ದು ನನ್ನ ಕುಟುಂಬ ಇಲ್ಲಿನ ನಂಜನಗೂಡು ಹಾಗೂ ಚಾಮುಂಡಿ ಬೆಟ್ಟಕ್ಕೆ ಹರಕೆ ಮಾಡಿಕೊಂಡಿದ್ದು ಹರಕೆಯನ್ನು ತೀರಿಸಲು ಬಂದಿದ್ದೇನೆ. ಆದರೆ ಇಲ್ಲಿ ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದೀರಿ. ನಾನಿ ರಸ್ತೆ ಮೂಲಕ ಬಂದಿದ್ದರೆ ಇಲ್ಲಿಗೆ ಬರಲು ಸಂಜೆಯಾಗುತ್ತಿತ್ತು ಆದ್ದರಿಂದ ರೈಲಿನ ಮೂಲಕ ಬಂದೆ ಎಂದು ಹೇಳಿ ಭಾಷಣ ಆರಂಭಿಸಿದ ಡಿಕೆಶಿ, ನನಗೆ ಹೆಣ್ಣು ಕೊಟ್ಟ ಮಾವನ ಮನೆಯವರು ಸಾಮಾನ್ಯ ಕುಟುಂಬದವರು ಇವರಿಗೆ ಪಾಪ ನನ್ನಿಂದ ಬಹಳ ಚಿತ್ರ ಹಿಂಸೆಯಾಯಿತು ಅದನ್ನು ಅವರು ಸಹಿಸಿಕೊಂಡರು ಇಂದು ಅವರ ಮನೆಗೂ ಸಹ ತೆರಳುತ್ತೇನೆ ಎಂದ ಡಿಕೆಶಿ. ನಾನು ಜೈಲಿನಲ್ಲಿದ್ದಾಗ ಇನ್ನೂ ಡಿಕೆಶಿಗೆ ೭ ವರ್ಷ ಜೈಲು ಶಿಕ್ಷೆ, ಸಾಯುವ ವರೆಗು ಜೈಲಿನಿಂದ ಬರುವುದಿಲ್ಲ, ಅವರ ರಾಜಕೀಯ ಜೀವನ ಮುಗಿದು ಹೋಯಿತು ಎಂದು ಮಾಧ್ಯಮದವರು ಇಡಿ ರಾಜ್ಯಕ್ಕೆ ತೋರಿಸಿದರು. ಇದರ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಅದು ಅವರ ವ್ಯವಹಾರ, ವಿಚಾರ ಎಂದ ಡಿಕೆ, ನಾನು ಬೆಂಗಳೂರಿಗೆ ಬಂದಾಗ ಹೇಳಿದೆ ಕಾಲ ಮತ್ತು ಕಾನೂನು ಇವೆರಡೂ ನನಗೆ ಉತ್ತರ ಕೊಡುತ್ತದೆ. ಬೆಳಕು ಹೋದ ಮೇಲೆ ನೆರಳು ಸಹ ನಮ್ಮಿಂದ ಕಾಣೆ ಯಾಗುತ್ತದೆ.‌ ಇದನ್ನು ಬಿಜೆಪಿ ಸ್ನೇಹಿತರಿಗಾಗಲಿ,ಅಧಿಕಾರಗಳಾಗಲಿ, ನಮಗಾಗಲಿ ಅರ್ಥ ಮಾಡಿಕೊಳ್ಳಬೆಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಡಿಕೆಶಿ ನನ್ನನ್ನು ಎಲ್ಲಾ ಪಕ್ಷದವರು ಬಂದು ನೋಡುತ್ತಿದ್ದಾರೆ ಇದರಲ್ಲಿ ಯಾವುದೇ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು. ದೆಹಲಿ ಪೋಲಿಸ್ ಠಾಣೆಯ ಬಗ್ಗೆ ಹೇಳಿದ್ದೇನು: ವಿಚಾರಣೆ ಸಂದರ್ಭದಲ್ಲಿ ಇಡಿ ಹೊರಗಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬರಿ ಪೇಪರ್ ಪೋಟೋಗಳನ್ನು ನೋಡಿದೆ ಅಷ್ಟೇ. ದೆಹಲಿಯ ಪೋಲಿಸ್ ಠಾಣೆಗೆ ಹಾಕಿದ್ದರು ದೇವರೆ ಕಾಪಾಡಬೇಕು ಎಂದರು. ಅಲ್ಲಿ ಯಾರೋ ಒಬ್ಬ ಹೇಳಿದರು ಇಲ್ಲಿ ಗಾಂಧೀಜಿ ಇದ್ದರು ಎಂದು ಹೇಳಿದರು ಅದಕ್ಕೆ ನಾನು ಹೇಳಿದೆ ಫಾದರ್ ಆಫ್ ನೇಷನ್ಸ್ ಇದ್ದರು ಎಂದು ಹೇಳು ಎಂದೆ ಅದಕ್ಕೆ ಅವನು ಗೂಡ್ಸೆನು ಇದ್ದ ಎಂದು ಹೇಳಿದಾಗ ಇರಲಿ ಬಿಡು ಈಗ ನನ್ನನ್ನು ಇಲ್ಲಿ ಹಾಕಿದ್ದಾರೆ ಎಂದು ಸುಮ್ಮನಾದೆ. ಜೊತೆಗೆ ಅಲ್ಲಿ ಬೇರೆಯವರ ಜೊತೆ ಮಾತನಾಡಲು ಬಿಡುತ್ತಿರಲಿಲ್ಲ ಅದನ್ನು ಬೇರೆ ಸಮಯದಲ್ಲಿ ಹೇಳುತ್ತೇನೆ. ಇನ್ನೂ ಜೈಲಿನಲ್ಲಿ ಚಿದಂಬರಂ ಗೆ ಯಾವ ರೀತಿ ಟ್ರೀಟ್ಮೆಂಟ್, ನನಗರ ಯಾವ ರೀತಿ ಟ್ರೀಟ್ಮೆಂಟ್ ಎಂಬುದನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿ ಹೇಳುತ್ತೇನೆ ಇದನ್ನೆಲ್ಲ ನೀವು ತಿಳಿದುಕೊಳ್ಳಬೇಕು ಎಂದರು. ನನಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ ನಾನು ಮಾಡಿದ ವ್ಯವಹಾರ ಕಾನೂನು ಪ್ರಕಾರವೇ ಇದೆ ಎಂದ ಡಿಕೆಶಿ, ನನಗೆ ಜಾತಿ ಧರ್ಮದ ಬಗ್ಗೆ ನಂಬಿಕೆ ಇಲ್ಲ, ಜನ ಕಷ್ಟ ಸಮಯದಲ್ಲಿ ತೋರಿದ ಪ್ರೀತಿಗೆ ನಾನು ಅವರಿಗೆ ಅಭಾರಿಯಾಗಿರುತ್ತೇನೆ ಎಂದ ಡಿಕೆಶಿ. ಹೆಚ್.ಡಿ.ಕೋಟೆ ಶಾಸಕರು ವೇದಿಕೆಯ ಮೇಲೆ ನಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ನನ್ನನ್ನೇ ಬಿಡಲಿಲ್ಲ ಯಡಿಯೂರಪ್ಪ ಇನ್ನೂ ನಿನ್ನನ್ನೂ ಬಿಡುತ್ತಾರ. ಒಬ್ಬ ಕ್ಯಾಬಿನೆಟ್ ಮಿನಿಸ್ಟರ್ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕಿತ್ತು ಬಿಸಾಕಿದರು.‌ ಇನ್ನೂ ಗಾಡಿಯ ಚಕ್ರ ಹೇಗೆ ತಿರುಗಿಸಬೇಕು ಎಂದು ನನಗೂ ಗೊತ್ತಿದೆ ಸುಮ್ಮನಿರು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.