ETV Bharat / state

ಮೈಸೂರು: ಹಾಪ್​ಕಾಮ್ಸ್​ನಲ್ಲಿ ನೌಕರರಿಂದಲೇ ಅವ್ಯವಹಾರ ಆರೋಪ - ಮೈಸೂರು ಹಾಪ್​ಕಾಮ್ಸ್ ನೌಕರರಿಂದಲೇ ಅವ್ಯವಹಾರ ಆರೋಪ

ಮೈಸೂರು ಹಾಪ್​ಕಾಮ್ಸ್​ನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದೇನೆ. ಅವ್ಯವಹಾರ ನಡೆಸಿರುವ ಹಾಪ್​ಕಾಮ್ಸ್ ನೌಕರರ ವಿರುದ್ಧ ತನಿಖೆ ನಡೆಸಿ, ಅವ್ಯವಹಾರದಿಂದ ಪಡೆದ ಹಣ ವಾಪಸ್ ಕಟ್ಟಿಸಬೇಕೆಂದು ಹಾಪ್​ಕಾಮ್ಸ್ ನೌಕರರೇ ಒತ್ತಾಯಿಸಿದರು.

Hopcomms Employee Allegation about coruption
ಹಾಪ್ ಕಾಮ್ಸ್ ನೌಕರರಿಂದಲೇ ಅವ್ಯವಹಾರ ಆರೋಪ
author img

By

Published : Aug 18, 2021, 5:49 PM IST

ಮೈಸೂರು: ಉತ್ಪನ್ನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಪ್​ಕಾಮ್ಸ್ ನೌಕರರೇ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ. ಮೈಸೂರು ಹಾಪ್​ಕಾಮ್ಸ್​ನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇಲ್ಲಿ ರೈತರಿಂದ ಯಾವುದೇ ಉತ್ಪನ್ನಗಳನ್ನು ಖರೀದಿ ಮಾಡದೇ, ಬೋಗಸ್ ಬಿಲ್​ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಸೃಷ್ಟಿಸಿ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ‌ ಕೇಳಿ ಬಂದಿದೆ.

ಹಾಪ್​ಕಾಮ್ಸ್​ನಲ್ಲಿ ಕೆಲಸ ಮಾಡುತ್ತಿರುವ ನೀಲೇಗೌಡ ಎಂಬುವವರು ಈಟಿವಿ ಭಾರತದ ಜೊತೆ ಮಾತನಾಡಿ, ನಿತ್ಯ ಮೈಸೂರು ಮೃಗಾಲಯದ ಆನೆಗಳಿಗೆ ಕಬ್ಬನ್ನು ಸರಬರಾಜು ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕಬ್ಬಿನ ಬೆಲೆ ಒಂದು ಟನ್​ಗೆ 3 ಸಾವಿರ ದಿಂದ 5 ಸಾವಿರ ರೂ. ಇದ್ದು, ಇದಕ್ಕೆ 18 ಸಾವಿರ ರೂ. ಬಿಲ್ ಮಾಡಲಾಗುತ್ತಿದೆ. ಈ ಹಣವನ್ನು ಹಾಪ್​ಕಾಮ್ಸ್​ನಲ್ಲಿ ಕೆಲಸ ಮಾಡುವ ನೌಕರ ಸರಬರಾಜು ಮಾಡುತ್ತಾನೆ ಎಂದು ಆರೋಪಿಸಿದರು.

ಹೆಂಡತಿ ಮತ್ತು ಮಗಳ‌ ಹೆಸರಿನಲ್ಲಿ ಬಿಲ್ ನೀಡಿ ಹಣ ಲೂಟಿ‌ ಮಾಡುತ್ತಾನೆ. 2015 ರಿಂದ ಇಲ್ಲಿವರೆಗೆ ಕಬ್ಬಿನಲ್ಲೇ ಸುಮಾರು 80 ಲಕ್ಷ ರೂ. ಹಣ ಲೂಟಿ ಮಾಡಿದ್ದಾರೆ. ಅದೇ ರೀತಿ ಬೆಲ್ಲ, ತರಕಾರಿಗಳನ್ನು ಖರೀದಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದೇನೆ. ಈ ಬಗ್ಗೆ ನಾನು ನೀಡಿದ ದೂರಿಗೆ ನನಗೆ ಕಿರುಕುಳ ನೀಡುತ್ತಾರೆ ಎಂದು ನೀಲೇಗೌಡ ವಿವರಿಸಿದರು. ಅವ್ಯವಹಾರ ನಡೆಸಿರುವ ಹಾಪ್​ಕಾಮ್ಸ್ ನೌಕರರ ವಿರುದ್ಧ ತನಿಖೆ ನಡೆಸಿ, ಅವ್ಯವಹಾರದಿಂದ ಪಡೆದ ಹಣ ವಾಪಸ್ ಕಟ್ಟಿಸಬೇಕೆಂದು ಒತ್ತಾಯಿಸಿದರು.

ಓದಿ: ಯುವಜನತೆಯ ಸಬಲೀಕರಣಕ್ಕೆ ಪ್ರೋತ್ಸಾಹ: ಸಚಿವ ರಾಜೀವ್ ಚಂದ್ರಶೇಖರ್

ಮೈಸೂರು: ಉತ್ಪನ್ನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಪ್​ಕಾಮ್ಸ್ ನೌಕರರೇ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ. ಮೈಸೂರು ಹಾಪ್​ಕಾಮ್ಸ್​ನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇಲ್ಲಿ ರೈತರಿಂದ ಯಾವುದೇ ಉತ್ಪನ್ನಗಳನ್ನು ಖರೀದಿ ಮಾಡದೇ, ಬೋಗಸ್ ಬಿಲ್​ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಸೃಷ್ಟಿಸಿ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ‌ ಕೇಳಿ ಬಂದಿದೆ.

ಹಾಪ್​ಕಾಮ್ಸ್​ನಲ್ಲಿ ಕೆಲಸ ಮಾಡುತ್ತಿರುವ ನೀಲೇಗೌಡ ಎಂಬುವವರು ಈಟಿವಿ ಭಾರತದ ಜೊತೆ ಮಾತನಾಡಿ, ನಿತ್ಯ ಮೈಸೂರು ಮೃಗಾಲಯದ ಆನೆಗಳಿಗೆ ಕಬ್ಬನ್ನು ಸರಬರಾಜು ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕಬ್ಬಿನ ಬೆಲೆ ಒಂದು ಟನ್​ಗೆ 3 ಸಾವಿರ ದಿಂದ 5 ಸಾವಿರ ರೂ. ಇದ್ದು, ಇದಕ್ಕೆ 18 ಸಾವಿರ ರೂ. ಬಿಲ್ ಮಾಡಲಾಗುತ್ತಿದೆ. ಈ ಹಣವನ್ನು ಹಾಪ್​ಕಾಮ್ಸ್​ನಲ್ಲಿ ಕೆಲಸ ಮಾಡುವ ನೌಕರ ಸರಬರಾಜು ಮಾಡುತ್ತಾನೆ ಎಂದು ಆರೋಪಿಸಿದರು.

ಹೆಂಡತಿ ಮತ್ತು ಮಗಳ‌ ಹೆಸರಿನಲ್ಲಿ ಬಿಲ್ ನೀಡಿ ಹಣ ಲೂಟಿ‌ ಮಾಡುತ್ತಾನೆ. 2015 ರಿಂದ ಇಲ್ಲಿವರೆಗೆ ಕಬ್ಬಿನಲ್ಲೇ ಸುಮಾರು 80 ಲಕ್ಷ ರೂ. ಹಣ ಲೂಟಿ ಮಾಡಿದ್ದಾರೆ. ಅದೇ ರೀತಿ ಬೆಲ್ಲ, ತರಕಾರಿಗಳನ್ನು ಖರೀದಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದೇನೆ. ಈ ಬಗ್ಗೆ ನಾನು ನೀಡಿದ ದೂರಿಗೆ ನನಗೆ ಕಿರುಕುಳ ನೀಡುತ್ತಾರೆ ಎಂದು ನೀಲೇಗೌಡ ವಿವರಿಸಿದರು. ಅವ್ಯವಹಾರ ನಡೆಸಿರುವ ಹಾಪ್​ಕಾಮ್ಸ್ ನೌಕರರ ವಿರುದ್ಧ ತನಿಖೆ ನಡೆಸಿ, ಅವ್ಯವಹಾರದಿಂದ ಪಡೆದ ಹಣ ವಾಪಸ್ ಕಟ್ಟಿಸಬೇಕೆಂದು ಒತ್ತಾಯಿಸಿದರು.

ಓದಿ: ಯುವಜನತೆಯ ಸಬಲೀಕರಣಕ್ಕೆ ಪ್ರೋತ್ಸಾಹ: ಸಚಿವ ರಾಜೀವ್ ಚಂದ್ರಶೇಖರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.