ETV Bharat / state

ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ.ದೇವೇಗೌಡ ಅಸಮಾಧಾನ

author img

By

Published : Dec 27, 2019, 12:25 PM IST

ಮೈಸೂರು ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

GTD Talking About To Mayor Election
ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ ದೇವೇಗೌಡ

ಮೈಸೂರು: ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬೇಸರ ಹೊರಹಾಕಿದ್ದಾರೆ.

ವಿಜಯನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಥವಾ ನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮತದಾರನಾಗಿದ್ದಾಲೂ ಅಷ್ಟೇ. ಪಕ್ಷದಲ್ಲಿ ನನ್ನ ಮಾತು ನಡೆಯುವುದಿಲ್ಲ. ಕಳೆದ ಬಾರಿ ಚಲುವೇಗೌಡರನ್ನ ಮೇಯರ್ ಮಾಡಬೇಕು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ. ಕುಮಾರಸ್ವಾಮಿಯವರು ಸಾ.ರಾ.ಮಹೇಶ್ ಮಾತಿಗೆ ಮನ್ನಣೆ ಕೊಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.

ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ ದೇವೇಗೌಡ

ಮೇಯರ್ -ಉಪಮೇಯರ್ ಗೆ ಮೀಸಲಾತಿಯನ್ನು ಗುರುವಾರವಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಕುರಿತಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಈ ಚುನಾವಣೆಯಲ್ಲಿ ತಟಸ್ಥನಾಗಿರುವುದಿಲ್ಲ ಎಂದರು.

ಇನ್ನು, ಪೌರತ್ವ ಕಾಯ್ದೆ ಬಗೆಗಿನ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವುದು ತಪ್ಪು.ಸರ್ಕಾರ ಜನರ ಪ್ರತಿಭಟನೆ ಹಕ್ಕನ್ನು ಕಸಿದುಕೊಳ್ಳಬಾರದು, ಇದರ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮೈಸೂರು: ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬೇಸರ ಹೊರಹಾಕಿದ್ದಾರೆ.

ವಿಜಯನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಥವಾ ನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮತದಾರನಾಗಿದ್ದಾಲೂ ಅಷ್ಟೇ. ಪಕ್ಷದಲ್ಲಿ ನನ್ನ ಮಾತು ನಡೆಯುವುದಿಲ್ಲ. ಕಳೆದ ಬಾರಿ ಚಲುವೇಗೌಡರನ್ನ ಮೇಯರ್ ಮಾಡಬೇಕು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ. ಕುಮಾರಸ್ವಾಮಿಯವರು ಸಾ.ರಾ.ಮಹೇಶ್ ಮಾತಿಗೆ ಮನ್ನಣೆ ಕೊಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.

ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ ದೇವೇಗೌಡ

ಮೇಯರ್ -ಉಪಮೇಯರ್ ಗೆ ಮೀಸಲಾತಿಯನ್ನು ಗುರುವಾರವಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಕುರಿತಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಈ ಚುನಾವಣೆಯಲ್ಲಿ ತಟಸ್ಥನಾಗಿರುವುದಿಲ್ಲ ಎಂದರು.

ಇನ್ನು, ಪೌರತ್ವ ಕಾಯ್ದೆ ಬಗೆಗಿನ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವುದು ತಪ್ಪು.ಸರ್ಕಾರ ಜನರ ಪ್ರತಿಭಟನೆ ಹಕ್ಕನ್ನು ಕಸಿದುಕೊಳ್ಳಬಾರದು, ಇದರ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

Intro:ಜಿ.ಟಿ.ಡಿBody:ಕುಮಾರಸ್ವಾಮಿ ಅವರು ನನ್ನ ಮಾತು ಪರಿಗಣಿಸಲ್ಲ: ಜಿ‌.ಟಿ.ದೇವೇಗೌಡ
ಮೈಸೂರು: ಮೇಯರ್- ಉಪಮೇಯರ್ ಗೆ ಚುನಾವಣೆಗೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳ ಪರವಾಗಿ ಲಾಬಿ ಶುರುವಾಗಿದ್ದು, ಮೈಸೂರು ಮೇಯರ್- ಉಪಮೇಯರ್ ಚುನಾವಣೆಯಲ್ಲಿ ನನ್ನ ಮಾತನ್ನು ವರಿಷ್ಠರು ಪರಿಗಣಿಸುವುದಿಲ್ಲವೆಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಬೇಸರ ಹೊರಹಾಕಿದ್ದಾರೆ.
ವಿಜಯನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ, ನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮತದಾರನಾಗಿರುವ. ಆದರೆ, ನನ್ನ ಮಾತು ನಡೆಯುವುದಿಲ್ಲ.ಕಳೆದ ಬಾರಿ ಚಲುವೇಗೌಡರನ್ನ ಮೇಯರ್ ಮಾಡಬೇಕು ಅಂದಿಕೊಂಡಿದ್ದೆ ಆದರೆ ಆಗಲಿಲ್ಲ. ಕುಮಾರಸ್ವಾಮಿ ಅವರು ಸಾ.ರಾ.ಮಹೇಶ್ ಮಾತಿಗೆ ಮನ್ನಣೆ ಕೊಡುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.
ಮೇಯರ್ -ಉಪಮೇಯರ್ ಗೆ ಮೀಸಲಾತಿಯನ್ನು ಗುರುವಾರವಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ, ನನ್ನನ್ನು ಯಾರು ಸಂಪರ್ಕಿಸಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ.ಈ ಚುನಾವಣೆಯಲ್ಲಿ ತಟಸ್ಥನಾಗಿರುವುದಿಲ್ಲ ಎಂದರು.
ಪ್ರತಿಭಟನೆ ನಡೆಸಿ ಸರ್ಕಾರ ಆಸ್ತಿ ಹಾನಿ ಮಾಡುವುದು ತಪ್ಪು. ಪ್ರತಿಭಟನೆ ಹಕ್ಕನ್ನು ಕಸಿದುಕೊಳ್ಳಬಾರದು, ಇದರ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.Conclusion:ಜಿ.ಟಿ.ಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.