ETV Bharat / state

ಮೈಸೂರು: ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

author img

By

Published : Feb 8, 2021, 3:15 PM IST

ಕಳೆದ ವರ್ಷ ಅತಿಯಾದ ಮಳೆ ಹಾಗೂ ಈ ಬಾರಿ ಕೊರೊನಾ ಹಿನ್ನೆಲೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿದ್ದ ಕೃಷ್ಣೇಗೌಡ ಸಾಲ ತೀರಿಸಲು ಸಾಧ್ಯವಾಗದೇ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

suicide
suicide

ಮೈಸೂರು: ಸಾಲಬಾಧೆ ತಾಳಲಾರದೆ ತಂಬಾಕು ಬೆಳೆ ಬೆಳೆಯುವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಣಸುರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣೇಗೌಡ (65) ಆತ್ಮಹತ್ಯೆ ಮಾಡಿಕೊಂಡ ರೈತ. 3.10 ಎಕರೆ ಜಮೀನು ಹೊಂದಿದ್ದ ಕೃಷ್ಣೇಗೌಡ, ತಂಬಾಕು, ಜೋಳ ಮತ್ತು ರಾಗಿ ಬೆಳೆ ಬೆಳೆದಿದ್ದರು. ಹನಗೋಡು ಬ್ಯಾಂಕಿನಲ್ಲಿ 4 ಲಕ್ಷ ಸಾಲ, 1.54 ಲಕ್ಷ ಒಡವೆ ಸಾಲ ಮತ್ತು 4 ಲಕ್ಷ ಕೈಸಾಲ ಮಾಡಿಕೊಂಡಿದ್ದರು.

ಕಳೆದ ವರ್ಷ ಅತಿಯಾದ ಮಳೆ ಹಾಗೂ ಈ ಬಾರಿ ಕೊರೊನಾ ಹಿನ್ನೆಲೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿದ್ದ ಕೃಷ್ಣೇಗೌಡ ಸಾಲ ತೀರಿಸಲು ಸಾಧ್ಯವಾಗದೇ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಸಾಲಬಾಧೆ ತಾಳಲಾರದೆ ತಂಬಾಕು ಬೆಳೆ ಬೆಳೆಯುವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಣಸುರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣೇಗೌಡ (65) ಆತ್ಮಹತ್ಯೆ ಮಾಡಿಕೊಂಡ ರೈತ. 3.10 ಎಕರೆ ಜಮೀನು ಹೊಂದಿದ್ದ ಕೃಷ್ಣೇಗೌಡ, ತಂಬಾಕು, ಜೋಳ ಮತ್ತು ರಾಗಿ ಬೆಳೆ ಬೆಳೆದಿದ್ದರು. ಹನಗೋಡು ಬ್ಯಾಂಕಿನಲ್ಲಿ 4 ಲಕ್ಷ ಸಾಲ, 1.54 ಲಕ್ಷ ಒಡವೆ ಸಾಲ ಮತ್ತು 4 ಲಕ್ಷ ಕೈಸಾಲ ಮಾಡಿಕೊಂಡಿದ್ದರು.

ಕಳೆದ ವರ್ಷ ಅತಿಯಾದ ಮಳೆ ಹಾಗೂ ಈ ಬಾರಿ ಕೊರೊನಾ ಹಿನ್ನೆಲೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿದ್ದ ಕೃಷ್ಣೇಗೌಡ ಸಾಲ ತೀರಿಸಲು ಸಾಧ್ಯವಾಗದೇ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.